
ಆರ್ ಸಿ ಬಿ ಥೀಮ್ ಸಾಂಗ್ ರಿಲೀಸ್ : ಕನ್ನಡ ಸಾಹಿತ್ಯ ಇಲ್ಲದ್ದಕ್ಕೆ ಅಭಿಮಾನಿಗಳು ಗರಂ..!
Team Udayavani, Sep 18, 2020, 1:06 PM IST

ನವದೆಹಲಿ : ಐಪಿಎಲ್ ಗೆ ಇನ್ನು ಉಳಿದಿರುವುದು ಒಂದೇ ದಿನ. ಈ ಮಧ್ಯ ಆರ್ ಸಿಬಿ ತಂಡ ಈ ಬಾರಿಯ ತನ್ನ ಅಧಿಕೃತ ಥೀಮ್ ಸಾಂಗ್ ನ್ನು ಬಿಡುಗಡೆ ಮಾಡಿದ್ದು,ಕನ್ನಡದ ಅಭಿಮಾನಿಗಳಿಗೆ ಈ ಹಾಡು ಕೊಂಚ ನಿರಾಶೆ ಹುಟ್ಟಿಸಿದೆ. ಅದಕ್ಕೆ ಕಾರಣ ಹಾಡಿನಲ್ಲಿ ಕನ್ನಡ ಪದಗಳು ಕೇಳಲು ಸಿಗದಿರುವುದು.!
ಐಪಿಎಲ್ ನಲ್ಲಿ ಆರ್ ಸಿಬಿ ತಂಡಕ್ಕೆ ತನ್ನದೇ ಆದ ದೊಡ್ಡ ಬೆಂಬಲಿಗರ ಪಡೆಯಿದೆ,ಸೋತರು ಗೆದ್ದರು ಆರ್ ಸಿಬಿಯೇ ನಮ್ಮ ತಂಡ ಎನ್ನುವ ಅಭಿಮಾನಿ ಬಳಗವಿದೆ. ಆರ್ ಸಿಬಿ ತಂಡ ಇಂದು ತನ್ನ ಅಧಿಕೃತ ಥೀಮ್ ಸಾಂಗ್ ನ್ನು ಬಿಡುಗಡೆ ಮಾಡಿದೆ. 1 ನಿಮಿಷ 47 ಸೆಕೆಂಡ್ ಗಳಿರುವ ಈ ಹಾಡಿನಲ್ಲಿ ಆರ್ ಸಿಬಿ ತಂಡದ ಆಟಗಾರರ ಅಭ್ಯಾಸದ ದೃಶಾವಳಿಗಳು, ಅಭಿಮಾನಿಗಳ ಉತ್ಸಾಹಭರಿತ ಕ್ಷಣಗಳನ್ನು ತೋರಿಸಲಾಗಿದೆ. ಇಡೀ ಹಾಡಿನಲ್ಲಿ ಹಿಂದಿ ಹಾಗೂ ಇಂಗ್ಲೀಷಿನ ಸಾಹಿತ್ಯವೇ ಮೇಲಾಗಿ ಕೇಳುತ್ತದೆ ವಿನಃ ಕನ್ನಡದ ಪದಗಳ ಬಳಕೆ ಇಲ್ಲವೇ ಇಲ್ಲ. ಸದ್ಯ ಇದು ಕನ್ನಡದ ಅಭಿಮಾನಿಗಳಿಗೆ ನಿರಾಶೆ ತಂದಿದ್ದು ಸಾಮಾಜಿಕ ಜಾಲಾತಾಣದಲ್ಲಿ ಅಭಿಮಾನಿಗಳು ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ.
ಭಾರತದ ಮಾಜಿ ವೇಗಿ ದೊಡ್ಡ ಗಣೇಶ್ ಟ್ವೀಟ್ ಮಾಡಿ ಹಾಡು ಚೆನ್ನಾಗಿದೆ, ಹಿಂದಿಯ ಬದಲು ಕನ್ನಡದ ಸಾಹಿತ್ಯ ಬಳಕೆಯಾಗಿದ್ದಾರೆ ಚೆನ್ನಾಗಿ ಇರುತ್ತಿತ್ತು ಎಂದಿದ್ದಾರೆ. ಇನ್ನು ಕೆಲವರು ಹಿಂದಿ ಹೇರಿಕೆಯ ವಿರುದ್ಧ ಹೇಳಿ ಹಾಡಿನಲ್ಲಿ ಕನ್ನಡ ಸಾಹಿತ್ಯ ಇರಬೇಕಿತ್ತು ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ.
ಪಂಜಾಬ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಹೇಗೆ ತಮ್ಮ ತಂಡದ ಥೀಮ್ ಸಾಂಗ್ ನಲ್ಲಿ ಸ್ಥಳೀಯ ಭಾಷೆಯನ್ನು ಬಳಿಸಿದ್ದಾರೆಯೋ ಹಾಗೆ ಆರ್ ಸಿಬಿ ತಂಡವೂ ಸ್ಥಳೀಯ ಭಾಷೆಗೆ ಆದ್ಯತೆ ನೀಡಬೇಕಿತ್ತು ಎಂದು ಕೆಲ ಅಭಿಮಾನಿಗಳು ತಮ್ಮ ಅಭಿಪ್ರಾಯವನ್ನು ಹೇಳಿದ್ದಾರೆ.
ಆರ್ ಸಿ ಬಿ ತಂಡದ ಅಧಿಕೃತ ಥೀಮ್ ಸಾಮಗ್ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದ್ದು ಈಗಾಗಲೇ 5 ಲಕ್ಷ ವೀಕ್ಷಣೆಯತ್ತ ಸಾಗುತ್ತಿದೆ.
ಚೆನ್ನಾಗಿದೆ. ಆದರೆ ಹಿಂದಿ ಬದಲು ಕನ್ನಡ ಬಳಸಿದ್ರೆ ಇನ್ನೂ ಚೆನ್ನಾಗಿರೋದು @RCBTweets #IPL2020 https://t.co/3cDjBhzKyA
— ದೊಡ್ಡ ಗಣೇಶ್ | Dodda Ganesh (@doddaganesha) September 18, 2020
ಟಾಪ್ ನ್ಯೂಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Warner-Ashwin; 2024ರಲ್ಲಿ ವಿದಾಯ ಹೇಳಿದ್ದು ಬರೋಬ್ಬರಿ 28 ಕ್ರಿಕೆಟಿಗರು; ಇಲ್ಲಿದೆ ಪಟ್ಟಿ

INDvAUS: ಶಮಿ ವಿರುದ್ದ ನಿಂತರೇ ನಾಯಕ ರೋಹಿತ್?; ವೇಗಿಗೆ ಆಸೀಸ್ ಪ್ರವಾಸ ಕಷ್ಟ!

WTC 25; ಕಠಿಣವಾಯ್ತು ಭಾರತದ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಹಾದಿ; ಹೀಗಿದೆ ಲೆಕ್ಕಾಚಾರ

R.Ashwin retirement: ಅಶ್ವಿನ್ ವಿದಾಯದ ಸುತ್ತಮುತ್ತ…

Shaw left out; ಓ ದೇವರೇ, ನಾನು ಇನ್ನೇನೆಲ್ಲ ನೋಡಬೇಕು..; ಪೃಥ್ವಿ ಶಾ ನೋವು
MUST WATCH
ಹೊಸ ಸೇರ್ಪಡೆ

Puttur: ಬಸ್ – ಬೈಕ್ ಅಪಘಾತ; ಸವಾರ ಸಾವು

Parliament; ಸಂಸತ್ ಭವನ ಎದುರು ತಳ್ಳಾಟ; ಇಬ್ಬರು ಸಂಸದರಿಗೆ ಗಾಯ, ರಾಹುಲ್ ವಿರುದ್ದ ಆರೋಪ

BBK11: ಕೊನೆಗೂ ಬಿಗ್ ಬಾಸ್ ಬಿಟ್ಟು ಬಂದಿದ್ದಕ್ಕೆ ಕಾರಣ ಬಹಿರಂಗಪಡಿಸಿದ ಗೋಲ್ಡ್ ಸುರೇಶ್

ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು

Belthangady: ಕುತ್ಲೂರು ನಿವಾಸಿಗಳ ಕೂಗು ಅರಣ್ಯರೋದನ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.