ಡ್ರಗ್‌ ನಂಟಿದ್ದರೆ ಸಾಬೀತುಪಡಿಸಿ; ಮುಂಬಯಿ ಪೊಲೀಸರಿಗೆ ಕಂಗನಾ ಸವಾಲು


Team Udayavani, Sep 9, 2020, 6:15 AM IST

ಡ್ರಗ್‌ ನಂಟಿದ್ದರೆ ಸಾಬೀತುಪಡಿಸಿ; ಮುಂಬಯಿ ಪೊಲೀಸರಿಗೆ ಕಂಗನಾ ಸವಾಲು

ಮುಂಬಯಿ: “ನನ್ನನ್ನು ಈಗಲೇ ಡ್ರಗ್‌ ಪರೀಕ್ಷೆಗೆ ಒಳಪಡಿಸಿ. ಡ್ರಗ್‌ ಡೀಲರ್‌ಗಳೊಂದಿಗೆ ನಾನು ನಂಟು ಹೊಂದಿರುವುದು ಸಾಬೀತಾ­ದರೆ, ನಾನು ಮುಂಬಯಿ ಬಿಟ್ಟು ತೆರಳುತ್ತೇನೆ.’ ಹೀಗೆಂದು ಮುಂಬಯಿ ಪೊಲೀಸರಿಗೆ ಸವಾಲು ಹಾಕಿರುವುದು ಬಾಲಿವುಡ್‌ ನಟಿ ಕಂಗನಾ ರಣೌತ್‌. ಕಂಗನಾ ಅವರ ಮಾಜಿ ಪ್ರಿಯಕರ ಅಧ್ಯಾಯನ್‌ ಸುಮನ್‌ ಎಂಬ­ವರು ಈ ಹಿಂದೆ ನೀಡಿದ್ದ ಸಂದರ್ಶನ­ವೊಂದರಲ್ಲಿ, ಕಂಗನಾ ಡ್ರಗ್‌ ಸೇವಿಸುತ್ತಾರೆ ಮಾತ್ರವಲ್ಲ ನನಗೂ ಸೇವಿಸುವಂತೆ ಬಲ­ವಂತ­­ಪಡಿಸಿದ್ದರು ಎಂದು ಹೇಳಿದ್ದರು.

ಈ ಹೇಳಿಕೆ ಹಿನ್ನೆಲೆಯಲ್ಲಿ ತನಿಖೆ ನಡೆಸುವಂತೆ ಶಿವಸೇನೆ ಶಾಸಕ ಸುನೀಲ್‌ ಪ್ರಭು ಮತ್ತು ಪ್ರತಾಪ್‌ ಸರ್‌ನಾಯಕ್‌ ಸರಕಾರವನ್ನು ಮನವಿ ಮಾಡಿದ್ದು, ಅದಕ್ಕೆ ಮಹಾರಾಷ್ಟ್ರ ಸರಕಾರ ಒಪ್ಪಿದೆ. ಈ ಕುರಿತು ಮಂಗಳವಾರ ಮಾಹಿತಿ ನೀಡಿದ ಗೃಹ ಸಚಿವ ಅನಿಲ್‌ ದೇಶ್‌ಮುಖ್‌, ಡ್ರಗ್‌ ವಿಚಾರ ಸಂಬಂಧ ಕಂಗನಾ ವಿರುದ್ಧ ತನಿಖೆಗೆ ಆದೇಶಿಸುತ್ತಿರುವುದಾಗಿ ಘೋಷಿಸಿದ್ದಾರೆ.

ಇದಾದ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಕಂಗನಾ, “ಮುಂಬಯಿ ಪೊಲೀಸರಿಗೆ ನಾನು ಸಂಪೂರ್ಣ ಸಹಕಾರ ನೀಡುತ್ತೇನೆ. ದಯ­ವಿಟ್ಟು ನನ್ನ ರಕ್ತದ ಮಾದರಿ ಸಂಗ್ರಹಿಸಿ, ನನ್ನನ್ನು ಡ್ರಗ್‌ ಪರೀಕ್ಷೆಗೆ ಒಳಪಡಿಸಿ. ನನ್ನ ದೂರವಾಣಿ ಕರೆಗಳ ವಿವರಗಳನ್ನೂ ಪಡೆದು, ತನಿಖೆ ನಡೆಸಿ. ನನಗೆ ಯಾರಾದರೂ ಡ್ರಗ್‌ ಡೀಲರ್‌ಗಳೊಂದಿಗೆ ಲಿಂಕ್‌ ಇರುವುದು ಸಾಬೀತು ಮಾಡಿದರೆ, ನಾನು ತಪ್ಪೊಪ್ಪಿಕೊಳ್ಳು­ತ್ತೇನೆ. ಮಾತ್ರವಲ್ಲ, ಆ ಕ್ಷಣದಲ್ಲೇ ಮುಂಬಯಿ ಬಿಟ್ಟು ತೆರಳುತ್ತೇನೆ’ ಎಂದು ಹೇಳಿದ್ದಾರೆ.

ಮಹಾರಾಷ್ಟ್ರ ಸರಕಾರ ಮತ್ತು ಕಂಗನಾ ವಿರುದ್ಧ ಕಳೆದ ಕೆಲವು ದಿನಗಳಿಂದ ನಡೆಯುತ್ತಿ­ರುವ ಜಟಾಪಟಿಯ ಬೆನ್ನಲ್ಲೇ ಈ ಬೆಳವಣಿಗೆ ನಡೆದಿರುವುದು ಕುತೂಹಲ ಮೂಡಿಸಿದೆ. ಇನ್ನೊಂದೆಡೆ, ಕಂಗನಾ ಅವರು ಸ್ಥಳೀಯಾಡ­ಳಿತದ ಅನುಮತಿ ಪಡೆಯದೇ ಮುಂಬಯಿ ಯಲ್ಲಿ­ರುವ ತಮ್ಮ ಕಚೇರಿಯಲ್ಲಿ 12ಕ್ಕೂ ಹೆಚ್ಚು ಬದಲಾವಣೆಗಳನ್ನು ಮಾಡಿದ್ದಾರೆ ಎಂದು ಬಿಎಂಸಿ ಆರೋಪಿಸಿದೆ. ಈ ಕುರಿತ ನೋಟಿಸ್‌ವೊಂದನ್ನು ಕಚೇರಿ ಹೊರಗೆ ಅಂಟಿಸಲಾಗಿದೆ.

“ದೇವರು ನಮ್ಮೊಂದಿಗಿದ್ದಾನೆ’
ರಿಯಾ ಚಕ್ರವರ್ತಿಯನ್ನು ಎನ್‌ಸಿಬಿ ಬಂಧಿಸು­ತ್ತಿದ್ದಂತೆ ಸುಶಾಂತ್‌ ಸಿಂಗ್‌ ಅವರ ಸಹೋದರಿ ಶ್ವೇತಾ ಸಿಂಗ್‌ “ದೇವರು ನಮ್ಮೊಂದಿಗಿ­ದ್ದಾನೆ’ ಎಂದು ಟ್ವೀಟ್‌ ಮಾಡಿದ್ದಾರೆ. ಇನ್ನೊಂದೆಡೆ, ಮಂಗಳವಾರ 3ನೇ ದಿನದ ವಿಚಾರಣೆ ವೇಳೆ ಎನ್‌ಸಿಬಿ ಮುಂದೆ ಹಾಜರಾಗಿದ್ದ ರಿಯಾ, ಕಳೆದ ವಾರವಷ್ಟೇ ಬಂಧಿತನಾದ ಸಹೋದರ ಶೋವಿಕ್‌ಗೆ ಮುಖಾ­ಮುಖಿ­ಯಾಗಿದ್ದಾರೆ. ಸೋದರನನ್ನು ನೋಡು­ತ್ತಿದ್ದಂತೆ ರಿಯಾ ಕಣ್ಣೀರಿಟ್ಟಿದ್ದಾರೆ ಎಂದು ಮೂಲ­ಗಳು ಹೇಳಿವೆ.

ಸುಶಾಂತ್‌ ಸೋದರಿ ವಿರುದ್ಧ ಎಫ್ಐಆರ್‌
ಸುಶಾಂತ್‌ರ ಮಾನಸಿಕ ಕಾಯಿಲೆಗೆ ಔಷಧ ನೀಡುವಾಗ ವೈದ್ಯರ ಔಷಧ ಚೀಟಿಯನ್ನು ಫೋರ್ಜರಿ ಮಾಡಲಾಗಿದೆ ಎಂದು ಆರೋ­ಪಿಸಿ ರಿಯಾ ಸಲ್ಲಿಸಿದ್ದ ದೂರಿನ ಮೇರೆಗೆ ಮುಂಬಯಿ ಪೊಲೀಸರು ಸುಶಾಂತ್‌ ಸೋದರಿ ವಿರುದ್ಧ ಎಫ್ಐಆರ್‌ ದಾಖಲಿಸಿದ್ದಾರೆ. ಸುಶಾಂತ್‌ ಕುಟುಂಬದ ವಕೀಲರು ಈ ಎಫ್ಐಆರ್‌ ಕಾನೂನು­ಬಾಹಿರ ಎಂದಿದ್ದಾರೆ. ಜತೆಗೆ, ಎಫ್ಐಆರ್‌ ವಜಾಕ್ಕೆ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಕೆ ಅಥವಾ ರಿಯಾ ವಿರುದ್ಧ ಮಾನಹಾನಿ ಕೇಸ್‌ ದಾಖಲಿ­­ಸಲು ಯೋಚಿಸಿದ್ದೇವೆ ಎಂದಿದ್ದಾರೆ.

ಟಾಪ್ ನ್ಯೂಸ್

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bollywood: ವಿಕ್ಕಿ ಕೌಶಲ್‌ To ರಶ್ಮಿಕಾ.. ʼಛಾವಾʼಕ್ಕೆ ಕಲಾವಿದರು ಪಡೆದ ಸಂಭಾವನೆ ಎಷ್ಟು?

Bollywood: ವಿಕ್ಕಿ ಕೌಶಲ್‌ To ರಶ್ಮಿಕಾ.. ʼಛಾವಾʼಕ್ಕೆ ಕಲಾವಿದರು ಪಡೆದ ಸಂಭಾವನೆ ಎಷ್ಟು?

ಹೇಗಿದೆ ಬಹುನಿರೀಕ್ಷಿತ ʼಛಾವಾʼ? ವಿಕ್ಕಿ ‘ಸಂಭಾಜಿ’ ಅವತಾರಕ್ಕೆ ಪ್ರೇಕ್ಷಕರು ಹೇಳಿದ್ದೇನು?

ಹೇಗಿದೆ ಬಹುನಿರೀಕ್ಷಿತ ʼಛಾವಾʼ? ವಿಕ್ಕಿ ‘ಸಂಭಾಜಿ’ ಅವತಾರಕ್ಕೆ ಪ್ರೇಕ್ಷಕರು ಹೇಳಿದ್ದೇನು?

Ajay Devgn lends his voice to ‘Chhaava’

Chhaava: ‘ಚಾವಾ’ಗೆ ಧ್ವನಿಯಾದ ಅಜಯ್‌ ದೇವಗನ್‌

ಗಂಡು ಮೊಮ್ಮಗನೇ ಬೇಕು ಎಂಬ ಅಭಿಲಾಷೆ: ಚಿರಂಜೀವಿ ಹೇಳಿಕೆಗೆ ಭಾರಿ ವಿರೋಧ

ಗಂಡು ಮೊಮ್ಮಗನೇ ಬೇಕು ಎಂಬ ಅಭಿಲಾಷೆ: ಚಿರಂಜೀವಿ ಹೇಳಿಕೆಗೆ ಭಾರಿ ವಿರೋಧ

Mamata-Kulakarni

Spiritual journey: ಕಿನ್ನರ್‌ ಅಖಾಡ ತೊರೆದು ಹೊರಬಂದ ಮಾಜಿ ನಟಿ, ಸಾಧ್ವಿ ಮಮತಾ ಕುಲಕರ್ಣಿ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

arrested

CM ಕಚೇರಿಯ ಟಿಪ್ಪಣಿ ನಕಲು: ಬಂಧನ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.