![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Aug 25, 2020, 9:23 AM IST
ಇಸ್ಲಾಮಾಬಾದ್: ನೀಲಂ ಝೀಲಂ ನದಿಗೆ ಅಡ್ಡಲಾಗಿ ಚೀನಾ ಕಂಪನಿ ಬೃಹತ್ ಅಣೆಕಟ್ಟು ನಿರ್ಮಿಸುತ್ತಿರುವುದನ್ನು ವಿರೋಧಿಸಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ(ಪಿಒಕೆ) ಮುಜಾಫರಾಬಾದ್ ನಗರದಲ್ಲಿ ದೊಂದಿ ಹಿಡಿದು ಸೋಮವಾರ ತಡರಾತ್ರಿ ಭಾರೀ ಪ್ರತಿಭಟನೆ ನಡೆಯಿತು.
ದರಿಯಾ ಬಚಾವೋ, ಮುಜಾಫರಾಬಾದ್ ಬಚಾವೊ(ನದಿ ರಕ್ಷಿಸಿ, ಮುಜಾಫರಾಬಾದ್ ಉಳಿಸಿ)ಸಮಿತಿ ಮತ್ತೆ ಆಯೋಜಿಸಿದ್ದ ದೊಂದಿ ಪ್ರತಿಭಟನಾ ಮೆರವಣಿಗೆಯಲ್ಲಿ ನೀಲಂ ಝೀಲಂ ಬೇಹಾನೆ ದೊ, ಹಮ್ನೆ ಜಿಂದಾ ರಹಾನೆ ದೊ (ನೀಲಂ, ಝೀಲಂ ನದಿ ಹರಿಯಲು ಬಿಡಿ, ಜತೆಗೆ ನಮ್ಮನ್ನು ಬದುಕಲು ಬಿಡಿ) ಎಂದು ಘೋಷಣೆ ಕೂಗಿರುವುದಾಗಿ ವರದಿ ತಿಳಿಸಿದೆ.
ಪಾಕ್ ಆಕ್ರಮಿತ ಕಾಶ್ಮೀರದ ವಿವಿಧ ಭಾಗಗಳಿಂದ ಆಗಮಿಸಿದ್ದ ಸಾವಿರಾರು ಮಂದಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಪಾಕ್ ಆಕ್ರಮಿತ ಕಾಶ್ಮೀರದ ಆಝಾದ್ ಪಟ್ಟಾನ್ ಮತ್ತು ಕೊಹಾಲಾದಲ್ಲಿ ಜಲವಿದ್ಯುತ್ ಯೋಜನೆಗಾಗಿ ಪಾಕಿಸ್ತಾನ ಮತ್ತು ಚೀನಾ ನಡುವೆ ಒಪ್ಪಂದವಾಗಿತ್ತು.
#WATCH: Protests and torch rally took place in Muzaffarabad city of Pakistan occupied Kashmir (PoK) last night, against the construction of mega-dams that will be built by Chinese firms on Neelum-Jhelum river. pic.twitter.com/aJhGPdfjnw
— ANI (@ANI) August 25, 2020
ಚೀನಾ, ಪಾಕಿಸ್ತಾನ ಆರ್ಥಿಕ ಕಾರಿಡಾರ್ (ಸಿಪಿಇಸಿ) ಅಂಗವಾಗಿ ಆಝಾದ್ ಪಟ್ಟಾನ್ ನಲ್ಲಿ 700.7 ಮೆಗಾ ವ್ಯಾಟ್ ಸಾಮರ್ಥ್ಯದ ಜಲವಿದ್ಯುತ್ ಯೋಜನೆಗೆ ಉಭಯ ದೇಶಗಳು 2020ರ ಜುಲೈ 6ರಂದು ಸಹಿ ಹಾಕಿದ್ದವು.
1.54 ಬಿಲಿಯನ್ ಡಾಲರ್ ವೆಚ್ಚದ ಈ ಯೋಜನೆಯ ವೆಚ್ಚದ ಪ್ರಾಯೋಜಕತ್ವವನ್ನು ಚೀನಾದ ಗೆಝ್ ಹೌಬಾ ಗ್ರೂಪ್ ಕಂಪನಿ (ಸಿಜಿಜಿಸಿ) ವಹಿಸಿಕೊಂಡಿದೆ. ಕೋಹಾಲಾ ಜಲವಿದ್ಯುತ್ ಯೋಜನೆಯಂತೆ ಝೀಲಂ ನದಿಯ ಮೇಲ್ಭಾಗದಲ್ಲಿ ಸುಮಾರು 7 ಕಿಲೋ ಮೀಟರ್ ಉದ್ದದವರೆಗೆ ಪಿಒಕೆ ಜಿಲ್ಲೆಯ ಆಝಾದ್ ಪಟ್ಟಾನ್ ಸೇತುವೆ ನಿರ್ಮಿಸಲಾಗುವುದು. ಇದರಿಂದ ಇಸ್ಲಾಮಾಬಾದ್ ನಿಂದ ಪಿಒಕೆ 90 ಕಿಲೋ ಮೀಟರ್ ದೂರದಲ್ಲಿರಲಿದೆ. ಈ ಯೋಜನೆ 2026ರಲ್ಲಿ ಪೂರ್ಣಗೊಳ್ಳಲಿದೆ ಎಂದು ವರದಿ ತಿಳಿಸಿದೆ.
Obama Is Queer: ಮಾಜಿ ಅಧ್ಯಕ್ಷ ಒಬಾಮಾ ಪತ್ನಿ ಮಿಚೆಲ್ ಗಂಡಸು: ಮಸ್ಕ್ ತಂದೆ
Cut Down: ವೆಚ್ಚ ಕಡಿತ: ಅಮೆರಿಕ ಸರಕಾರಿ ಉದ್ಯೋಗಿಗಳೇ ವಜಾ!
Mexico:ಯುರೋಪ್ ನ Most ವಾಂಟೆಡ್ ಕ್ರಿ*ಮಿನಲ್, ಡ್ರ*ಗ್ ಕಿಂಗ್ ಪಿನ್ ಮಾರ್ಕೋ ಹ*ತ್ಯೆ
Bourbon Whiskey: ಅಮೆರಿಕದ ಬೌರ್ಬನ್ ವಿಸ್ಕಿ ಆಮದು ಸುಂಕ ಕಡಿತ ಮಾಡಿದ ಭಾರತ
ರಷ್ಯಾ-ಉಕ್ರೇನ್ ಕಾಳಗ ತಪ್ಪಿಸಲು ಮುಂದಿನ ವಾರ 3 ದೇಶದ ಅಧಿಕಾರಿಗಳ ಸಭೆ
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.