ಚಿಕನ್‌ ಪ್ರಿಯರ ಮೇಲೆ ಕೋವಿಡ್ ಕರಿನೆರಳು

|ಏರುತ್ತಲೇ ಇದೆ ದರ | ಕುಕ್ಕುಟೋದ್ಯಮಿಗಳಿಗೆ ಸಂಕಷ್ಟ |

Team Udayavani, Oct 12, 2020, 6:21 PM IST

ಚಿಕನ್‌ ಪ್ರಿಯರ ಮೇಲೆ ಕೋವಿಡ್ ಕರಿನೆರಳು

ಸಾಂದರ್ಭಿಕ ಚಿತ್ರ

ಶಿವಮೊಗ್ಗ: ಚಿಕನ್‌ ತಿಂದರೆ ಕೋವಿಡ್ ಬರಲಿದೆ ಎಂದು ಸುಳ್ಳು ವದಂತಿ ಹಬ್ಬಿದ ಪರಿಣಾಮ ಲಾಕ್‌ಡೌನ್‌ ಸಂದರ್ಭ ಕುಕ್ಕುಟೋದ್ಯಮಿಗಳು ಸಂಕಷ್ಟ ಎದುರಿಸಿದರು. ಆ ಸಮಯದಲ್ಲಿ ಕೋಳಿ ಸಾಕಣೆದಾರರು ಹೊಡೆತ ತಿಂದರೆ ಈಗ ಗ್ರಾಹಕರು ಅದರ ಪರಿಣಾಮ ಎದುರಿಸುವಂತಾಗಿದೆ.

ಕಳೆದಎರಡು ತಿಂಗಳಿನಿಂದ ಚಿಕನ್‌ ದರ 200 ರೂ. ಆಸುಪಾಸು ಇದ್ದು, ಆಫ್‌ಸೀಝನ್‌ ಎಂದೇ ಪರಿಗಣಿಸುವ ಶ್ರಾವಣ ಮಾಸದಲ್ಲೂ ಚಿಕನ್‌ ದರ 140 ರೂ.ಗಿಂತ ಕಡಿಮೆಯಾಗಿರಲಿಲ್ಲ. ಸದ್ಯದ ಸ್ಥಿತಿ ಗಮನಿಸಿದರೆ ಡಿಸೆಂಬರ್‌ವರೆಗೂ ಇದಕ್ಕಿಂತ ಕಡಿಮೆ ದರಕ್ಕೆ ಕೋಳಿ ಖರೀದಿ ಸಾಧ್ಯವಿಲ್ಲ. ಮೊಟ್ಟೆ ದರವೂ ಇಳಿಯಲ್ಲ ಎನ್ನಲಾಗುತ್ತಿದೆ.

ಕೋವಿಡ್ ಲಾಕ್‌ಡೌನ್‌ ಸಂದರ್ಭ ಹಬ್ಬಿದ ವದಂತಿ ಹಾಗೂ ಹಕ್ಕಿಜ್ವರದ ಭೀತಿ ಹಿನ್ನೆಲೆಯಲ್ಲಿ ಕೋಳಿ ಕೇಳುವವರೇ ಇರಲಿಲ್ಲ. 80ರಿಂದ 100 ರೂ. ಆಸುಪಾಸಿನಲ್ಲಿದ್ದ ಹೋಲ್‌ಸೇಲ್‌ ದರ 10 ರೂ.ಗೆ ಕುಸಿದಿತ್ತು. ಆದರೂ ಖರೀದಿಸುವವರೇ ಇರಲಿಲ್ಲ. ಕೆಲವರು ಉಚಿತವಾಗಿ ಹಂಚಿದರೆ, ಕೋಳಿಗಳಿಗೆ ಹಾಕಿದ ಬಂಡವಾಳವೂ ಕೈಸೇರದ ಕಾರಣ ದೊಡ್ಡ ಉದ್ದಿಮೆದಾರರು ಫಾರಂನಲ್ಲಿದ್ದ ಕೋಳಿಗಳನ್ನು ಗುಂಡಿತೋಡಿ ಹೂತರು. ಉದ್ಯಮಿಗಳು ಕೋಟ್ಯಂತರ ರೂ. ನಷ್ಟ ಅನುಭವಿಸಿದರು. ಸ್ವಂತ ಸಾಕಣೆದಾರರು ತೀವ್ರ ಸಂಕಷ್ಟ ಎದುರಿಸಬೇಕಾಯಿತು.

ಆದರೆ ಅನ್‌ಲಾಕ್‌ ನಂತರ ಗ್ರಾಹಕರ ಬೇಡಿಕೆಯಷ್ಟು ಕೋಳಿಗಳು ಲಭ್ಯವಿರದ ಕಾರಣ ಕೋಳಿ ಬೆಲೆ ಒಮ್ಮೆಲೆ ಗಗನಕ್ಕೇರಿತು. ಜೂನ್‌ನಲ್ಲಿ 240 ರೂ. ತಲುಪಿದ್ದ ಬೆಲೆ, ಶ್ರಾವಣ ಮಾಸದಲ್ಲೂ 140 ರೂ. ಇತ್ತು. ಈಗ ಮತ್ತೆ ಕೋಳಿ ಸಾಕಾಣಿಕೆದಾರರಿಂದ ಪೂರೈಕೆಯಾಗುವ ಚಿಕನ್‌  ದರ 180 ರೂ. ಆಸುಪಾಸು ಇದ್ದರೆ ಕಂಪನಿಗಳ ದರ 200 ರೂ. ಮೇಲಿದೆ. ಎರಡು ತಿಂಗಳಿನಿಂದ ಬೆಲೆ ಸ್ಥಿರತೆ ಇದ್ದು ಕೋಳಿ ಸಾಕಣೆದಾರರು ಸ್ವಲ್ಪ ಲಾಭ ನೋಡುತ್ತಿದ್ದಾರೆ.

ಬೆಲೆ ಇಳಿಯಲ್ಲ ಯಾಕೆ?: ಲಾಕ್‌ಡೌನ್‌ ತೆರವುಗೊಳಿಸಿ ಹಲವು ತಿಂಗಳುಗಳೇ ಆದರೂ ಕೋಳಿ ಉತ್ಪಾದನೆ ಸಾಮಾನ್ಯ ಸ್ಥಿತಿಗೆ ಬಂದಿಲ್ಲ. ಲಾಕ್‌ಡೌನ್‌ ವೇಳೆ ಮರಿ ಮಾಡುವ ಪೆರೇಂಟ್‌ ಕೋಳಿಗಳಿಗೆ ಆಹಾರ ಹಾಕಲು ಸಾಧ್ಯವಾಗದೇ ಗುಂಡಿ ತೆಗೆದು ಹೂತ ಪರಿಣಾಮ ಮೊಟ್ಟೆ ಮತ್ತು ಮರಿ ಉತ್ಪಾದನೆ ಕುಂಠಿತಗೊಂಡಿದೆ. ಪೇರೆಂಟ್‌ ಕೋಳಿಗಳು ಸಾಮಾನ್ಯ ಫಾರ್ಮ್ ಕೋಳಿಗಳಿಗಿಂತಭಿನ್ನವಾಗಿದ್ದು 28 ವಾರಕ್ಕೆ ಮರಿ ಇಡಲು ಶುರು ಮಾಡುತ್ತವೆ. ಫಲಭರಿತ (ಮರಿಯಾಗುವ ಶಕ್ತಿವುಳ್ಳ) ಮೊಟ್ಟೆ ಇಡಲು 35ರಿಂದ 40 ವಾರ ಬೇಕು. ಅಂದರೆ ಕನಿಷ್ಠ ಎಂಟು ತಿಂಗಳಾದರೂ ಬೇಕು.

ಮಾರುಕಟ್ಟೆಯಲ್ಲಿ ಮರಿ ಉತ್ಪಾದನೆಗೆ ಬೇಕಾದಷ್ಟು ಮೊಟ್ಟೆಗಳು ಸಿಗುತ್ತಿಲ್ಲ. ಪೇರೆಂಟ್‌ ಕೋಳಿಗಳು ಈಗ ಬೆಳವಣಿಗೆ ಹಂತದಲ್ಲಿರುವುದರಿಂದ ಡಿಸೆಂಬರ್‌ ವೇಳೆಗೆ ಮೊಟ್ಟೆ ಮತ್ತು ಮರಿ ಉತ್ಪಾದನೆ ಸಾಮಾನ್ಯ ಸ್ಥಿತಿಗೆ ಮರಳಿ ದರ ಇಳಿಯಲಿದೆ. ಅಲ್ಲದೇ ನಷ್ಟದ ಕಾರಣ ಉದ್ಯಮದಿಂದ ದೂರ ಉಳಿದ ಸಾವಿರಾರು ರೈತರು ಮತ್ತೆ ಉದ್ಯಮದತ್ತ ಮುಖ ಮಾಡಿದರೆ ಪೂರೈಕೆ ಸಹಜ ಸ್ಥಿತಿಗೆ ಬರಲಿದೆ ಎನ್ನುತ್ತಾರೆ ಉದ್ಯಮಿಗಳು.

ಮೊಟ್ಟೆ ದುಬಾರಿ : ಮಾರುಕಟ್ಟೆಯಲ್ಲಿ ಕೋಳಿ ಅಲ್ಲದೆ ಮೊಟ್ಟೆ ಧಾರಣೆ ಸಹ ಭಾರಿ ಏರಿಕೆ ಕಂಡಿದೆ. ಹೋಲ್‌ ಸೇಲ್‌ ದರ ಒಂದು ಮೊಟ್ಟೆಗೆ 5.50 ರೂ. ಇದ್ದರೆ ಅಂಗಡಿಗಳಲ್ಲಿ 6ರಿಂದ 7 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಮೊಟ್ಟೆಉತ್ಪಾದನೆ ಶೇ.50ರಷ್ಟು ಕುಸಿದಿದೆ. ವ್ಯಾಪಾರಿಗಳು ಕೇಳುವಷ್ಟು ಮೊಟ್ಟೆ ಸಿಗುತ್ತಿಲ್ಲ. ಮೊಟ್ಟೆ ಉತ್ಪಾದನೆಯು ಕೋಳಿಗಳನ್ನೇ ಅವಲಂಬಿಸಿರುವುದರಿಂದ ಡಿಸೆಂಬರ್‌ ವರೆಗೆ ಅಸಾಮಾನ್ಯ ಏರಿಳಿತ ಇರುತ್ತದೆ ಎನ್ನುತ್ತಾರೆ ಕುಕ್ಕುಟೋದ್ಯಮಿಗಳು.

ಲಾಕ್‌ಡೌನ್‌ ಅವಧಿಯಲ್ಲಿ ಪೇರೆಂಟ್‌ ಕೋಳಿಗಳನ್ನು ಸಾಯಿಸಿದ ಪರಿಣಾಮ ಬೇಡಿಕೆ ತಕ್ಕಷ್ಟು ಉತ್ಪಾದನೆ ಇಲ್ಲ. ಲಾಕ್‌ಡೌನ್‌ ತೆರವು ನಂತರವೂ ಕಚ್ಚಾವಸ್ತುಗಳ ಪೂರೈಕೆ ಕೂಡ ಕಷ್ಟವಾಗಿತ್ತು. ಈಗ ಸಹಜ ಸ್ಥಿತಿಗೆ ಬರುತ್ತಿದೆ. ಈ ವರ್ಷ ಮೀನು ಪೂರೈಕೆ ಉತ್ತಮವಾಗಿಲ್ಲ. ಬಹಳಷ್ಟು ಗ್ರಾಹಕರು ಚಿಕನ್‌ ಕಡೆ ವಾಲಿದ್ದಾರೆ. ಮಾರುಕಟ್ಟೆ ಸಾಮಾನ್ಯ ಸ್ಥಿತಿಗೆ ಮರಳುತ್ತಿದ್ದು ಡಿಸೆಂಬರ್‌ ನಂತರ ಗ್ರಾಹಕರಿಗೆ ಇದರ ಲಾಭಸಿಗಲಿದೆ.- ದಿನೇಶ್‌ ಪಟೇಲ್‌, ನಂದೀಶ್‌ ಪೌಲ್ಟ್ರಿ ಫಾರಂ, ಶಿವಮೊಗ್ಗ.

 

-ಶರತ್‌ ಭದ್ರಾವತಿ

ಟಾಪ್ ನ್ಯೂಸ್

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

2-vijayapura

Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ

Jaiswal

Canada Vs India: ನಿಜ್ಜರ್‌ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ

Bhagavath

Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್‌

ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

CJI-Ind

Recommendation: ನ್ಯಾ. ಸಂಜೀವ್‌ ಖನ್ನಾ ಸುಪ್ರೀಂಕೋರ್ಟ್‌ ಮುಂದಿನ ಮುಖ್ಯ ನ್ಯಾಯಮೂರ್ತಿ

Koppal: ಚಿಕನ್‌, ಮಟನ್‌ ಸೆಂಟರ್‌ಗೆ ಸಚಿವೆ ಶೋಭಾ ಕರಂದ್ಲಾಜೆ ಹೆಸರಿಟ್ಟ ಅಭಿಮಾನಿ

Koppal: ಚಿಕನ್‌, ಮಟನ್‌ ಸೆಂಟರ್‌ಗೆ ಸಚಿವೆ ಶೋಭಾ ಕರಂದ್ಲಾಜೆ ಹೆಸರಿಟ್ಟ ಅಭಿಮಾನಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Shivamogga:7 ಶಂಕಿತ ಬಾಂಗ್ಲಾದೇಶಿಯರ ವಶ

Shivamogga:7 ಶಂಕಿತ ಬಾಂಗ್ಲಾದೇಶಿಯರ ವಶ

Congress Govt.,: ವಾಲ್ಮೀಕಿ ಸಮಾಜದ ಕ್ಷಮೆ ಕೇಳಲಿ: ಆರಗ ಜ್ಞಾನೇಂದ್ರ

Congress Govt.,: ವಾಲ್ಮೀಕಿ ಸಮಾಜದ ಕ್ಷಮೆ ಕೇಳಲಿ: ಆರಗ ಜ್ಞಾನೇಂದ್ರ

8-holehonnur

Holehonnur: ಹೊಸಕೊಪ್ಪ ಗ್ರಾಮದಲ್ಲಿ ಬಲಿಗಾಗಿ ಕಾದಿರುವ ಗುಂಡಿ

Dinesh-gundurao

Vaccine: ಇನ್ನೆರಡು ವರ್ಷದೊಳಗೆ ಕೆಎಫ್‌ಡಿ ಲಸಿಕೆ ಬಳಕೆಗೆ ಲಭ್ಯ: ಆರೋಗ್ಯ ಸಚಿವ ದಿನೇಶ್‌

Theerathalli

Shivamogga: ತೀರ್ಥಹಳ್ಳಿ ತಹಶೀಲ್ದಾರ್‌ ಜಕ್ಕಣ್ಣ ಗೌಡರ್ ಹೃದಯಘಾತದಿಂದ ನಿಧನ!

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

udayavani youtube

ಮಕ್ಕಳ ಸ್ಕ್ರೀನ್ ಟೈಮಿಂಗ್ ಕುರಿತು ಎಚ್ಚರಿಕೆ ಅತ್ಯವಶ್ಯಕ.. ಇಲ್ಲಿದೆ ಅಗತ್ಯ ಮಾಹಿತಿ

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

ಹೊಸ ಸೇರ್ಪಡೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

2-vijayapura

Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ

Jaiswal

Canada Vs India: ನಿಜ್ಜರ್‌ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ

Bhagavath

Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್‌

ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.