ಗ್ರಾಮೀಣ ಗ್ರಂಥಪಾಲಕರ “ಕನಿಷ್ಠ ವೇತನ’ ಜಾರಿಗೆ ಬೇಡಿಕೆ

ಸಂಕಷ್ಟದಲ್ಲಿ ಉಡುಪಿ ಜಿಲ್ಲೆಯ ನೂರಕ್ಕೂ ಮಿಕ್ಕಿ ಗ್ರಂಥಪಾಲಕರು

Team Udayavani, Oct 3, 2020, 5:30 AM IST

ಗ್ರಾಮೀಣ ಗ್ರಂಥಪಾಲಕರ “ಕನಿಷ್ಠ ವೇತನ’ ಜಾರಿಗೆ ಬೇಡಿಕೆ

ಸಾಂದರ್ಭಿಕ ಚಿತ್ರ

ಕುಂದಾಪುರ: ಕಳೆದ 32 ವರ್ಷಗಳಿಂದ ಗ್ರಾಮೀಣ ಗ್ರಂಥಾಲಯದಲ್ಲಿ ಸೇವೆ ಸಲ್ಲಿಸುತ್ತಿದ್ದರೂ, ಈಗಲೂ ಪಡೆಯುತ್ತಿರುವುದು ಅಲ್ಪ ಸಂಬಳ ಮಾತ್ರ. 2016ರಲ್ಲಿ ಮಾಸಿಕ 13,020 ರೂ. ಕನಿಷ್ಠ ವೇತನ ನಿಯಮ ಜಾರಿಗೆ ಸರಕಾರ ಅಧಿಸೂಚನೆ ಹೊರಡಿಸಿದ್ದರೂ, 2017 ರಲ್ಲಿ ಅದೇ ಅಧಿಸೂಚನೆಯನ್ನು ಹಿಂಪಡೆಯುವ ಮೂಲಕ ಗ್ರಂಥಪಾಲಕರ ಆಸೆಗೆ ತಣ್ಣೀರೆರಚಿದೆ. ಅದಾಗಿ 3-4 ವರ್ಷ ಕಳೆದರೂ ಇನ್ನೂ ಗ್ರಾಮೀಣ ಗ್ರಂಥಾಲಯಗಳಲ್ಲಿ ಸೇವೆ ಸಲ್ಲಿಸುತ್ತಿರುವ ಉಡುಪಿಯ ನೂರಕ್ಕೂ ಮಿಕ್ಕಿ ಸೇರಿದಂತೆ ರಾಜ್ಯಾದ್ಯಂತ ಒಟ್ಟಾರೆ 6,667 ಮಂದಿ ಗ್ರಂಥಪಾಲಕರು ಅದೇ 7 ಸಾವಿರ ರೂ. ಕನಿಷ್ಠ ವೇತನಕ್ಕೆ ದುಡಿಯುತ್ತಿದ್ದಾರೆ.

ಗ್ರಂಥಪಾಲಕರ ಅಳಲು
2019ರಲ್ಲಿ ಗ್ರಾಮೀಣ ಗ್ರಂಥಾ ಲಯಗಳನ್ನು ಸಾರ್ವಜನಿಕ ಗ್ರಂಥಾಲಯ ಇಲಾಖೆಯಿಂದ ಪಂಚಾಯತ್‌ ರಾಜ್‌ ಇಲಾಖೆಗೆ ವರ್ಗಾ ಯಿಸಿದರೂ ಗ್ರಾಮೀಣ ಗ್ರಂಥಾಲಯಗಳ ಮೇಲ್ವಿಚಾರಕರ ದೆಸೆ ಮಾತ್ರ ಬದಲಾಗಲೇ ಇಲ್ಲ. ಕೆಲ ಪಂಚಾಯತ್‌ಗಳು ಗ್ರಂಥಾಲಯ ಕೆಲಸ ಮಾತ್ರವಲ್ಲದೆ ತಮ್ಮ ಪಂಚಾಯತ್‌ ಕಚೇರಿ ಕೆಲಸವನ್ನು ಮಾಡಿಸಿಕೊಂಡು, ಇಲಾಖೆಯ ಆದೇಶದಂತೆ ಯಾವುದೇ ಭದ್ರತೆ ನೀಡದೇ ಕೊರೊನಾ ಕುರಿತ ಕೆಲಸವನ್ನು ಮಾಡಿಸಿಕೊಂಡರೂ ಹೆಚ್ಚಿನ ವೇತನವಾಗಲಿ, ಗೌರವ ಧನವಾಗಲಿ ನೀಡಲೇ ಇಲ್ಲ ಎನ್ನುವುದು ಗ್ರಂಥಪಾಲಕರ ಅಳಲು.

ಶೋಚನೀಯ ಬದುಕು
ಹಿಂದೆ ಗ್ರಂಥಾಲಯ ಇಲಾಖೆಯೇ ಸ್ವತಃ ಸರಕಾರಿ ಮಾದರಿ ಸೇವಾ ನಿಯಮಾವಳಿ ಅನುಸರಿಸಿ ರೋಸ್ಟರ್‌ ಪದ್ಧತಿ ಅನ್ವಯವೇ ಗ್ರಾಮೀಣ ಗ್ರಂಥಪಾಲಕರನ್ನು ನೇಮಕ ಮಾಡಿಕೊಂಡರೂ, ಇವರ ಬದುಕು ಮಾತ್ರ ಅತ್ಯಂತ ಶೋಚನೀಯವಾಗಿದೆ. ಗ್ರಂಥಪಾಲಕರಾಗಿ ಕೆಲಸ ಮಾಡುತ್ತಿದ್ದ 500 ಮಂದಿ ಅಕಾಲಿಕ ಸಾವನ್ನಪ್ಪಿದರೂ, ಅವರ ಕುಟುಂಬಸ್ಥರಿಗೆ ಉದ್ಯೋಗವೇ ಕಲ್ಪಿಸಿಲ್ಲ.  ನೂರಾರು ಮಂದಿ ನಿವೃತ್ತಿ ಯಾದರೂ ಯಾವುದೇ ಭದ್ರತೆ ಯಿಲ್ಲ. ಒಂದು ಸಾವಿರ ಮಂದಿ ಗ್ರಂಥಪಾಲಕರು ನಿವೃತ್ತಿ ಅಂಚಿನಲ್ಲಿ ದ್ದಾರೆ. ವಯಸ್ಸಿನ ಮಿತಿಯಿಂದ ಬೇರೆ ಕೆಲಸಕ್ಕೆ ಸೇರಲು ಆಗಲ್ಲ. ಮಹಿಳೆ, ಅಂಗವಿಕಲರು, ಪ.ಜಾತಿ/ ಪಂಗಡದ ಶೇ. 50 ರಷ್ಟು ಹಾಗೂ ಹಿಂದುಳಿದ ವರ್ಗಕ್ಕೆ ಸೇರಿದ ಶೇ. 90 ರಷ್ಟು ಮಂದಿ ಕೆಲಸ ನಿರ್ವಹಿಸುತ್ತಿದ್ದು, ಈ ಅಲ್ಪ ವೇತನದಿಂದ ಕುಟುಂಬ ನಿರ್ವಹಣೆಯನ್ನು ಮಾಡಲಾಗದೇ ಸಂಕಷ್ಟದಲ್ಲಿದ್ದಾರೆ.

ಎಲ್ಲೆಲ್ಲಿ ಎಷ್ಟು?
ಉಡುಪಿ ಜಿಲ್ಲೆಯಲ್ಲಿ ಒಟ್ಟಾರೆ ಜಿಲ್ಲಾ ಕೇಂದ್ರ, ನಗರ ಕೇಂದ್ರ, ತಾಲೂಕು ಕೇಂದ್ರಗಳಲ್ಲಿರುವ ಗ್ರಂಥಾಲಯಗಳೆಲ್ಲ ಸೇರಿ 157 ಸಾರ್ವಜನಿಕ ಗ್ರಂಥಾಲಯಗಳಿವೆ. ಆದರೆ ಜಿಲ್ಲೆಯಲ್ಲಿ ಗ್ರಾಮೀಣ ಅಂದರೆ ಪಂಚಾಯತ್‌ ಮಟ್ಟದಲ್ಲಿರುವ ಗ್ರಂಥಾಯಲಗಳು 147. ಕುಂದಾಪುರ ತಾಲೂಕಿನಲ್ಲಿ 56, ಉಡುಪಿ ತಾಲೂಕಿನಲ್ಲಿ 61 ಹಾಗೂ ಕಾರ್ಕಳ ತಾಲೂಕಿನಲ್ಲಿ 30 ಗ್ರಾಮೀಣ ಗ್ರಂಥಾಲಯಗಳಿವೆ.

ಸಮಯವೂ ಕಡಿತ
ಹಿಂದೆ ಬೆಳಗ್ಗೆ 4 ಗಂಟೆ ಹಾಗೂ ಸಂಜೆ 4 ಗಂಟೆ ಒಟ್ಟು 8 ಗಂಟೆ ದಿನಂಪ್ರತಿ ಗ್ರಂಥಾಲಯವನ್ನು ತೆರೆಯಬೇಕು ಎನ್ನುವ ನಿಯಮವಿತ್ತು. ಆದರೆ ಈಗ ಸಮಯವನ್ನು ದಿನಕ್ಕೆ ಕೇವಲ 4 ಗಂಟೆ ಮಾತ್ರ ಅಂದರೆ ಬೆಳಗ್ಗೆ 2 ಹಾಗೂ ಸಂಜೆ 2 ಗಂಟೆ ಮಾತ್ರ ತೆರೆದಿಡಲು ಗ್ರಂಥಾಲಯ ನಿರ್ದೇಶಕರೇ ಆದೇಶಿಸಿದ್ದರು. ಇದರಿಂದ ಗ್ರಾಮೀಣ ಭಾಗದ ಶಾಲಾ – ಕಾಲೇಜು ಹೋಗುವ ಮಕ್ಕಳಿಗೆ, ಸಾರ್ವಜನಿಕರಿಗೆ ಪತ್ರಿಕೆ, ಪುಸ್ತಕಗಳನ್ನು ಓದಲು ತುಂಬಾ ತೊಂದರೆಯಾಗುತ್ತಿದೆ.

ಸಚಿವರಿಗೆ ಮನವಿ ಸಲ್ಲಿಕೆ
ಗ್ರಾಮೀಣ ಗ್ರಂಥಾಲಯಗಳಲ್ಲಿ ಸೇವೆ ಸಲ್ಲಿಸುತ್ತಿರುವ ಗ್ರಂಥಾಲಯ ಮೇಲ್ವಿಚಾರಕರ ಬದುಕು ಸಂಕಷ್ಟದಲ್ಲಿದೆ. 2016 ರಲ್ಲಿ ಹೊರಡಿಸಿದ ಅಧಿಸೂಚನೆಯಂತೆ ಕನಿಷ್ಠ ವೇತನ ಜಾರಿಯಾಗಲಿ. ಸಮಯ ಮಿತಿ ಸಡಿಲಿಸಿ ದಿನಕ್ಕೆ 8 ಗಂಟೆ ತೆರೆದಿರುವಂತೆ ಮಾಡಲಿ. ಕೆಲಸದ ಭದ್ರತೆ ನೀಡಲಿ ಎನ್ನುವುದು ಎಲ್ಲ ಗ್ರಂಥಪಾಲಕರ ಬೇಡಿಕೆಯಾಗಿದೆ. ಈ ಬಗ್ಗೆ ನಮ್ಮ ರಾಜ್ಯ ಸಂಘದಿಂದ ಸಚಿವ ಈಶ್ವರಪ್ಪನವರಿಗೂ ಮನವಿ ಸಲ್ಲಿಸಲಾಗಿದೆ.
– ಸುರೇಶ್‌ ಹೆಮ್ಮಾಡಿ, ಅಧ್ಯಕ್ಷರು, ಕುಂದಾಪುರ ತಾ| ಗ್ರಾಮೀಣ ಗ್ರಂಥಾಲಯ ನೌಕರರ ಸಂಘ

ಪ್ರಸ್ತಾವ ಸಲ್ಲಿಕೆ
ಗ್ರಾಮೀಣ ಗ್ರಂಥಾಲಯಗಳಲ್ಲಿ ಸೇವೆ ಸಲ್ಲಿಸುತ್ತಿರುವ ಗ್ರಂಥಾಲಯ ಮೇಲ್ವಿಚಾರಕರ ವೇತನ ಹೆಚ್ಚಳ ಹಾಗೂ ಕನಿಷ್ಠ ವೇತನ ನಿಯಮ ಜಾರಿ ಕುರಿತಂತೆ ಈಗಾಗಲೇ ಸಾರ್ವಜನಿಕ ಗ್ರಂಥಾಲಯ ಇಲಾಖೆಯಿಂದ ಪಂಚಾಯತ್‌ ರಾಜ್‌ ಇಲಾಖೆಗೆ ಪ್ರಸ್ತಾವ ಸಲ್ಲಿಸಲಾಗಿದೆ.
– ಸತೀಶ್‌ ಎಸ್‌. ಹೊಸಮನಿ, ರಾಜ್ಯ ನಿರ್ದೇಶಕರು, ಗಂಥಾಲಯ ಇಲಾಖೆ

ಟಾಪ್ ನ್ಯೂಸ್

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

1-namm-mannu-1

Udayavani-MIC ನಮ್ಮ ಸಂತೆ:ಮಣ್ಣಿನಿಂದ ಮಾಡಿದ ನಾನಾ ಉತ್ಪನ್ನ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.