ಸಂಕಷ್ಟದಲ್ಲಿ ಕರಾವಳಿಯ ಮತ್ಸ್ಯ ಉದ್ಯಮ!

ಕಠಿನ ನಿಯಮಾವಳಿಯಿಂದ ರಫ್ತು ಕುಸಿತ

Team Udayavani, Sep 15, 2020, 6:09 AM IST

ಸಂಕಷ್ಟದಲ್ಲಿ ಕರಾವಳಿಯ ಮತ್ಸ್ಯ ಉದ್ಯಮ!

ಸಾಂದರ್ಭಿಕ ಚಿತ್ರ

ಮಂಗಳೂರು: ಭಾರತ-ಚೀನ ನಡುವಿನ ಸಂಘರ್ಷಮಯ ಸ್ಥಿತಿಯ ಹಿನ್ನೆಲೆಯಲ್ಲಿ ರಾಜ್ಯದಿಂದ ಮೀನು ಆಮದಿಗೆ ಚೀನವು ಕಠಿನ ನಿಯಮಾವಳಿಗಳನ್ನು ರೂಪಿಸಿರುವುದು ಕರಾವಳಿಯ ಮೀನುಗಾರರನ್ನು ಸಂಕಷ್ಟಕ್ಕೆ ತಳ್ಳಿದೆ.

ರಾಜ್ಯದಿಂದ ಪ್ರತೀ ವರ್ಷ ಸುಮಾರು 1 ಸಾವಿರ ಕಂಟೈನರ್‌ಗಳ ಮೂಲಕ ಚೀನಕ್ಕೆ ಮೀನು ರಫ್ತು ಆಗುತ್ತದೆ. ಒಂದು ಕಂಟೈನರ್‌ನಲ್ಲಿ 25 ಟನ್‌ ಮೀನು ಇರುತ್ತದೆ. ಕಪ್ಪೆ ಬೊಂಡಾಸ್‌, ಬೊಂಡಾಸ್‌ ಮತ್ತು ಪಾಂಬೋಲು ಮೀನು ಯಥೇತ್ಛವಾಗಿ ಚೀನಕ್ಕೆ ರಫ್ತಾಗುತ್ತವೆ. ಆದರೆ ಕೊರೊನೋತ್ತರದಲ್ಲಿ ವಿದೇಶಗಳಿಂದ ಬೇಡಿಕೆ ಕುಸಿತ ಮತ್ತು ಕಟ್ಟುನಿಟ್ಟಿನ ನಿಯಮಗಳಿಂದ ರಫ್ತಿಗೆ ಹೊಡೆತ ಬೀಳುತ್ತಿದೆ.

ಚೀನ ಸಹಿತ ವಿದೇಶಗಳಿಗೆ ಕರ್ನಾಟಕದಿಂದ ಕಳೆದ ವರ್ಷ ಒಟ್ಟು 1,600 ಕೋ.ರೂ. ಮೌಲ್ಯದ ಮೀನು ರಫ್ತಾಗಿದೆ. ಆದರೆ ಮಾರ್ಚ್‌ ಬಳಿಕ ರಫ್ತು ಸಂಪೂರ್ಣ ಸ್ಥಗಿತಗೊಂಡಿದೆ. ಶೇಖರಿಸಿಟ್ಟ ಮೀನು ರಫ್ತಾಗದ ನಷ್ಟ ಒಂದೆಡೆಯಾದರೆ ಲಾಕ್‌ಡೌನ್‌ ಅವಧಿಯಲ್ಲಿ ಕಾರ್ಮಿಕರಿಗೆ ಸಂಬಳ ಸಹಿತ ಇತರ ವ್ಯವಸ್ಥೆ ಕಲ್ಪಿಸಿದ್ದರಿಂದಲೂ ನಷ್ಟವಾಗಿದೆ. ಸದ್ಯ ಕರಾವಳಿಯಲ್ಲಿ ಮೀನುಗಾರಿಕೆ ಆರಂಭವಾಗಿದ್ದರೂ ರಫ್ತು ಇನ್ನೂ ಆರಂಭವಾಗಿಲ್ಲ.

ಸದ್ಯದ ಮಾಹಿತಿಯಂತೆ ಚೀನ ಮಾರುಕಟ್ಟೆಯಲ್ಲಿ ಮೀನಿಗೆ ಬೇಡಿಕೆ ಕಡಿಮೆಯಿದೆ. ಮೀನು ರಫ್ತಾಗುವ ಕಂಟೈನರ್‌ಗಳನ್ನು ಸ್ಯಾನಿಟೈಸ್‌ ಮಾಡ ಬೇಕು ಎನ್ನುವುದರ ಸಹಿತ ಕಠಿನ ನಿಯಮಾವಳಿ ರೂಪಿಸಿದ್ದರಿಂದ ಮುಂದಿನ ಸ್ಥಿತಿಗತಿಯ ಬಗ್ಗೆ ಆತಂಕ ಸೃಷ್ಟಿಯಾಗಿದೆ.

ರಾಜ್ಯದಿಂದ ಐರೋಪ್ಯ ದೇಶಗಳು, ಬ್ಯಾಂಕಾಕ್‌, ಥಾçಲ್ಯಾಂಡ್‌, ಮಲೇಷ್ಯಾ, ಕೊರಿಯಾ ಮತ್ತಿತರ ದೇಶಗಳಿಗೂ ಮೀನು ರಫ್ತಾಗುತ್ತಿತ್ತು. ಅವು ಕೂಡ ಮಾರ್ಚ್‌ನಿಂದ ಸ್ಥಗಿತಗೊಂಡಿದ್ದು, ಮರಳಿ ಆರಂಭವಾಗಿಲ್ಲ.

ಪ್ರಯೋಗಾಲಯ ಪರೀಕ್ಷೆ ಇಲ್ಲಿಲ್ಲ!
ಕೇಂದ್ರ ಸರಕಾರದ “ಸಮುದ್ರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರ’ದ ಕಚೇರಿ ಮಂಗಳೂರಿನಲ್ಲಿ ಇದ್ದರೂ ಇಲ್ಲಿಂದ ರಫ್ತಾಗುವ ಮೀನಿನ ಪ್ರಯೋಗಾಲಯ ಪರೀಕ್ಷೆಗಾಗಿ ಕೊಚ್ಚಿಯಲ್ಲಿರುವ ಕೇಂದ್ರ ಕಚೇರಿಯನ್ನು ಅವಲಂಬಿಸಬೇಕಾಗಿದೆ. ರಫ್ತು ಮಾಡುವ ಕಾರ್ಖಾನೆಯಲ್ಲಿ ಲ್ಯಾಬ್‌ ಇದ್ದರೂ ವಾರ್ಷಿಕವಾಗಿ ನಡೆಯಬೇಕಾದ ಪರೀಕ್ಷೆಯ ವರದಿಯನ್ನು ಕೊಚ್ಚಿಯಿಂದಲೇ ಪಡೆಯಬೇಕಾದ ಕಾರಣ ಕರಾವಳಿಯ ರಫ್ತು ಉದ್ಯಮಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಮಂಗಳೂರಿನಲ್ಲೇ ಪ್ರಯೋಗಾಲಯ ಆರಂಭಿಸುವಂತೆ ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯಿಂದ ಕೇಂದ್ರ ಸರಕಾರಕ್ಕೆ ಮನವಿ ಮಾಡಿದ್ದರೂ ಸಮಸ್ಯೆ ತಪ್ಪಿಲ್ಲ.

ಏರ್‌ಕಾರ್ಗೊ ದರ ದುಪ್ಪಟ್ಟು !
ಸದ್ಯ ಏರ್‌ ಕಾರ್ಗೊ ಮಾತ್ರ ನಿರ್ವಹಣೆಯಾಗುತ್ತಿದ್ದು, ದರ ಏರಿದೆ. ಇದು ಕೂಡ ಮೀನು ರಫ್ತಿಗೆ ಹೊಡೆತ ನೀಡುತ್ತಿದೆ. ಸದ್ಯ 100 ರೂ. ಮೌಲ್ಯದ ಮೀನನ್ನು 300 ರೂ. ವ್ಯಯಿಸಿ ಕಳುಹಿಸಿಕೊಡುವ ಸ್ಥಿತಿಯಿದೆ. ಹೀಗಾಗಿ ಮಾರ್ಚ್‌ನಿಂದ ಇಲ್ಲಿಯ ವರೆಗೆ ಮೀನು ರಫ್ತು ಮಾಡಿಲ್ಲ. ವಿಮಾನಯಾನ ಸಂಸ್ಥೆಗಳು ದರ ಕಡಿಮೆ ಮಾಡಿದರೆ ಉತ್ತಮ ಎನ್ನುತ್ತಾರೆ ಓರ್ವ ರಫ್ತು ಉದ್ಯಮಿ.

ಚೀನ ಸೇರಿದಂತೆ ವಿದೇಶಗಳಿಗೆ ರಾಜ್ಯದಿಂದ ಕಳೆದ ವರ್ಷ ಸುಮಾರು 1,600 ಕೋ.ರೂ. ಮೌಲ್ಯದ ಮೀನು ರಫ್ತಾಗಿದೆ. ಈ ಬಾರಿ ಮೀನುಗಾರಿಕೆ ಆರಂಭ ತಡವಾದದ್ದರಿಂದ ಕೆಲವು ದಿನಗಳ ಬಳಿಕ ರಫ್ತು ಆರಂಭವಾಗುವ ನಿರೀಕ್ಷೆಯಿದೆ. ಅಲ್ಲಿನ ಬೇಡಿಕೆಗೆ ಆಧರಿಸಿ ವಹಿವಾಟು ನಡೆಯಲಿದೆ.
– ಪಾರ್ಶ್ವನಾಥ್‌, ಮೀನುಗಾರಿಕೆ ಉಪನಿರ್ದೇಶಕರು, ಮಂಗಳೂರು

ಮೀನು ರಫ್ತು ಮಾಡುವ ಕಾರ್ಖಾನೆಗಳು
ಮಂಗಳೂರು 12
ಉಡುಪಿ 10
ಉತ್ತರ ಕನ್ನಡ 3
ಒಟ್ಟು: 25

 ದಿನೇಶ್‌ ಇರಾ

ಟಾಪ್ ನ್ಯೂಸ್

Dinesh-Meeting

Bengaluru: ನಿಫಾಗೆ ಬಲಿಯಾದ ವಿದ್ಯಾರ್ಥಿಯ ಸಂಪರ್ಕದಲ್ಲಿದ್ದ 25 ಮಂದಿ ಪತ್ತೆ

PUNJALAKATTE

Punjalkatte: ಆರ್‌ಎಎಫ್ ಪೊಲೀಸರಿದ್ದ ಲಾರಿ ಪಲ್ಟಿ , ಇಬ್ಬರಿಗೆ ಗಾಯ

-archana-kamath

Liver transplant: ಲಿವರ್‌ ದಾನದ ಬಳಿಕ ಉಪನ್ಯಾಸಕಿ ಸಾವು

water

Mudubidire: 77 ಕೋ.ರೂ. ವೆಚ್ಚದ ಅಮೃತ್‌ 2.0 ನೀರಿನ ಯೋಜನೆಗೆ ಚಾಲನೆ

Belli

Movie Release: ಮಕ್ಕಳ ಚಲನಚಿತ್ರ “ದಿ ಜರ್ನಿ ಆಫ್‌ ಬೆಳ್ಳಿ’ ತೆರೆಗೆ

SUPER-MOON

Space Wonder: ಇಂದು ವಿಶೇಷ ಸೂಪರ್‌ಮೂನ್‌

Sunil-kumar

Investigation: ಬಂಟ್ವಾಳ, ಮಂಡ್ಯ ಘಟನೆ ತನಿಖೆ ಎನ್‌ಐಎಗೆ ವಹಿಸಲಿ: ಶಾಸಕ ಸುನಿಲ್‌ ಕುಮಾರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

water

Mudubidire: 77 ಕೋ.ರೂ. ವೆಚ್ಚದ ಅಮೃತ್‌ 2.0 ನೀರಿನ ಯೋಜನೆಗೆ ಚಾಲನೆ

Cap-Brijesh-Chowta

Mangaluru: ಶಾಂತಿಭಂಗಕ್ಕೆ ಯತ್ನಿಸುವವರ ವಿರುದ್ಧ ಕಠಿನ ಕ್ರಮ: ಸಂಸದ ಚೌಟ ಆಗ್ರಹ

Surathkal: ಕಾಟಿಪಳ್ಳ ಮಸೀದಿ ಕಲ್ಲು ತೂರಾಟ ವಿಚಾರ; ನಾಲ್ವರನ್ನು ಬಂಧಿಸಿದ ಪೊಲೀಸರು

Surathkal: ಕಾಟಿಪಳ್ಳ ಮಸೀದಿಗೆ ಕಲ್ಲು: 6 ಮಂದಿ ಸೆರೆ

Suratkal: ಕಿಡಿಗೇಡಿಗಳಿಂದ ಮಸೀದಿಗೆ ಕಲ್ಲು ತೂರಾಟ, ಪ್ರಕರಣದಾಖಲು

Surathkal: ಬೈಕ್ ನಲ್ಲಿ ಬಂದು ಮಸೀದಿಗೆ ಕಲ್ಲು ಬಿಸಾಡಿದ ಕಿಡಿಗೇಡಿಗಳು… ಪ್ರಕರಣ ದಾಖಲು

DK-Human-Chian

Democracy Day: ದಕ್ಷಿಣ ಕನ್ನಡ: 130 ಕಿ.ಮೀ. ವ್ಯಾಪ್ತಿಯಲ್ಲಿ 84,200 ಮಂದಿ

MUST WATCH

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

udayavani youtube

ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

ಹೊಸ ಸೇರ್ಪಡೆ

Dinesh-Meeting

Bengaluru: ನಿಫಾಗೆ ಬಲಿಯಾದ ವಿದ್ಯಾರ್ಥಿಯ ಸಂಪರ್ಕದಲ್ಲಿದ್ದ 25 ಮಂದಿ ಪತ್ತೆ

PUNJALAKATTE

Punjalkatte: ಆರ್‌ಎಎಫ್ ಪೊಲೀಸರಿದ್ದ ಲಾರಿ ಪಲ್ಟಿ , ಇಬ್ಬರಿಗೆ ಗಾಯ

-archana-kamath

Liver transplant: ಲಿವರ್‌ ದಾನದ ಬಳಿಕ ಉಪನ್ಯಾಸಕಿ ಸಾವು

1-asdadasd

Cricketer of the Month :ಎರಡೂ ಪ್ರಶಸ್ತಿ ಶ್ರೀಲಂಕಾ ಪಾಲು

1-HB

Harry Brook ಹೆಗಲಿಗೆ ಇಂಗ್ಲೆಂಡ್‌ ನಾಯಕತ್ವ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.