ಸೆರೆನಾವಿಲಿಯಮ್ಸ್ಗೆ ಹಿಮ್ಮಡಿ ನೋವು; ಫ್ರೆಂಚ್ ಓಪನ್ನಿಂದ ಹೊರಕ್ಕೆ
Team Udayavani, Oct 1, 2020, 7:37 AM IST
ಪ್ಯಾರಿಸ್: 24ನೇ ಮಹಿಳಾ ಸಿಂಗಲ್ಸ್ ಗ್ರ್ಯಾನ್ ಸ್ಲಾಮ್ ಗೆಲ್ಲುವ ಕನಸು ಹೊಂದಿದ್ದ ಸೆರೆನಾ ವಿಲಿಯಮ್ಸ್ಗೆ ಮತ್ತೆ ಆಘಾತವಾಗಿದೆ.
ಬುಧವಾರ ಎರಡನೇ ಸುತ್ತಿನಲ್ಲಿ ಸ್ವೆತಾನಾ ಪಿರಂಕೋವಾ ವಿರುದ್ಧ ಆಡಬೇಕಿದ್ದ ಅವರು, ತೀವ್ರ ಹಿಮ್ಮಡಿ ನೋವಿನಿಂದ ಪಂದ್ಯದಿಂದ ಹಿಂದೆ ಸರಿದಿದ್ದಾರೆ. ಈ ವರ್ಷ ಇನ್ನಾವುದೇ ಕೂಟದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ತಿಳಿಸಿದ್ದಾರೆ.
ಸದ್ಯದ ಸೆರೆನಾ ಹಿಮ್ಮಡಿ ಪರಿಸ್ಥಿತಿ ಗಂಭೀರವಾಗಿದೆ. ಆಡುವುದಿರಲಿ, ಸರಿಯಾಗಿ ನಡೆಯಲೂ ಅವರಿಂದ ಸಾಧ್ಯವಿಲ್ಲ ಎನ್ನುವಂತಾಗಿದೆ. ಸೆರೆನಾ ಮಹಿಳಾ ಸಿಂಗಲ್ಸ್ ನಲ್ಲಿ ಇದುವರೆಗೆ 23 ಗ್ರ್ಯಾನ್ಸ್ಲಾಮ್ ಗೆದ್ದಿದ್ದಾರೆ. ಮಾರ್ಗರೆಟ್ ಕೋರ್ಟ್ ಅವರ 24 ಪ್ರಶಸ್ತಿಗಳ ದಾಖಲೆಯನ್ನು ಮುರಿಯುವುದು ಸೆರೆನಾ ಗುರಿಯಾಗಿದೆ.
ಇದನ್ನೂ ಓದಿ:ಕೈಕೊಟ್ಟ ಬ್ಯಾಟಿಂಗ್ : ನೈಟ್ ರೈಡರ್ಸ್ ವಿರುದ್ಧ 37 ರನ್ನಿನಿಂದ ಸೋತ ರಾಜಸ್ಥಾನ ರಾಯಲ್ಸ್
ವಿಕ್ಟೋರಿಯಾ ಅಜರೆಂಕಾ ಔಟ್
ವಿಶ್ವದ ನಂ. 10 ಆಟಗಾರ್ತಿ, ಬೆಲರೂಸ್ನ ವಿಕ್ಟೋರಿಯಾ ಅಜರೆಂಕಾ ಅವರ ಫ್ರೆಂಚ್ ಓಪನ್ ಅಭಿಯಾನ ದ್ವಿತೀಯ ಸುತ್ತಿಗೆ ಕೊನೆಗೊಂಡಿದೆ. ವನಿತಾ ಸಿಂಗಲ್ಸ್ ವಿಭಾಗದ ಪಂದ್ಯದಲ್ಲಿ ಅವರನ್ನು ಸ್ಲೊವಾಕಿಯಾದ ಅನ್ನಾ ಕ್ಯಾರೋಲಿನಾ ಶ್ಮಿಡ್ಲೋವಾ 6-2, 6-2 ಅಂತರದಿಂದ ಪರಾಭವಗೊಳಿಸಿದರು. ಅಜರೆಂಕಾ ಕಳೆದ ಯುಎಸ್ ಓಪನ್ನಲ್ಲಿ ಫೈನಲ್ ತನಕ ಸಾಗಿದ್ದರು.
ಮೂರಕ್ಕೇರಿದ ವಾವ್ರಿಂಕ
3 ಗ್ರ್ಯಾನ್ಸ್ಲಾಮ್ ಪ್ರಶಸ್ತಿಗಳ ಸಾಧಕ ಸ್ಟಾನಿಸ್ಲಾಸ್ ವಾವ್ರಿಂಕ ಪುರುಷರ ಸಿಂಗಲ್ಸ್ ವಿಭಾಗದ 3ನೇ ಸುತ್ತು ಪ್ರವೇಶಿಸಿದ್ದಾರೆ. ಅವರು ಜರ್ಮನಿಯ ಡೊಮಿನಿಕ್ ಕೋಫರ್ ವಿರುದ್ಧ 6-3, 6-2, 3-6, 6-1 ಅಂತರದ ಜಯ ಸಾಧಿಸಿದರು. ರಶ್ಯದ 13ನೇ ಶ್ರೇಯಾಂಕದ ಆಟಗಾರ ಆ್ಯಂಡ್ರೆ ರುಬ್ಲೇವ್ ಅಮೆರಿಕದ ಸ್ಯಾಮ್ ಕ್ವೆರ್ರಿ ವಿರುದ್ಧ ಮೊದಲೆರಡು ಸೆಟ್ ಕಳೆದುಕೊಂಡೂ 5 ಸೆಟ್ಗಳ ಕಾದಾಟದಲ್ಲಿ ಗೆದ್ದು ದ್ವಿತೀಯ ಸುತ್ತು ಪ್ರವೇಶಿಸಿದರು. 3 ಗಂಟೆ, 17 ನಿಮಿಷಗಳ ತನಕ ನಡೆದ ಈ ಮುಖಾಮುಖೀಯಲ್ಲಿ ರುಬ್ಲೇವ್ 6-7 (5-7), 6-7 (4-7), 7-5, 6-4, 6-3 ಅಂತರದ ಮೇಲುಗೈ ಸಾಧಿಸಿದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
INDvsBAN; ಅʼಸ್ಪಿನ್ʼಗೆ ಬಾಂಗ್ಲಾ ತತ್ತರ: ಚೆನ್ನೈ ಪಂದ್ಯದಲ್ಲಿ ಭಾರತಕ್ಕೆ ಭರ್ಜರಿ ಗೆಲುವು
Duleep trophy: ಇಂಡಿಯಾ ಸಿ, ಬಿ ಮಧ್ಯೆ ಪ್ರಶಸ್ತಿಗೆ ಪೈಪೋಟಿ; ಯಾರಿಗೆ ಸಿಗಲಿದೆ ಟ್ರೋಫಿ?
IPL 2025: ಡೆಲ್ಲಿ ತಂಡದಲ್ಲೇ ಉಳಿಯಲಿದ್ದಾರೆ ಪಂತ್
Hardik Pandya: ರಣಜಿ ಕ್ರಿಕೆಟ್ ಆಡಲು ಹಾರ್ದಿಕ್ ಪಾಂಡ್ಯ ಸಿದ್ಧತೆ
Harmanpreet Singh: ವರ್ಷದ ಆಟಗಾರ ಪ್ರಶಸ್ತಿಗೆ ಹರ್ಮನ್ಪ್ರೀತ್ ಹೆಸರು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Maharashtra; ಬಿಜೆಪಿಯನ್ನು ಅಳಿಸಿ ಹಾಕುತ್ತೇವೆ: ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್
DhruvaThare Movie Review: ಕಹಿ ಅನುಭವದಲ್ಲಿ ಸಿಹಿ ಹುಡುಕಿ ಹೊರಟವರು..
Bollywood: ಪಾಕ್ ನಟ ಫವಾದ್ ಜತೆ ರಿಧಿ ರೊಮ್ಯಾನ್ಸ್? 8 ವರ್ಷದ ಬಳಿಕ ಬಾಲಿವುಡ್ ಕಂಬ್ಯಾಕ್
Sisodia; ಯಾವ ರಾವಣನಿಂದಲೂ ರಾಮ-ಲಕ್ಷ್ಮಣರನ್ನು ಬೇರ್ಪಡಿಸಲು ಸಾಧ್ಯವಿಲ್ಲ
Manipal: ಪಾರ್ಕಿಂಗ್ ತಾಣವಾಗುತ್ತಿರುವ ಬಸ್ ನಿಲ್ದಾಣಗಳು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.