ಇನ್ನೊಬ್ಬರನ್ನು ಮೆಚ್ಚಿಸಿ ಏನುಪಯೋಗ?


Team Udayavani, Sep 22, 2020, 8:58 PM IST

ಇನ್ನೊಬ್ಬರನ್ನು ಮೆಚ್ಚಿಸಿ ಏನುಪಯೋಗ?

ಸಾಂದರ್ಭಿಕ ಚಿತ್ರ

ಭೂಮಿಯ ಮೇಲೆ ಜನ್ಮ ತಾಳಿದ ಪ್ರತಿಯೊಂದು ಜೀವಿಯೂ ಸಹ , ತಾನು ಅಡ್ಡಿ ಆತಂಕ ಗಳಿಲ್ಲದೇ ನೆಮ್ಮದಿಯಿಂದ ಜೀವನ ನಡೆಸ ಬೇಕೆಂದು ಬಯಸುತ್ತದೆ. ಮನುಷ್ಯನ ವರಸೆ ಇಲ್ಲಿಯೂ ಭಿನ್ನ. ಆತ ನೆಮ್ಮದಿಯ ಜೊತೆಜೊತೆಗೇ ಮತ್ತೂಬ್ಬರನ್ನು ಸಂತೋಷಪಡಿಸಲು, ಅವರನ್ನು ಮೆಚ್ಚಿಸಿ ಏನಾದರೂ ಲಾಭ ಪಡೆಯಲು ಯೋಚಿಸುತ್ತಾನೆ. ದಿನಬೆಳಗಾದರೆ ಸಾಕು; ನನ್ನ ಬಗ್ಗೆ ಜನ ಏನೆನ್ನುತ್ತಾರೆ? ಹೆಚ್ಚು ಗೌರವ, ಮರ್ಯಾದೆ, ಶ್ರೀಮಂತಿಕೆಯನ್ನು ಪಡೆಯುವುದು ಹೇಗೆ ಎಂದೆಲ್ಲಾ ಯೋಚಿಸಿ ಯೋಚಿಸಿ ಹಣ್ಣಾಗುತ್ತಾನೆ.

ಅಷ್ಟು ಮಾತ್ರವಲ್ಲ, ಸಣ್ಣದೊಂದು ಸೋಲಿಗೂ ಕಂಗಾಲಾಗುತ್ತಾನೆ. ಒಳ್ಳೆಯ ದಿನಗಳು ವರ್ಷದ ನಂತರ ಬರಬಹುದು. ಅಲ್ಲಿಯವರೆಗೂ ಏನಾಗುವುದೋ ನೋಡೋಣ. ಗೆಲುವಿಗಾಗಿ ಮರಳಿ ಯತ್ನವ ಮಾಡೋಣ ಎಂದು ಯೋಚಿಸುವುದೇ ಇಲ್ಲ.

ಹೌದು. ಒಂದರ ಹಿಂದೊಂದು ಸೋಲು ಜೊತೆಯಾದರೆ, ಅಷ್ಟಕ್ಕೇ ತಮ್ಮ ಬದುಕೇ ಮುಗಿದು ಹೋಯಿತೆಂದು ಭಾವಿಸುವ ಜನರೇ ನಮ್ಮ ಸುತ್ತಲೂ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಇದನ್ನೆಲ್ಲಾ ನೋಡುವಾಗಲೇ ಅಧ್ಯಾಪಕರೊಬ್ಬರು ಹೇಳಿದ್ದ ಮಾತುಗಳು ನೆನಪಾಗುತ್ತವೆ. ಅವರು ಹೇಳಿದ್ದರು: “ಪರೀಕ್ಷೆಯಲ್ಲಿ ಪಾಸ್‌ ಆದ್ರೆ ಉತ್ತಮ, ಒಂದು ವೇಳೆ ಫೇಲ್‌ ಆದ್ರೆ ಇನ್ನೂ ಉತ್ತಮ!’

ಇದರ ಅರ್ಥ- ಪಾಸ್‌ ಆದ್ರೆ ಮುಂದಿನ ತರಗತಿಗಳಿಗೆ ಹೋಗಬಹುದು. ಒಂದು ವೇಳೆ ಫೇಲ್‌ ಆದ್ರೆ, ಈ ಹಿಂದೆ ನಾವು ಆ ವಿಷಯದಲ್ಲಿ ಮಾಡಿದ ತಪ್ಪನ್ನು ತಿದ್ದಿಕೊಂಡು ಮುಂದಿನ ಸಾರಿ ಚೆನ್ನಾಗಿ ಬರೆದು ಪಾಸಾಗಬಹುದು ಎಂದು. ಜೀವನದ ಪ್ರತಿಯೊಂದು ಘಟ್ಟವೂಒಂದರ್ಥದಲ್ಲಿಪರೀಕ್ಷೆಯೇ.ಅದನ್ನು,ಹೇಗೆಬರುತ್ತದೆಯೋ ಹಾಗೆ ಸ್ವೀಕರಿಸಬೇಕು. ಒಬ್ಬ ಹಾಡುಗಾರ ಕೋಗಿಲೆಗೆ ಕೇಳಿದನಂತೆ: ನಿನ್ನ ಮಧುರವಾದ ಧ್ವನಿಗೆ ಮನಸೋತಿದ್ದೇನೆ. ನೀನು ಯಾರಿಗೂ ಕಾಣದಂಥ ಈ ಮರದ ಕೊಂಬೆಗಳ ಮಧ್ಯೆ ಅಡಗಿ ಕುಳಿತು ಹಾಡುವೆಯಲ್ಲ,ಅದರಿಂದ ಉಪಯೋಗವಿದೆಯಾ? ಹೀಗಾದರೆ, ನಿನ್ನ ಧ್ವನಿಯನ್ನು ಯಾರು ಗುರುತಿಸುತ್ತಾರೆ? ಯಾರು ನಿನ್ನನ್ನು ಸನ್ಮಾನಿಸುತ್ತಾರೆ? ಯಾರು ಗೌರವಿಸುತ್ತಾರೆ?’

ಅದಕ್ಕೆ ಕೋಗಿಲೆ ಹೇಳಿತಂತೆ: ನಾನು ಹಾಡುವುದು ನನ್ನಖುಷಿಗಾಗಿ. ಯಾರನ್ನೋ ಮೆಚ್ಚಿಸಲು ಹಾಡಿದರೆ ನನಗೆ ತೃಪ್ತಿಯಾಗಲಿ, ನೆಮ್ಮದಿಯಾಗಲಿ ಸಿಗುವುದಿಲ್ಲ. ನನಗೊಂದು ಬದುಕನ್ನೂ, ಆಹ್ಲಾದಕರವಾದ ಪ್ರಕೃತಿತಾಣವನ್ನೂ ಕೊಡುಗೆಯಾಗಿ ನೀಡಿದನಲ್ಲ;

ಆ ದೇವರಿಗೆ ಕೃತಜ್ಞತೆ ಅರ್ಪಿಸಲು, ಅವನಿಗೆ ಧನ್ಯವಾದ ಹೇಳಲು ನಾನು ಹಾಡುತ್ತೇನೆ. ಇಲ್ಲೆಲ್ಲೋ ದೇವನಿರಬಹುದು ಎಂಬ ಭಾವನೆಯೇ ನನಗೆ ಧೈರ್ಯ, ನೆಮ್ಮದಿ, ಸಂತೃಪ್ತಿ ಮತ್ತು ಸಾರ್ಥಕತೆಯನ್ನು ಕೊಡುತ್ತದೆ…’ ಕೋಗಿಲೆಯ ರೀತಿಯಲ್ಲಿ ಮನುಷ್ಯನೂ ಯೋಚಿಸಬೇಕಲ್ಲವೇ?

 

ಎಲ್ ಪಿ. ಕುಲಕರ್ಣಿ, ಬಾದಾಮಿ

ಟಾಪ್ ನ್ಯೂಸ್

Video: ನಿಮಗೆ ಮತ ಹಾಕಿದ್ದೇನೆ, ನನಗೊಂದು ಮದುವೆ ಮಾಡಿಸಿ.. ಶಾಸಕರ ಬಳಿ ಮನವಿ ಮಾಡಿದ ವ್ಯಕ್ತಿ

Video: ನಿಮಗೆ ಮತ ಹಾಕಿದ್ದೇನೆ, ನನಗೊಂದು ಮದುವೆ ಮಾಡಿಸಿ.. ಶಾಸಕರ ಬಳಿ ಮನವಿ ಮಾಡಿದ ವ್ಯಕ್ತಿ

Sandur By Poll: ನಾಗೇಂದ್ರ ಈಗಾಗಲೇ ಡಸ್ಟ್ ಬಿನ್ ನಲ್ಲಿ ಬಿದ್ದಿದ್ದಾನೆ: ಜನಾರ್ದನ ರೆಡ್ಡಿ

Sandur By Poll: ನಾಗೇಂದ್ರ ಈಗಾಗಲೇ ಡಸ್ಟ್ ಬಿನ್ ನಲ್ಲಿ ಬಿದ್ದಿದ್ದಾನೆ: ಜನಾರ್ದನ ರೆಡ್ಡಿ

Yahya Sinwar:ಕೊನೆಯಾದ ಹಮಾಸ್ ಮುಖ್ಯಸ್ಥನ ತಂತ್ರ: ಸೋಲಿನಲ್ಲಿ ಅಂತ್ಯ ಕಂಡ ಸಿನ್ವರ್ ಜೀವನ

Yahya Sinwar:ಕೊನೆಯಾದ ಹಮಾಸ್ ಮುಖ್ಯಸ್ಥನ ತಂತ್ರ: ಸೋಲಿನಲ್ಲಿ ಅಂತ್ಯ ಕಂಡ ಸಿನ್ವರ್ ಜೀವನ

ed raid on mysore muda office

Mysore: ಮುಡಾ ಕಚೇರಿಗೆ ಇ.ಡಿ ದಾಳಿ; ಕಡತಗಳ ಪರಿಶೀಲನೆ

Sandalwood: ನಟಿ ಅಮೂಲ್ಯ ಸಹೋದರ, ನಿರ್ದೇಶಕ ದೀಪಕ್‌ ಅರಸ್‌ ನಿಧನ

Sandalwood: ನಟಿ ಅಮೂಲ್ಯ ಸಹೋದರ, ನಿರ್ದೇಶಕ ದೀಪಕ್‌ ಅರಸ್‌ ನಿಧನ

Relief for Sadhguru: ಇಶಾ ಫೌಂಡೇಶನ್ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂ ಕೋರ್ಟ್

Relief for Sadhguru: ಇಶಾ ಫೌಂಡೇಶನ್ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂ ಕೋರ್ಟ್

darshan

Bellary Jail: ಬೆನ್ನು ನೋವು ತಡೆಯಲಾಗದು..: ಪತ್ನಿ, ಸೋದರನ ಎದುರು ದರ್ಶನ್‌ ಅಳಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

udayavani youtube

ಮಕ್ಕಳ ಸ್ಕ್ರೀನ್ ಟೈಮಿಂಗ್ ಕುರಿತು ಎಚ್ಚರಿಕೆ ಅತ್ಯವಶ್ಯಕ.. ಇಲ್ಲಿದೆ ಅಗತ್ಯ ಮಾಹಿತಿ

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

ಹೊಸ ಸೇರ್ಪಡೆ

Belagavi: UT Khader, Basavaraja Horatti visited Suvrana vidhasoudha

Belagavi: ಸುವರ್ಣ ವಿಧಾನಸೌಧಕ್ಕೆ‌ ಯು.ಟಿ.ಖಾದರ್‌, ಬಸವರಾಜ ಹೊರಟ್ಟಿ ಭೇಟಿ

16-bng

Bengaluru: ರಾಜಧಾನಿಯ ಬೀದಿ ನಾಯಿಗಳಿಗೆ ಅಕ್ಕರೆಯ ತುತ್ತು

Video: ನಿಮಗೆ ಮತ ಹಾಕಿದ್ದೇನೆ, ನನಗೊಂದು ಮದುವೆ ಮಾಡಿಸಿ.. ಶಾಸಕರ ಬಳಿ ಮನವಿ ಮಾಡಿದ ವ್ಯಕ್ತಿ

Video: ನಿಮಗೆ ಮತ ಹಾಕಿದ್ದೇನೆ, ನನಗೊಂದು ಮದುವೆ ಮಾಡಿಸಿ.. ಶಾಸಕರ ಬಳಿ ಮನವಿ ಮಾಡಿದ ವ್ಯಕ್ತಿ

15-

Bengaluru: ಎಎಸ್‌ಐ ಶಿವಶಂಕರಾಚಾರಿ ಹೃದಯಾಘಾತದಿಂದ ಸಾವು

9

Mangaluru: ಹೆದ್ದಾರಿಯಲ್ಲಿ ವಿರುದ್ಧ ದಿಕ್ಕಿನಿಂದ ಸಂಚಾರ: ಅಪಘಾತಕ್ಕೆ ಆಹ್ವಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.