ಕೋವಿಡ್ ಹಿನ್ನೆಲೆ : ನಾಳೆ ಸರಳ ಮೊಂತಿ ಫೆಸ್ತ್ ಆಚರಣೆ
Team Udayavani, Sep 7, 2020, 2:23 PM IST
ಮಂಗಳೂರು/ಉಡುಪಿ: ಕರಾವಳಿ ಕರ್ನಾಟಕದ ಕೊಂಕಣಿ ಕೆಥೋಲಿಕರು ಸೆ. 8ರಂದು ಯೇಸು ಕ್ರಿಸ್ತರ ತಾಯಿ ಮೇರಿ ಅವರ ಜನ್ಮ ದಿನಾಚರಣೆ ಅಂಗವಾಗಿ “ಮೊಂತಿ ಫೆಸ್ತ್’ (ತೆನೆ ಹಬ್ಬ) ಆಚರಿಸುತ್ತಿದ್ದು, ಕೋವಿಡ್ ಹಿನ್ನೆಲೆಯಲ್ಲಿ ಈ ವರ್ಷದ ಆಚರಣೆ ಸರಳವಾಗಿರುತ್ತದೆ.
ಆಚರಣೆ ಕುರಿತಂತೆ ಮಂಗಳೂರಿನ ಬಿಷಪ್ ರೈ ರೆ| ಡಾ| ಪೀಟರ್ ಪಾವ್ಲ್ ಸಲ್ಡಾನ್ಹಾ ಅವರು ಸರಕಾರದ ಆದೇಶಗಳನ್ನು ಗಮನದಲ್ಲಿರಿಸಿ ಕೆಲವು ಮಾರ್ಗ ಸೂಚಿಗಳನ್ನು ಹೊರಡಿಸಿದ್ದಾರೆ.
ಹಬ್ಬದ ಸಂದರ್ಭ ಮೆರವಣಿಗೆಯಲ್ಲಿ ಹೂವು ಮತ್ತು ಭತ್ತದ ಕದಿರುಗಳನ್ನು ಕೊಂಡೊಯ್ಯಲು ಅವಕಾಶವಿಲ್ಲ. ಮಕ್ಕಳು ಮತ್ತು ಹಿರಿಯರು ಒಂದೊಂದೇ ಹೂವುಗಳನ್ನು ಕೊಂಡೊ ಯ್ಯಲು ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಂಡು ಒಬ್ಬೊಬ್ಬರೇ ಹೋಗಿ ಹೂವನ್ನು ಮೇರಿ ಮಾತೆಗೆ ಅರ್ಪಿಸ ಬೇಕು. ಆಶೀರ್ವದಿಸಿದ ಭತ್ತದ ಕದಿರನ್ನು ಬಲಿ ಪೂಜೆಯ ಬಳಿಕ ಭಕ್ತರಿಗೆ ವಿತರಿಸ ಲಾಗುತ್ತದೆ. ಅಂದು 2 ಅಥವಾ 3 ಬಲಿ ಪೂಜೆಗಳನ್ನು ನಡೆಸಬಹುದು.
ನೂರು ಜನರೊಳಗೆ ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಬರಲು ಉಡುಪಿ ಧರ್ಮಪ್ರಾಂತದ ಎಲ್ಲ ಚರ್ಚ್ಗಳಿಗೆ ತಿಳಿಸಲಾಗಿದೆ. ಮೆರವಣಿಗೆ ಇರುವುದಿಲ್ಲ. ಆಯಾ ಚರ್ಚ್ಗಳ ಪರಿಸ್ಥಿತಿಗೆ ಅನುಗುಣವಾಗಿ ಒಬ್ಬೊಬ್ಬರು ಮನೆಯಿಂದ ಬಂದು ತೆನೆಯನ್ನು ಪಡೆದುಕೊಳ್ಳಲು ಬಿಷಪ್ ರೆ| ಜೆರಾಲ್ಡ್ ಐಸಾಕ್ ಲೋಬೋ ತಿಳಿಸಿದ್ದಾರೆಂದು ಮೂಲಗಳು ತಿಳಿಸಿವೆ.
ಪವಿತ್ರ ಶಿಲುಬೆಯ ಹಬ್ಬ
ಸೆ. 14ರಂದು ಪವಿತ್ರ ಶಿಲುಬೆಯ ಹಬ್ಬವನ್ನು ಆಚರಿಸಲಾಗುತ್ತಿದ್ದು, ಅದಕ್ಕೆ ಪೂರ್ವಭಾವಿಯಾಗಿ ಸೆ. 13ರಂದು ರವಿವಾರ ಬಲಿ ಪೂಜೆಯ ಸಂದರ್ಭದಲ್ಲಿ ಶಿಲುಬೆಯ ಆರಾಧನೆ ಕಾರ್ಯ ಕ್ರಮವನ್ನು ವ್ಯವಸ್ಥೆ ಮಾಡಲಾಗಿದೆ. ಶಿಲುಬೆಯ ಆರಾಧನೆ ಸಾಮಾನ್ಯವಾಗಿ ಗುಡ್ಫ್ತೈಡೆ ದಿನದಂದು ನಡೆಸಲಾಗು ತ್ತಿದ್ದು, ಈ ವರ್ಷ ಕೊರೊನಾ ಲಾಕ್ಡೌನ್ ಕಾರಣ ಗುಡ್ಫ್ತೈಡೆಯಂದು (ಎ. 10) ಚರ್ಚ್ಗಳಲ್ಲಿ ಯಾವುದೇ ಕಾರ್ಯಕ್ರಮ ಇರಲಿಲ್ಲ. ಶಿಲುಬೆಯ ಆರಾಧನೆಗೆ ವಿಶಿಷ್ಟ ಸ್ಥಾನವಿರುವುದರಿಂದ ಸೆ. 13ರಂದು ಶಿಲುಬೆಯ ಆರಾಧನೆಯ ವ್ಯವಸ್ಥೆ ಮಾಡಲಾಗಿದೆ ಎಂದು ಬಿಷಪ್ ಅವರು ಉದಯವಾಣಿಗೆ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Langoti Man Movie Review: ಸಂಪ್ರದಾಯದ ಕೊಂಡಿಯಲ್ಲಿ ಲಂಗೋಟಿ!
Mangaluru: “ಜಾತ್ಯತೀತ’ ಬದಲು “ನಾಸ್ತಿಕ ಭಾರತ’ವಾಗಲಿ: ತುಷಾರ್ ಗಾಂಧಿ
Thirthahalli: ಬಾಳೆಬೈಲು ಬೈಪಾಸ್ ಗೆ ಮತ್ತೆ ಬ್ಯಾರಿಕೇಡ್ ಅಳವಡಿಕೆ
Sullia: ತೋಟಕ್ಕೆ ಕಾಡಾನೆ ಲಗ್ಗೆ… ಬಾಳೆ, ಅಡಿಕೆ, ತೆಂಗು ಕೃಷಿಗೆ ಹಾನಿ
Ramanagara: ತಾನು ಸಿದ್ದರಾಮಯ್ಯ ಸಂಬಂಧಿ ಎಂದು ಸೆಕ್ಯೂರಿಟಿ ಗಾರ್ಡ್ ಗೆ ಹೊಡೆದ ಯುವಕ!
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Langoti Man Movie Review: ಸಂಪ್ರದಾಯದ ಕೊಂಡಿಯಲ್ಲಿ ಲಂಗೋಟಿ!
Mangaluru: “ಜಾತ್ಯತೀತ’ ಬದಲು “ನಾಸ್ತಿಕ ಭಾರತ’ವಾಗಲಿ: ತುಷಾರ್ ಗಾಂಧಿ
Thirthahalli: ಬಾಳೆಬೈಲು ಬೈಪಾಸ್ ಗೆ ಮತ್ತೆ ಬ್ಯಾರಿಕೇಡ್ ಅಳವಡಿಕೆ
Sullia: ತೋಟಕ್ಕೆ ಕಾಡಾನೆ ಲಗ್ಗೆ… ಬಾಳೆ, ಅಡಿಕೆ, ತೆಂಗು ಕೃಷಿಗೆ ಹಾನಿ
Ramanagara: ತಾನು ಸಿದ್ದರಾಮಯ್ಯ ಸಂಬಂಧಿ ಎಂದು ಸೆಕ್ಯೂರಿಟಿ ಗಾರ್ಡ್ ಗೆ ಹೊಡೆದ ಯುವಕ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.