ಬದುಕು ಆಚೆಗೂ ಈಚೆಗೂ ವ್ಯಾಪಿಸಿದ ಅನಂತ ಚೇತನ


Team Udayavani, Dec 11, 2020, 5:46 AM IST

ಬದುಕು ಆಚೆಗೂ ಈಚೆಗೂ ವ್ಯಾಪಿಸಿದ ಅನಂತ ಚೇತನ

ಸಾಂದರ್ಭಿಕ ಚಿತ್ರ

ಝೆನ್‌ ಗುರು ಇಕ್ಯುನ ಅಂತ್ಯಕಾಲ ಸನ್ನಿಹಿತವಾಗಿತ್ತು. ಅವನೋ, ಇಡೀ ಬದುಕನ್ನು ತುಂಟಾಟವಾಗಿ ಕಂಡವ. ಈಗ ತನ್ನ ಶಿಷ್ಯರನ್ನು ಹತ್ತಿರ ಕರೆದು, “ಸಾಯುವ ಹೊಸ ವಿಧಾನ ಇದ್ದರೆ ಹೇಳಿ. ಬಹುತೇಕ ಎಲ್ಲರೂ ಹಾಸಿಗೆಯ ಮೇಲೆ ಮಲಗಿದ್ದು ಸಾವನ್ನಪ್ಪುತ್ತಾರೆ. ಅಂಥದ್ದೆಲ್ಲ ಆಗಲಿಕ್ಕಿಲ್ಲ. ಹೊಸ ವಿಧಾನ ಆಗಬೇಕು, ಹೇಳಿ’ ಎಂದ.

ಶಿಷ್ಯರಿಗೆ ಇಕ್ಯುನ ಹುಚ್ಚಾಟಗಳು, ತುಂಟಾಟಗಳೆಲ್ಲ ಗೊತ್ತಿದ್ದವು. ಹೊಸ ರೀತಿ ಯಲ್ಲಿ ಸಾಯುವುದು ಎಂದರೇನಪ್ಪಾ. ಮರಣ ಅಂದರೆ ಮರಣ, ಹೇಗೆ ಮರಣ ಎಂಬುದರಿಂದ ಪುರುಷಾರ್ಥವೇನಾದರೂ ಸಾಧನೆಯಾಗಲುಂಟೆ ಎಂದು ಆಲೋಚಿಸಿ ದರು. ಆದರೆ ಉತ್ತರಿಸಲೇ ಬೇಕು, ಗುರುವಲ್ಲವೇ!

“ಸಲಹೆಗಳು ಇವೆಯೇ?’ ಇಕ್ಯು ಕೇಳಿದ. ಒಬ್ಬ ಶಿಷ್ಯ ಹೇಳಿದ, “ಪದ್ಮಾಸನ ಹಾಕಿ ಕುಳಿತ ಮುದ್ರೆಯಲ್ಲಿ ಸಾವನ್ನಪ್ಪು ವುದು ಪ್ರಾಯಃ ಹೊಸ ಭಂಗಿ!'”ಹೇ ಇಲ್ಲ ಇಲ್ಲ, ಅದೇ ಭಂಗಿಯಲ್ಲಿ ಮರಣಿಸಿದ ಹಲವು ಗುರುಗಳು ನನಗೆ ಗೊತ್ತು. ವಿನೂತನ ವಿಧಾನ ಆಗಬೇಕು’ ಇಕ್ಯು ಆ ಸಲಹೆಯನ್ನು ನಿರಾಕರಿಸಿದ.

“ನಿಂತುಕೊಂಡು ಮರಣಿಸುವ ವಿಧಾನ ವನ್ನು ಅನುಸರಿಸಬಹುದೇನೋ’ ಇನ್ನೊಬ್ಬ ಶಿಷ್ಯನ ಸಲಹೆ ತೂರಿಬಂತು. ಆದರೆ ಶಿಷ್ಯರಲ್ಲೇ ಒಬ್ಬ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ. “ನಿಂತು ಮರಣವನ್ನಪ್ಪಿದ ಗುರುಗಳೊಬ್ಬರನ್ನು ನನಗೆ ಗೊತ್ತಿದೆ, ಅದೇನೂ ಹೊಸತಲ್ಲ. ಹಾಗೆ ಸತ್ತರೆ ನೀವು ಎರಡನೆಯವರಾಗುತ್ತೀರಿ’. ಹಾಗಾಗಿ ಇಕ್ಯು ಆ ಸಲಹೆಯನ್ನೂ ನಿರಾಕರಿಸಿದ.

ಇಷ್ಟಾದ ಬಳಿಕ ಇನ್ನೊಬ್ಬನ ಸಲಹೆ ಬಂತು, “ಗುರುಗಳೇ, ಶೀರ್ಷಾಸನ ಭಂಗಿಯಲ್ಲಿ ಸಾಯುವುದು ಇಷ್ಟರ ವರೆಗೆ ಎಲ್ಲೂ ಆಗಿರಲಿಕ್ಕಿಲ್ಲ. ಅದನ್ನು ಪ್ರಯೋಗಿಸಿ ನೋಡಬಹುದು.’

ಇಕ್ಯುವಿಗೆ ಅದು ಸರಿ ಎನಿಸಿತು. “ಸಲಹೆ ಎಂದರೆ ಇದು! ನಿನಗೆ ಬಹಳ ಕೃತಜ್ಞತೆಗಳು’ ಎಂದು ಹೇಳಿದ ಇಕ್ಯು ತಲೆ ಕೆಳಗಾಗಿ ನಿಂತುಕೊಂಡು ಸತ್ತೇ ಹೋದ!

ಇಕ್ಯು ಹಾಗೆಯೇ ಸತ್ತನೇನೋ ನಿಜ. ಆದರೆ ಪೀಕಲಾಟಕ್ಕಿಟ್ಟುಕೊಂಡದ್ದು ಶಿಷ್ಯರಿಗೆ. ಹಾಸಿಗೆಯಲ್ಲಿ ಮಲಗಿದ್ದು ಗತಿಸಿದವರು, ಪದ್ಮಾಸನ ಭಂಗಿಯಲ್ಲಿ ಕುಳಿತು ಮರಣಿಸಿದವರಿಗೆ ಹೇಗೆ ಅಂತಿಮ ವಿಧಿವಿಧಾನ ನೆರವೇರಿಸಬೇಕು ಎಂಬುದು ಎಲ್ಲರಿಗೂ ತಿಳಿದಿತ್ತು. ಆದರೆ ತಲೆಕೆಳಗಾಗಿ ನಿಂತು ಸತ್ತವರಿಗೆ ಹೇಗೆ ಎಂಬುದು ಯಾರಿಗೂ ಗೊತ್ತಿರಲಿಲ್ಲ. ಯಾರಿಗೂ ಪರಿಹಾರ ಸಿಗಲಿಲ್ಲ. ಗುರು ಇಕ್ಯುವನ್ನೇ ಕೇಳಬಹುದು ಎಂದುಕೊಂಡು ಆತ ಸತ್ತಿದ್ದಾನೆಯೋ ಇಲ್ಲವೋ ಎಂದು ತಿಳಿಯಲು ಹಲವು ರೀತಿಗಳಲ್ಲಿ ಪರೀಕ್ಷಿಸಿದರು. ಮೂಗಿನ ಬಳಿ ಕನ್ನಡಿ ಇರಿಸಿದರು, ನಾಡಿ ಮಿಡಿತ ಪರೀಕ್ಷಿಸಿದರು… ಆತ ಸತ್ತು ಹೋಗಿದ್ದ!

ಅಷ್ಟರಲ್ಲಿ ಅಲ್ಲಿ ಸೇರಿದ್ದ ಒಬ್ಬ ಹೇಳಿದ, “ಹತ್ತಿರದ ಬೆಟ್ಟದ ಮೇಲಿನ ಗುರುಮಠದಲ್ಲಿ ಈ ಇಕ್ಯುವಿನ ಹಿರಿಯಕ್ಕ ಇದ್ದಾಳೆ. ಆಕೆಗೆ ಇಂಥದ್ದರ ಬಗ್ಗೆ ತಿಳಿದಿರಲಿಕ್ಕೂ ಸಾಕು’. ಸರಿ, ಆ ಸನ್ಯಾಸಿನಿಗೆ ಕರೆ ಹೋಯಿತು.

ಆಕೆ ಧಾವಿಸಿ ಬಂದವಳೇ ಇಕ್ಯುವನ್ನು ಗದರಿದಳು, “ಬದುಕಿಡೀ ತುಂಟಾಟ, ಈಗಲೂ ಅದೇ ಬುದ್ಧಿ ಬೇಡ. ಹಾಸಿಗೆಯಲ್ಲಿ ಮಲಗುತ್ತೀಯಾ ಇಲ್ಲವಾ’. ಆಕೆ ಇಷ್ಟು ಹೇಳಿದ್ದೇ ತಡ, ಇಕ್ಯು ವಿಧೇಯ ಮಗುವಿನ ಹಾಗೆ ಶೀರ್ಷಾಸನ ಭಂಗಿಯಿಂದ ಹೊರ ಬಂದ, ಹಾಸಿಗೆಯಲ್ಲಿ ಮಲಗಿ ಸತ್ತ!
ಬದುಕು ಅನಂತ ಎಂಬುದನ್ನು ತಿಳಿದವ ರಿಗೆ ಮರಣ ಎಂದರೆ ಏನೂ ಅಲ್ಲ. ಅದು ದೇಹದ ಅಂತ್ಯ ಮಾತ್ರ, ಚೇತನದ್ದಲ್ಲ. ನಿರ್ದಿಷ್ಟವಾಗಿ ಇಕ್ಯುನಂಥವರು ಇನ್ನೊಮ್ಮೆ ಜೀವನ್ಮರಣಗಳ ಚಕ್ರವನ್ನು ಪ್ರವೇಶಿಸದೆ ವಿಶ್ವಚೇತನದಲ್ಲಿ ಶಾಶ್ವತವಾಗಿ ಐಕ್ಯವಾಗು ತ್ತಾರೆ, ಹಾಗಾಗಿ ಅವರಿಗೆ ಅದೊಂದು ಸಂಭ್ರಮ.

(ಸಾರ ಸಂಗ್ರಹ)

ಟಾಪ್ ನ್ಯೂಸ್

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನನ್ನೊಳಗಿನ “ನಾನು’ ಹೋದರೆ ಹೋದೇನು

ನನ್ನೊಳಗಿನ “ನಾನು’ ಹೋದರೆ ಹೋದೇನು

ಮಾನವ ಜನ್ಮವನ್ನು ವ್ಯರ್ಥಗೊಳಿಸದಿರೋಣ

ಮಾನವ ಜನ್ಮವನ್ನು ವ್ಯರ್ಥಗೊಳಿಸದಿರೋಣ

achivement

ಗೆಲುವಿನ ದಾರಿ ದೂರ… ಪ್ರಯತ್ನ ನಿರಂತರವಾಗಿರಲಿ

ಆತ್ಮತೃಪ್ತಿ, ಹೃದಯ ಶ್ರೀಮಂತಿಕೆಯೇ ಶ್ರೇಷ್ಠ

ಆತ್ಮತೃಪ್ತಿ, ಹೃದಯ ಶ್ರೀಮಂತಿಕೆಯೇ ಶ್ರೇಷ್ಠ

ನಾವೆಲ್ಲರೂ ಸ್ನೇಹಜೀವಿಗಳಾಗೋಣ

ನಾವೆಲ್ಲರೂ ಸ್ನೇಹಜೀವಿಗಳಾಗೋಣ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

1-namm-mannu-1

Udayavani-MIC ನಮ್ಮ ಸಂತೆ:ಮಣ್ಣಿನಿಂದ ಮಾಡಿದ ನಾನಾ ಉತ್ಪನ್ನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.