ಅಯೋಧ್ಯೆ: ರಾಮಲೀಲಾ ವೈಭವ ಶುರು
Team Udayavani, Oct 19, 2020, 1:22 AM IST
ಸಾಂದರ್ಭಿಕ ಚಿತ್ರ
ಅಯೋಧ್ಯೆ: ರಾಮಜನ್ಮಭೂಮಿಯಲ್ಲಿ ರಾಮ ಲೋಕ ಧರೆಗಿಳಿದಿದೆ. ಸರಯೂ ತೀರದಲ್ಲಿ ನವರಾತ್ರಿ ಪ್ರಯುಕ್ತ ಶನಿವಾರದಿಂದ ರಾಮಲೀಲಾ ಆರಂಭಗೊಂಡಿದ್ದು, ಅ.25ಕ್ಕೆ ಸಮಾಪ್ತಿಗೊಳ್ಳಲಿದೆ.
ಇಲ್ಲಿನ ಲಕ್ಷ್ಮಣ್ ಖೀಲಾದಲ್ಲಿ “ಅಯೋಧ್ಯೆ ಕಿ ರಾಮಲೀಲಾ’ ಭಕ್ತಿರೂಪಕ, 9 ದಿನಗಳಲ್ಲಿ ಸಂಪೂರ್ಣ ರಾಮಾಯಣವನ್ನು ಕಟ್ಟಿಕೊಡಲಿದೆ. ಬಾಲಿವುಡ್ನ ನುರಿತ ಕಲಾವಿದರು ಪ್ರಮುಖ ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ. “ರಾಮ’ತಾರಾಗಣ: ನಾರದ ಮುನಿಯಾಗಿ ಬಾಲಿವುಡ್ನ ಅಸ್ರಾನಿ, ಸಂಸದ- ಭೋಜು³ರಿ ನಟ ಮನೋಜ್ ತಿವಾರಿ ಅಂಗದನಾಗಿ, ಗೋರಖ್ಪುರ್ ಸಂಸದ- ಭೋಜುರಿ ತಾರೆ ರವಿ ಕಿಶನ್ ಭರತನಾಗಿ ನಟಿಸಿದ್ದಾರೆ. ರಮಾನಂದ ಸಾಗರ ನಿರ್ದೇಶಿತ “ರಾಮಾಯಣ’ದಲ್ಲಿ ಹನುಮಾನ್ ಆಗಿ ಜನಪ್ರಿಯರಾಗಿದ್ದ ನಟ, ಮಾಜಿ ಕುಸ್ತಿಪಟು ವಿಂದು ದಾರಾ ಸಿಂಗ್ ಪುತ್ರ ವಿಂದು ದಾರಾ ಸಿಂಗ್ ಹನುಮನ ಪಾತ್ರದಲ್ಲಿ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ.
ಡಿಡಿ ಲೈವ್: “ರಾಮಲೀಲಾ’ವನ್ನು ದೂರದರ್ಶನ ಇದೇ ಮೊದಲ ಬಾರಿಗೆ ದೇಶದ 14 ಭಾಷೆಗಳಲ್ಲಿ ನೇರಪ್ರಸಾರ ಮಾಡಿದೆ. ಯೂಟ್ಯೂಬ್ ಸೇರಿದಂತೆ ಹಲವು ಸಾಮಾಜಿಕ ಜಾಲತಾಣಗಳಲ್ಲಿಯೂ ಡಿಡಿ ತಂಡ ನೇರಪ್ರಸಾರಕ್ಕೆ ವ್ಯವಸ್ಥೆ ಕಲ್ಪಿಸಿದೆ. 100 ಬಾಲ ಬ್ರಹ್ಮಚಾರಿಗಳ “ಶಾರದೀಯ ನವರಾತ್ರ’ ಆಚರಣೆಯಿಂದ ರಾಮಲೀಲಾಗೆ ಚಾಲನೆ ಸಿಕ್ಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.