ತೆಂಗಿನ ಫಸಲು ಕಡಿಮೆ; ಬೆಲೆ ಏರಿಕೆ
Team Udayavani, Dec 13, 2020, 5:07 AM IST
ಸಾಂದರ್ಭಿಕ ಚಿತ್ರ
ಮಂಗಳೂರು/ಉಡುಪಿ: ಮಾರುಕಟ್ಟೆಯಲ್ಲಿ ಸ್ಥಳೀಯ ತೆಂಗಿನ ಕಾಯಿಯ ಕೊರತೆ ಕಂಡುಬಂದಿದ್ದು, ಎರಡು ವಾರಗಳಿಂದೀಚೆಗೆ ತೆಂಗಿನ ಕಾಯಿ ಬೆಲೆ ಏರಿಕೆಯಾಗಿದೆ. ಆದರೆ ಬಯಲು ಸೀಮೆ ಭಾಗದಿಂದ ಆವಕವಾಗುವ ತೆಂಗಿನ ಕಾಯಿಗೆ ಕೊರತೆ ಇಲ್ಲ. ಸ್ಥಳೀಯ ತೆಂಗಿನ ಕಾಯಿಯ ಫಸಲು ಈ ವರ್ಷ ಕಡಿಮೆಯಾಗಿದ್ದು, ಇದು ಬೆಲೆ ಏರಿಕೆಗೆ ಕಾರಣ ಎಂದು ವ್ಯಾಪಾರಸ್ಥರು ಉದಯವಾಣಿಗೆ ತಿಳಿಸಿದ್ದಾರೆ.
2 ವಾರಗಳ ಹಿಂದೆ ಸ್ಥಳೀಯ ತೆಂಗಿನ ಕಾಯಿಯನ್ನು ಬೆಳೆಗಾರರಿಂದ ಕೆ.ಜಿ. ಗೆ 40 ರೂ.ಗಳಿಗೆ ಖರಿದಿಸಿ 45 ರೂ.ಗಳಿಗೆ ಮಾರಾಟ ಮಾಡಲಾಗುತ್ತಿತ್ತು. ಈಗ 45 ರೂ.ಗೆ ಖರೀದಿಸಿ 48-50 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಬಯಲು ಸೀಮೆಯ ತೆಂಗಿನ ಕಾಯಿಯ ಖರೀದಿ ಬೆಲೆ 43 ರೂ. ಹಾಗೂ ಮಾರಾಟ ಬೆಲೆ 45 ರೂ. ಇದೆ.
ಉಡುಪಿ ಜಿಲ್ಲೆಯಲ್ಲಿ ಒಂದು ಕೆಜಿ ತೆಂಗಿನ ಕಾಯಿ ಬೆಲೆ 42 ರೂ., ಒಂದು ದೊಡ್ಡ ತೆಂಗಿನ ಕಾಯಿ ಬೆಲೆ 32 ರೂ. ಇದೆ. ಬೇರೆ ಜಿಲ್ಲೆಗಳಲ್ಲೂ ಬೇಡಿಕೆ ಇರುವುದರಿಂದ ಉಡುಪಿ ಜಿಲ್ಲೆಗೆ ಬರುತ್ತಿಲ್ಲ. ಕಳೆದ ವರ್ಷ ಇದೇ ಸಮಯದಲ್ಲಿ ಒಂದು ಕೆ.ಜಿ. ಬೆಲೆ 37 ರೂ. ಇತ್ತು.
ಹಳ್ಳಿಗಳಲ್ಲೇ ಸಿಗುತ್ತಿಲ್ಲ!
ಬಜಪೆ: ಫಸಲು ಕಡಿಮೆಯಾಗಿರುವ ಕಾರಣ ತೆಂಗು ಹೆಚ್ಚಾಗಿ ಬೆಳೆಯುವ ಗ್ರಾಮೀಣ ಪ್ರದೇಶಗಳಲ್ಲೂ ಈಗ ತೆಂಗಿನಕಾಯಿಗೆ ಬರ. ಅಂಗಡಿಗಳಲ್ಲಿ ಮಾತ್ರವಲ್ಲ ತೋಟದ ಮಾಲಕರನ್ನೇ ಕೇಳಿದರೂ ಇಲ್ಲ ಎನ್ನುತ್ತಿದ್ದಾರೆ. ಮಾಲಕರು ತಿಂಗಳ ಹಿಂದಷ್ಟೆ ಕೆ.ಜಿ.ಗೆ 30 ರೂ.ಗಳಂತೆ ಮಾರಾಟ ಮಾಡಿದ್ದಾರೆ.
ಸೀಯಾಳಕ್ಕೆ ಬೆಲೆ ಹೆಚ್ಚು
ಲಾಭ ಅಧಿಕ ಎಂದು ಕೆಲವು ಕೃಷಿಕರು ಕಾಯಿ ಬಲಿಯುವ ತನಕ ಕಾಯದೆ ಸೀಯಾಳವನ್ನೇ ಮಾರು ತ್ತಿದ್ದಾರೆ. ಅಲ್ಲದೆ ಖರೀದಿಸುವವರು ತೋಟಕ್ಕೇ ಬಂದು ಕೊಂಡೊಯ್ಯುತ್ತಾರೆ. ಕೊರೊನಾ ಬಳಿಕ ತೆಂಗಿನ ಕಾಯಿ/ಎಣ್ಣೆಯ ಬಳಕೆ ಹೆಚ್ಚಾಗಿದೆ. ಜನರಲ್ಲಿ ಆರೋಗ್ಯದ ಕಾಳಜಿ ಹೆಚ್ಚಿರುವುದರಿಂದ ತೆಂಗಿನ ಕಾಯಿ ಬಗ್ಗೆ ಹೆಚ್ಚು ಆಸಕ್ತರಾಗಿರುವುದು ಕೊರತೆಗೆ ಕಾರಣ ಎಂದು ಕೃಷಿಕ ಪಡುಪೆರಾರ ಸಾಂತ್ರಬೈಲು ರಾಮಚಂದ್ರ ಕಾವ ಹೇಳುತ್ತಾರೆ.
ಹೊಟೇಲ್ಗೆ ಮೊರೆ!
ತೆಂಗಿನ ಕಾಯಿ ಸಿಗದೇ ಹಲವು ಮನೆಗಳಲ್ಲಿ ಗೃಹಿಣಿಯರು ತೀವ್ರ ಸಂಕಷ್ಟಕ್ಕೊಳಗಾಗಿದ್ದಾರೆ. ಎಷ್ಟೋ ಮನೆಗಳಲ್ಲಿ ತಿಳಿಸಾರಿನಲ್ಲೇ ತೃಪ್ತರಾಗುತ್ತಿದ್ದಾರೆ. ಇನ್ನು ಈ ಕಷ್ಟವೇ ಬೇಡ, ಸಮಯದ ಜತೆಗೆ ಅಡುಗೆ ಅನಿಲವೂ ಉಳಿತಾಯ ಆಗುತ್ತದೆ ಎಂದು ಕೆಲವರು ಹೊಟೇಲ್ಗಳಿಂದ ಪದಾರ್ಥವನ್ನು ಪಾರ್ಸೆಲ್ ತರಿಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ತ್ರಿಶಾ ಪದವಿ ಕಾಲೇಜಿನ ನೂತನ ಕಟ್ಟಡ ಉದ್ಘಾಟನೆ
Mangaluru: ಹುಲಿ ವೇಷ ಬಣ್ಣಗಾರಿಕೆ ಹಿಂದಿದೆ ಶ್ರದ್ಧೆ, ಭಕ್ತಿ, ವಿಜ್ಞಾನ!
Court: ವಾಹನ ಅಪಘಾತ: ಮೃತ ವ್ಯಕ್ತಿಯ ಆಶ್ರಿತರಿಗೆ 1.35 ಕೋ.ರೂ. ಪರಿಹಾರ: ನ್ಯಾಯಾಲಯ ಆದೇಶ
Navaratri 2024: ಕರಾವಳಿಯಲ್ಲಿ ಶರನ್ನವರಾತ್ರಿ ಉತ್ಸವಕ್ಕೆ ಅದ್ದೂರಿ ಚಾಲನೆ
Mangaluru: ಮತದಾರರ ಒಲವು ನನ್ನ ಪರ: ಕಾಂಗ್ರೆಸ್ ಅಭ್ಯರ್ಥಿ ರಾಜು ಪೂಜಾರಿ
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.