![kambala2](https://www.udayavani.com/wp-content/uploads/2025/02/kambala2-1-415x249.jpg)
![kambala2](https://www.udayavani.com/wp-content/uploads/2025/02/kambala2-1-415x249.jpg)
Team Udayavani, Nov 12, 2020, 12:52 PM IST
ಬೆಂಗಳೂರು: ಮಹಿಳೆಯರ ಮೇಲಿನ ದೌರ್ಜನ್ಯ ಮಾಡುವುದು ಅಪರಾಧ. ಒಬ್ಬ ಶಾಸಕನಾಗಿ ಸಿದ್ದು ಸವದಿ ಮಹಿಳೆಯರ ಮೇಲೆ ದೌರ್ಜನ್ಯ ಮಾಡಿದ್ದು ಸರಿಯೇ? ಇದೇನಾ ಬಿಜೆಪಿಯವರ ಸಂಸ್ಕೃತಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು ಮಹಾಲಿಂಗಪುರ ಪುರಸಭೆ ಚುನಾವಣೆ ಸಂದರ್ಭ ಶಾಸಕ ಸಿದ್ದು ಸವದಿ ವರ್ತನೆಯನ್ನು ಖಂಡಿಸಿದರು. ನೀವೆಲ್ಲರೂ ವಿಡಿಯೋ ಕ್ಲಿಪ್ಪಿಂಗ್ಸ್ ನೋಡಿದ್ದೀರಿ. ಹೆಣ್ಣುಮಕ್ಕಳ ಮೇಲೆ ದೌರ್ಜನ್ಯ ಮಾಡಿದ್ದಾರೆ. ಹೆದರಿಸಿ ಬೆದರಿಸಿ ಮತ ಹಾಕಿಸಿಕೊಳ್ಳುತ್ತಾರೆ. ನಾವು ಸುಸಂಸ್ಕೃತರು ಎಂದು ಬಿಜೆಪಿಯವರು ಹೇಳುತ್ತಾರೆ. ಇದೇನಾ ಬಿಜೆಪಿಯವರ ಸಂಸ್ಕೃತಿ? ನಾವು ಇದನ್ನ ತೀರ್ವವಾಗಿ ಖಂಡಿಸುತ್ತೇನೆ. ನಮ್ಮ ಪಕ್ಷ ಇದರ ವಿರುದ್ಧ ಉಗ್ರ ಹೋರಾಟ ಮಾಡಲಿದೆ ಎಂದರು.
ಸಂಪತ್ ರಾಜ್ ತಲೆ ಮರೆಸಿಕೊಂಡ ವಿಚಾರದ ಬಗ್ಗೆ ಮಾತನಾಡಿದ ಅವರು, ಸಂಪತ್ ರಾಜ್ ಬಚ್ಚಿಟ್ಟುಕೊಂಡಿದ್ದಾರೆ ಎನ್ನುತ್ತಾರೆ. ಪೊಲೀಸರು ಸರ್ಕಾರ ಇರುವುದು ಯಾಕೆ? ಪೊಲೀಸರು ಎಲ್ಲಿದ್ದಾರೆ? ಯಾವುದೋ ನೆಪ ಹೇಳಿ ತಪ್ಪಿಸಿಕೊಳ್ಳುವುದಲ್ಲ, ಎಲ್ಲಿದ್ದಾರೆ ಅಂತ ಕಂಡುಹಿಡಿಯಬೇಕು ಎಂದರು.
ಇದನ್ನೂ ಓದಿ:ರಮೇಶ್ ಜಾರಕಿಹೊಳಿ ನಿವಾಸ ಈಗ ಬಿಜೆಪಿಯ ಹೊಸ ಪವರ್ ಸೆಂಟರ್
ಅವರನ್ನು ಪ್ರತಿಪಕ್ಷ ನಾಯಕರು ಪತ್ತೆ ಹಚ್ಚಲು ಆಗುತ್ತಾ? ಕಾಂಗ್ರೆಸ್ ನವರು ಪತ್ತೆ ಮಾಡಬೇಕಾ? ಪೊಲೀಸರು ಅವರನ್ನು ಪತ್ತೆ ಹಚ್ಚಲಿ, ಅವರಿಂದ ಮಾಡಲು ಆಗೋದಿಲ್ವಾ ಎಂದು ಖಾರವಾಗಿ ಪ್ರಶ್ನಿಸಿದರು.
ಉಪಚುನಾವಣೆ ಸೋಲಿನ ವಿಚಾರದ ಬಗ್ಗೆ ಮಾತನಾಡಿದ ಅವರು, ಹಿಂದೆ ನಾವು ಉಪಚುನಾವಣೆ ಗೆದ್ದಿದ್ದೇವಲ್ಲ, ಆಗ ಬಿಜೆಪಿ ಮುಳುಗಿ ಹೋಗಿತ್ತಾ? ಯಾವಾಗಲು ಅಧಿಕಾರ ಇದ್ದ ಪಕ್ಷ ಗೆಲ್ಲುತ್ತದೆ ಎಂದರು.
You seem to have an Ad Blocker on.
To continue reading, please turn it off or whitelist Udayavani.