ಐ-ಲೇಸಾ ತಂಡದಿಂದ ತುಳು ಭಾವಗೀತೆಗಳ ಆಹ್ವಾನ
ಆಯ್ಕೆಯಾದ ಭಾವಗೀತೆಯ ಸಂಪೂರ್ಣ ಹಕ್ಕು ಐ-ಲೇಸಾದ್ದಾಗಿರುತ್ತದೆ.
Team Udayavani, Sep 10, 2020, 12:48 PM IST
ಮುಂಬಯಿ, ಸೆ. 9: ಐ-ಲೇಸಾ (The Voice of Ocean) ತಂಡವು ಹೆಸರಾಂತ ಕವಿ ಮತ್ತು ತುಳು ಲಿಪಿ ತಜ್ಞ ಡಾ| ವೆಂಕಟರಾಜ್ ಪುಣಿಂಚತ್ತಾಯ ಇವರ
ಸಂಸ್ಮರಣೆಗಾಗಿ ನೂರ ಒಂದು ತುಳು ಭಾವಗೀತೆಗಳ ಪುಸ್ತಕವನ್ನು ಪ್ರಕಟಿಸಲಿದೆ. ಆ ಪ್ರಯುಕ್ತ ಜಗದಗಲ ಪಸರಿಸಿರುವ ತುಳು ಬರಹಗಾರರಲ್ಲಿ ಉತ್ತಮ ಗೇಯತೆಯ ತುಳು ಭಾವಗೀತೆಗಳನ್ನು ಆಹ್ವಾನಿಸಲಾಗಿದೆ.
ತುಳು ಭಾವಗೀತೆಗಳನ್ನು ಕನ್ನಡ ಲಿಪಿಯಲ್ಲಿ (ಯುನಿಕೋಡ್) ಟೈಪ್ ಮಾಡಿರಬೇಕು. ರಚನೆಕಾರರಿಗೆ ಯಾವುದೇ ವಯೋಮಾನದ ನಿರ್ಬಂಧವಿರುವುದಿಲ್ಲ. ಒಬ್ಬರಿಗೆ ಗರಿಷ್ಠ ಎರಡು ರಚನೆಗಳನ್ನು ಮಾತ್ರ ಕಳುಹಿಸುವ ಅವಕಾಶವಿದ್ದು, ರಚನೆಯು ಭಾವಗೀತೆಯ ರೂಪದಲ್ಲಿದ್ದು ಹಾಡುವುದಕ್ಕೆ ಸೂಕ್ತವಾಗಿರಬೇಕು. ಭಾವಗೀತೆಯ ಜೊತೆಗೆ ಜಾನಪದದ ಲೇಪವಿದ್ದರೂ ಪರವಾಗಿಲ್ಲ. ಭಾವಗೀತೆಯು ಬರಹಗಾರರ ಸ್ವರಚನೆಯಾಗಿರಬೇಕು.
ಈ ಹಿಂದೆ ಯಾವ ರೂಪದಲ್ಲಿ ಎಲ್ಲಿಯೂ ಇದು ಪ್ರಕಟವಾಗಿರಬಾರದು. ಮಾಧ್ಯಮದಲ್ಲಿ ಬಂದಿದ್ದರೆ ಅಂತಹ ರಚನೆಗಳನ್ನು ಕಳುಹಿಸಬಾರದು. ಅನುವಾದಿತ ರಚನೆಗಳಿಗೆ ಅವಕಾಶವಿಲ್ಲ. ಉತ್ತಮವಾದ ನೂರ ಒಂದು ಭಾವಗೀತೆಗಳನ್ನು ಮಾತ್ರ ಪರಿಗಣಿಸಲಾಗುವುದು.
ಆಯ್ಕೆಯಾದ ಭಾವಗೀತೆಗಳನ್ನು ಪುಸ್ತಕರೂಪದಲ್ಲಿ ಪ್ರಕಟಿಸಲಾಗುವುದು. ಭಾವಗೀತೆಯ ರಚನೆಕಾರರ ಹೆಸರನ್ನು ಪುಸ್ತಕದಲ್ಲಿ ಪ್ರಕಟಿಸಲಾಗುವುದು. ಜೊತೆಗೆ
ಅವರಿಗೆ ಒಂದು ಪುಸ್ತಕವನ್ನು ಉಚಿತವಾಗಿ ನೀಡಲಾಗುವುದು. ಸಂಸ್ಥೆಗೆ ಕಳುಹಿಸಿದ ನಂತರವೂ ಆ ಭಾವಗೀತೆ ರಚನೆಯನ್ನು ಬೇರೆಲ್ಲಿಗೂ ಕಳುಹಿಸಬಾರದು ಹಾಗೂ ಪ್ರಕಟಿಸಬಾರದು. ಆಯ್ಕೆಯಾದ ಭಾವಗೀತೆಯ ಸಂಪೂರ್ಣ ಹಕ್ಕು ಐ-ಲೇಸಾದ್ದಾಗಿರುತ್ತದೆ.
ಗೀತೆಗಳ ಆಯ್ಕೆ, ರಾಗ ಸಂಯೋಜನೆಯ ಹಕ್ಕು, ಇತ್ಯಾದಿ ತೀರ್ಮಾನಗಳು ಸಂಪೂರ್ಣವಾಗಿ ಐ-ಲೇಸಾ ತಂಡದ್ದಾಗಿರುತ್ತದೆ. ನಿಯಮಗಳು ಒಪ್ಪಿಗೆಯಾದಲ್ಲಿ ನಿಮ್ಮ ಟೈಪ್ ಮಾಡಿದ ತುಳು ಭಾವಗೀತೆ ರಚನೆಗಳನ್ನು ಈ ಮೈಲ್ 101tulusongs.ilesagmail.com ಅಥವಾ ವಾಟ್ಸಾಪ್ ಮೂಲಕ 9342936622
ಸಂಖ್ಯೆಗೆ ಕಳುಹಿಸಬಹುದು. ಭಾವಗೀತೆಗಳನ್ನು ಸೆ. 20 ರೊಳಗೆ ಕಳುಹಿಸತಕ್ಕದ್ದು ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Navaratri 2024: ನವರಾತ್ರಿ “ನವ ಚೈತನ್ಯದ ನವರಾತ್ರಿಗಳು”
Navaratri 2024:ಕರಾವಳಿಯ ನವದಿನದ ಸಂಭ್ರಮ-ಮಂಗಳೂರು ದಸರಾ’ ಒಂದು ವಿಶಿಷ್ಟ ಅನುಭೂತಿ
Navaratri 2024: ನವ ರೂಪದಲ್ಲಿ ದೇವಿಯ ದೈವಿಕ ನವರಾತ್ರಿಗಳು-ಶಕ್ತಿಯ ಸಂಕೇತ ಶೈಲಪುತ್ರಿ
ವಿಶ್ವಬ್ರಾಹ್ಮಣ ಒಕ್ಕೂಟ ಮಸ್ಕತ್: ಸ್ವಯಂ ಪ್ರೇರಿತ ರಕ್ತದಾನ ಶಿಬಿರ
ಯಕ್ಷಧ್ರುವ ಪಟ್ಲ ಫೌಂಡೇಶನ್: 75 ದಿನಗಳ ಯಕ್ಷಯಾನ ಸಮಾರೋಪ
MUST WATCH
ಹೊಸ ಸೇರ್ಪಡೆ
Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ
Canada Vs India: ನಿಜ್ಜರ್ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ
Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್
Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು
Recommendation: ನ್ಯಾ. ಸಂಜೀವ್ ಖನ್ನಾ ಸುಪ್ರೀಂಕೋರ್ಟ್ ಮುಂದಿನ ಮುಖ್ಯ ನ್ಯಾಯಮೂರ್ತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.