ಕಾಲೇಜುಗಳಲ್ಲಿ ಏರಿಕೆಯಾದ ವಿದ್ಯಾರ್ಥಿಗಳ ಹಾಜರಾತಿ
Team Udayavani, Nov 19, 2020, 10:49 PM IST
ಸಾಂದರ್ಭಿಕ ಚಿತ್ರ
ಮಂಗಳೂರು/ಉಡುಪಿ: ಅಂತಿಮ ಪದವಿ ಮತ್ತು ಅಂತಿಮ ಸ್ನಾತಕೋತ್ತರ ಪದವಿ ತರಗತಿಗಳಿಗೆ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ನಿಧಾನವಾಗಿ ಏರಿಕೆ ಕಾಣುತ್ತಿದೆ.
ಸರಕಾರಿ ಹಾಗೂ ಖಾಸಗಿ 76 ಕಾಲೇಜುಗಳಲ್ಲಿರುವ ಅಂತಿಮ ಪದವಿಗೆ 1,243 ವಿದ್ಯಾರ್ಥಿಗಳು ಹಾಜರಾಗಿದ್ದಾರೆ. ಮುಂದಿನ ವಾರದ ಆರಂಭದಿಂದ ಪೂರ್ಣ ಪ್ರಮಾಣದಲ್ಲಿ ತರಗತಿ ಆರಂಭವಾಗುವ ನಿರೀಕ್ಷೆ ಇದ್ದು, ವಿದ್ಯಾರ್ಥಿಗಳ ಸಂಖ್ಯೆಯಲ್ಲೂ ಏರಿಕೆ ಕಾಣಬಹುದು.
ಗುರುವಾರ ಸರಕಾರಿ ಕಾಲೇಜುಗಳಲ್ಲಿ 450 ವಿದ್ಯಾರ್ಥಿಗಳು, ಖಾಸಗಿಯಲ್ಲಿ 793 ವಿದ್ಯಾರ್ಥಿಗಳು ಆಫ್ಲೈನ್ನಲ್ಲಿ ಹಾಜರಾಗಿದ್ದಾರೆ. ಕಳೆದ ವಾರ ಕೊರೊನಾ ಪರೀಕ್ಷೆ ಮಾಡಿದ ಹೆಚ್ಚಿನ ವಿದ್ಯಾರ್ಥಿಗಳ ಕೈಗೆ ಪ್ರಮಾಣಪತ್ರ ಲಭಿಸಿದ್ದು, ಅವರು ಮುಂದಿನ ವಾರದಿಂದ ಕಾಲೇಜುಗಳಿಗೆ ಆಗಮಿಸುವ ನಿರೀಕ್ಷೆ ಇದೆ. ಗುರುವಾರದಂದು ಕಾಲೇಜು ದಿನವಿಡೀ ನಡೆದರೂ ನೋಟ್ಸ್ಗಳನ್ನು ಅಪ್ಡೇಟ್ ಮಾಡುವುದು, ಪ್ರಾಯೋಗಿಕ ತರಗತಿ, ಈ ಹಿಂದೆ ಆನ್ಲೈನ್ ಪಠ್ಯದಲ್ಲಿ ಅರ್ಥವಾಗದ ವಿಷಯಗಳನ್ನು ಮತ್ತೆ ಬೋಧಿಸುವುದು ಈ ಹೀಗೆ ವಿದ್ಯಾರ್ಥಿಗಳನ್ನು ಮತ್ತೆ ಅಫ್ಲೈನ್ ತರಗತಿಗೆ ಒಗ್ಗಿಸಿಕೊಳ್ಳಲಾಗುತ್ತಿದೆ. ಕೆಲವು ಕಾಲೇಜುಗಳು ಶುಕ್ರವಾರ ಮತ್ತು ಶನಿವಾರ ರಜೆ ಘೋಷಿಸಿವೆ.
ಶೇ. 6ರಷ್ಟು ಹೆಚ್ಚಳ
ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ ಅಪ್ಪಾಜಿ ಗೌಡ ಅವರು ಉದಯವಾಣಿಗೆ ಪ್ರತಿಕ್ರಿಯಿಸಿ, ಗುರುವಾರದಂದು ಸರಕಾರಿ ಕಾಲೇಜಿನಲ್ಲಿ ದ.ಕ.ದಲ್ಲಿ 215, ಉಡುಪಿಯಲ್ಲಿ 232 ಹಾಗೂ ಕೊಡಗಿನಲ್ಲಿ 3 ವಿದ್ಯಾರ್ಥಿಗಳು ಕಾಲೇಜಿಗೆ ಹಾಜರಾಗಿದ್ದಾರೆ. ಬುಧವಾರಕ್ಕೆ ಹೋಲಿಕೆ ಮಾಡಿದರೆ ಗುರುವಾರದಂದು ಶೇ. 6ರಷ್ಟು ಪ್ರಗತಿ ಕಂಡಿದೆ. ಸೋಮವಾರದಿಂದ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಮತ್ತಷ್ಟು ಏರಿಕೆ ಕಾಣುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.
ಗಡಿನಾಡ ವಿದ್ಯಾರ್ಥಿಗಳ ಸಮಸ್ಯೆ
ಮಂಗಳೂರಿನಲ್ಲಿರುವ ಕಾಲೇಜುಗಳಲ್ಲಿ ಕಾಸರಗೋಡು ಕಡೆಯಿಂದಲೂ ಹೆಚ್ಚಿನ ವಿದ್ಯಾರ್ಥಿಗಳು ಆಗಮಿಸುತ್ತಾರೆ. ಆದರೆ ರೈಲು ಸಂಚಾರ ಆರಂಭವಾಗದ ಕಾರಣ ಕಾಸರಗೋಡಿನ ವಿದ್ಯಾರ್ಥಿಗಳು ಮಂಗಳೂರು ಕಡೆಯ ಕಾಲೇಜುಗಳಿಗೆ ಬರಲು ಅನಾನುಕೂಲವಾಗಿದೆ. ಬಸ್ ಸಂಚಾರ ಆರಂಭವಾದರೂ ಟಿಕೆಟ್ ದರ ಹೆಚ್ಚಳ ಮಾಡಲಾಗಿದೆ. ಇದರಿಂದಾಗಿ ಕೆಲವು ವಿದ್ಯಾರ್ಥಿಗಳು ಹಿಂದೇಟು ಹಾಕುತ್ತಿದ್ದಾರೆ.
ಉಡುಪಿಯಲ್ಲಿ ವಿದ್ಯಾರ್ಥಿಗಳ ಪರೀಕ್ಷಾ ವರದಿ ಇನ್ನೂ ಬಂದಿಲ್ಲದ ಕಾರಣ ತರಗತಿಗೆ ಹೆಚ್ಚುವರಿಯಾಗಿ ಬರಲಿಲ್ಲ. ಸಿಬಂದಿಯ ವರದಿಗಳೂ ಕೆಲವೆಡೆ ಬಂದಿಲ್ಲ. ಇನ್ನೂ ಒಂದೆರಡು ದಿನಗಳ ಬಳಿಕ ತರಗತಿ ಆರಂಭಗೊಳ್ಳಬಹುದು ಎಂಬ ಆಶಾವಾದ ಪ್ರಾಂಶುಪಾಲರಿಗೆ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kaup LaxmiJanardhana Temple: ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಮನೋಹರ್ ಶೆಟ್ಟಿ ಆಯ್ಕೆ
Hosapete: ಜ್ವರದಿಂದ ಮಗು ಸಾವು; ವೈದ್ಯರ ನಿರ್ಲಕ್ಷ್ಯ ಕಾರಣವೆಂದು ಪಾಲಕರ ಆಕ್ರೋಶ
BJP: ವಿಜಯೇಂದ್ರ ನಾಯಕತ್ವವನ್ನು ನಾನು ಒಪ್ಪುವುದಿಲ್ಲ: ರಮೇಶ ಜಾರಕಿಹೊಳಿ
Kerala: ವಿಡಿಯೋ ಅಪ್ಲೋಡ್ ಮಾಡಿದ ಕೆಲ ಗಂಟೆಯಲ್ಲೇ ಶವವಾಗಿ ಪತ್ತೆಯಾದ ಖ್ಯಾತ ವ್ಲಾಗರ್ ದಂಪತಿ
Explainer: ವಯನಾಡ್ ಲೋಕಸಮರ-ಪ್ರಿಯಾಂಕಾ ವಿರುದ್ಧ ಮಾಜಿ ಪತ್ರಕರ್ತ, ಕೌನ್ಸಿಲರ್ ಅಖಾಡಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.