ಕು. ಗೋ. ಅವರ ತೇಲ್ನೋಟ


Team Udayavani, Nov 3, 2020, 2:23 AM IST

ಕು. ಗೋ. ಅವರ ತೇಲ್ನೋಟ

ಈ ಅಂಕಣ ರಾಜ್ಯೋತ್ಸವ ವಿಶೇಷ. ರಾಜ್ಯದ ಯುವ ಬರಹಗಾರರು ಒಂದು ಕನ್ನಡದ ಕೃತಿ ಕುರಿತು ಬರೆಯುತ್ತಾರೆ. ಇದು ಒಂದು ರೀತಿಯಲ್ಲಿ ಓದುವ ಪಂದ್ಯ.

ಹಿಂದೆಲ್ಲ ಜ್ಞಾನವೃದ್ಧಿಗಾಗಿ ಓದುವ ಹವ್ಯಾಸ ಹೆಚ್ಚಾಗಿದ್ದರೂ ಈಗಿನ ಆಧುನಿಕ ಕಾಲ ಘಟ್ಟದಲ್ಲಿ ಅದು ತುಂಬಾ ಕಡಿಮೆಯಾಗಿದೆ.

ತಂದೆಗೆ ಪುಸ್ತಕಗಳ ಮೇಲಿದ್ದ ಪ್ರೀತಿಯಿಂದಾಗಿ ಮನೆಯಲ್ಲಿ ಪುಟ್ಟ ಗ್ರಂಥಾಲಯವೇ ಸೃಷ್ಟಿಯಾಗಿದೆ. ಅವರ ಪುಸ್ತಕ ಸಂಗ್ರಹ ಲೋಕಕ್ಕೊಮ್ಮೆ ಇಣುಕಿದಾಗ ನನ್ನ ಗಮನ ಸೆಳೆದದ್ದು, ಎಲ್ಲರಿಗೂ ಚಿರಪರಿಚಿತರಾದ ಕು. ಗೋ. ಖ್ಯಾತಿಯ ಹೆರ್ಗ ಗೋಪಾಲ ಭಟ್‌ ಅವರ ತೇಲ್ನೋಟ (ವಿನೋದ, ವ್ಯಂಗ್ಯ ಬರಹಗಳ) ಸಂಕಲನ.

ನಮ್ಮ ಜೀವನದಲ್ಲೇ ಆಗಿರುವ ಘಟನೆಗಳನ್ನು ಹಾಗೂ ಆಧುನಿಕ ಕಷ್ಟಕಾ ರ್ಪಣ್ಯ ಗಳಿಗೆ ಅತ್ಯಂತ ವ್ಯಂಗ್ಯ ಹಾಗೂ ಸರಳವಾಗಿ ಈ ಕೃತಿ ಯಲ್ಲಿ ಕಥೆಯ ರೂಪ ನೀಡಲಾಗಿದೆ. ಇದರಲ್ಲಿ ಕನ್ನಡದ ಪದಗಳನ್ನು ಅತ್ಯಂತ ಸುಂದರವಾಗಿ ಬಳಸಲಾಗಿದೆ. ಪಟ್ಟಿ ಮಾಡುತ್ತಾ ಹೋದರೆ ಆಡು ಭಾಷೆಯ ಹಾಗೂ ಹಳೆಗನ್ನಡದ ಎಷ್ಟೋ ಶಬ್ದಗಳು ಇಲ್ಲಿ ಕಾಣ ಸಿಗುತ್ತವೆ. ಉತ್ತರಕನ್ನಡ ಮತ್ತು ದಕ್ಷಿಣಕನ್ನಡದ ಭಾಷೆಗಳ ಸಮ್ಮಿಶ್ರಣವಿದೆ. ಪ್ರತಿಯೊಂದು ಕಥೆಯ ಆಕ ರ್ಷಕ ಶೀರ್ಷಿಕೆಗಳು ಮತ್ತೂಂದು ವಿಶೇಷ.

ಈ ಕೃತಿಯನ್ನು ಓದಿದಾತ ಸ್ವಲ್ಪ ನಗುವುದು ಅನಿವಾರ್ಯವಾಗುತ್ತದೆ. ಆದರೆ ಬಳಿಕ ಈ ಓದು ನಮ್ಮನ್ನು ಚಿಂತನೆಗೆ ಹಚ್ಚುತ್ತದೆ. ನಕ್ಕು, ಇದುವೇ ಜೀವನ ಎಂಬ ಸಕಾರಾತ್ಮಕ ನಿಲುವಿಗೆ ಬರಬೇ ಕಾಗುತ್ತದೆ. ಆಯಾ ಭಾಗದ ಜನರ ಜೀವನ, ಅವ ರಲ್ಲಿ ನಡೆಯುವ ಮಾತು ಕತೆ, ಅದರಲ್ಲೇ ಹುಟ್ಟಿ ಕೊಳ್ಳುವ ವಿಶಿಷ್ಟ ಸಂಗತಿಗಳು ಸೆಳೆಯುತ್ತವೆ.

ಈ ಸಂಕಲನದಲ್ಲಿ ನನಗೆ ಪ್ರಿಯವಾದದ್ದು “ಭಯಂಕರ ನಟ ಸೋಮಯ್ಯ’. ಇದರಲ್ಲಿ ಆ ವ್ಯಕ್ತಿತ್ವವನ್ನು ವ್ಯಂಗ್ಯವಾಗಿ ನೋಡಿದರೂ, ಮನುಷ್ಯನ ಜೀವನದ ವಾಸ್ತವ ಸ್ಥಿತಿಯಾವಾಗಾದರೂ ಬದಲಾ ಗಬಹುದು. ತುತ್ಛವಾಗಿ ನೋಡದೇ ಅಲ್ಲಿಯೂ ಧನಾತ್ಮಕವಾದ ವಿಷ ಯಗಳು ಅಡಗಿವೆ ಎನ್ನುವುದು ವ್ಯಕ್ತವಾಗಿದೆ.

ಅದರಲ್ಲಿ ಕೂಪ ಮಂಡೂಕ, ಟೊಮ್ಯಾ ಟೋ ವ್ರತ, ಕಿಸೆಯಲ್ಲಿ ತರಕಾರಿ!, ಭಯಕೃದ್‌, ದನ ತಿಂದ ಬೆಕ್ಕು, ಹಲೋ ಹಲೋ..! ಮಾತುಕತೆ, ಫೊನೋ ರಂಜನೆ , ಎಲ್ಲಿ? ಎಲ್ಲಿ? ಹೀಗೆ ಹಲವಾರು ಪುಟ್ಟ ಪುಟ್ಟ ಸನ್ನಿವೇಶಗಳು ನಮಗೆ ವಿನೋದವನ್ನು ಉಂಟು ಮಾಡುತ್ತವೆ.

ಈ ಕಥಾ ಸಂಕಲನವನ್ನು ಓದಿದಾಗ ನಮ್ಮ ಬದುಕಿನಲ್ಲಿಯೇ ಸಂಭವಿಸಿದ ಕೆಲವು ಘಟನೆಗಳು ಕಣ್ಣೆದುರು ನಿಲ್ಲುತ್ತವೆ. ಜತೆಗೆ ಆಕ್ರೋಶ ಗಳ ವಿಚಾರ ವನ್ನು ವ್ಯಂಗ್ಯ ಹಾಗೂ ಹಾಸ್ಯದ ರೂಪ ದಲ್ಲಿ ಮನಸ್ಪರ್ಶಿಯಾಗಿ ನಿರೂಪಿ ಸಲಾಗಿದೆ. ಸರಳವಾಗಿ ನಿರೂಪಿಸಲ್ಪ ಟ್ಟಿರುವ ಈ ಪುಸ್ತಕವನ್ನು ಓದುತ್ತಾ ಹೋದಂತೆ ಸಾಮಾಜಿಕ ಕಳಕಳಿ ಹಾಗೂ ಸಮಸ್ಯೆ ಗಳು ವ್ಯಂಗ್ಯದ ರೂಪದಲ್ಲಿ ಕಣ್ಣೆದುರು ನಿಲ್ಲುತ್ತವೆ.

ಜನರ ನಡುವಿನ ಫೋನ್‌ ಕರೆಗಳು, ಮಾತುಗಳು, ವಾಸ್ತು, ಹವ್ಯಾಸಗಳು ಎಲ್ಲವನ್ನೂ ಸುಲಲಿತವಾಗಿ ಲೇಖಕರು ಅಕ್ಷರ ರೂಪಕ್ಕಿಳಿಸಿದ್ದಾರೆ.

ಗಂಭೀರ ವಿಷಯಗಳನ್ನು ಓದಲು ಆಸಕ್ತರಲ್ಲ ದವರನ್ನೂ ಈ ಕೃತಿಯು ತನ್ನ ಲಘು ಧಾಟಿಯಿಂದ ಸೆಳೆಯುವಲ್ಲಿ ಯಶಸ್ವಿ ಯಾಗುತ್ತದೆ. ಇದರಿಂದ ಸಿಗುವ ಜೀವನ ಪಾಠವು ಎಲ್ಲರಿಗೂ ಅನುಕೂ ಲವಾಗಲಿದೆ ಹಾಗೂ ಮನಸ್ಸು ಹಗುರ ಮಾಡಲು ಪೂರಕವಾಗುತ್ತದೆ.

ಯಶಸ್ವಿ ದೇವಾಡಿಗ‌, ಶಿರಸಿ

ಟಾಪ್ ನ್ಯೂಸ್

IPL Retentions: ಐಪಿಎಲ್‌ ನಿಯಮಗಳಲ್ಲಿ ಭಾರಿ ಬದಲಾವಣೆ; ವಿದೇಶಿ ಆಟಗಾರರಿಗೆ ಮೂಗುದಾರ

IPL Retentions: ಐಪಿಎಲ್‌ ನಿಯಮಗಳಲ್ಲಿ ಭಾರಿ ಬದಲಾವಣೆ; ವಿದೇಶಿ ಆಟಗಾರರಿಗೆ ಮೂಗುದಾರ

CM-Mysore1

MUDA Scam: ಸಿಎಂ ಸಿದ್ದರಾಮಯ್ಯ ವಿರುದ್ಧದ ಪ್ರಕರಣ ತನಿಖೆಗೆ ಲೋಕಾಯುಕ್ತದಿಂದ 4 ತಂಡ ರಚನೆ

Kota-poojary

Rescue: ಉತ್ತರ ಭಾರತದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಉಡುಪಿಯ ತಂಡಕ್ಕೆ ಸಂಸದ ಕೋಟ ಸಹಾಯ

SSLLC

leak: ಎಸೆಸೆಲ್ಸಿಪರೀಕ್ಷೆ ದಿನ ಬೆಳಗ್ಗೆ 6ಕ್ಕೆ ಶಿಕ್ಷಕರಿಗೆ ಸಿಗಲಿದೆ ಪ್ರಶ್ನೆಪತ್ರಿಕೆ

1-horoscope

Daily Horoscope: ಅನವಶ್ಯ ಮಾತುಗಳಿಂದ ದೂರವಿರಿ, ಉದ್ಯೋಗಸ್ಥರ ಸಮಸ್ಯೆ ನಿವಾರಣೆ

Text-Bokk

KSOU: ಪರೀಕ್ಷೆ ಸಮೀಪಿಸುತ್ತಿದ್ದರೂ ಮುದ್ರಿತ ಪಠ್ಯ ಸಿಗಲಿಲ್ಲ

1-hejb

Israel ಸರ್ಜಿಕಲ್‌ ಸ್ಟ್ರೈಕ್‌: ಹೆಜ್ಬುಲ್ಲಾ ಮುಖ್ಯಸ್ಥನ ಅಂತ್ಯಕ್ಕೆ 80 ಟನ್‌ ಬಾಂಬ್‌!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

IPL Retentions: ಐಪಿಎಲ್‌ ನಿಯಮಗಳಲ್ಲಿ ಭಾರಿ ಬದಲಾವಣೆ; ವಿದೇಶಿ ಆಟಗಾರರಿಗೆ ಮೂಗುದಾರ

IPL Retentions: ಐಪಿಎಲ್‌ ನಿಯಮಗಳಲ್ಲಿ ಭಾರಿ ಬದಲಾವಣೆ; ವಿದೇಶಿ ಆಟಗಾರರಿಗೆ ಮೂಗುದಾರ

CM-Mysore1

MUDA Scam: ಸಿಎಂ ಸಿದ್ದರಾಮಯ್ಯ ವಿರುದ್ಧದ ಪ್ರಕರಣ ತನಿಖೆಗೆ ಲೋಕಾಯುಕ್ತದಿಂದ 4 ತಂಡ ರಚನೆ

Kota-poojary

Rescue: ಉತ್ತರ ಭಾರತದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಉಡುಪಿಯ ತಂಡಕ್ಕೆ ಸಂಸದ ಕೋಟ ಸಹಾಯ

SSLLC

leak: ಎಸೆಸೆಲ್ಸಿಪರೀಕ್ಷೆ ದಿನ ಬೆಳಗ್ಗೆ 6ಕ್ಕೆ ಶಿಕ್ಷಕರಿಗೆ ಸಿಗಲಿದೆ ಪ್ರಶ್ನೆಪತ್ರಿಕೆ

1-horoscope

Daily Horoscope: ಅನವಶ್ಯ ಮಾತುಗಳಿಂದ ದೂರವಿರಿ, ಉದ್ಯೋಗಸ್ಥರ ಸಮಸ್ಯೆ ನಿವಾರಣೆ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

IPL Retentions: ಐಪಿಎಲ್‌ ನಿಯಮಗಳಲ್ಲಿ ಭಾರಿ ಬದಲಾವಣೆ; ವಿದೇಶಿ ಆಟಗಾರರಿಗೆ ಮೂಗುದಾರ

IPL Retentions: ಐಪಿಎಲ್‌ ನಿಯಮಗಳಲ್ಲಿ ಭಾರಿ ಬದಲಾವಣೆ; ವಿದೇಶಿ ಆಟಗಾರರಿಗೆ ಮೂಗುದಾರ

CM-Mysore1

MUDA Scam: ಸಿಎಂ ಸಿದ್ದರಾಮಯ್ಯ ವಿರುದ್ಧದ ಪ್ರಕರಣ ತನಿಖೆಗೆ ಲೋಕಾಯುಕ್ತದಿಂದ 4 ತಂಡ ರಚನೆ

Kota-poojary

Rescue: ಉತ್ತರ ಭಾರತದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಉಡುಪಿಯ ತಂಡಕ್ಕೆ ಸಂಸದ ಕೋಟ ಸಹಾಯ

SSLLC

leak: ಎಸೆಸೆಲ್ಸಿಪರೀಕ್ಷೆ ದಿನ ಬೆಳಗ್ಗೆ 6ಕ್ಕೆ ಶಿಕ್ಷಕರಿಗೆ ಸಿಗಲಿದೆ ಪ್ರಶ್ನೆಪತ್ರಿಕೆ

1-horoscope

Daily Horoscope: ಅನವಶ್ಯ ಮಾತುಗಳಿಂದ ದೂರವಿರಿ, ಉದ್ಯೋಗಸ್ಥರ ಸಮಸ್ಯೆ ನಿವಾರಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.