ಬಾರೋ ಸಾಧಕರ ಕೇರಿಗೆ : ಮನುಷ್ಯ ಜಾತಿ ತಾನೊಂದೆ ವಲಂ


Team Udayavani, Dec 8, 2020, 7:31 PM IST

ಬಾರೋ ಸಾಧಕರ ಕೇರಿಗೆ : ಮನುಷ್ಯ ಜಾತಿ ತಾನೊಂದೆ ವಲಂ

ಮಹಾ ಬ್ರಾಹ್ಮಣ, ಮಹಾಕ್ಷತ್ರಿಯದಂಥ ವಿಶಿಷ್ಟ ಕಾದಂಬರಿಗಳನ್ನು, ಅಷ್ಟೇಮಹತ್ತಾದ ಶಾಸ್ತ್ರಗ್ರಂಥಗಳನ್ನು ಬರೆದು ಕನ್ನಡ ಸಾಹಿತ್ಯ  ಕ್ಷೇತ್ರದ ಶ್ರೀಮಂತಿಕೆ ಹೆಚ್ಚಿಸಿದ ದೇವುಡು ನರಸಿಂಹ ಶಾಸ್ತ್ರಿಗಳು, ಖಾಸಗಿ ಬದುಕಿನಲ್ಲೂ ಕರ್ಮಠ ವೈದಿಕರು. ಪೂಜೆ,ಸಂಧ್ಯಾ ವಂದನೆಅಗಳನ್ನು ತಪ್ಪದೆ ನಡೆಸಿ ಕೊಂಡು ಬಂದವರು. ಸಂಸ್ಕೃತದ ಮಹಾ ಪಂಡಿತರು. ಶಾಸ್ತ್ರವಿಶಾರದರು.

ಒಮ್ಮೆ ದೇವುಡು ಸರ್ವಜ್ಞನ ಪದಗಳನ್ನು ಸಂಪಾದಿಸಿ ಪ್ರಕಟಿಸಿದ್ದ ರೆವರೆಂಡ್‌ ಚನ್ನಪ್ಪ ಉತ್ತಂಗಿಯವರನ್ನು ಭೇಟಿಯಾದಾಗ, ಪ್ರಾಸಂಗಿಕವಾಗಿ- ದಯವಿಟ್ಟು ನಮ್ಮ ಮನೆಗೆ ಆಗಮಿಸಿ ಆತಿಥ್ಯ ಸ್ವೀಕರಿಸಬೇಕು ಎಂದರಂತೆ. ಉತ್ತಂಗಿಯವರು ಆಗಬಹುದು ಎಂದುಬಿಟ್ಟರು. ಆದರೆ ಉತ್ತಂಗಿ ಕ್ರೈಸ್ತರು; ದೇವುಡು ಅಪ್ಪಟ ವೈದಿಕ ಕರ್ಮಠ ಬ್ರಾಹ್ಮಣ! ಕ್ರೈಸ್ತರು ಮನೆಗೆ ಬಂದರೆ ಅವರನ್ನು ಹೇಗೆ ಸತ್ಕರಿಸುವುದು ಎಂಬ ಯೋಚನೆ ದೇವುಡು ಅವರಿಗೆ ಆಮೇಲೆ ತಲೆಗೆ ಬಂತು. ಸಂಶಯಪರಿಹಾರಕ್ಕಾಗಿ ತಮ್ಮ ಗುರುಗಳಾಗಿದ್ದ ವೈದ್ಯನಾಥ ಶಾಸ್ರ್ತಿಗಳಲ್ಲಿ ಕೇಳಿದರಂತೆ. ಅದರಲ್ಲೇನುಂಟು! ಸಾಕ್ಷಾತ್‌ ಯೇಸುಸ್ವಾಮಿ ಮನೆಗೆ ಬಂದರೆ ಹೇಗೆ ಉಪಚರಿಸುತ್ತೀಯೋ, ಇವರನ್ನೂ ಹಾಗೇ ಉಪಚರಿಸಿ ಸತ್ಕಾರ ಮಾಡು ಎಂಬ ಸಲಹೆ ಗುರುಗಳಿಂದ ಬಂತು.

ದೇವುಡು, ಉತ್ತಂಗಿಯವರನ್ನು ಹಾಗೆಯೇ ಸತ್ಕರಿಸಲು ನಿರ್ಧರಿಸಿದರು. ಮನೆಗೆ ಆಗಮಿಸಿದ ಉತ್ತಂಗಿಯವರಿಗೆ ಅಘ್ರ್ಯ ಪಾದ್ಯಗಳನ್ನು ಕೊಟ್ಟರು. ಕೂರಲು ಪೀಠ ತೋರಿಸಿದರು. ಕಾಲುತೊಳೆದು ನೀರನ್ನು ಪಾದೋದಕ ಎಂದು ತಲೆಗೆ ಪೋ›ಕ್ಷಿಸಿಕೊಂಡರು. ದೇವತಾಸ್ಥಾನವಾದ ಪೂರ್ವದಿಕ್ಕಿನಲ್ಲಿ ಉತ್ತಂಗಿಯವರನ್ನು ಕೂರಿಸಿ, ತಾನು ಉತ್ತರ ದಿಕ್ಕಿನಲ್ಲಿ ಪೂಜಕನಾಗಿ ಕೂತು ಅಪ್ರತಿಮ ಭಕ್ತಿ- ಗೌರವಗಳಿಂದ ಪೂಜೆಯನ್ನು ಸಪತ್ನಿàಕರಾಗಿ ಸಮರ್ಪಿಸಿ ದರು. ನಂತರ ಉತ್ತಂಗಿಯವರಿಗೆ ಎಲ್ಲ ಬಗೆಯ ಭಕ್ಷÂ ಭೋಜ್ಯಗಳನ್ನು ಬಡಿಸಿ, ಅವರ ಜೊತೆಯೇಕೂತು ಭೋಜನ ಮಾಡಿದರು. ಇಂಥಾದ್ದೇ ಇನ್ನೊಂದು ಪ್ರಕರಣ ನಡೆದುದು ತ.ಸು. ಶಾಮರಾಯರು ಮತ್ತು ಅವರ ಶಿಷ್ಯ ಪ್ರಭುಶಂಕರ ಅವರ ನಡುವೆ. ಶಾಮರಾಯರು ಹೇಳಿಕೇಳಿ ರುಪಾಯಿಗೆ ಹದಿನಾರಾಣೆ ಬ್ರಾಹ್ಮಣ. ಶಿಷ್ಯ ಪ್ರಭುಶಂಕರ ಕೆಳಜಾತಿಯೆಂದು ಕರೆಸಿಕೊಂಡ ಜಾತಿಯಿಂದ ಬಂದವರು. ಒಮ್ಮೆ ಶಾಮರಾಯರು ತಮ್ಮ ಶಿಷ್ಯನನ್ನು ಕರೆದು, ನಾಳೇ ದಿನ ಮುಂಜಾನೆ ಎಂಟಕ್ಕೆ ಏನನ್ನೂ ಸೇವಿಸದೆ ನಮ್ಮ ಮನೆಗೆ ಬರಬೇಕು ಎಂದು ಆಗ್ರಹಪೂರ್ವಕ ವಿನಂತಿ ಮಾಡಿದರಂತೆ. ಗುರುಗಳ ಅಪ್ಪಣೆಯನ್ನು ಮೀರುವುದುಂಟೆ? ಪ್ರಭುಶಂಕರ ಮರುದಿನ ತಮ್ಮ ಗುರುಗಳ ಮನೆಗೆ ಹೋದರು. ಅಲ್ಲಿ ಅವರಿಗೆ ಆಶ್ಚರ್ಯ ಹುಟ್ಟಿಸುವಂಥ ದೃಶ್ಯವೊಂದು ಎದುರಾಯಿತು.

ಶಾಮರಾಯರು ಮನೆಯಲ್ಲಿ ದೇವರ ಕೋಣೆಯಲ್ಲಿ ಒಂದು ಮಣೆ ಹಾಕಿ, ಅದರ ಮುಂದೆ ರಂಗೋಲಿ ಬರೆದು, ನಂದಾದೀಪ ಹಚ್ಚಿದ್ದರು. ಮಣೆಯ ಮೇಲೆ ಕೂರುವಂತೆ ಶಿಷ್ಯನಿಗೆ ಹೇಳಿದರು. ಕಚ್ಛೆ- ಶಲ್ಯಗಳನ್ನೆಲ್ಲ ತೊಟ್ಟುಪೂಜೆಗೆ ಅಣಿಯಾದ ಬ್ರಾಹ್ಮಣನ ಧಿರಿಸಿನಲ್ಲಿದ್ದ ಶಾಮರಾಯರು ತಮ್ಮ ಶಿಷ್ಯನಿಗೆ ಭಕ್ತಿಪೂರ್ವಕ ಗೌರವಾದರ ಸಮರ್ಪಣೆ ಮಾಡಿ, ಪತ್ನಿಯೊಡಗೂಡಿ ಪೂಜೆಯನ್ನೂ ನೆರವೇರಿಸಿದರು!

ಇಂಥದ್ದೆಲ್ಲ ಆಗುತ್ತದೆಂಬ ಕಲ್ಪನೆಯೇ ಇರದಿದ್ದ ಪ್ರಭುಶಂಕರ ಮಣೆ ಮೇಲೆ ಕೂರುವುದಕ್ಕೇ ಹಿಂದೆಮುಂದೆ ನೋಡುತ್ತ ಚಡಪಡಿಸುತ್ತ ನಾನು ಬ್ರಾಹ್ಮಣ ಅಲ್ಲ ಎಂದು ತೊದಲುತ್ತ ಹೇಳಿದಾಗ ಶಾಮರಾಯರು ಗದರುವದನಿಯಲ್ಲಿ ಹೇಳಿದರಂತೆ: ನೀನು ನನ್ನ ವಿದ್ಯಾರ್ಥಿ. ಅಂದರೆ, ನನ್ನ ಮಗ. ನೀನು ಬ್ರಾಹ್ಮಣ ಅಲ್ಲದಿದ್ದರೆ ಇನ್ನು ಯಾರು ಬ್ರಾಹ್ಮಣರು?ಸುಮ್ನೆಕೂತ್ಕೋ. ಸುಬ್ರಾಯ ಷಷ್ಠಿಯ ಆ ದಿನ, ಶಿಷ್ಯ ಪ್ರಭುಶಂಕರ, ತನ್ನ ಗುರುಗಳಾದ ಶಾಮರಾಯರ ಕೈಯಿಂದ ಪೂಜೆ ಮಾಡಿಸಿಕೊಂಡು, ನಂತರ ಜೊತೆ ಕೂತು ಊಟವನ್ನೂ ಮಾಡಿ ಕೃತಾರ್ಥಭಾವದಿಂದ ಎದ್ದರು.

 

-ರೋಹಿತ್‌ ಚಕ್ರತೀರ್ಥ

ಟಾಪ್ ನ್ಯೂಸ್

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

de

Vitla: ಕಾಲು ಜಾರಿ ಕೆರೆಗೆ ಬಿದ್ದು ಯುವಕ ಸಾವು

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.