ಆನೆ ಮಾವುತ,ಕಾವಾಡಿಗರಿಗೆ ಕೋವಿಡ್ ಟೆಸ್ಟ್‌


Team Udayavani, Oct 4, 2020, 1:16 PM IST

ಆನೆ ಮಾವುತ,ಕಾವಾಡಿಗರಿಗೆ ಕೋವಿಡ್ ಟೆಸ್ಟ್‌

ಅರಮನೆ ಆವರಣದಲ್ಲಿ ಆನೆಗಳ ಮಾವುತರು,ಕಾವಾಡಿಗಳಿಗೆಕೋವಿಡ್‌ ಟೆಸ್ಟ್‌ ನಡೆಸಲಾಯಿತು.

ಮೈಸೂರು: ಗಜಪಡೆಯೊಂದಿಗೆ ಅರಮನೆಯಂಗಳಕ್ಕೆ ಆಗಮಿಸಿದ ಮಾವುತ ಮತ್ತು ಕಾವಾಡಿಗಳಿಗೆ ಕೋವಿಡ್‌ ಪರೀಕ್ಷೆ ನ‌ಡೆಸಲಾಯಿತು. ಈ ಬಾರಿಯ ದಸರಾ ಆನೆಗ‌ಳೊಂದಿಗೆ ಬಂದಿರುವ 15 ಮಂದಿ ಮಾವುತರು ಮತ್ತು ಕಾವಾಡಿಗರಿಗೆ ರ್ಯಾಪಿಡ್‌ ಆ್ಯಂಟಿಜನ್‌ ಟೆಸ್ಟ್ ನಡೆಸಲಾಯಿತು.

ಜೊತೆಗೆ ಸ್ಥಳದಲ್ಲಿರುವ ಅರಣ್ಯ ಇಲಾಖೆ ಸಿಬ್ಬಂದಿಯನ್ನೂ ಸೇರಿ 19 ಮಂದಿಗೆ ಜಿಲ್ಲಾ ಆರೋಗ್ಯಾಧಿಕಾರಿ ಡಾ. ವೆಂಕಟೇಶ್‌ ನೇತೃತ್ವದಲ್ಲಿ ಕೋವಿಡ್ ಟೆಸ್ಟ್‌ ಮಾಡಿಸಲಾಯಿತು. ಬಳಿಕ ಎಲ್ಲಾ ವರದಿಯೂ ನೆಗೆಟಿವ್‌ ಬಂದಿದ್ದು, ಆರ್‌ಟಿಪಿಸಿಆರ್‌ ಪರೀಕ್ಷೆಗೆ ಎಲ್ಲರ ಗಂಟಲು ದ್ರವವನ್ನು ಕ ‌ಳುಹಿಸಲಾಯಿತು. ಇದಕ್ಕೂ ಮುಂಚೆ ಕೆಲವರು ಕೋವಿಡ್‌ ಪರೀಕ್ಷೆ ಮಾಡಿಸಿಕೊಳ್ಳಲು ಹಿಂದೇಟು ಹಾಕಿದರು. ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ವೆಂಕಟೇಶ್‌ ಎಲ್ಲರ ಮನವೊಲಿಸಿ ಪರೀಕ್ಷೆಗೆ ಒಪ್ಪಿಸಿ, ಸ್ವ್ಯಾಬ್‌ ಪಡೆದರು. ಈ ಸಂದರ್ಭ ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿ ಇದ್ದರು.

ಶೀಘ್ರವೇ ಭಾರ ಹೊರುವ ತಾಲೀಮು: ಶನಿವಾರ ‌ ಮುಂಜಾನೆ ಗಜಪಡೆಗೆ ಅರಮನೆಯ ಆವರಣದಲ್ಲಿ ಮೊದಲ ದಿನವಾಗಿ ಮೆರವಣಿಗೆ ತಾಲೀಮು ನೀಡಲಾಗಿದ್ದು, ಇನ್ನೆರೆಡು ದಿನಗಳಲ್ಲಿ ಅಭಿಮನ್ಯು ಆನೆಗೆ ಭಾರ ಹೊರುವ ‌ ತಾಲೀಮು ಆರಂಭವಾಗಲಿದೆ. ಅದಕ್ಕಾಗಿ ನಮ್ದಾ ಗಾದಿ ಸಿದ್ಧವಾಗಿದ್ದು, ಅಭಿಮನ್ಯು ಹೆಗಲಿಗೆ ನಮ್ದಾ, ಗಾದಿ ಕಟ್ಟಿ ಅದರ  ‌ಮೇಲೆ ತೊಟ್ಟಿಲು ಇಟ್ಟು ಭಾರ ಮೂಟೆಗಳನ್ನು ಹೊರಿಸಿ ಭಾರ ಹೊರುವುದನ್ನು ಅಭ್ಯಾಸ ಮಾಡಿಸ ಲಾಗುತ್ತದೆ.

ಔಷಧ ಸಿಂಪಡಣೆ: ಕೋವಿಡ್‌-19 ಹಿನ್ನಲೆ ಜಿಲ್ಲಾಡಳಿತ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು,  ಶನಿವಾರ ‌ ಬೆಳಗ್ಗೆ ಆನೆಗ ‌ಳು ಉಳಿದುಕೊಂಡಿರುವ ಶೆಡ್‌ ಹಾಗೂ ಓಡಾಡುವ ಸ್ಥಳ ‌ಗಳಲ್ಲಿ ಸಿಬ್ಬಂದಿ ಸೋಂಕು ನಿವಾರಕ ಔಷಧವನ್ನು ಸಿಂಪಡಿಸಿದರು. ಜೊತೆಗೆ ಎಲ್ಲಾ ಮಾವುತರು ಹಾಗೂ ಕಾವಾಡಿಗಳಿಗೆ ಕೋವಿಡ್‌ ಕುರಿತು ಜಾಗೃತಿ ಮೂಡಿಸಲಾಯಿತು.

ಆನೆಗಳತ್ತ ನೋ ಎಂಟ್ರಿ: ಕೋವಿಡ್ ಸೋಂಕು ಎಲ್ಲೆಡೆ ವ್ಯಾಪಕವಾಗಿ ಹರಡುತ್ತಿರುವ ‌ ಹಿನ್ನೆಲೆ ಮಾವುತರು, ಕಾವಾಡಿಗರು ಹಾಗೂ ಆನೆಗ‌ಳ ಆರೋಗ್ಯದ ದೃಷಿ rಯಿಂದ ಸಾರ್ವಜನಿಕರು, ಅರಮನೆಗೆ ಭೇಟಿ ನೀಡುವ ‌ ಪ್ರವಾಸಿಗರನ್ನು ಆನೆಗಳು ಹಾಗೂ ಮಾವುತ ಮತ್ತು ಕಾವಾಡಿಗಳನ್ನು ಸುಳಿದಾಡಲು ನಿಷೇಧಿಸಲಾಗಿದೆ. ಈ ಹಿನ್ನೆಲೆ ಯಾರನ್ನೂ ಆನೆಗಳು ಹಾಗೂ ಮಾವುತರು ಶೆಡ್‌ ಬಳಿ ಹೋಗದಂತೆ ಎಚ್ಚರಿಕೆ ‌ವಹಿಸಲಾಗಿದೆ.

ಅರಮನೆಯಲ್ಲಿ ಸ್ವಚ್ಛತೆ: ಶುಕ್ರವಾರ ಗಜಪಡೆಯನ್ನು ಬರಮಾಡಿಕೊಂಡ ‌ ಕಾರ್ಯಕ್ರಮದ ‌ ಹಿನ್ನೆಲೆ ಆವರಣದಲ್ಲಿ ಹೂವು, ಮತ್ತಿತರ‌ ಕಸದ ರಾಶಿ ಬಿದ್ದಿತ್ತು. ಶನಿವಾರ ‌ ಪೌರಕಾರ್ಮಿಕರು ಅರಮನೆ ಆವರಣವನ್ನು ಸ್ವಚ್ಛಗೊಳಿಸಿದರು. ಜೊತೆಗೆ ಇತರ ತಯಾರಿ ಚಟುವಟಿಕೆಗಳು ‌ ಎಂದಿನಂತೆ ನಡೆದಿದೆ.

ಆನೆಗಳಿಗೆ ಕೋವಿಡ್ ಟೆಸ್ಟ್‌? :  ಆನೆಗಳಿಗೆ ಕೋವಿಡ್ ಪರೀಕ್ಷೆ ಮಾಡಲು ಸರಿಯಾದ ಸಾಧನ ಇಲ್ಲದ ಕಾರಣ ಸದ್ಯಕ್ಕೆ ಪರೀಕ್ಷೆ ಮಾಡಿಲ್ಲ. ಆನೆಗಳಿಗೆ ಈ ಸೋಂಕಿನಿಂದ ಹೆಚ್ಚು ಅಪಾಯವಿಲ್ಲ. ಆದ್ದರಿಂದ ಅವುಗಳಿಗೆ ಪರೀಕ್ಷೆಮಾಡುವ ಬಗ್ಗೆ ಇನ್ನೂ ಯೋಚಿಸಿಲ್ಲ. ಇಂದು  ಅಥವಾ ನಾಳೆ ಆನೆಗಳಿಗೆ ಭಾರ ಹೊರುವ ತಾಲೀಮು ಆರಂಭಿಸಲಾಗುವುದು ಎಂದು ಪಶು ವೈದ್ಯಾಧಿಕಾರಿ ಡಾ.ನಾಗರಾಜ್‌ ತಿಳಿಸಿದ್ದಾರೆ.

ಟಾಪ್ ನ್ಯೂಸ್

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

17-desiswara-ganaap

Ganesh Chaturthi Special Story: ವಿಶ್ವಪೂಜಿತ ವಿನಾಯಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mysuru-Elephant

Mysuru Dasara: ಎರಡನೇ ತಂಡದ ಗಜಪಡೆಗೆ ತೂಕ ಪರೀಕ್ಷೆ: ಸುಗ್ರೀವ 5.2 ಟನ್‌

3-hunsur

Hunsur: ಗಣಪತಿ ಪ್ರತಿಷ್ಠಾಪನೆಗೆ ಅನುಮತಿ ಕಡ್ಡಾಯ: ಇನ್ಸ್ಪೆಕ್ಟರ್ ಮುನಿಯಪ್ಪ

CM-Siddu

Report on Corruption: ಕೋವಿಡ್‌ ಅಕ್ರಮ: ಸಂಪುಟ ಸಭೆಯಲ್ಲಿ ಚರ್ಚಿಸಿ ಕ್ರಮ: ಸಿಎಂ

Yadhuveer

Mysuru: ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಸಭೆ ಅಕ್ರಮ: ಸಂಸದ ಯದುವೀರ್‌

Chamundi-Sabhe

Mysore: ಚಾಮುಂಡೇಶ್ವರಿ ದೇಗುಲ ಸಂಪ್ರದಾಯ, ಘನತೆ ಕಾಪಾಡಿ ಉನ್ನತೀಕರಿಸಿ: ಸಿದ್ದರಾಮಯ್ಯ

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.