![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Sep 9, 2020, 6:15 AM IST
ಮುಂಬಯಿ: “ನನ್ನನ್ನು ಈಗಲೇ ಡ್ರಗ್ ಪರೀಕ್ಷೆಗೆ ಒಳಪಡಿಸಿ. ಡ್ರಗ್ ಡೀಲರ್ಗಳೊಂದಿಗೆ ನಾನು ನಂಟು ಹೊಂದಿರುವುದು ಸಾಬೀತಾದರೆ, ನಾನು ಮುಂಬಯಿ ಬಿಟ್ಟು ತೆರಳುತ್ತೇನೆ.’ ಹೀಗೆಂದು ಮುಂಬಯಿ ಪೊಲೀಸರಿಗೆ ಸವಾಲು ಹಾಕಿರುವುದು ಬಾಲಿವುಡ್ ನಟಿ ಕಂಗನಾ ರಣೌತ್. ಕಂಗನಾ ಅವರ ಮಾಜಿ ಪ್ರಿಯಕರ ಅಧ್ಯಾಯನ್ ಸುಮನ್ ಎಂಬವರು ಈ ಹಿಂದೆ ನೀಡಿದ್ದ ಸಂದರ್ಶನವೊಂದರಲ್ಲಿ, ಕಂಗನಾ ಡ್ರಗ್ ಸೇವಿಸುತ್ತಾರೆ ಮಾತ್ರವಲ್ಲ ನನಗೂ ಸೇವಿಸುವಂತೆ ಬಲವಂತಪಡಿಸಿದ್ದರು ಎಂದು ಹೇಳಿದ್ದರು.
ಈ ಹೇಳಿಕೆ ಹಿನ್ನೆಲೆಯಲ್ಲಿ ತನಿಖೆ ನಡೆಸುವಂತೆ ಶಿವಸೇನೆ ಶಾಸಕ ಸುನೀಲ್ ಪ್ರಭು ಮತ್ತು ಪ್ರತಾಪ್ ಸರ್ನಾಯಕ್ ಸರಕಾರವನ್ನು ಮನವಿ ಮಾಡಿದ್ದು, ಅದಕ್ಕೆ ಮಹಾರಾಷ್ಟ್ರ ಸರಕಾರ ಒಪ್ಪಿದೆ. ಈ ಕುರಿತು ಮಂಗಳವಾರ ಮಾಹಿತಿ ನೀಡಿದ ಗೃಹ ಸಚಿವ ಅನಿಲ್ ದೇಶ್ಮುಖ್, ಡ್ರಗ್ ವಿಚಾರ ಸಂಬಂಧ ಕಂಗನಾ ವಿರುದ್ಧ ತನಿಖೆಗೆ ಆದೇಶಿಸುತ್ತಿರುವುದಾಗಿ ಘೋಷಿಸಿದ್ದಾರೆ.
ಇದಾದ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಕಂಗನಾ, “ಮುಂಬಯಿ ಪೊಲೀಸರಿಗೆ ನಾನು ಸಂಪೂರ್ಣ ಸಹಕಾರ ನೀಡುತ್ತೇನೆ. ದಯವಿಟ್ಟು ನನ್ನ ರಕ್ತದ ಮಾದರಿ ಸಂಗ್ರಹಿಸಿ, ನನ್ನನ್ನು ಡ್ರಗ್ ಪರೀಕ್ಷೆಗೆ ಒಳಪಡಿಸಿ. ನನ್ನ ದೂರವಾಣಿ ಕರೆಗಳ ವಿವರಗಳನ್ನೂ ಪಡೆದು, ತನಿಖೆ ನಡೆಸಿ. ನನಗೆ ಯಾರಾದರೂ ಡ್ರಗ್ ಡೀಲರ್ಗಳೊಂದಿಗೆ ಲಿಂಕ್ ಇರುವುದು ಸಾಬೀತು ಮಾಡಿದರೆ, ನಾನು ತಪ್ಪೊಪ್ಪಿಕೊಳ್ಳುತ್ತೇನೆ. ಮಾತ್ರವಲ್ಲ, ಆ ಕ್ಷಣದಲ್ಲೇ ಮುಂಬಯಿ ಬಿಟ್ಟು ತೆರಳುತ್ತೇನೆ’ ಎಂದು ಹೇಳಿದ್ದಾರೆ.
ಮಹಾರಾಷ್ಟ್ರ ಸರಕಾರ ಮತ್ತು ಕಂಗನಾ ವಿರುದ್ಧ ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ಜಟಾಪಟಿಯ ಬೆನ್ನಲ್ಲೇ ಈ ಬೆಳವಣಿಗೆ ನಡೆದಿರುವುದು ಕುತೂಹಲ ಮೂಡಿಸಿದೆ. ಇನ್ನೊಂದೆಡೆ, ಕಂಗನಾ ಅವರು ಸ್ಥಳೀಯಾಡಳಿತದ ಅನುಮತಿ ಪಡೆಯದೇ ಮುಂಬಯಿ ಯಲ್ಲಿರುವ ತಮ್ಮ ಕಚೇರಿಯಲ್ಲಿ 12ಕ್ಕೂ ಹೆಚ್ಚು ಬದಲಾವಣೆಗಳನ್ನು ಮಾಡಿದ್ದಾರೆ ಎಂದು ಬಿಎಂಸಿ ಆರೋಪಿಸಿದೆ. ಈ ಕುರಿತ ನೋಟಿಸ್ವೊಂದನ್ನು ಕಚೇರಿ ಹೊರಗೆ ಅಂಟಿಸಲಾಗಿದೆ.
“ದೇವರು ನಮ್ಮೊಂದಿಗಿದ್ದಾನೆ’
ರಿಯಾ ಚಕ್ರವರ್ತಿಯನ್ನು ಎನ್ಸಿಬಿ ಬಂಧಿಸುತ್ತಿದ್ದಂತೆ ಸುಶಾಂತ್ ಸಿಂಗ್ ಅವರ ಸಹೋದರಿ ಶ್ವೇತಾ ಸಿಂಗ್ “ದೇವರು ನಮ್ಮೊಂದಿಗಿದ್ದಾನೆ’ ಎಂದು ಟ್ವೀಟ್ ಮಾಡಿದ್ದಾರೆ. ಇನ್ನೊಂದೆಡೆ, ಮಂಗಳವಾರ 3ನೇ ದಿನದ ವಿಚಾರಣೆ ವೇಳೆ ಎನ್ಸಿಬಿ ಮುಂದೆ ಹಾಜರಾಗಿದ್ದ ರಿಯಾ, ಕಳೆದ ವಾರವಷ್ಟೇ ಬಂಧಿತನಾದ ಸಹೋದರ ಶೋವಿಕ್ಗೆ ಮುಖಾಮುಖಿಯಾಗಿದ್ದಾರೆ. ಸೋದರನನ್ನು ನೋಡುತ್ತಿದ್ದಂತೆ ರಿಯಾ ಕಣ್ಣೀರಿಟ್ಟಿದ್ದಾರೆ ಎಂದು ಮೂಲಗಳು ಹೇಳಿವೆ.
ಸುಶಾಂತ್ ಸೋದರಿ ವಿರುದ್ಧ ಎಫ್ಐಆರ್
ಸುಶಾಂತ್ರ ಮಾನಸಿಕ ಕಾಯಿಲೆಗೆ ಔಷಧ ನೀಡುವಾಗ ವೈದ್ಯರ ಔಷಧ ಚೀಟಿಯನ್ನು ಫೋರ್ಜರಿ ಮಾಡಲಾಗಿದೆ ಎಂದು ಆರೋಪಿಸಿ ರಿಯಾ ಸಲ್ಲಿಸಿದ್ದ ದೂರಿನ ಮೇರೆಗೆ ಮುಂಬಯಿ ಪೊಲೀಸರು ಸುಶಾಂತ್ ಸೋದರಿ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ಸುಶಾಂತ್ ಕುಟುಂಬದ ವಕೀಲರು ಈ ಎಫ್ಐಆರ್ ಕಾನೂನುಬಾಹಿರ ಎಂದಿದ್ದಾರೆ. ಜತೆಗೆ, ಎಫ್ಐಆರ್ ವಜಾಕ್ಕೆ ಕೋರ್ಟ್ನಲ್ಲಿ ಅರ್ಜಿ ಸಲ್ಲಿಕೆ ಅಥವಾ ರಿಯಾ ವಿರುದ್ಧ ಮಾನಹಾನಿ ಕೇಸ್ ದಾಖಲಿಸಲು ಯೋಚಿಸಿದ್ದೇವೆ ಎಂದಿದ್ದಾರೆ.
Bollywood: ವಿಕ್ಕಿ ಕೌಶಲ್ To ರಶ್ಮಿಕಾ.. ʼಛಾವಾʼಕ್ಕೆ ಕಲಾವಿದರು ಪಡೆದ ಸಂಭಾವನೆ ಎಷ್ಟು?
ಹೇಗಿದೆ ಬಹುನಿರೀಕ್ಷಿತ ʼಛಾವಾʼ? ವಿಕ್ಕಿ ‘ಸಂಭಾಜಿ’ ಅವತಾರಕ್ಕೆ ಪ್ರೇಕ್ಷಕರು ಹೇಳಿದ್ದೇನು?
Chhaava: ‘ಚಾವಾ’ಗೆ ಧ್ವನಿಯಾದ ಅಜಯ್ ದೇವಗನ್
ಗಂಡು ಮೊಮ್ಮಗನೇ ಬೇಕು ಎಂಬ ಅಭಿಲಾಷೆ: ಚಿರಂಜೀವಿ ಹೇಳಿಕೆಗೆ ಭಾರಿ ವಿರೋಧ
Spiritual journey: ಕಿನ್ನರ್ ಅಖಾಡ ತೊರೆದು ಹೊರಬಂದ ಮಾಜಿ ನಟಿ, ಸಾಧ್ವಿ ಮಮತಾ ಕುಲಕರ್ಣಿ
You seem to have an Ad Blocker on.
To continue reading, please turn it off or whitelist Udayavani.