ಜಿಲ್ಲೆಯಲ್ಲಿ 179 ಮಂದಿಗೆ ಸೋಂಕು
Team Udayavani, Aug 31, 2020, 1:41 PM IST
ಮಂಡ್ಯ: ಜಿಲ್ಲೆಯಲ್ಲಿ ಭಾನುವಾರ 179 ಮಂದಿಗೆ ಕೋವಿಡ್ ದೃಢ ಪಟ್ಟಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ. 116 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಮದ್ದೂರು ತಾಲೂಕಿನ 35 ವರ್ಷದ ವ್ಯಕ್ತಿ ಹಾಗೂ ಕೆ.ಆರ್.ಪೇಟೆ ತಾಲೂಕಿನ 50 ವರ್ಷದ ಮಹಿಳೆ ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದಾರೆ. ಮಹಿಳೆಗೆ ಎಸ್ಎಆರ್ಐ, ಉಸಿರಾಟದ ತೊಂದರೆ ಇದ್ದರೆ, ವ್ಯಕ್ತಿಗೆ ನ್ಯುಮೋನಿಯಾ, ಜ್ವರ, ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು.
179 ಮಂದಿಗೆ ಸೋಂಕು ದೃಢ: ಭಾನುವಾರ ಹೊಸದಾಗಿ 179 ಮಂದಿಗೆ ಸೋಂಕು ಹೊಕ್ಕಿದ್ದು, ಇದರಿಂದ ಸೋಂಕಿತರ ಸಂಖ್ಯೆ 5286ಕ್ಕೇರಿದೆ. ಮಂಡ್ಯ 49, ಮದ್ದೂರು 25, ಮಳವಳ್ಳಿ 9, ಪಾಂಡವಪುರ 42, ಶ್ರೀರಂಗಪಟ್ಟಣ 26, ಕೆ.ಆರ್.ಪೇಟೆ 21, ನಾಗಮಂಗಲ 7 ಮಂದಿಗೆ ದೃಢಪಟ್ಟಿದೆ. ಜಿಲ್ಲಾ, ತಾಲೂಕು ಹಾಗೂ ಖಾಸಗಿ ಆಸ್ಪತ್ರೆಗಳ ಐಸೋ ಲೇಷನ್ ಗಳಲ್ಲಿ ಒಟ್ಟು 693 ಮಂದಿ, ಕೋವಿಡ್ ಕೇರ್ ಸೆಂಟರ್ಗಳಲ್ಲಿ 335 ಹಾಗೂ ಹೋಂ ಐಸೋಲೇಷನ್ನಲ್ಲಿ 519 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೂ ಮಂಡ್ಯ ತಾಲೂಕಿನಲ್ಲಿ 1631, ಮದ್ದೂರು 747, ಮಳವಳ್ಳಿ 560, ಪಾಂಡವಪುರ 489, ಶ್ರೀರಂಗಪಟ್ಟಣ 570, ಕೆ.ಆರ್.ಪೇಟೆ 752, ನಾಗಮಂಗಲ 486 ಸೋಂಕಿನ ಪ್ರಕರಣಗಳು ದಾಖಲಾಗಿವೆ.
116 ಮಂದಿ ಬಿಡುಗಡೆ: ಮದ್ದೂರು 99, ಪಾಂಡವಪುರ 5, ಶ್ರೀರಂಗಪಟ್ಟಣ 2, ಕೆ.ಆರ್.ಪೇಟೆ 8, ಮಂಡ್ಯ ಹಾಗೂ ಮಳವಳ್ಳಿಯತಲಾ ಒಬ್ಬರು ಸೋಂಕಿನಿಂದ ಮುಕ್ತರಾಗಿ ಭಾನುವಾರ ಬಿಡುಗಡೆಯಾಗಿ ದ್ದಾರೆ. ಒಟ್ಟಾರೆ ಜಿಲ್ಲೆಯಲ್ಲಿ 3563 ಮಂದಿ ಬಿಡುಗಡೆಯಾಗಿದ್ದು, ಇದರಲ್ಲಿ ಮಂಡ್ಯ 1168, ಮದ್ದೂರು 468, ಮಳವಳ್ಳಿ 398, ಪಾಂಡವಪುರ 314, ಶ್ರೀರಂಗಪಟ್ಟಣ 372, ಕೆ.ಆರ್.ಪೇಟೆ 530, ನಾಗಮಂಗಲ 393 ಮಂದಿ ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ 1547 ಸಕ್ರಿಯ ಪ್ರಕರಣಗಳಿವೆ. ಭಾನುವಾರ 328 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಇದರಲ್ಲಿ 274 ಮಂದಿಗೆ ರ್ಯಾಪಿಡ್ ಪರೀಕ್ಷೆ ಹಾಗೂ 54 ಮಂದಿಗೆ ಆರ್ಟಿಪಿಸಿಆರ್ ಪರೀಕ್ಷೆ ನಡೆಸಲಾಗಿದೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Explainer: FBI ವಾಂಟೆಡ್ ಲಿಸ್ಟ್ ನಲ್ಲಿ ಭಾರತದ ಮಾಜಿ ರಾ ಅಧಿಕಾರಿ;ಯಾರು ವಿಕಾಸ್ ಯಾದವ್?
Katpadi: ತ್ಯಾಜ್ಯ ಗುಂಡಿಯಾಗುತ್ತಿದೆ ಕುರ್ಕಾಲು ಮದಗ
Belagavi: ಸುವರ್ಣ ವಿಧಾನಸೌಧಕ್ಕೆ ಯು.ಟಿ.ಖಾದರ್, ಬಸವರಾಜ ಹೊರಟ್ಟಿ ಭೇಟಿ
Bengaluru: ರಾಜಧಾನಿಯ ಬೀದಿ ನಾಯಿಗಳಿಗೆ ಅಕ್ಕರೆಯ ತುತ್ತು
Video: ನಿಮಗೆ ಮತ ಹಾಕಿದ್ದೇನೆ, ನನಗೊಂದು ಮದುವೆ ಮಾಡಿಸಿ.. ಶಾಸಕರ ಬಳಿ ಮನವಿ ಮಾಡಿದ ವ್ಯಕ್ತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.