![BR-Hills](https://www.udayavani.com/wp-content/uploads/2025/02/BR-Hills-415x249.jpg)
![BR-Hills](https://www.udayavani.com/wp-content/uploads/2025/02/BR-Hills-415x249.jpg)
Team Udayavani, Sep 9, 2020, 11:43 PM IST
ನವದೆಹಲಿ: ದೆಹಲಿ ವಿಮಾನ ನಿಲ್ದಾಣದಲ್ಲಿ ತಪ್ಪಿಸಿಕೊಂಡಿದ್ದ ನಳ ಎಂಬ ಬೆಕ್ಕಿನ ಮರಿಯೊಂದು, ನಾಲ್ಕು ದಿನಗಳ ಹುಡುಕಾಟದ ನಂತರ ತನ್ನ ಮಾಲೀಕರಾದ ಆಸ್ತಾ ಶಾ ಅವರನ್ನು ಸೇರಿಕೊಳ್ಳುವ ಮೂಲಕ ಈ ಪ್ರಕರಣ ಸುಖಾಂತ್ಯ ಕಂಡಿದೆ.
ಆಸ್ತಾ ಶಾ ಅವರು, ಇತ್ತೀಚೆಗೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಏರ್ ಇಂಡಿಯಾ ವಿಮಾನದಲ್ಲಿ ದೆಹಲಿಗೆ ಪ್ರಯಾಣಿಸಿದ್ದರು. ಅವರು ತಮ್ಮೊಂದಿಗೆ ತಂದಿದ್ದ ಎರಡು ಸಾಕುಬೆಕ್ಕುಗಳನ್ನು ಅವು ಇದ್ದ ಪೆಟ್ ಬಾಕ್ಸ್ನಲ್ಲೇ ಕೂರಿಸಿ ವಿಮಾನ ನಿಲ್ದಾಣದ ಸಿಬ್ಬಂದಿಗೆ ಹಸ್ತಾಂತರಿಸಿದ್ದರು. ಅದನ್ನು ಶಾ ಪ್ರಯಾಣಿಸಿದ ವಿಮಾನದ ಸರಕು ವಿಭಾಗದಲ್ಲಿರಿಸಲಾಗಿತ್ತು.
ಆದರೆ, ದೆಹಲಿ ವಿಮಾನ ನಿಲ್ದಾಣದಲ್ಲಿನ ಬ್ಯಾಗೇಜ್ ವಿಭಾಗದಲ್ಲಿ ಪೆಟ್ ಬಾಕ್ಸ್ ಅನ್ನು ತೆರೆದು ನೋಡಿದಾಗ ನಳ ಎಂಬ ಬೆಕ್ಕಿನಮರಿ ನಾಪತ್ತೆಯಾಗಿತ್ತು. ಬಾಕ್ಸ್ನಿಂದ ಅದು ಹೇಗೋ ಹೊರಬಂದು, ದೆಹಲಿ ವಿಮಾನ ನಿಲ್ದಾಣದಲ್ಲಿ ತಪ್ಪಿಸಿಕೊಂಡಿತ್ತು. ತೀವ್ರ ಹುಡುಕಾಟದ ನಂತರ 4 ದಿನಗಳಾದ ಮೇಲೆ ನಿಲ್ದಾಣದಲ್ಲೇ ಅದು ಪತ್ತೆಯಾಗಿದೆ. ಈ ಹುಡುಕಾಟಕ್ಕೆ ದೆಹಲಿ ಮೂಲದ ವೈಲ್ಡ್ಲೈಫ್ ಎಂಬ ಸರ್ಕಾರೇತರ ಸಂಸ್ಥೆಯ ಸಿಬ್ಬಂ ದಿ ಸಹಾಯ ಮಾಡಿದ್ದಾರೆ. 4 ದಿನಗಳ ಕಾಲ ವಿಮಾನ ನಿಲ್ದಾಣದೊಳಗೆ ಅಡ್ಡಾ ಡಿಕೊಂಡಿದ್ದ ನಳನನ್ನು ಈಗ ಅದರ ಮಾಲೀಕರಿಗೆ ಒಪ್ಪಿಸಲಾಗಿದೆ ಎಂದು ವಿಮಾನ ನಿಲ್ದಾಣದ ಮೂಲಗಳು ತಿಳಿಸಿವೆ.
Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Pariksha Pe Charcha: ಸ್ಮಾರ್ಟ್ ಫೋನ್ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
You seem to have an Ad Blocker on.
To continue reading, please turn it off or whitelist Udayavani.