ತೇಲುವ ವಿದ್ಯುತ್‌ ಸ್ಥಾ ವರ ನಿರ್ಮಾಣಕ್ಕೆ ಮುಂದಾದ ಬಿಎಂಸಿ


Team Udayavani, Dec 3, 2020, 8:37 PM IST

ತೇಲುವ ವಿದ್ಯುತ್‌ ಸ್ಥಾ ವರ ನಿರ್ಮಾಣಕ್ಕೆ ಮುಂದಾದ ಬಿಎಂಸಿ

ಮುಂಬಯಿ, ಡಿ. 2: ಮಧ್ಯ ವೈತರಣಾ ಅಣೆಕಟ್ಟಿನ ಹಿನ್ನೀರಿನಲ್ಲಿ 80 ಮೆಗಾವ್ಯಾಟ್‌ ಸಾಮರ್ಥ್ಯದ ತೇಲುವ ಸೌರ ವಿದ್ಯುತ್‌ ಸ್ಥಾವರವನ್ನು ನಿರ್ಮಿಸಲು ಮುಂಬಯಿ ಮಹಾನಗರ ಪಾಲಿಕೆ ಮುಂದಾಗಿದೆ.

ಈ ತೇಲುವ ಸೌರ ವಿದ್ಯುತ್‌ ಸ್ಥಾವರವು ರಾಷ್ಟ್ರೀಯ ಇಂಧನ ಭದ್ರತಾ ಕಾರ್ಯಕ್ರಮದಡಿ ಅಣೆಕಟ್ಟಿನ ಮೇಲೆ ಹೈಬ್ರಿಡ್‌ ಇಂಧನ ಸೌಲಭ್ಯಗಳ ಅಭಿವೃದ್ಧಿಯ ಭಾಗವಾಗಲಿದೆ. ಎಂಟು ವರ್ಷಗಳ ಹಿಂದೆ ಬಿಎಂಸಿ ಮಧ್ಯ ವೈತರಣಾ ಅಣೆಕಟ್ಟಿನ ಮೇಲೆ ಜಲವಿದ್ಯುತ್‌ ಸ್ಥಾವರವನ್ನು ನಿರ್ಮಿಸಲು ಪ್ರಸ್ತಾವಿಸಿತ್ತು. ಬಳಿಕ ಈ ವರ್ಷ ಮತ್ತೂಮ್ಮೆ ಬಿಎಂಸಿ ತನ್ನ ಬಜೆಟ್‌ನಲ್ಲಿ ಇದನ್ನು ಉಲ್ಲೇಖೀಸಿದ್ದು, ತೇಲುವ ಸೌರ ವಿದ್ಯುತ್‌ ಸ್ಥಾವರವನ್ನು ನಿರ್ಮಿಸಲು ನಿರ್ಧರಿಸಿದೆ.

ಸಂಯೋಜಿತ ಟೆಂಡರ್‌ಗಳ ಆಹ್ವಾನ :

ಚರ್ಚೆಯ ಸಮಯದಲ್ಲಿ ಜಲ ಯೋಜನೆ ನಿಗಮವು ನವೀಕರಿಸಬಹುದಾದ ಇಂಧನ ಮೂಲಗಳತ್ತ ಗಮನ ಹರಿಸಬೇಕು ಎಂದು ತಿಳಿಸಲಾಗಿತ್ತು. ಇದರ ಬಳಿಕ ನೀರು ಸರಬರಾಜು ಮಾಡುವ ಸರೋವರಗಳಲ್ಲಿ ತೇಲುವ ಸೌರ ಫಲಕಗಳನ್ನು ಸ್ಥಾಪಿಸುವಂತಹ ಆಯ್ಕೆಗಳನ್ನು ಅನ್ವೇಷಿಸಲು ಪ್ರಾರಂಭಿಸಿದ್ದೇವೆ. ಕಾರ್ಯಸಾಧ್ಯತೆಯನ್ನು ಪರಿಶೀಲಿಸಲಾಗಿದ್ದು, ಮಧ್ಯ ವೈತರಣಾ ಅಣೆಕಟ್ಟಿನಲ್ಲಿ ಈಗಾಗಲೇ ಜಲ ವಿದ್ಯುತ್‌ ಯೋಜನೆಯನ್ನು ಸ್ಥಾಪಿಸುತ್ತಿರುವುದರಿಂದ ತೇಲುವ ಸೌರ ಫಲಕಗಳನ್ನು ಅಲ್ಲಿ ಸ್ಥಾಪಿಸಬಹುದು ಎಂದು ಕಂಡುಬಂದಿದೆ. ಇದರ ಬಳಿಕ ಎರಡೂ ವಿದ್ಯುತ್‌ ಸ್ಥಾವರಗಳಿಗೆ ಸಂಯೋಜಿತ ಟೆಂಡರ್‌ ಆಹ್ವಾನಿಸಲಾಗಿದೆ ಎಂದು ಡಬ್ಲ್ಯುಎಸ್‌ಪಿ ಇಲಾಖೆಯ ಹಿರಿಯ ಅಧಿಕಾರಿ ತಿಳಿಸಿದ್ದಾರೆ.

80 ಮೆಗಾವ್ಯಾಟ್‌ ವಿದ್ಯುತ್‌ ಸಾಮರ್ಥ್ಯ :

ದೀರ್ಘ‌ಕಾಲ ಇರುವ ಜಲವಿದ್ಯುತ್‌ ಸ್ಥಾವರವು 20 ಮೆಗಾವ್ಯಾಟ್‌ ಸಾಮರ್ಥ್ಯ ಹೊಂದಿದ್ದರೆ, ತೇಲುವ ಸೌರ ವಿದ್ಯುತ್‌ ಸ್ಥಾವರವು 80 ಮೆಗಾವ್ಯಾಟ್‌ ವಿದ್ಯುತ್‌ ಅನ್ನು ಉತ್ಪಾದಿಸಬಹುದು. ಯೋಜನೆ ಪೂರ್ಣಗೊಳ್ಳಲು 31 ತಿಂಗಳು ತೆಗೆದುಕೊಳ್ಳುತ್ತದೆ. ಒಟ್ಟು 100 ಮೆಗಾವ್ಯಾಟ್‌ಗಳಲ್ಲಿ ದ್ವೀಪ ನಗರ ಮತ್ತು ಅದರ ಸ್ವಂತ ಕಚೇರಿಗಳಲ್ಲಿ ಬೆಸ್ಟ್‌ ವಿದ್ಯುತ್‌ ಸರಬರಾಜನ್ನು  ಹೆಚ್ಚಿಸಲು ಯೋಜಿಸಿದೆ.

25 ವರ್ಷಗಳ ನಿರ್ವಹಣೆಯ ಜವಾಬ್ದಾರಿ :

ಯೋಜನೆಗಾಗಿ ಅಂತಿಮಗೊಳಿಸಿದ ಏಜೆನ್ಸಿ 25 ವರ್ಷಗಳ ಕಾರ್ಯಾಚರಣೆ ಮತ್ತು ನಿರ್ವ ಹಣೆಯ ಜವಾಬ್ದಾರಿಯನ್ನು ಹೊಂದಿರುತ್ತದೆ. ಪುರಸಭೆ ಹೈಬ್ರಿಡ್‌ ವಿದ್ಯುತ್‌ ಯೋಜನೆಯನ್ನು ಕಾರ್ಯಗತ ಗೊಳಿ ಸು ತ್ತಿರು ವುದು ಇದೇ ಮೊದಲು. ಜಗತ್ತು ನವೀಕರಿ ಸಬಹು ದಾದ ಶಕ್ತಿಯತ್ತ ಸಾಗುತ್ತಿದ್ದು, ಸೌರ ವಿದ್ಯುತ್‌ ಸ್ಥಾವರ ವನ್ನು ಸ್ಥಾಪಿಸುವ ಮೂಲಕ ಬಿಎಂಸಿ ಈಗಾಗಲೇ ಭಾಂಡೂಪ್‌ ವಾಟರ್‌ ಕಾಂಪ್ಲೆಕ್ಸ್‌ನಲ್ಲಿ ಶುದ್ಧ ಶಕ್ತಿಯನ್ನು ಬಳಸಲಾರಂಭಿಸಿದೆ. ಯೋಜನೆಗೆ ಗುತ್ತಿಗೆದಾರರನ್ನು ನೇಮಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದೆ ಎಂದು ಡಬ್ಲ್ಯುಎಸ್‌ಪಿ ಇಲಾಖೆಯ ಹಿರಿಯ ಅಧಿಕಾರಿ ಹೇಳಿ¨ªಾರೆ.

ಪ್ರತೀದಿನ 455 ಮಿಲಿಯನ್‌ ಲೀಟರ್‌ ನೀರು ಪೂರೈಕೆ :

ಕಳೆದ ವರ್ಷ ವಾರ್ಧಾ, ಬೆಬಾಲಾ, ಖಡಕ್ಪುರ ಮತ್ತು ಪೆಂಟಕ್ಲಿ ಅಣೆಕಟ್ಟುಗಳ ಹಿನ್ನೀರಿನಲ್ಲಿ ತೇಲುವ ಸೌರ ಫಲಕಗಳನ್ನು ಸ್ಥಾಪಿಸಲು ರಾಜ್ಯ ಸರಕಾರ ಯೋಜಿಸಿತ್ತು. ಮಧ್ಯ ವೈತರಣಾ ಅಣೆಕಟ್ಟಿನ ನಿರ್ಮಾಣ 2012ರಲ್ಲಿ ಪೂರ್ಣಗೊಂಡಿದೆ. ಅಣೆಕಟ್ಟಿನ ಎತ್ತರ 102.4 ಮೀ. ಇದ್ದು, ಈ ಅಣೆಕಟ್ಟಿನಿಂದ ಮುಂಬಯಿಗೆ ಪ್ರತೀದಿನ 455 ಮಿಲಿಯನ್‌ ಲೀಟರ್‌ ನೀರು ಸರಬರಾಜಾಗುತ್ತಿದೆ. ಬಿಎಂಸಿ ಮೊದಲಿನಿಂದಲೂ ಜಲ ಯೋಜನೆ ಬಗ್ಗೆ ಉತ್ಸುಕವಾಗಿದ್ದರೂ ರಾಜ್ಯವು ಅನುಮತಿ ನೀಡಲು ನಿರಾಕರಿಸಿತ್ತು. 2017ರಲ್ಲಿ ಬಿಎಂಸಿ ಯೋಜನೆಯ ಕುರಿತು ವರದಿ ತಯಾರಿಸಲು ನೇಮಕಗೊಂಡ ಸಲಹೆಗಾರರ ಒಪ್ಪಂದವನ್ನು ರದ್ದುಗೊಳಿಸಿತು. ಕಳೆದ ವರ್ಷ ಮಹಾ ವಿಕಾಸ್‌ ಅಘಾಡಿ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಈ ಬಗ್ಗೆ ಮತ್ತೆ ಚರ್ಚೆ ಪ್ರಾರಂಭವಾಯಿತು. 2019ರ ಡಿಸೆಂಬರ್‌ನಲ್ಲಿ ಅಣೆಕಟ್ಟಿನಲ್ಲಿ ವಿದ್ಯುತ್‌ ಉತ್ಪಾದನೆ ಮಾಡುವ ಬಿಎಂಸಿ ಯೋಜನೆಯನ್ನು ಸಿಎಂ ಠಾಕ್ರೆ ಅನುಮೋದಿಸಿದರು.

ಟಾಪ್ ನ್ಯೂಸ್

Traffic-UPI

Mangaluru: ಇನ್ನು ಯುಪಿಐ ಮೂಲಕವೂ ಟ್ರಾಫಿಕ್‌ ದಂಡ ಪಾವತಿ

Sri Krishnadevaraya ವಿ.ವಿ.ಗೆ ಮಂಗಳಮುಖಿ ಅತಿಥಿ ಉಪನ್ಯಾಸಕಿ; ರಾಜ್ಯದಲ್ಲೇ ಮೊದಲು

Sri Krishnadevaraya ವಿ.ವಿ.ಗೆ ಮಂಗಳಮುಖಿ ಅತಿಥಿ ಉಪನ್ಯಾಸಕಿ; ರಾಜ್ಯದಲ್ಲೇ ಮೊದಲು

Gold-saffron

Mangaluru: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: 1.15 ಕೋ.ರೂ. ಚಿನ್ನ, ಕೇಸರಿ ಪತ್ತೆ

Winter Session: ಬಾಣಂತಿ ಸಾವು: ನ್ಯಾಯಾಂಗ ತನಿಖೆಗೆ ಬಿಜೆಪಿ ಪಟ್ಟು

Winter Session: ಬಾಣಂತಿ ಸಾವು: ನ್ಯಾಯಾಂಗ ತನಿಖೆಗೆ ಬಿಜೆಪಿ ಪಟ್ಟು

United Nations: ನಾಡಿದ್ದು ವಿಶ್ವ ಧ್ಯಾನ ದಿನ: ಶ್ರೀ ರವಿಶಂಕರ್‌ ನೇತೃತ್ವ

United Nations: ನಾಡಿದ್ದು ವಿಶ್ವ ಧ್ಯಾನ ದಿನ: ಶ್ರೀ ರವಿಶಂಕರ್‌ ನೇತೃತ್ವ

KSA-Nia-Arrest

Operation: ಕಾಸರಗೋಡಿನಲ್ಲಿ ಎನ್‌.ಐ.ಎ. ದಾಳಿ: ತಲೆಮರೆಸಿಕೊಂಡಿದ್ದ ಉಗ್ರಗಾಮಿ ಸೆರೆ

Kannada Sahitya Sammelana: ಕಾವೇರಿ ಹೊನಲಲ್ಲಿ ಕನ್ನಡ ಉಕ್ಕಲಿ…

Kannada Sahitya Sammelana: ಕಾವೇರಿ ಹೊನಲಲ್ಲಿ ಕನ್ನಡ ಉಕ್ಕಲಿ…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹೊಯ್ಸಳ ಕನ್ನಡ ಸಂಘ: ವಿದೇಶದಲ್ಲಿ ಕಣ್ಮನ ಸೆಳೆದ ಗದಾಯುದ್ಧ ಯಕ್ಷಗಾನ

ಹೊಯ್ಸಳ ಕನ್ನಡ ಸಂಘ: ವಿದೇಶದಲ್ಲಿ ಕಣ್ಮನ ಸೆಳೆದ ಗದಾಯುದ್ಧ ಯಕ್ಷಗಾನ

Desi Swara: ಟ್ಯಾಂಪಾ ಸಾಂಸ್ಕೃತಿಕ ವೇದಿಕೆ – ಹರಿಕಥೆ ಆಯೋಜನೆ

Desi Swara: ಟ್ಯಾಂಪಾ ಸಾಂಸ್ಕೃತಿಕ ವೇದಿಕೆ – ಹರಿಕಥೆ ಆಯೋಜನೆ

ಕ್ಲೀವ್‌ ಲ್ಯಾಂಡ್‌: 40ನೇ ಬೆಳಕಿನ ಕನ್ನಡೋತ್ಸವ, ಹಾಸ್ಯ ಹೊನಲು, ಸಂಗೀತ ಸುಧೆ

ಕ್ಲೀವ್‌ ಲ್ಯಾಂಡ್‌: 40ನೇ ಬೆಳಕಿನ ಕನ್ನಡೋತ್ಸವ, ಹಾಸ್ಯ ಹೊನಲು, ಸಂಗೀತ ಸುಧೆ

Baharain1

ಮೊಗವೀರ್ಸ್‌ ಬಹ್ರೈನ್‌ ಪ್ರೊ ಕಬಡ್ಡಿ;ತುಳುನಾಡ್‌ ತಂಡ ಪ್ರಥಮ,ಪುನಿತ್‌ ಬೆಸ್ಟ್‌ All ರೌಂಡರ್‌

ಕ್ಯಾಲಿಫೋರ್ನಿಯ: ನಾಡೋತ್ಸವದಲ್ಲಿ ಚಿಣ್ಣರ ಚಿಲಿಪಿಲಿ, ಸಾಂಸ್ಕೃತಿಕ ಪ್ರದರ್ಶನ

ಕ್ಯಾಲಿಫೋರ್ನಿಯ: ನಾಡೋತ್ಸವದಲ್ಲಿ ಚಿಣ್ಣರ ಚಿಲಿಪಿಲಿ, ಸಾಂಸ್ಕೃತಿಕ ಪ್ರದರ್ಶನ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

Traffic-UPI

Mangaluru: ಇನ್ನು ಯುಪಿಐ ಮೂಲಕವೂ ಟ್ರಾಫಿಕ್‌ ದಂಡ ಪಾವತಿ

Sri Krishnadevaraya ವಿ.ವಿ.ಗೆ ಮಂಗಳಮುಖಿ ಅತಿಥಿ ಉಪನ್ಯಾಸಕಿ; ರಾಜ್ಯದಲ್ಲೇ ಮೊದಲು

Sri Krishnadevaraya ವಿ.ವಿ.ಗೆ ಮಂಗಳಮುಖಿ ಅತಿಥಿ ಉಪನ್ಯಾಸಕಿ; ರಾಜ್ಯದಲ್ಲೇ ಮೊದಲು

Gold-saffron

Mangaluru: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: 1.15 ಕೋ.ರೂ. ಚಿನ್ನ, ಕೇಸರಿ ಪತ್ತೆ

Winter Session: ಬಾಣಂತಿ ಸಾವು: ನ್ಯಾಯಾಂಗ ತನಿಖೆಗೆ ಬಿಜೆಪಿ ಪಟ್ಟು

Winter Session: ಬಾಣಂತಿ ಸಾವು: ನ್ಯಾಯಾಂಗ ತನಿಖೆಗೆ ಬಿಜೆಪಿ ಪಟ್ಟು

United Nations: ನಾಡಿದ್ದು ವಿಶ್ವ ಧ್ಯಾನ ದಿನ: ಶ್ರೀ ರವಿಶಂಕರ್‌ ನೇತೃತ್ವ

United Nations: ನಾಡಿದ್ದು ವಿಶ್ವ ಧ್ಯಾನ ದಿನ: ಶ್ರೀ ರವಿಶಂಕರ್‌ ನೇತೃತ್ವ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.