ಮಾಗಡಿ ಕೆರೆಯಲ್ಲಿ ದೇಶ-ವಿದೇಶದ ಹಕ್ಕಿಗಳ ಕಲರವ: ಕಣ್ಮನ ಸೆಳೆಯುವ ಪ್ರಶಾಂತ ವಾತಾವರಣ


Team Udayavani, Sep 27, 2020, 4:26 PM IST

pravasa

ಗದಗ: ಪ್ರವಾಸ ಎಂದಾಕ್ಷಣ ಪ್ರತಿಯೊಬ್ಬರಿಗೂ ಸಂತೋಷವಾಗೋದು ಸಾಮಾನ್ಯ. ಆದರೆ ಹೆಚ್ಚಿನವರು ಪ್ರವಾಸಕ್ಕೆ ಹೋಗುವುದು ಹೊರ ರಾಜ್ಯಗಳಿಗೆ ಅಥವಾ ಹೊರ ದೇಶಕ್ಕೆ. ನಮ್ಮ ಊರಿನಲ್ಲಿಯೇ ಇರುವ ಕಾಡು, ಉದ್ಯಾನವನಗಳನ್ನು ಕಾಣಲು ಹೋಗುವವರು ಕಡಿಮೆ. ಆದರೆ ಇಲ್ಲೊಂದು ಕಡೆ ಏಷ್ಯಾದಿಂದ ವಲಸೆ ಬರುವ ಪಕ್ಷಿಗಳನ್ನು ನೋಡಲು ಸಾವಿರಾರು ಸಂಖ್ಯೆಯಲ್ಲಿ ಜನರು ಬರುತ್ತಾರೆ.

ಪಕ್ಷಿಗಳಿಗೆ ಹೆಸರುವಾಸಿಯಾದ ಮಾಗಡಿ ಕೆರೆಯು ಗದಗ  ಜಿಲ್ಲೆಯ ಶಿರಹಟ್ಟಿ ತಾಲ್ಲೂಕಿನಲ್ಲಿದೆ. ಗದಗನಿಂದ 26 ಕಿ.ಮೀ ದೂರದಲ್ಲಿರುವ ಮಾಗಡಿ ಟ್ಯಾಂಕ್‌ ಅನ್ನು  ಸ್ಥಳೀಯವಾಗಿ ಮಾಗಡಿ ಕೆರೆ ಎಂದು ಕರೆಯಾಲಾಗುತ್ತದೆ. ಬೇರೆ ಬೇರೆ ದೇಶಗಳಿಂದ ಮತ್ತು ಮಧ್ಯ ಏಷ್ಯಾದಿಂದ ಕಳೆದ 10 ವರ್ಷಗಳಿಂದ ಪಕ್ಷಿಗಳು ಈ ಸ್ಥಳಕ್ಕೆ ವಲಸೆ ಬರುತ್ತಿವೆ. ಈ ಟ್ಯಾಂಕ್ 134 ಎಕರೆ ಭೂಮಿಯನ್ನು ಹೊಂದಿದೆ ಮತ್ತು 900 ಹೆಕ್ಟೇರ್ ಪ್ರದೇಶವನ್ನು ಹೊಂದಿದೆ.

ಮಾಗಡಿ ಪ್ರದೇಶದಲ್ಲಿ, 900 ಹೆಕ್ಟೇರ್ ಪ್ರದೇಶದಲ್ಲಿ, 134 ಜಾತಿಯ ವಿವಿಧ ಪಕ್ಷಿಗಳನ್ನು ಗುರುತಿಸಲಾಗಿದೆ. ಈ ಪ್ರದೇಶದಲ್ಲಿ ಕಂಡುಬರುವ ಮುಖ್ಯ ಪಕ್ಷಿ  “ಬಾರ್ ಹೆಡೆಡ್ ಗೂಸ್” ( ಗೀರು ತಲೆಯ ಬಾತುಕೋಳಿ) ಒಂದು ಸಮಯದಲ್ಲಿ 5,000 “ಬಾರ್ ಹೆಡೆಡ್ ಗೂಸ್ ” ಗಳು ಈ ಪಕ್ಷಿಧಾಮದಲ್ಲಿ ಗುರುತಿಸಲ್ಪಟ್ಟಿವೆ.

ಬ್ರಾಹ್ಮಣಿ ಡಕ್, ಪೇಂಟೆಡ್ ಕೊಕ್ಕರೆ ಮತ್ತು ಇನ್ನಿತರ ಪಕ್ಷಿಗಳು ಹಲವಾರು ಸಂಖ್ಯೆಯಲ್ಲಿವೆ. ಪಕ್ಷಿಪ್ರಿಯರಿಗೆ ಈ ಸ್ಥಳ ಹೇಳಿ ಮಾಡಿಸಿದ್ದು, ಸ್ಥಳೀಯ ಮಾರ್ಗದರ್ಶಕರೂ ಕೂಡ ಇರುವುದರಿಂದ ಪ್ರವಾಸದ ಸಂದರ್ಭದಲ್ಲಿ ಯಾವುದೇ ಅಡೆತಡೆಗಳು ಎದುರಾಗುವುದಿಲ್ಲ.  ಮಾತ್ರವಲ್ಲದೆ ಮಾಗಡಿ ಹಳ್ಳಿಯ ಪ್ರಶಾಂತ ವಾತಾವಾರಣ ಕೂಡ ಕಣ್ಮನ ಸೆಳೆಯುತ್ತದೆ.
ಪ್ರತಿ ವರ್ಷದ ಚಳಿಗಾಲ (ಅಕ್ಟೋಬರ್ ತಿಂಗಳಾಂತ್ಯಕ್ಕೆ) ಪ್ರಾರಂಭವಾಗುತ್ತಿದ್ದಂತೆಯೇ ಮಾಗಡಿ ಕೆರೆಯಲ್ಲಿ ವಿದೇಶಿ ಪಕ್ಷಿಗಳ ಕಲರವ ಆರಂಭವಾಗುತ್ತದೆ. ದೇಶದ ಹಲವೆಡೆಯಿಂದ ಪ್ರವಾಸಿಗರು ಈ ಸಂದರ್ಭದಲ್ಲಿ ಆಗಮಿಸುತ್ತಿದ್ದು, ದೋಣಿಯ ಮೂಲಕ ಪಕ್ಷಿ ವೀಕ್ಷಣೆಗೆ ತೆರಳಬಹುದು.

ಮಾಗಡಿಯಲ್ಲಿರುವ ಇತರ ಆಕರ್ಷಣೀಯ ತಾಣ:  

ಮಾಗಡಿಯಲ್ಲಿ ಜಲವಿದ್ಯುತ್ ಕೇಂದ್ರವಿದೆ. ಮಾನವ ನಿರ್ಮಿತ ಸರೋವರವೂ ಇದೆ. ಶ್ರೀ ಸೋಮೇಶ್ವರ ದೇವಸ್ಥಾನ ಈಗಾಗಲೇ ಹಲವು ಯಾತ್ರಿಕರನ್ನು ಆಕರ್ಷಿಸಿದೆ. ಒಟ್ಟಿನಲ್ಲಿ ಪ್ರವಾಸಕ್ಕೆ ಮಾಗಡಿ ಒಂದು ಸೂಕ್ತ ಸ್ಥಳ ಎನ್ನುವುದು ನಿಸ್ಸಂಶಯ.

 

-ಸದಾಶಿವ ಬಿ.ಎನ್

ತೃತೀಯ ಬಿ.ಎ (ಪತ್ರಿಕೋದ್ಯಮ ವಿಭಾಗ)

ಎಂ. ಜಿ. ಎಂ. ಕಾಲೇಜು ಉಡುಪಿ*

ಟಾಪ್ ನ್ಯೂಸ್

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-jama

Yakshagana; ಮೇಳದ ಯಜಮಾನಿಕೆ ಎಂದರೆ ಆನೆ ಸಾಕಿದ ಹಾಗೆ

9-yoga

Sattvic Diet: ಪರೀಕ್ಷಾ ಒತ್ತಡ ನಿವಾರಣೆ ಯೋಗ, ಸಾತ್ವಿಕ ಆಹಾರದ ಸರಳ ಸೂತ್ರಗಳು

8-bagappa

Bagappa Harijan: ಭೀಮಾ ತೀರದಲ್ಲಿ ಮತ್ತೆ ರಕ್ತದ ಹನಿ

Valentine’s Day: ನೀನು ಪ್ರೀತಿಸಿದ್ದೆ.. ಪ್ರೀತಿಸುತ್ತಿರುವೆ!

Valentine’s Day: ನೀನು ಪ್ರೀತಿಸಿದ್ದೆ.. ಪ್ರೀತಿಸುತ್ತಿರುವೆ!

Pamban Bridge:: ದೇಶದ ಮೊದಲ ವರ್ಟಿಕಲ್‌ ಲಿಫ್ಟ್ ರೈಲ್ವೇ ಸೇತುವೆ: ಶತಮಾನದ ಇತಿಹಾಸ!

Pamban Bridge:: ದೇಶದ ಮೊದಲ ವರ್ಟಿಕಲ್‌ ಲಿಫ್ಟ್ ರೈಲ್ವೇ ಸೇತುವೆ: ಶತಮಾನದ ಇತಿಹಾಸ!

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.