ಲಾಭದಾಯಕ ಕೆಲಸವನ್ನು ಬಿಟ್ಟು ಶಿಕ್ಷಣ ಕ್ರಾಂತಿಗೆ ನಿಂತ ಶುವಜಿತ್‌ ಪೇನ್‌


Team Udayavani, Sep 3, 2020, 6:59 PM IST

Shuvajit Payne

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ನಿಜವಾದ ಸಂತೋಷ, ಸುಖ, ನೆಮ್ಮದಿ ಎಲ್ಲಿ? ಯಾವಾಗ? ಸಿಗುತ್ತೆ! ಸಂತಸ, ಸುಖ, ನೆಮ್ಮದಿಯ ಬದುಕು ಅಂದ್ರೆ ಯಾವುದು?

ಲಕ್ಷಗಟ್ಟಲೆ ಸಂಬಳವನ್ನು ಪಡೆಯುವ ಕೆಲಸದಲ್ಲಿ ಅವುಗಳೆಲ್ಲಾ ಇವೆಯಾ..?

ವಿದೇಶದಲ್ಲಿ ನೌಕರಿಗಿಟ್ಟಿಸಿಕೊಂಡರೆ ಆರಾಮಾಗಿ ಇರ್ತೀವಾ..?

ಈ ಪ್ರಶ್ನೆಗಳಿಗೆ ಒಬ್ಬೊಬ್ಬರು ಒಂದೊಂದು ರೀತಿಯ ಉತ್ತರಗಳನ್ನು ಕೊಡ ಬಹುದು..! ಆದರೆ, ವಿದೇಶದಲ್ಲಿನ ಕೆಲಸ, ಒಳ್ಳೆಯ ಸಂಬಳವನ್ನೆಲ್ಲ ಬಿಟ್ಟು ಸಮಾಜಮುಖೀ ಕೆಲಸದಲ್ಲಿ ತೊಡಗಿಸಿಕೊಂಡ ಕೆಲವರು ಎಲ್ಲರಿಗೂ ಮಾದರಿಯಾಗಿ ನಿಲುತ್ತಾರೆ.

ಶುವಜಿತ್‌ ಪೇನ್‌ ಮೂಲತ: ಕೋಲ್ಕತ್ತದವರಾಗಿರುವ ಇವರು ಇಲ್ಲಿನ ಪ್ರತಿಷ್ಠಿತ ಕಾಲೇಜ್‌ ಒಂದರಲ್ಲಿ ಅರ್ಥಶಾಸ್ತ್ರ ವಿಷಯದಲ್ಲಿ ಪದವಿ ಪೂರೈಸಿ ಅನಂತರ ಲಕ್ನೋದ ಐಐಎಂನಲ್ಲಿ ಫೈನೆನ್ಸ್‌ ಆ್ಯಂಡ್‌ ಮಾರ್ಕೆಟಿಂಗ್‌ ವಿಷಯದಲ್ಲಿ ಎಂಬಿಎ ಪದವಿಯನ್ನು ಪಡೆಯುತ್ತಾರೆ.

ಅದೃಷ್ಟವಶಾತ್‌ ಲಂಡನ್‌ನಲ್ಲಿ ಅವರಿಗೆ ಕೈತುಂಬಾ ಸಂಬಳ ಸಿಗುವ ಕೆಲಸವೂ ದೊರೆಯುತ್ತದೆ. ಆದರೆ ಕೆಲವರಿಗೆ ಆತ್ಮ ತೃಪ್ತಿ, ನೆಮ್ಮದಿ ಅನ್ನುವುದು ದುಡ್ಡಿನಲ್ಲಿ ಇದ್ದರೆ ಮತ್ತೂ ಹಲವರಿಗೆ ಸಾಮಾಜಿಕ ಕೆಲಸಗಳಲ್ಲಿ ತೊಡಗಿಸಿಕೊಳ್ಳುವುದರಿಂದ ದೊರೆಯುತ್ತದೆ. ಶುವಜಿತ್‌ ಅವರಿಗೂ ಇಂತಹದೇ ಒಂದು ಭಾವನೆ ಕಾಡ ತೊಡಗಿದ್ದು, ವೃತ್ತಿ ಕ್ಷೇತ್ರಕ್ಕೂ ಹೊರತಾಗಿ ನಾನು ಏನಾದರೂ ಸಾಧಿಸಬೇಕೆಂಬ ಹಂಬಲ ಬಂದಿದೆ.

ನಾನು ಕಲಿತ ವಿದ್ಯೆ ಕೆಲಸದಿಂದ ಮಾತ್ರ ಪರಿಪೂರ್ಣವಾಗದೂ, ಇದರ ಹೊರತಾಗಿ ನಾನೇನದರೂ ಒಳ್ಳೆಯ ಕೆಲಸವನ್ನು ಮಾಡಿದರೆ ಮಾತ್ರ ಜೀವನ ಸಾರ್ಥಕತೆಯನ್ನು ಕಾಣುತ್ತದೆ ಎಂದು ಇದ್ದ ಉದ್ಯೋಗವನ್ನು ಬಿಟ್ಟು, ಲಂಡನ್‌ನಿಂದ ತಾಯ್ನಾಡಿಗೆ ಮರಳುತ್ತಾರೆ.

“ಸ್ವಾವಲಂಭಿ ಗ್ರಾಮೀಣ ಭಾರತ’
ಮಧ್ಯಮ ಕುಟುಂಬದ ಹಿನ್ನೆಲೆ ಇರುವ ಶುವಜಿತ್‌ಗೆ ಮೊದಲಿನಿಂದಲೂ ಸಾಮಾಜಿಕ ಸೇವೆಯಲ್ಲಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕೆಂದ ಆಸೆ ಮೊದಲಿನಿಂದಲೂ ಇತ್ತು. ಅಲ್ಲದೇ ರೈತ ಕುಟುಂಬದವರಾದ ಶುವಜಿತ್‌ ಮುಂದೆ ಕೃಷಿ ಕ್ಷೇತ್ರದಲ್ಲಿ ತೊಡಗಿರುವವರನ್ನು ಸಮಾಜದ ಮುನ್ನೆಲೆಗೆ ತರಬೇಕೆಂಬ ಕನಸನ್ನು ಕಂಡಿದ್ದರು. ಆ ಇರಾದೆಯಿಂದಲೇ ಹುಟ್ಟಿಕೊಂಡಿದೇ ಸ್ವಾವಲಂಬಿ ಗ್ರಾಮೀಣ ಭಾರತದ ಹಾಗೂ ರೈತರ ಕಲ್ಯಾಣದ ಕನಸು. ಈ ಕಾರಣಕ್ಕಾಗಿಯೇ ಕೈತುಂಬಾ ಸಂಬಳ ಬರುತ್ತಿದ್ದ ಹುದ್ದೆಯನ್ನು ಬಿಟ್ಟು ಲಂಡನ್‌ಲ್ಲಿನ ಕೆಲಸವನ್ನು ಬಿಟ್ಟು ಭಾರತಕ್ಕೆ ಬಂದಿದ್ದು, ಇವರು ರೈತರ ಕಲ್ಯಾಣಕ್ಕಾಗಿ ಶ್ರಮಿಸುತ್ತಾ ಇದ್ದಾರೆ.

ಹಳ್ಳಿ ಮಕ್ಕಳಿಗೆ ವಿದ್ಯಾಭ್ಯಾಸ
ರೈತರ ಕಲ್ಯಾಣದ ಕನಸು ಕಂಡಿದ್ದ ಶುವಜಿತ್‌ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗಾಗಿ ತಮ್ಮ ಜೀವನವನ್ನು ಮುಡಪಾಗಿಟ್ಟಿದ್ದು, ಸದ್ಯ ಹಳ್ಳಿ ಮಕ್ಕಳಿಂದ ಹಿಡಿದು ರೈತರಿಗೂ ಶಿಕ್ಷಣವನ್ನು ನೀಡುವ ಕೆಲಸ ಮಾಡುತ್ತಿದ್ದಾರೆ. 50 ಅನೌಪಚಾರಿಕ ಸಮುದಾಯ ಶಾಲೆಗಳ ಪಠ್ಯಕ್ರಮ ಮತ್ತು ಕಾರ್ಯಾಚರಣೆಗಳ ಜವಾಬ್ದಾರಿಯನ್ನು ಹೊತ್ತಿರುವ ಇವರು ಸುಮಾರು 3 ಸಾವಿರಕ್ಕೂ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಸಮಗ್ರ ಪ್ರಾಥಮಿಕ ಶಿಕ್ಷಣವನ್ನು ನೀಡುತ್ತಾ ಬಂದಿದ್ದಾರೆ. ಅಲ್ಲದೇ ರಾಜಸ್ಥಾನದ ಟಿಲೋನಿಯಾ ಗ್ರಾಮದಲ್ಲಿ ಶಿಕ್ಷನಿಕೇತನ ಎಂಬ ವಿದ್ಯಾಸಂಸ್ಥೆಯನ್ನು ಪ್ರಾರಂಭಿಸಿ ಆ ಗ್ರಾಮದ ಮಕ್ಕಳನ್ನು ಶಿಕ್ಷಿತರನ್ನಾಗಿ ಮಾಡುವಲ್ಲಿ ಕಾರ್ಯಾನಿರತರಾಗಿದ್ದಾರೆ.

ಸುಶ್ಮಿತಾ,  ಉಜಿರೆ

ಟಾಪ್ ನ್ಯೂಸ್

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18

Uv Fusion: ಗೆಳೆತನವೆಂಬ ನಿಸ್ವಾರ್ಥ ಬಾಂಧವ್ಯ

17

Uv Fusion: ಎಡವುದು ಕೂಡ ಒಳ್ಳೆಯದೇ ಒಮ್ಮೊಮ್ಮೆ…

16

Uv Fusion: ಪೆನ್ನಿಗೊಂದು ಕಥೆ

15

Uv Fusion: ಹೇಮಂತ ಋತುವಿನಲ್ಲಿ ನೇತ್ರಾವತಿ ಶಿಖರದ ಚಾರಣ

14

Uv Fusion: ಸ್ನೇಹವೆಂಬ ತಂಗಾಳಿ…

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.