ಆನೆಯ ಕಿವಿಯು ಕೆಲವು ದಿನ ಸೊಳ್ಳೆ ರಾಜನ ಅರಮನೆ


Team Udayavani, Dec 15, 2020, 5:35 AM IST

ಆನೆಯ ಕಿವಿಯು ಕೆಲವು ದಿನ ಸೊಳ್ಳೆ ರಾಜನ ಅರಮನೆ

ಸಾಂದರ್ಭಿಕ ಚಿತ್ರ

ಇದು ಟಿಬೆಟ್‌ನ ಒಂದು ಹಳೆಯ ಕತೆ. ಒಂದು ಸಣ್ಣ ಸೊಳ್ಳೆ ಇತ್ತು. ಈ ಕತೆ ರಚಿಸಿದವರು ನಮ್ಮ ನಿಮ್ಮ ಹಾಗೆಯೇ ಮನುಷ್ಯರಾದ್ದರಿಂದ ಸಣ್ಣ ಸೊಳ್ಳೆ ಎಂದರು. ಆದರೆ ಸೊಳ್ಳೆಗಳ ಪಾಲಿಗೆ ಅದು ದೊಡ್ಡದೇ ಆಗಿತ್ತು, ಏಕೆಂದರೆ ಅದು ಸೊಳ್ಳೆಗಳ ರಾಜ.

ಆ ಕಾಲದಲ್ಲಿ ಕೆಲವು ಸೊಳ್ಳೆಗಳು ತಿಪ್ಪೆಯಲ್ಲಿ, ಇನ್ನು ಕೆಲವು ಮರದ ಬುಡ ದಲ್ಲಿ, ಮತ್ತೆ ಕೆಲವು ಬಚ್ಚಲು ಗುಂಡಿಯಲ್ಲಿ- ಹೀಗೆ ಸಿಕ್ಕಸಿಕ್ಕಲೆಲ್ಲ ವಾಸವಾಗಿದ್ದವು. ಆದರೆ ರಾಜನಿಗೆ ಹಾಗೆ ಇರುವುದಕ್ಕಾಗುತ್ತದೆಯೇ! ಹಾಗಾಗಿ ಸೊಳ್ಳೆ ರಾಜನಿಗೆ ಸೂಕ್ತವಾದ ಒಂದು ವಾಸಸ್ಥಳಕ್ಕಾಗಿ ಸೊಳ್ಳೆಗಳೆಲ್ಲ ಹುಡುಕಾಟ ಆರಂಭಿಸಿದವು. ಆ ಶೋಧದಲ್ಲಿ ಆನೆಯ ಕಿವಿಯೇ ಶ್ರೇಷ್ಠ ಸ್ಥಳ ಎಂಬ ಅಭಿಪ್ರಾಯ ವ್ಯಕ್ತವಾಯಿತು.

ಸೊಳ್ಳೆಗಳು ರಾಜನಲ್ಲಿ ಆನೆಯ ಕಿವಿಯಲ್ಲಿ ವಾಸ ಮಾಡುವಂತೆ ವಿನಂತಿಸಿ ದವು. ರಾಜ ಅದಕ್ಕೆ ಒಪ್ಪಿ ಆನೆಯ ಬಳಿಗೆ ಹೋದ. ಅದರ ಎದುರು ಎದೆ ಸೆಟೆಸಿ ನಿಂತು, “ಓ ಆನೆಯೇ, ನಾನು ಸೊಳ್ಳೆಗಳ ದೊರೆ, ನಿನ್ನ ಕಿವಿಯನ್ನು ಅಲಂಕರಿಸಲು ಬಂದಿದ್ದೇನೆ. ಇದು ನಿನ್ನ ಭಾಗ್ಯ ಎಂದು ತಿಳಿದುಕೋ’ ಎಂದು ಹೇಳಿತು. ಆನೆಯಿಂದ ಹಾಂ -ಹೂಂ ಏನೂ ಪ್ರತಿಕ್ರಿಯೆ ಬರಲಿಲ್ಲ. ಮೌನವೇ ಸಮ್ಮತಿಯ ಲಕ್ಷಣ ಎಂದುಕೊಂಡು ಸೊಳ್ಳೆ ರಾಜ ಆನೆಕಿವಿಯಲ್ಲಿ ವಾಸ ಆರಂಭಿಸಿತು.

ದಿನಗಳು ಉರುಳಿದವು. ತಿಂಗಳುಗಳು ಕಳೆದವು. ಸೊಳ್ಳೆರಾಜನ ಸಂತತಿ ವೃದ್ಧಿಸಿತು. ಆದರೂ ಆನೆಕಿವಿಯಲ್ಲಿ ಅವೆಲ್ಲವುಗಳಿಗೂ ಬೇಕಾದಷ್ಟು ಸ್ಥಳ ಇತ್ತು. ಕೊನೆಗೊಂದು ದಿನ ಇಲ್ಲಿ ವಾಸ ಸಾಕು ಎಂದುಕೊಂಡ ಸೊಳ್ಳೆರಾಜ ಹೊಸ ವಾಸಸ್ಥಳ ಹುಡುಕಲು ಇತರ ಸೊಳ್ಳೆಗಳಿಗೆ ಆಣತಿ ಇತ್ತಿತು. ಮತ್ತೂಮ್ಮೆ ಆನೆಯ ಎದುರು ನಿಂತು, “ಇಗೋ ನಾನು ಹೊರಟಿದ್ದೇನೆ’ ಎಂದು ಹೇಳಿತು.

ಈಗಲೂ ಆನೆಯ ಹಾಂ -ಹೂಂ ಇಲ್ಲ. ಆನೆಗೆ ಕೇಳಿಸಿಲ್ಲವೇ ಎಂಬ ಸಂಶಯ ಹುಟ್ಟಿತು ಸೊಳ್ಳೆ ರಾಜನಿಗೆ. ಮತ್ತೂ ಧ್ವನಿಯೇರಿಸಿ ಬೊಬ್ಬಿರಿಯಿತು. ಮತ್ತಷ್ಟು ಜೋರಾಗಿ ಕೂಗಿತು. ಅಷ್ಟು ಹೊತ್ತಿಗೆ ಆನೆ, “ಓ ನೀನಾ! ನೀನು ಬಂದು ನನ್ನ ಕಿವಿಯಲ್ಲಿ ವಾಸವಿದ್ದೆಯಾ! ನನಗೆ ಗೊತ್ತೇ ಇರಲಿಲ್ಲ. ಹಾಗಾಗಿ ಈಗ ನೀನು ಹೋದರೂ ನನಗೇನೂ ಅಡ್ಡಿ ಇಲ್ಲ’ ಎಂದು ಹೇಳಿತು.

ಈ ಟಿಬೆಟಿಯನ್‌ ಕಥೆ ಹಲವು ರಹಸ್ಯಗಳನ್ನು ಗರ್ಭದಲ್ಲಿ ಇರಿಸಿಕೊಂಡಿದೆ. ನಾವು ಅಂದರೆ ಮನುಷ್ಯರು ಈ ಭೂಮಿಯಲ್ಲಿ ಜನ್ಮ ತಾಳು ತ್ತೇವೆ. ನಮ್ಮ ನಮ್ಮದೇ ಆದ ತಣ್ತೀ, ಸಿದ್ಧಾಂತ, ದೇವ- ದೇವತೆಗಳು, ಧರ್ಮ, ಸಂಘ ಸಂಸ್ಥೆಗಳು… ಇನ್ನೂ ಏನೇನೆಲ್ಲವನ್ನು ಸೃಷ್ಟಿಸಿಕೊಳ್ಳುತ್ತೇವೆ. ಆ ಬಗ್ಗೆ ಬೊಬ್ಬೆ ಹೊಡೆಯುತ್ತೇವೆ, ಪ್ರಚಾರ ಮಾಡುತ್ತೇವೆ.

ನಾಲೆಸೆಗಳು ಮೌನವಾಗಿರುತ್ತವೆ. ಭೂಮಿ ತುಟಿಬಿಚ್ಚುವುದಿಲ್ಲ. ಅನಂತ ಸೃಷ್ಟಿಗೆ ನಮ್ಮ ಹಕೀಕತ್ತುಗಳ ಅರಿವಿಲ್ಲ, ಹಂಗಿಲ್ಲ. ಆನೆ ಯಾದರೋ ಸೊಳ್ಳೆಯ ಕಿರುಗಾತ್ರವನ್ನು ಲೆಕ್ಕಿಸದೆ ಅದರ ಜತೆಗೆ ಮಾತನಾಡಿತು. ಆದರೆ ನಮ್ಮ ಮತ್ತು ಅನಂತ ಸೃಷ್ಟಿಯ ನಡುವೆ ಅಂತಹ ಸಂವಹನವಾದರೂ ಇದೆಯೇ – ಅದೂ ನಮಗೆ ಗೊತ್ತಿಲ್ಲ. ವಿಶಾಲ ಆಕಾಶ, ಪ್ರಕೃತಿ, ಸೃಷ್ಟಿಗೆ ನಾವು ಹುಟ್ಟಿದ್ದೂ ಗೊತ್ತಿಲ್ಲ, ನಾವು ಹೋಗುವುದೂ ಗೊತ್ತಿಲ್ಲ. ಆದರೆ ನಾವು ಇಂತಹ ಸಂದರ್ಭಗಳನ್ನು ಧ್ವನಿವರ್ಧಕ ಇರಿಸಿ, ಸುಡುಮದ್ದು ಸಿಡಿಸಿ ಆಚರಿಸುತ್ತೇವೆ ಅಥವಾ ರೋದಿಸುತ್ತೇವೆ. ನಮ್ಮ ಹುಟ್ಟು -ಅಳಿವು ನೀರಿನ ಮೇಲೆ ಗೆರೆ ಹಾಕಿದ ಹಾಗೆ, ಎಳೆಯುವುದರ ಹಿಂದೆಯೇ ಅಳಿಯುತ್ತ ಹೋಗುತ್ತದೆ.

ಇರುವ ಇಷ್ಟೇ ಇಷ್ಟು ಸಮಯದಲ್ಲಿ ನಮ್ಮ ನಮ್ಮ ಸಂತೃಪ್ತಿಗಾದರೂ ಒಂದಿಷ್ಟು ಚೆನ್ನಾಗಿ ಬದುಕಬಾರದೆ!

(ಸಾರ ಸಂಗ್ರಹ)

ಟಾಪ್ ನ್ಯೂಸ್

7-mng

Mumtaz Ali; ಮೊಯ್ದೀನ್ ಬಾವ ಸೋದರ ನಾಪತ್ತೆ; ಸೇತುವೆಯಲ್ಲಿ ಕಾರು ಬಿಟ್ಟು ಆತ್ಮಹತ್ಯೆ ಶಂಕೆ !

Bigg Boss Kannada11: ಬಿಗ್‌ ಬಾಸ್‌ ಮನೆಯಿಂದ ಈ ವಾರ ಹೊರಗೆ ಬರುವುದು ಇವರೇ..?

Bigg Boss Kannada11: ಬಿಗ್‌ ಬಾಸ್‌ ಮನೆಯಿಂದ ಈ ವಾರ ಹೊರಗೆ ಬರುವುದು ಇವರೇ..?

6-ucchila

Udupi ಉಚ್ಚಿಲ ದಸರಾ 2024: ಉಡುಪಿ ಮತ್ತು ದ.ಕ. ಜಿಲ್ಲಾಮಟ್ಟದ ಕುಸ್ತಿ ಸ್ಪರ್ಧೆ ಉದ್ಘಾಟನೆ

Hindalga Jail: Inmate assaulted by four undertrials

Hindalga Jail: ಕೈದಿ ಮೇಲೆ ನಾಲ್ವರು ವಿಚಾರಣಾಧೀನ ಕೈದಿಗಳಿಂದ ಹಲ್ಲೆ

Mangaluru: ಮುಮ್ತಾಜ್‌ ಅಲಿ ನಾಪತ್ತೆ; ಮುಂಜಾನೆ ವೇಳೆ ಆಗಿದ್ದೇನು?

Mangaluru: ಮುಮ್ತಾಜ್‌ ಅಲಿ ನಾಪತ್ತೆ; ಮುಂಜಾನೆ ವೇಳೆ ಆಗಿದ್ದೇನು?

Dasara elephants: ದಸರಾ ಆನೆಗಳ ದಾದಾಗಿರಿ ದಿನಗಳು!

Dasara elephants: ದಸರಾ ಆನೆಗಳ ದಾದಾಗಿರಿ ದಿನಗಳು!

4-health

Childhood: ಬಾಲ್ಯಕಾಲದ ಆಘಾತಗಳು ಮತ್ತು ಆರೋಗ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನನ್ನೊಳಗಿನ “ನಾನು’ ಹೋದರೆ ಹೋದೇನು

ನನ್ನೊಳಗಿನ “ನಾನು’ ಹೋದರೆ ಹೋದೇನು

ಮಾನವ ಜನ್ಮವನ್ನು ವ್ಯರ್ಥಗೊಳಿಸದಿರೋಣ

ಮಾನವ ಜನ್ಮವನ್ನು ವ್ಯರ್ಥಗೊಳಿಸದಿರೋಣ

achivement

ಗೆಲುವಿನ ದಾರಿ ದೂರ… ಪ್ರಯತ್ನ ನಿರಂತರವಾಗಿರಲಿ

ಆತ್ಮತೃಪ್ತಿ, ಹೃದಯ ಶ್ರೀಮಂತಿಕೆಯೇ ಶ್ರೇಷ್ಠ

ಆತ್ಮತೃಪ್ತಿ, ಹೃದಯ ಶ್ರೀಮಂತಿಕೆಯೇ ಶ್ರೇಷ್ಠ

ನಾವೆಲ್ಲರೂ ಸ್ನೇಹಜೀವಿಗಳಾಗೋಣ

ನಾವೆಲ್ಲರೂ ಸ್ನೇಹಜೀವಿಗಳಾಗೋಣ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

2(1)

Mangaluru: ಕಲೆಗೆ ಜೀವ ತಳೆವ ನವದುರ್ಗೆಯರು!

8-shirva

ಕನ್ನಡ ಜ್ಯೋತಿ ರಥ; ಕಾಪು ತಾಲೂಕಿಗೆ ಸ್ವಾಗತ; ಕನ್ನಡ ಅಮೃತ ಭಾಷೆಯಾಗಿ ಬೆಳಗಲಿ: ತಹಶೀಲ್ದಾರ್‌

7-mng

Mumtaz Ali; ಮೊಯ್ದೀನ್ ಬಾವ ಸೋದರ ನಾಪತ್ತೆ; ಸೇತುವೆಯಲ್ಲಿ ಕಾರು ಬಿಟ್ಟು ಆತ್ಮಹತ್ಯೆ ಶಂಕೆ !

Bigg Boss Kannada11: ಬಿಗ್‌ ಬಾಸ್‌ ಮನೆಯಿಂದ ಈ ವಾರ ಹೊರಗೆ ಬರುವುದು ಇವರೇ..?

Bigg Boss Kannada11: ಬಿಗ್‌ ಬಾಸ್‌ ಮನೆಯಿಂದ ಈ ವಾರ ಹೊರಗೆ ಬರುವುದು ಇವರೇ..?

6-ucchila

Udupi ಉಚ್ಚಿಲ ದಸರಾ 2024: ಉಡುಪಿ ಮತ್ತು ದ.ಕ. ಜಿಲ್ಲಾಮಟ್ಟದ ಕುಸ್ತಿ ಸ್ಪರ್ಧೆ ಉದ್ಘಾಟನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.