ಮನೆಯೊಳಗೆ ಒಳಚರಂಡಿ ನೀರು ನಿವಾಸಿಗಳ ಪರದಾಟ : ಪುರಸಭೆ ನಿರ್ಲಕ್ಷಕ್ಕೆ ವ್ಯಾಪಕ ಆಕ್ರೋಶ


Team Udayavani, Oct 6, 2020, 1:09 PM IST

ಮನೆಯೊಳಗೆ ಒಳಚರಂಡಿ ನೀರು ನಿವಾಸಿಗಳ ಪರದಾಟ : ಪುರಸಭೆ ನಿರ್ಲಕ್ಷಕ್ಕೆ ವ್ಯಾಪಕ ಆಕ್ರೋಶ

ಗುಳೇದಗುಡ್ಡ: ಪಟ್ಟಣದ ಬಾಸೆಲ್‌ ಮಿಷನ್‌ ಕಾಂಪೌಂಡ್‌ ಆವರಣದಲ್ಲಿರುವ 8-10 ಮನೆಗಳಿಗೆ ಒಳಚರಂಡಿ ನೀರು ಮನೆಯೊಳಗೆ ಹರಿದು ಬರುತ್ತಿದೆ. ಇದರಿಂದ ನಿತ್ಯ ಗಬ್ಬು ವಾಸನೆಯಲ್ಲಿ ಜೀವನ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅಲ್ಲಿನ ನಿವಾಸಿಗಳು ಆರೋಪಿಸಿದ್ದಾರೆ.

ಎಂಟೆತ್ತು ದಿನಗಳಿಂದ ಮನೆಗಳಲ್ಲಿ ಒಳಚರಂಡಿ ನೀರು ಬರುತ್ತಿದೆ. ಮನೆಯ ತುಂಬೆಲ್ಲ ಒಳಚರಂಡಿ ನೀರು ನಿಂತಿದೆ. ಅದರಲ್ಲೂ ಮೂರು ದಿನಗಳಿಂದ ಸಾಕಷ್ಟು ನೀರು ಬರುತ್ತಿದೆ. ಅದನ್ನು ಹೊರಗೆ ಹಾಕುವುದರಲ್ಲಿಯೇ ದಿನ ಕಳೆಯುತ್ತಿದೆ. ಚಿಕ್ಕ ಚಿಕ್ಕಮಕ್ಕಳನ್ನು ಕಟ್ಟಿಕೊಂಡು ಎಲ್ಲಿಗೆ ಹೋಗಬೇಕು. ಎಲ್ಲಿ ಮಲಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿ ಬಾರಿ ಮಳೆಯಾದರೆ ಈ ಸಮಸ್ಯೆ ನಮಗೆ ತಪ್ಪಿದ್ದಲ್ಲ. ಮೊದಲೆಲ್ಲ ಮಳೆ ನೀರು ಹರಿದು ಚರಂಡಿ ಮೂಲಕ ಹಳ್ಳ ಸೇರುತ್ತಿತ್ತು. ಆದರೆ ಕಳೆದ ವರ್ಷ ರಸ್ತೆ ಮಾಡುವಾಗ ಪುರಸಭೆಯವರು ಮಳೆ ನೀರನ್ನು ನಮ್ಮ ಮನೆಗಳಿಗೆ ಹೊಂದಿಕೊಂಡಂತೆ ಇರುವ ಹೊಂಡಕ್ಕೆ ಹರಿದು ಬರುವಂತೆ ಮಾಡಿದರಿಂದ ಈ ಸಮಸ್ಯೆಯಾಗುತ್ತಿದೆ. ಪುರಸಭೆ ಅಧಿಕಾರಿಗಳು ಮಾಡಿದ ತಪ್ಪಿನಿಂದ ಕಷ್ಟಪಡುತ್ತಿದ್ದೇವೆ ಎಂದು ನಿವಾಸಿಗಳು ಆರೋಪಿಸಿದ್ದಾರೆ.

ಇದನ್ನೂ ಓದಿ :ಡ್ರಗ್ ಪ್ರಕರಣದಲ್ಲಿ ತಲೆಮರೆಸಿಕೊಂಡವರಿಗೆ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಸಹಾಯ!

ಚರಂಡಿ ನೀರಲ್ಲಿ ಅಡುಗೆ: ಸುನೀತಾ ನೀಲಗಾರ, ಬಂಡಿ ಎಂಬುವರ ಅಡುಗೆ ಮನೆಯಲ್ಲಿ ಒಳಚರಂಡಿ ನೀರು ಹರಿದು ಬಂದು ನಿಂತಿದ್ದು, ಇದರಿಂದ ಚರಂಡಿ ನೀರಲ್ಲಿಯೇ ನಿಂತು ಅಡುಗೆ ಸೇರಿದಂತೆ ಇನ್ನಿತರ ಕೆಲಸ ಕಾರ್ಯಗಳನ್ನು ಮಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.

ಜನರ ಆರೋಗ್ಯ ಕಾಪಾಡಬೇಕಾದ ಇಲಾಖೆಯೇ ಕಣ್ಣುಮುಚ್ಚಿ ಕುಳಿತಿದೆ. ನಮ್ಮ ಸಮಸ್ಯೆ ಯಾರಿಗೂ ಕಾಣುತ್ತಿಲ್ಲ ಎಂದು ಮಹಿಳೆಯರು ಅಳಲು ತೋಡಿಕೊಂಡರು. ಮಳೆಯಾದಗಲೆಲ್ಲ ನಮ್ಮ ಮನೆಗಳಿಗೆ ಮಳೆ ನೀರಿನ ಜತೆಗೆ ಒಳಚರಂಡಿ ನೀರು ಹರಿದು ಬರುತ್ತಿದೆ. ಅಧಿಕಾರಿಗಳು ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು.

ಇಲ್ಲದಿದ್ದರೇ ಎಲ್ಲರೂ ಸೇರಿಕೊಂಡು ಪ್ರತಿಭಟಿಸಬೇಕಾಗುತ್ತದೆ ಎಂದು ನಿವಾಸಿಗಳಾದ ದಾದಾಪೀರ ಶೇಖ್‌, ಜಾಕೋಬ ತಳವಾರ ಯಮನಪ್ಪ ನಾಯಕರ, ನಿರ್ಮಲಾ ಕರಡಿಗುಡ್ಡ, ರೋಮಿಲಾ ನೀಲಗಾರ, ಸುನಂದಾ ಕರಡಿಗುಡ್ಡ, ಸುರೇಶ ಬಂಡಿ, ಶೀಲಾ ಸುನಗಾರ, ಶಾಂತಾ ಬಿರನೂರ, ಮೋಹನ ಪೂಜಾರಿ, ಮಾರ್ಗರೇಟ್‌ ಬಿರನೂರ ಸೇರಿದಂತೆ ಇತರರು ಎಚ್ಚರಿಸಿದ್ದಾರೆ.

ಟಾಪ್ ನ್ಯೂಸ್

Kanadka-Dooja

Surathkal: ಆರು ಬಾರಿಯ ಚಾಂಪಿಯನ್‌, ಕಂಬಳ ವೀರ ಕಾನಡ್ಕ ದೂಜನಿಗೆ ಸಮ್ಮಾನ

Yakshagana-Academy

Udupi: ಮಕ್ಕಳಲ್ಲಿ ತಾಳ್ಮೆ, ಏಕಾಗ್ರತೆ ಬೆಳೆಸಲು ಯಕ್ಷಗಾನ ತರಬೇತಿ ಅವಶ್ಯ: ಯು.ಟಿ. ಖಾದರ್‌

Sulya-1

Sulya: ಪೈಪ್‌ಲೈನ್‌ ಕಾಮಗಾರಿಯಿಂದ ರಸ್ತೆಗೆ ಹಾನಿ ಬಗ್ಗೆ ಚರ್ಚಿಸಿ ಕ್ರಮ: ಸತೀಶ್‌ ಜಾರಕಿಹೊಳಿ

Arebashe-Academy

Madikeri: ಆರು ಮಂದಿಗೆ ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರಕಟ; ಫೆ.28ಕ್ಕೆ ಪ್ರದಾನ

Santhe-last

Manipal: ಕಡೇ ದಿನವೂ ಉತ್ತಮ ಸ್ಪಂದನೆ; ಹಾಡು, ನೃತ್ಯದೊಂದಿಗೆ ʼನಮ್ಮ ಸಂತೆʼಗೆ ತೆರೆ

kambala2

Kambala: ದಾಖಲೆ ಬರೆದ ವಾಮಂಜೂರು ತಿರುವೈಲುಗುತ್ತು ಕಂಬಳ

Arrest

Davanagere: ಪೂಜೆಯಿಂದ ಕಷ್ಟ ಪರಿಹರಿಸುವ ನೆಪದಲ್ಲಿ ಮನೆಯಿಂದ ಕಳವು: ಇಬ್ಬರ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

arrested

CM ಕಚೇರಿಯ ಟಿಪ್ಪಣಿ ನಕಲು: ಬಂಧನ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Kanadka-Dooja

Surathkal: ಆರು ಬಾರಿಯ ಚಾಂಪಿಯನ್‌, ಕಂಬಳ ವೀರ ಕಾನಡ್ಕ ದೂಜನಿಗೆ ಸಮ್ಮಾನ

Yakshagana-Academy

Udupi: ಮಕ್ಕಳಲ್ಲಿ ತಾಳ್ಮೆ, ಏಕಾಗ್ರತೆ ಬೆಳೆಸಲು ಯಕ್ಷಗಾನ ತರಬೇತಿ ಅವಶ್ಯ: ಯು.ಟಿ. ಖಾದರ್‌

Sulya-1

Sulya: ಪೈಪ್‌ಲೈನ್‌ ಕಾಮಗಾರಿಯಿಂದ ರಸ್ತೆಗೆ ಹಾನಿ ಬಗ್ಗೆ ಚರ್ಚಿಸಿ ಕ್ರಮ: ಸತೀಶ್‌ ಜಾರಕಿಹೊಳಿ

Arebashe-Academy

Madikeri: ಆರು ಮಂದಿಗೆ ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರಕಟ; ಫೆ.28ಕ್ಕೆ ಪ್ರದಾನ

Santhe-last

Manipal: ಕಡೇ ದಿನವೂ ಉತ್ತಮ ಸ್ಪಂದನೆ; ಹಾಡು, ನೃತ್ಯದೊಂದಿಗೆ ʼನಮ್ಮ ಸಂತೆʼಗೆ ತೆರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.