ಯುವತಿ ಮುಖದ ಮೇಲೆ ಅರಳಿದ ಸಿಂಹದ ಚಿತ್ರ!

ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ ಚೇತನಾ ಎಸ್‌. ಅವರ ಕೈಚಳಕ

Team Udayavani, Oct 30, 2020, 5:45 AM IST

ಯುವತಿ ಮುಖದ ಮೇಲೆ ಅರಳಿದ ಸಿಂಹದ ಚಿತ್ರ!

ಮಹಾನಗರ: ಯುವತಿಯೊಬ್ಬಳ ಮೊಗದಲ್ಲಿ ಸಿಂಹದ ಚಿತ್ರವನ್ನು ರಚಿಸುವ ಮುಖೇನ ಮಂಗಳೂರಿನ ಸೌಂದರ್ಯ ಕಲಾವಿದೆ ಚೇತನಾ ಎಸ್‌. ಅವರು ಇದೀಗ ಎಲ್ಲರ ಗಮನಸೆಳೆದಿದ್ದಾರೆ.

ಕೇವಲ ಐದು ಗಂಟೆಯಲ್ಲಿ ತನ್ನ ಕಲಾ ಚಾತುರ್ಯ ಮೆರೆದಿರುವ ಅವರು ತಮ್ಮ ಶಿಷ್ಯೆ ಶ್ರೇಯಾ ಎಂ. ಭಟ್‌ ಅವರ ಮುಖ ಹಾಗೂ ಕೂದಲನ್ನು ಉಪ ಯೋಗಿಸಿಕೊಂಡು ಚಿತ್ರಿಸಿರುವ ಸಿಂಹದ ಚಿತ್ರ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಇವರ ಈ ಆಕರ್ಷಕ ಚಿತ್ರಕಲೆಯನ್ನು ಛಾಯಾಚಿತ್ರಗ್ರಾಹಕ ವಿವೇಕ್‌ ಸಿಕ್ವೇರಾ ಸೆರೆ ಹಿಡಿದಿದ್ದು, ಅನೇಕರಿಂದ ಪ್ರಶಂಸೆ ಕೂಡ ವ್ಯಕ್ತವಾಗುತ್ತಿದೆ.

ನಗರದ ಚೇತನಾ ಬ್ಯೂಟಿ ಲಾಂಜ್‌ ಆ್ಯಂಡ್‌ ಅಕಾಡೆಮಿಯ ಮುಖ್ಯಸ್ಥರಾಗಿರುವ ಚೇತನಾ ಅವರದ್ದು ಫೇಸ್‌ ಪೈಂಟಿಂಗ್‌ ಮೊದಲ ಪ್ರಯೋಗ. ಸಾಮಾನ್ಯವಾಗಿ ವಿದೇಶಗಳಲ್ಲಿ ಈ ರೀತಿಯ ಪೈಂಟಿಂಗ್‌ ಮಾಡಲಾಗುತ್ತದೆ. ಚೇತನಾ ಅವರು ಮೊದಲ ಪ್ರಯೋಗದಲ್ಲೇ ಯಶಸ್ವಿಯಾಗಿದ್ದಾರೆ. ಅವರು ಬಿಎ (ಮನಃಶಾಸ್ತ್ರ) ಪದವೀಧರೆ. ಹವ್ಯಾಸವಾಗಿ ಬ್ಯೂಟಿಶಿಯನ್‌ ಕಲೆಯನ್ನು ಕಲಿತುಕೊಂಡಿದ್ದಾರೆ.

ಫೇಸ್‌ ಫೈಂಟಿಂಗ್‌ ಮುಖೇನ ಚಿತ್ರ ರಚನೆ
ಉದಯವಾಣಿ ಸುದಿನ ಜತೆ ಮಾತನಾಡಿದ ಅವರು, ಫೇಸ್‌ ಫೈಂಟಿಂಗ್‌ ಮುಖೇನ ಸಿಂಹದ ಚಿತ್ರವನ್ನು ರಚಿಸಬೇಕು ಎಂದು ಅನೇಕ ತಿಂಗಳುಗಳಿಂದ ಯೋಚಿಸುತ್ತಿದ್ದೆ. ಆದರೆ ನವರಾತ್ರಿ ಸಮಯಕ್ಕೆ ಕಾಲ ಕೂಡಿ ಬಂತು. ಶಿಷ್ಯೆ ಶ್ರೇಯಾ ಎಂ. ಭಟ್‌ ಅವರ ಮುಖದಲ್ಲಿ ಈ ಚಿತ್ರ ರಚಿಸಿದ್ದೇನೆ. ಆಕೆಯ ಕೂದಲನ್ನೇ ಸಿಂಹದ ಮುಖದ ಸುತ್ತಲಿನ ಕೂದಲನ್ನಾಗಿ ಪರಿವರ್ತಿಸಿದ್ದೇನೆ. ಆಕೆಯ ಕಣ್ಣುಗಳನ್ನು ಮುಚ್ಚಿ, ಕಣ್ಣಿನ ಹುಬ್ಬುಗಳಿಗೆ ವ್ಯಾಕ್ಸ್‌ ಹಚ್ಚಿ ಅದರ ಮೇಲೆ ಸಿಂಹದ ಕಣ್ಣನ್ನು ಚಿತ್ರಿಸಲಾಗಿದೆ.ಇದಕ್ಕೆ ಐದು ಗಂಟೆ ಕಾಲ ತೆಗೆದುಕೊಂಡೆ. ನಾನು ಅಂದುಕೊಂಡದ್ದಕ್ಕಿಂತ ತುಂಬಾನೆ ಅಂದವಾಗಿ ಈ ಚಿತ್ರ ಮೂಡಿಬಂದಿದೆ ಎನ್ನುತ್ತಾರೆ.

ಹೆಲೋವಿನ್‌ ಡೇಗೆ ವಿಶೇಷ ಮೇಕಪ್‌
ಅಕ್ಟೋಬರ್‌ 31ರಂದು ಅಂತಾರಾಷ್ಟ್ರೀಯ ಹೆಲೋವಿನ್‌ ಡೇ ಆಚರಿಸಲಾಗುತ್ತದೆ. ಈ ದಿನವನ್ನು ಸಮಸ್ತ ಸಂತರ ಪೂರ್ವ ದಿನ ಎಂದು ಕರೆಯಲಾಗುತ್ತದೆ. ಈ ದಿನದ ಕುರಿತು ಸಂದೇಶ ಸಾರುವ ಸಲುವಾಗಿ ನಟಿ ಸ್ವಸ್ತಿಕಾ ಪೂಜಾರಿ ಅವರಿಗೆ ವಿಶೇಷವಾಗಿ ಮೇಕಪ್‌ ಮಾಡಲಾಗಿದೆ. ಚೇತನಾ ಅವರು ಸುಮಾರು ಮೂರು ಗಂಟೆಗಳಲ್ಲಿ ಈ ಮೇಕಪ್‌ ಮಾಡಿದ್ದು, ಹೆಲೋ ಗೋಲ್ಡನ್‌ ಕ್ರಾಪ್‌ ತಲೆಗೆ ಇಡಲಾಗಿದೆ. ಅಲ್ಲದೆ ತಲೆಯ ಮೇಲೆ 12 ಮೇಣದ ಬತ್ತಿ ಹಾಕಲಾಗಿದೆ.

ಟಾಪ್ ನ್ಯೂಸ್

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

1-ullala

Mangaluru; ನೇತ್ರಾವತಿ ಸೇತುವೆ ದುರಸ್ತಿ ಆರಂಭ: ಸಂಚಾರ ಸಲಹೆ ನೀಡಿದ ಪೊಲೀಸರು

1-aaammm

Jammu and Kashmir; ಉಗ್ರವಾದ ಪರಿಸರ ವ್ಯವಸ್ಥೆ ಬಹುತೇಕ ಕೊನೆಗೊಂಡಿದೆ: ಶಾ

1-lok-sabha

BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

11

Surathkal: ಅಡುಗೆ ಅನಿಲ ಸೋರಿಕೆ ಪ್ರಕರಣ; ಸುಧಾರಿಸದ ಗಾಯಾಳುಗಳ ಆರೋಗ್ಯ

9-ullala

Ullala: ಸೇತುವೆಗೆ ತೇಪೆ ಹಚ್ಚುವ ಕಾಮಗಾರಿ; ರಾ. ಹೆದ್ದಾರಿಯಲ್ಲಿ ವಾಹನ ಸಂಚಾರ ವ್ಯತ್ಯಯ

6

Mangaluru: ನಂತೂರು ವೃತ್ತ; ಸಂಚಾರ ಸ್ವಲ್ಪ ನಿರಾಳ

3

Belma: ಕುಸಿತ ಭೀತಿಯಲ್ಲಿರುವ ಮನೆ; ಕಾಂಕ್ರೀಟ್‌ ತಡೆಗೋಡೆಗೆ ಪಿಡಬ್ಲ್ಯುಡಿ ಪ್ರಸ್ತಾವ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

Untitled-1

Kasaragod Crime News: ರಸ್ತೆಯಲ್ಲಿ ಬಿಯರ್‌ ಬಾಟ್ಲಿ ಒಡೆದ ಮೂವರ ಬಂಧನ

byndoor

Belthangady: ಬಸ್‌ ಬೈಕ್‌ ಢಿಕ್ಕಿ, ಸವಾರ ಗಂಭೀರ

5

Malpe: ಮೆಹಂದಿಯಲ್ಲಿ ತಡರಾತ್ರಿವರೆಗೆ ಡಿಜೆ ಬಳಕೆ; ಪ್ರಕರಣ ದಾಖಲು

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.