13 ವರ್ಷವಾದ್ರೂ ಆರಂಭವಾಗದ ಕಾರ್ಖಾನೆ


Team Udayavani, Sep 8, 2020, 4:18 PM IST

13 ವರ್ಷವಾದ್ರೂ ಆರಂಭವಾಗದ ಕಾರ್ಖಾನೆ

ಚನ್ನರಾಯಪಟ್ಟಣ: ಹೇಮಾವತಿ ಸಹಕಾರಿ ಸಕ್ಕರೆ ಕಾರ್ಖಾನೆ 18 ತಿಂಗಳಲ್ಲಿ ಉನ್ನತೀಕರಣ ಮಾಡುವುದಾಗಿ ಖಾಸಗಿಯವರಿಗೆ ಗುತ್ತಿಗೆ ನೀಡಿರುವುದಾಗಿ ಹೇಳಿದ ಆಡಳಿತ ಮಂಡಳಿ 13 ವರ್ಷವಾದರೂ ಕಾರ್ಖಾನೆ ಉನ್ನತೀಕರಣ ಮಾಡಿ ಪ್ರಾರಂಭಿಸಿಲ್ಲ ಎಂದು ವಿಧಾನ ಪರಿಷತ್‌ ಸದಸ್ಯ ಎಂ.ಎ.ಗೋಪಾಲಸ್ವಾಮಿ ಆರೋಪಿಸಿದರು.

ತಾಲೂಕಿನ ಶ್ರೀನಿವಾಸಪುರ ಬಳಿ ಇರುವ ಕಾರ್ಖಾನೆ ಮುಂಭಾಗ ಕಾಂಗ್ರೆಸ್‌ನಿಂದ ನಡೆದ ಪ್ರತಿಭಟನೆಯಲ್ಲಿ ಮಾತನಾಡಿ, 13 ವರ್ಷದಿಂದ ಕಬ್ಬು ಬೆಳೆಗಾರರಿಗೆ 200 ಕೋಟಿ ಹಣ ನಷ್ಟವಾಗಿದೆ. ಆದರೆ ಕಾರ್ಖಾನೆಯನ್ನುಚಾಮುಂಡೇಶ್ವರಿ ಷುಗರ್ ಸಂಸ್ಥೆಗೆ ನೀಡಿ ಹಣ ಮಾಡಿರುವುದಲ್ಲದೆ ರೈತರಿಗೆ ದ್ರೋಹ ಮಾಡಿದ್ದಾರೆ ಎಂದರು.

ಶಾಸಕ ಬಾಲಕೃಷ್ಣ ಎರಡು ವರ್ಷದಿಂದ ಹತ್ತಕ್ಕೂ ಹೆಚ್ಚು ಬಾರಿ ದಿನಾಂಕ ನೀಡಿದ್ದಾರೆ, ಕಾಂಗ್ರೆಸ್‌ ಪ್ರತಿಭಟನೆ ಮಾಡುವುದನ್ನು ಅರಿತುಕಾರ್ಖಾನೆ ಅಧಿಕಾರಿಗಳ ಮೂಲಕ ಈ ತಿಂಗಳ30 ರಂದು ಪ್ರಾರಂಭಿಸುವುದಾಗಿ ಪತ್ರ ಬರೆದು ಕಳುಹಿಸಿದ್ದಾರೆ, ಶೀಘ್ರದಲ್ಲಿ ಹಾಸನಕ್ಕೆ ಪಾದಯಾತ್ರೆ ಮಾಡುವುದಲ್ಲದೆ, ವಿಧಾನಸೌಧ ಚಲೋ ಹಮ್ಮಿ ಕೊಳ್ಳಲಾಗುವುದು, ಜೊತೆಗೆಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆ ನೀಡಬೇಕಾಗಿರುವ ಹಣದ ಬಗ್ಗೆ ಉಚ್ಚ ನ್ಯಾಯಾಲಯದಲ್ಲಿ ದಾವೆ ಹೂಡಲಾಗುವುದು ಎಂದು ಹೇಳಿದರು.

ಬಡ್ಡಿ ಕೊಡುವವರು ಯಾರು: ಈಗಾಗಲೇ 26 ಕೋಟಿ ಕರಾರು ಹಣ ಬಾಕಿ ಉಳಿಸಿಕೊಂಡಿದ್ದಾರೆ ಇದನ್ನು ಬ್ಯಾಂಕಿಗೆ ಠೇವಣಿ ಮಾಡಿದರೆ ವಾರ್ಷಿಕ 4 ಕೋಟಿ ಬಡ್ಡಿ ಬರುತ್ತಿತ್ತು ಇದನ್ನು ನೀಡುವವರು ಯಾರು? ಒಂದು ವೇಳೆ ಹಣ ಪಡೆಯದೆ ಶಾಸಕರು ವಾರ್ಷಿಕ ಕೋಟ್ಯಂತರ ರೂ. ಹಣ ಪಡೆಯುತ್ತಿದ್ದಾರೆ ಎಂದು ಪ್ರಶ್ನಿಸಿದರು.

ಕಿಕ್‌ ಬ್ಯಾಗ್‌ ಪಡೆದ ಶಾಸಕ: ರೈತ ಮುಖಂಡ ಶ್ರೀಕಂಠ ಮಾತನಾಡಿ, ಕ್ಷೇತ್ರದ ಶಾಸಕ ಬಾಲಕೃಷ್ಣ ಚಾಮುಂಡೇಶ್ವರಿ ಸಂಸ್ಥೆಯಿಂದ ಕಿಕ್‌ ಬ್ಯಾಗ್‌ ಪಡೆದಿದ್ದಾರೆ, ಅವರಿಗೆ ರೈತರ ಕಾಳಜಿ ಮುಖ್ಯವಲ್ಲ ಹಣ ಮಾಡುವುದು ಮುಖ್ಯವಾಗಿದೆ, ರೈತ ಸಂಘದವರು ಧರಣಿ ಮಾಡಿದರೆ ಮಾರನೇ ದಿವಸ ಅಥವಾ ಧರಣಿ ಹಿಂದಿನ ದಿವಸ ಕಾರ್ಖಾನೆ ಭೇಟಿ ನೀಡಿ ಹಣ ಪಡೆಯುವುದನ್ನು ರೂಢಿಸಿಕೊಂಡಿದ್ದಾರೆ ಎಂದು ಆರೋಪಿಸಿದರು.

ಹಳೆ ವಸ್ತುಗಳಿಂದ ಕಾರ್ಖಾನೆ ಉನ್ನತೀಕರಣ: ಚಾಮುಂಡೇಶ್ವರಿ ಷುಗರ್ ಅವರು ಈಗಾಗಲೆ ನಾಲ್ಕು ಕಾರ್ಖಾನೆ ಹೊಂದಿದ್ದು ಇಲ್ಲಿನ ಕಾರ್ಖಾನೆ ಉನ್ನತೀಕರಣಕ್ಕೆಂದು ಹೊಸ ಸಾಮಗ್ರಿ ತರಿಸಿ ಅದನ್ನು ಬೇರೆ ಕಾರ್ಖಾನೆಗೆ ಕಳುಹಿಸಿ ಅಲ್ಲಿನ ಹಳೆಯ ಯಂತ್ರಗಳನ್ನು ಇಲ್ಲಿಗೆ ಜೋಡಣೆ ಮಾಡುತ್ತಿದ್ದಾರೆ, ಹೊಸ ವಸ್ತುಗಳನ್ನು ಅಡಳವಡಿಸಿದ್ದರೆ ಯಾಕೆ ಬೈಲರ್‌ ಸಿಡಿದು ಹೋಗುತ್ತಿತ್ತು ಎಂದು ಪ್ರಶ್ನಿಸಿದರು.ಮಾಜಿ ಶಾಸಕ ಸಿ.ಎಸ್‌.ಪುಟ್ಟೇಗೌಡ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮಂಜೇಗೌಡ, ಜಿಪಂ ಸದಸ್ಯ ಶ್ರೇಯಸ್‌ ಎಂ. ಪಟೇಲ್‌, ತಾಪಂ ಸದಸ್ಯರಾದ ರತ್ನಮ್ಮ, ರಾಮಕೃಷ್ಣೇಗೌಡ, ಪ್ರಮೀಳಾ, ಮಂಜುನಾಥ, ಗಿರೀಶ್‌, ಜಿಪಂ ಮಾಜಿ ಉಪಾಧ್ಯಕ್ಷ ವಿಜಯಕುಮಾರ, ಕಿನಾಸ್‌ ಕಾಂಗ್ರೆಸ್‌ ಅಧ್ಯಕ್ಷ ಶಿವಪ್ರಸಾದ್‌, ಕಾರ್ಖಾನೆ ನಿರ್ದೇಶಕರಾದ ರವೀಂದ್ರ, ನಾರಾಯಣ, ಮಾಜಿ ನಿರ್ದೇಶಕ ಶಿವರಾಂ, ಎ.ಬಿ.ನಂಜುಂಡೇಗೌಡ ಇದ್ದರು.

ಟಾಪ್ ನ್ಯೂಸ್

18

Ganesh Chaturthi: ಸ್ವರ್ಣ ಗೌರಿ ಮತ್ತು ವಿಘ್ನ ವಿನಾಯಕನಿಗೊಂದು ನಮನ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

DK-Shivakumar

Yettinahole: ನಮ್ಮ ಸರಕಾರದ ಸಾಕ್ಷಿಗುಡ್ಡೆ ಎತ್ತಿನಹೊಳೆ: ಡಿಸಿಎಂ ಡಿ.ಕೆ. ಶಿವಕುಮಾರ್‌

Yettinahole Project: ಎತ್ತಿನಹೊಳೆ ಯೋಜನೆಯ ಮೊದಲ ಹಂತಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ

Yettinahole Project: ಎತ್ತಿನಹೊಳೆ ಯೋಜನೆಯ ಮೊದಲ ಹಂತಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ

Sakleshpura ಇಂದಿನಿಂದ ನೀರೆತ್ತಿನ ಹೊಳೆ; ಸಿದ್ದು 2.0 ಸರಕಾರದ ಅತೀ ದೊಡ್ಡ ಭರವಸೆ ಜಾರಿ

Sakleshpura ಇಂದಿನಿಂದ ನೀರೆತ್ತಿನ ಹೊಳೆ; ಸಿದ್ದು 2.0 ಸರಕಾರದ ಅತೀ ದೊಡ್ಡ ಭರವಸೆ ಜಾರಿ

HDD-LARGE

HD Deve Gowda: ರಾಜ್ಯ ವಿದ್ಯಮಾನದ ಕುರಿತು ಈಗೇನೂ ಹೇಳಲಾರೆ

Devegowda

Hasana: ನಾಲ್ಕು ತಿಂಗಳ ಬಳಿಕ ತವರು ಜಿಲ್ಲೆಗೆ ಆ.31ರಂದು ದೇವೇಗೌಡ ಭೇಟಿ

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

18

Ganesh Chaturthi: ಸ್ವರ್ಣ ಗೌರಿ ಮತ್ತು ವಿಘ್ನ ವಿನಾಯಕನಿಗೊಂದು ನಮನ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.