ಅವಳಿಗೂ ಒಂದು ದಿನ ಇರಬೇಕಿತ್ತು…


Team Udayavani, Sep 23, 2020, 8:27 PM IST

ಅವಳಿಗೂ ಒಂದು ದಿನ ಇರಬೇಕಿತ್ತು…

ಸಾಂದರ್ಭಿಕ ಚಿತ್ರ

ಬೆಳಗ್ಗೆ ಬೇಗನೆ ಎದ್ದು, ಅವತ್ತು ಮಾಡಬೇಕಿರುವ ಕೆಲಸಗಳನ್ನೆಲ್ಲಾ ನೆನಪಿಗೆ ತಂದುಕೊಂಡು, ನಂತರ ಮನೆಯ ಎಲ್ಲರನ್ನೂ ಎಬ್ಬಿಸುವುದರ ಮೂಲಕ ಅವಳ ಬೆಳಗು ಶುರುವಾಗುತ್ತದೆ.ಬೆಳಗಿನಿಂದ ಸಂಜೆಯವರೆಗೂ ಮನೆಯ ಎಲ್ಲರ ಬೇಕು- ಬೇಡಗಳನ್ನು ಗಮನಿಸುವುದು, ಯಾರಿಗೂ ಬೇಸರ ಆಗದಂತೆ ನೋಡಿಕೊಳ್ಳುವುದು, ಎಲ್ಲರಿಗೂ ಇಷ್ಟ ಆಗುವಂಥ ಅಡುಗೆ ಸಿದ್ಧಪಡಿಸುವುದು, ಬಟ್ಟೆ ಬರೆಗಳನ್ನು ಜೋಡಿಸಿಕೊಟ್ಟು, ಎಲ್ಲರನ್ನೂ ಅವರವರ ಕೆಲಸಗಳಿಗೆ ಕಳಿಸಿದ ಮೇಲೆಯೇ ಅವಳಿಗಿಷ್ಟು ವಿಶ್ರಾಂತಿ

ಸಿಗುವುದು. ಆ ಬಿಡುವಿನಲ್ಲಿ ಒಂದು ನಿರಾಳವಾದ ಉಸಿರು ಬಿಡುವವಳು. ತನಗೆ ಆಗುವ ಆಯಾಸದ ಬಗ್ಗೆ ಯಾರಿಗೂ ಹೇಳಿಕೊಳ್ಳದವಳು, ಮನೆಮಂದಿಯೆಲ್ಲಾ ಚೆನ್ನಾಗಿರಲಿ ಎಂದು ಪ್ರತಿ ಕ್ಷಣವೂ ಹಂಬಲಿಸುವವಳು, ಎಲ್ಲರೂ ಖುಷಿ ಪಡುವುದನ್ನುಕಂಡು ತನ್ನ ನೋವು ಮರೆತು ನಗುವವಳು- ಆಕೆ ಪ್ರತಿ ಮನೆಯ ಗೃಹಿಣಿ. ಬೆಳಗಿನಿಂದ ಸಂಜೆಯವರೆಗೂ ಯಂತ್ರದಂತೆ ದುಡಿಯುತ್ತಲೇ ಇರುವುದು ಅವಳಿಗೆ ಸಂತಸವನ್ನು ನೀಡುತ್ತದೆ ನಿಜ, ಆದರೆ, ತನ್ನ ಶ್ರಮವನ್ನು, ತನಗೆ ಆಗುವ ಕಷ್ಟವನ್ನು ಮನೆಯ ಜನರು ಅರ್ಥ ಮಾಡಿಕೊಳ್ಳಲಿ ಎಂಬ ಸಣ್ಣದೊಂದು ಆಸೆ ಕೂಡ ಆಕೆಗೆ ಇರುತ್ತದೆ. ಒಂದುದಿನವಾದರೂ ತಾನೂಎಲ್ಲಜವಾಬ್ದಾರಿಗಳಿಂದಹೊರತಾದ ಜೀವನ ನಡೆಸಬೇಕೆಂದು ಆಕೆ ಆಸೆ ಪಡುತ್ತಿರುತ್ತಾಳೆ. ವಾರದಲ್ಲಿ ಅಥವಾ ತಿಂಗಳಲ್ಲಿ ಒಂದು ದಿನ, ಗಂಡ ಅಥವಾ ಮಕ್ಕಳು- “ಇವತ್ತು ಒಂದು ದಿನ ನೀನು ಫ್ರೀಯಾಗಿ ಇದ್ದುಬಿಡು. ಇವತ್ತು ಇಡೀ ದಿನ ನಿನಗೆ ಬಿಡುವು. ಮನೆಯ ಎಲ್ಲಾ ಕೆಲಸ ವನ್ನೂ ನಾವು ಮಾಡುತ್ತೇವೆ. ತಿಂಡಿ,ಊಟ ಎಲ್ಲ ನಮ್ದೆ, ಆದರೆ ಏನು ಮಾಡಬೇಕು

ಎಂದು  ಆರ್ಡರ್‌ಮಾಡುವ ಹಕ್ಕುನಿನ್ನದು’ಅಂದುಬಿಟ್ಟರೆ ಆ ತಾಯಿಯ ಹೃದಯ ಅದೆಷ್ಟು ಸಂತಸಪಡುತ್ತೋ… ಗೃಹಿಣಿಯ ಪ್ರಪಂಚ ತುಂಬ ಚಿಕ್ಕದು. ಗಂಡ ಮತ್ತು ಮಕ್ಕಳ ಪಾಲಿಗೆ ಹೊರಗಿನ ಪ್ರಪಂಚ ತೆರೆದುಕೊಂಡಿ ರುತ್ತದೆ. ಆದರೆ ಗೃಹಿಣಿಯ ಪಾಲಿಗೆ ಮನೆಯೇ ಪ್ರಪಂಚ ಆಗಿರುತ್ತದೆ. ಗಂಡನೋ, ಮಕ್ಕಳ್ಳೋ ಯಶಸ್ಸು ಪಡೆದರೆ, ಅದೇ ತನ್ನ ಯಶಸ್ಸು ಎಂದು ಆಕೆ ಹಿಗ್ಗುತ್ತಾಳೆ. ಇದನ್ನೆಲ್ಲಾ ಗಮನಿಸಿದಾಗಲೇ ಅನಿಸುತ್ತದೆ: ಅಮ್ಮನ ದಿನ, ಅಪ್ಪನ ದಿನ, ಮಹಿಳಾ ದಿನ… ಹೀಗೆ ಎಷ್ಟೊಂದು ದಿನಗಳು ಇವೆಯಲ್ಲ; ಹಾಗೆಯೇ, ಗೃಹಿಣಿಯರ ದಿನ ಅಂತಲೂ ಇದ್ದಿದ್ದರೆ ಚೆನ್ನಾಗಿರ್ತಾ ಇತ್ತೇನೋ..

 

-ಜ್ಯೋತಿ ರಾಜೇಶ್‌, ಮಂಗಳೂರು

ಟಾಪ್ ನ್ಯೂಸ್

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

arrested

CM ಕಚೇರಿಯ ಟಿಪ್ಪಣಿ ನಕಲು: ಬಂಧನ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.