ಅಡಿಕೆ ಕಳ್ಳಸಾಗಣೆ ತಡೆಯೇ ಮೊದಲ ಆದ್ಯತೆ; ಕ್ಯಾಂಪ್ಕೊ ನೂತನ ಅಧ್ಯಕ್ಷ ಕೊಡ್ಗಿ


Team Udayavani, Dec 15, 2020, 5:31 AM IST

KISHOR-KODGI

ಕುಂದಾಪುರ: ಅಡಿಕೆ ಬೆಳೆಗಾರರ ಸಹಕಾರ ಸಂಸ್ಥೆಯಾಗಿರುವ ಕ್ಯಾಂಪ್ಕೊದ ನೂತನ ಅಧ್ಯಕ್ಷರಾಗಿ ಕುಂದಾಪುರ ತಾಲೂಕಿನ ಅಮಾಸೆಬೈಲು ಗ್ರಾಮದ ಕಿಶೋರ್‌ ಕುಮಾರ್‌ ಕೊಡ್ಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಮೂರು ಅವಧಿಗೆ ನಿರ್ದೇಶಕ ರಾಗಿದ್ದ ಅವರು ನಾಲ್ಕನೇ ಅವಧಿಗೂ ನಿರ್ದೇಶಕರಾಗಿದ್ದಾರೆ. ಕ್ಯಾಂಪ್ಕೊದ ಅಧ್ಯಕ್ಷರಾಗುತ್ತಿ ರುವ ಉಡುಪಿ ಜಿಲ್ಲೆಯ ಮೊದಲಿಗರು. ಕ್ಯಾಂಪ್ಕೊ ಮಂಡಳಿಗೆ ಆಯ್ಕೆಯಾದ ಜಿಲ್ಲೆಯ ಮೊದಲ ಪ್ರತಿನಿಧಿಯೂ ಹೌದು. ಪ್ರಸ್ತುತ ಕಿಶೋರ್‌ ಕೊಡ್ಗಿ ಮತ್ತು ಕಾರ್ಕಳದ ದಯಾನಂದ ಹೆಗಡೆ ಉಡುಪಿ ಜಿಲ್ಲೆಯನ್ನು ಪ್ರತಿನಿಧಿಸುತ್ತಿದ್ದಾರೆ. ಕಿಶೋರ್‌ ಮುತ್ಸದ್ದಿ ರಾಜಕಾರಣಿ, ಹಿರಿಯ ಸಹಕಾರಿ, 3ನೇ ಹಣಕಾಸು ಆಯೋಗದ ಅಧ್ಯಕ್ಷ ಎ.ಜಿ. ಕೊಡ್ಗಿ ಅವರ ಪುತ್ರ.

ವಿದೇಶಗಳಿಂದ ಅಡಿಕೆ ಕಳ್ಳ ಆಮದು, ಗುಟ್ಕಾ ನಿಷೇಧದ ತೂಗು ಗತ್ತಿ, ಅಡಿಕೆ ಖರೀದಿ ಸಂಬಂಧ ನಡೆದಿದೆ ಎನ್ನಲಾದ ಅವ್ಯವಹಾರದ ಆರೋಪ – ಹೀಗೆ ಅಡಿಕೆ ಬೆಳೆಗಾರರ ಹಿತ ಕಾಯಬೇಕಾದ ಹತ್ತು ಹಲವು ಸವಾಲುಗಳು ಕಿಶೋರ್‌ ಅವರ ಮುಂದಿವೆ. ಈ ಹಿನ್ನೆಲೆಯಲ್ಲಿ ಕಿಶೋರ್‌ ಕೊಡ್ಗಿ “ಉದಯವಾಣಿ’ಯೊಂದಿಗೆ ಮಾತನಾಡಿದ್ದಾರೆ.

ಅಧ್ಯಕ್ಷರಾಗುವ ನಿರೀಕ್ಷೆ ಇತ್ತೇ?
ಇರಲಿಲ್ಲ; ಆಪೇಕ್ಷೆಯೂ ಇರಲಿಲ್ಲ. ಹಿರಿಯರೆಲ್ಲರ ಒತ್ತಾಯದ ಮೇರೆಗೆ ಈ ಹುದ್ದೆ ಯನ್ನು ಒಪ್ಪಿಕೊಂಡಿದ್ದೇನೆ. ಅವಕಾಶ ಕೊಟ್ಟಿದ್ದಾರೆ; ಬೆಳೆಗಾರರಿಗೆ ಒಳಿತಾಗುವ ಕಾರ್ಯವನ್ನು ಮಾಡುವೆ.

ಬೆಲೆ ಏರಿಕೆಯಿಂದಾಗಿ ಅಡಿಕೆ ಬೆಳೆಗಾರರು ಹೆಚ್ಚುತ್ತಿದ್ದಾರೆ. ಇದು ಭವಿಷ್ಯದಲ್ಲಿ ಪ್ರತಿಕೂಲ ಪರಿಣಾಮ ಬೀರಬಹುದೇ?
ಧಾರಣೆ ಏರಿಕೆಯಿಂದಾಗಿ ಮಲೆನಾಡು, ಕರಾವಳಿ ಜಿಲ್ಲೆಗಳು ಮಾತ್ರವಲ್ಲದೆ ಬಯಲು ಸೀಮೆ ಯಲ್ಲೂ ಅಡಿಕೆ ಬೆಳೆಯು ವವರ ಸಂಖ್ಯೆ ಹೆಚ್ಚುತ್ತಿದೆ. ಗದ್ದೆ, ಗುಡ್ಡಗಳು ಅಡಿಕೆ ತೋಟಗಳಾಗಿ ಬದಲಾಗುತ್ತಿವೆ. ಇದು ಭವಿಷ್ಯದ ದೃಷ್ಟಿಯಿಂದ ಆತಂಕವೂ ಹೌದು. ಯಾಕೆಂದರೆ ಅಡಿಕೆಗೆ ಈಗಿರುವ ಬೆಲೆ ಸ್ಥಿರವಾಗಿರುತ್ತದೆ ಎನ್ನಲಾಗದು. ಹಾಗಾಗಿ ಅಡಿಕೆ ಬೆಳೆಗಾರರು ಕೊಕ್ಕೊ, ಕಾಳುಮೆಣಸಿನಂತಹ ಪರ್ಯಾಯ ಬೆಳೆಗಳತ್ತಲೂ ಯೋಚನೆ ಮಾಡಬೇಕಿದೆ. ಹಿಂದೆ ರಬ್ಬರ್‌ ಬೆಲೆ ಏರಿಕೆಯಾದಾಗಲೂ ಹೀಗೆ ಆಗಿತ್ತು. ಈಗ ರಬ್ಬರ್‌ ಬೆಳೆ ಪಾತಾಳಕ್ಕೆ ಕುಸಿದಿದ್ದು, ಮತ್ತೆ ಅಡಿಕೆಯತ್ತ ಮನಸ್ಸು ಮಾಡಿದ್ದಾರೆ. ಹಾಗಾಗಿ ರೈತರು ಎಚ್ಚರಿಕೆಯಿಂದಲೇ ಹೆಜ್ಜೆ ಇರಿಸಬೇಕಿದೆ.

ಉಡುಪಿಯಲ್ಲಿ ಅಡಿಕೆ ಖರೀದಿ ಕೇಂದ್ರಕ್ಕೆ ಬೇಡಿಕೆ ಇದೆಯೆ?
ಕುಂದಾಪುರದಲ್ಲಿ ಕುಂದಾಪುರ, ಸಿದ್ದಾಪುರ, ಕಾರ್ಕಳದಲ್ಲಿ ಕಾರ್ಕಳ ಮತ್ತು ಹೆಬ್ರಿ ಸಹಿತ ಜಿಲ್ಲೆಯಲ್ಲಿ ನಾಲ್ಕು ಅಡಿಕೆ ಖರೀದಿ ಕೇಂದ್ರಗಳಿವೆ. ಕ್ಯಾಂಪ್ಕೊ ಸಂಸ್ಥೆಯಡಿ ಒಟ್ಟಾರೆ 74 ಖರೀದಿ ಕೇಂದ್ರಗಳಿವೆ. ಜಿಲ್ಲಾ ಕೇಂದ್ರವಾದ ಉಡುಪಿಯಲ್ಲಿ ಅಡಿಕೆ ಖರೀದಿ ಕೇಂದ್ರದ ಬೇಡಿಕೆಯನ್ನು ಶಾಸಕರು ಮುಂದಿರಿಸಿದ್ದಾರೆ. ಆದರೆ ಅಲ್ಲಿ ಮಾಡಿದರೆ ಅಷ್ಟೇನು ಪ್ರಯೋಜನಕ್ಕೆ ಬಾರದು. ಹಾಗಾಗಿ ಬ್ರಹ್ಮಾವರದಲ್ಲಿ ಖರೀದಿ ಕೇಂದ್ರ ಆರಂಭಿಸುವ ಚಿಂತನೆಯಿದೆ.

ಖಾಸಗಿ ಮಾರುಕಟ್ಟೆಯ ಬೆಲೆ ಇಳಿಸುವ ತಂತ್ರಕ್ಕೆ ಕ್ಯಾಂಪ್ಕೊದಿಂದ ಕಡಿವಾಣ ಸಾಧ್ಯವೇ?
ಖಾಸಗಿ ಮಾರುಕಟ್ಟೆಗಳಲ್ಲಿ ಆಗಾಗ ಬೆಲೆ ಕಡಿಮೆ ಮಾಡುವ ತಂತ್ರಗಳು ನಡೆಯುತ್ತವೆ. ಇದನ್ನು ಬೆಳೆಗಾರರು ಅರಿತು ಅಡಿಕೆ ಯನ್ನು ಕ್ಯಾಂಪ್ಕೊಗೆ ಹೆಚ್ಚೆಚ್ಚು ಮಾರಿದರೆ ಸಂಸ್ಥೆಯ ಸ್ಥಿರ ಆದಾಯವು ಹೆಚ್ಚಲಿದೆ. ಇದರಿಂದ ಬೆಲೆ ನಿಯಂತ್ರಣಕ್ಕೂ ಪ್ರಯತ್ನಿಸಬಹುದು.

 ಬೆಳೆಗಾರರ ಹಿತ ಕಾಯುವ ನಿಟ್ಟಿನಲ್ಲಿ ನಿಮ್ಮ ಯೋಜನೆಗಳೇನು?
ಸಂಸ್ಥೆಯಲ್ಲಿ 1.20 ಲಕ್ಷ ಅಡಿಕೆ ಬೆಳೆಗಾರ ಸದಸ್ಯರಿದ್ದಾರೆ. ಮುಂದಿನ ದಿನಗಳಲ್ಲಿ ಅಡಿಕೆ ಬೆಳೆಗಾರ ಮೃತಪಟ್ಟರೆ ಆ ಕುಟುಂಬಕ್ಕೆ ಕನಿಷ್ಠ 3 ಲಕ್ಷ ರೂ. ವಿಮೆ ಕೊಡುವ ಮಹತ್ವದ ಕನಸಿದೆ. ಅಡಿಕೆ ಕೃಷಿಗೆ ಹೆಚ್ಚೆಚ್ಚು ಯಂತ್ರೋಪಕರಣ ಬಳಸುವ ನಿಟ್ಟಿನಲ್ಲಿ ರೈತರಿಗೆ ಕಾರ್ಯಾಗಾರ ನಡೆಸಲಾಗುವುದು. ಪುತ್ತೂರು ಬಳಿ ಕಾವು ಎನ್ನುವಲ್ಲಿ 25 ಕೋ.ರೂ. ವೆಚ್ಚದ ಸುಸಜ್ಜಿತ ಗೋದಾಮು ಆರಂಭವಾಗಲಿದೆ.

ಆಮದು ಅಲ್ಲವೇ ಅಲ್ಲ
ಅಡಿಕೆ ಆಮದು ಅಲ್ಲ. ಒಂದು ರೀತಿಯಲ್ಲಿ ಅಡಿಕೆ ಸ್ಮಗ್ಲಿಂಗ್‌ ನಡೆಯುತ್ತಿದೆ. ಮ್ಯಾನ್ಮಾರ್‌ ಮತ್ತಿತರ ದೇಶಗಳಿಂದ ಹೆಚ್ಚೆಚ್ಚು ಅಡಿಕೆಯನ್ನು ಕಡಿಮೆ ಬೆಲೆಗೆ ತರಿಸಿಕೊಳ್ಳಲಾಗುತ್ತಿದೆ. ಇದನ್ನು ತಡೆಯಲು ಪ್ರಯತ್ನಿಸುವುದೇ ನಮ್ಮ ಮೊದಲ ಆದ್ಯತೆ. ಅದಕ್ಕೆ ಪ್ರಸ್ತುತ ಇರುವ 251 ರೂ. ಕನಿಷ್ಠ ದರವನ್ನು 300 ರೂ.ಗೆ ಏರಿಸಿದರೆ, ಶೇ. 33ರಷ್ಟು ತೆರಿಗೆ ಸೇರಿ, 390 ರೂ.ವರೆಗೂ ಬೆಲೆ ಏರುತ್ತದೆ. ಇದರಿಂದ ನಮ್ಮ ಅಡಿಕೆ ಬೆಳೆಗಾರರಿಗೆ ಪ್ರಯೋಜನವಾಗಲಿದೆ. ಈ ನಿಟ್ಟಿನಲ್ಲಿ ಕೇಂದ್ರ ಸಚಿವರು, ಸಂಸದರು, ಶಾಸಕರ ಮೂಲಕ ಕೇಂದ್ರಕ್ಕೆ ಒತ್ತಡ ತರಲಾಗುವುದು. ಅಡಿಕೆ ಆಮದು ನಿಷೇಧಕ್ಕೂ ಕ್ಯಾಂಪ್ಕೊ ಪ್ರಾಮಾಣಿಕವಾಗಿ ಪ್ರಯತ್ನಿಸಲಿದೆ.

ತನಿಖೆಯಿಂದ ಸತ್ಯಾಂಶ ಬಯಲು
ಮೂವರು ನಿರ್ದೇಶಕರಿಂದ ಮಾರುಕಟ್ಟೆಗಿಂತ ಹೆಚ್ಚು ದರಕ್ಕೆ ಅಡಿಕೆಯನ್ನು ಖರೀದಿಸಲಾಗಿದೆ ಎನ್ನುವ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಅದಾಗಿಯೂ ಸಂಶಯ ನಿವಾರಣೆಯ ಸಲುವಾಗಿ ಹಿಂದಿನಅಧ್ಯಕ್ಷರೇ ಸಭೆಯಲ್ಲಿ ತಿಳಿಸಿದಂತೆ, ಸಂಬಂಧಪಟ್ಟ ಉನ್ನತ ಮಟ್ಟದ ಅಧಿಕಾರಿಗಳಿಂದ ತನಿಖೆ ನಡೆಸಲಾಗುತ್ತದೆ. ತನಿಖೆಯಿಂದ ಸತ್ಯಾಂಶ ಬಯಲಾಗಲಿದೆ.

 ಪ್ರಶಾಂತ್‌ ಪಾದೆ

ಟಾಪ್ ನ್ಯೂಸ್

4-health

Childhood: ಬಾಲ್ಯಕಾಲದ ಆಘಾತಗಳು ಮತ್ತು ಆರೋಗ್ಯ

1

Crime: ಯೂಟ್ಯೂಬ್‌ ನೋಡಿ ಪ್ರೇಯಸಿಯ 59 ತುಂಡು ಮಾಡಿದ್ದ ಹಂತಕ!

INDvsBAN: New openers for India in T20; Who is the opener with Sharma?

INDvsBAN: ಟಿ20ಯಲ್ಲಿ ಭಾರತಕ್ಕೆ ಹೊಸ ಆರಂಭಿಕರು; ಶರ್ಮಾ ಜತೆ ಓಪನರ್‌ ಯಾರು?

3-doctor-patient

Doctor-Patient relationship: ವೈದ್ಯ – ರೋಗಿ ಸಂಬಂಧ ಮುಂದೇನು?

vidya balan in bhool bhulaiya 3

Vidya Balan; ಮತ್ತೆ ಬಂದಳು ಮಂಜುಳಿಕಾ!

mumbai

Short Circuit; ಅಗ್ನಿ ಆಕಸ್ಮಿಕದಲ್ಲಿ ಒಂದೇ ಕುಟುಂಬದ ಏಳು ಮಂದಿ ಸಜೀವ ದಹನ

Agra: ಶಿಕ್ಷಕಿಯ ಆಕ್ಷೇಪಾರ್ಹ ವಿಡಿಯೋ ಹಂಚಿಕೊಂಡ ವಿದ್ಯಾರ್ಥಿಗಳು; ನಾಲ್ವರ ಬಂಧನ

Agra: ಶಿಕ್ಷಕಿಯ ಆಕ್ಷೇಪಾರ್ಹ ವಿಡಿಯೋ ಹಂಚಿಕೊಂಡ ವಿದ್ಯಾರ್ಥಿಗಳು; ನಾಲ್ವರ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ಎಸ್‌ಬಿಐ ಗೃಹ ಮತ್ತು ಕಾರು ಸಾಲ ಹಬ್ಬದ ಉದ್ಘಾಟನೆ

Udupi: ಎಸ್‌ಬಿಐ ಗೃಹ ಮತ್ತು ಕಾರು ಸಾಲ ಹಬ್ಬದ ಉದ್ಘಾಟನೆ

Malpe-See-Ambulance

Tender Open: ತುರ್ತು ಸೇವೆಗೆ ಬರಲಿದೆ ಮೂರು ಸೀ ಆ್ಯಂಬುಲೆನ್ಸ್‌

kunita-bhajane

Kaup: ಉಚ್ಚಿಲ ದಸರಾ: ಐತಿಹಾಸಿಕ ದಾಖಲೆ ಬರೆದ ಸಾಮೂಹಿಕ ಕುಣಿತ ಭಜನೆ

Comet

Comet of the Century: ಅಕ್ಟೋಬರ್‌ನಲ್ಲಿ ಧೂಮಕೇತುಗಳ ಮೆರವಣಿಗೆ

Udupi-DC-Meeting

Udupi: ಅಕ್ರಮ ಮೀನುಗಾರಿಕೆ ಬೋಟುಗಳಿಗೆ ಗರಿಷ್ಠ ದಂಡ: ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

4-health

Childhood: ಬಾಲ್ಯಕಾಲದ ಆಘಾತಗಳು ಮತ್ತು ಆರೋಗ್ಯ

7

Road Mishap: ಲಾರಿ ಚಕ್ರ ಹರಿದು ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೇ ದುರ್ಮರಣ

‌Fraud: ಚೀಟಿ ವ್ಯವಹಾರದಲ್ಲಿ ವಂಚನೆ; ಪತಿ, ಪತ್ನಿ, ಪುತ್ರ ಬಂಧನ

‌Fraud: ಚೀಟಿ ವ್ಯವಹಾರದಲ್ಲಿ ವಂಚನೆ; ಪತಿ, ಪತ್ನಿ, ಪುತ್ರ ಬಂಧನ

Arrested: ದೇವರಾಜ ಅರಸು ಟ್ರಕ್‌ ಟರ್ಮಿನಲ್‌ ಪ್ರಕರಣ; ಮತ್ತೂಬ್ಬ ಅಧಿಕಾರಿ ಬಂಧನ

Arrested: ದೇವರಾಜ ಅರಸು ಟ್ರಕ್‌ ಟರ್ಮಿನಲ್‌ ಪ್ರಕರಣ; ಮತ್ತೂಬ್ಬ ಅಧಿಕಾರಿ ಬಂಧನ

Udupi: ಎಸ್‌ಬಿಐ ಗೃಹ ಮತ್ತು ಕಾರು ಸಾಲ ಹಬ್ಬದ ಉದ್ಘಾಟನೆ

Udupi: ಎಸ್‌ಬಿಐ ಗೃಹ ಮತ್ತು ಕಾರು ಸಾಲ ಹಬ್ಬದ ಉದ್ಘಾಟನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.