![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Nov 4, 2020, 4:18 PM IST
ರಾಯಚೂರು: ಸಿರವಾರ ತಾಲೂಕಿನ ಜಾಲಾಪೂರ ಹೊರವಲಯದಲ್ಲಿ ಕ್ರೂಸರ್ – ಪಿಕ್ ಅಪ್ ನಡುವೆ ಡಿಕ್ಕಿ ಸಂಭವಿಸಿ ಕ್ರೂಸರ್ ಚಾಲಕ ಸ್ಥಳದಲ್ಲಿ ಸಾವನ್ನಪ್ಪಿದ ಘಟನೆ ಬುಧವಾರ ಜರುಗಿದೆ.
ಕ್ರೂಸರ್ ನಲ್ಲಿದ್ದ ಇಬ್ಬರಲ್ಲಿ ಚಾಲಕ ನಾಗರಾಜ (28) ಸ್ಥಳದಲ್ಲಿ ಮೃತಪಟ್ಟಿದ್ದಾನೆ. ಮತ್ತೊಬ್ಬನಿಗೆ ಗಾಯಗಳಾಗಿದ್ದು ಆತನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಪಿಕ್ಅಪ್ ವಾಹನದ ಚಾಲಕನಿಗೂ ಗಾಯಗಳಾಗಿದ್ದು ಸಿರವಾರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕಳುಹಿಸಲಾಗಿದೆ.
ಪಿಕ್ ಅಪ್ ಗೆ ಡಿಕ್ಕಿ ದೊಡೆದ ಕ್ರೂಸರ್ ರಸ್ತೆ ಬದಿಯಲ್ಲಿದ್ದ ಮರಕ್ಕೆ ಗುದ್ದಿ ತೊಡಿಗೆ ಉರುಳಿದೆ, ಸಿರವಾರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
You seem to have an Ad Blocker on.
To continue reading, please turn it off or whitelist Udayavani.