ಕುರಿ ಸಾಕಾಣಿಕೆದಾರರಿಗೆ ಅರಣ್ಯಾಧಿಕಾರಿಗಳಿಂದ ಕಿರುಕುಳ: ಕ್ರಮಕ್ಕೆ ಆಗ್ರಹ
Team Udayavani, Oct 1, 2020, 5:47 PM IST
ಲಿಂಗಸುಗೂರು: ಮಸ್ಕಿ ತಾಲೂಕಿನ ಹೂವಿನಭಾವಿ ಗ್ರಾಮದ ಕುರಿ ಸಾಕಾಣಿಕೆದಾರರಿಗೆ ಕಿರುಕುಳ ನೀಡುತ್ತಿರುವ ಅರಣ್ಯಾಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಕರ್ನಾಟಕ ರೈತ ಸಂಘದ ಮುಖಂಡರು ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಿದರು.
ಜಿಲ್ಲೆಯಲ್ಲಿಯೇ ಹೂವಿನಭಾವಿ ಗ್ರಾಮದಲ್ಲಿ ಅತಿ ಹೆಚ್ಚು ಕುರಿ ಸಾಕಾಣಿಕೆದಾರರಿದ್ದಾರೆ. 100 ಕುಟಂಬಕ್ಕೂ ಹೆಚ್ಚು ಕುಟುಂಬಗಳು ಕುರಿ ಸಾಕಾಣಿಕೆಯನ್ನೇ ಜೀವನಾಧಾರ ಮಾಡಿಕೊಂಡಿವೆ. ಆದರೆ ಕುರಿ ಮೇಯಸಲು ಇಲ್ಲಿನ ಕುರಿಗಾಹಿಗಳಿಗೆ ಭಾರೀ ತೊಂದರೆಯಾಗಿದೆ. ಅರಣ್ಯ ಇಲಾಖೆಗೆ ಸೇರಿದ ಯಾವುದೇ ಭೂಮಿ ಇಲ್ಲ. ಸರ್ಕಾರಿ ಪರಂಪೂಕಗೆ ಸೇರಿ ಸ.ನ.32ರಲ್ಲಿ 369 ಎಕರೆ ಹಾಗೂ ಸ.ನಂ 44ರಲ್ಲಿ 236 ಎಕರೆ ಹುಲ್ಲುಗಾವಲು ಭೂಮಿ ಇದೆ. ಆದರೆ ಇಲ್ಲಿ ಕುರಿ ಮೇಯಿಸಲು ಹೋದರೆ ಅರಣ್ಯಾಧಿಕಾರಿಗಳು ಅನಗತ್ಯ ತೊಂದರೆ ನೀಡುತ್ತಿದ್ದಾರೆ. ಇದಲ್ಲದೆ ಹಿಂದುಳಿದ ವರ್ಗದ ಕೆಲವರಿಗೆ ತಲಾ 4 ಎಕರೆ ಮಂಜೂರಾಗಿದೆ ಪಹಣಿಯಲ್ಲೂ ಕೂಡಾ ಹೆಸರು ಇರುವ ರೈತರಿಗೆ ಸಾಗುವಳಿ ನಿಲ್ಲಿಸಿ ಅರಣ್ಯ ಇಲಾಖೆಯವರು ಗಿಡಗಳನ್ನು ನೆಡುತ್ತಿದ್ದಾರೆ. ಕೂಡಲೇ ಸ್ಥಳ ಪರಿಶೀಲನೆ ನಡೆಸಿ ಅರಣ್ಯ, ಕಂದಾಯ ಹಾಗೂ ಫಲಾನುಭವಿಗಳ ಜಂಟಿ ಸಭೆ ಕರೆದು ಸಮಸ್ಯೆ ಇತ್ಯರ್ಥ ಮಾಡುವಂತೆ ಆಗ್ರಹಿಸಿದರು.
ಕಾರ್ಮಿಕ ಸಂಘದ ಮುಖಂಡ ಆರ್.ಮಾನಸಯ್ಯ, ರೈತ ಸಂಘದ ಅಧ್ಯಕ್ಷ ಸಂತೋಷ, ಮುಖಂಡರಾದ ಅಮೀರ್ ಅಲಿ, ಡಿ.ಕೆ.ಲಿಂಗಸುಗೂರು. ಆಜಪ್ಪ ಹಟ್ಟಿ, ಬೀರಪ್ಪ ಪೂಜಾರಿ, ಅಂಬಣ್ಣ ಪೂಜಾರಿ, ಸಕ್ರೆಪ್ಪ ಜವಳಗೇರಾ, ಮಾಳಪ್ಪ ಹಟ್ಟಿ, ಶಿವಗ್ಯಾನಪ್ಪ ಪೂಜಾರಿ, ಬಾಲಸ್ವಾಮಿ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ
Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ
Canada Vs India: ನಿಜ್ಜರ್ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ
Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್
Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.