ತಾಲೂಕಿನ 55 ಸಾವಿರ ರೈತರ ಖಾತೆಗೆ ಕಿಸಾನ್‌ ಸಮ್ಮಾನ್‌ ಹಣ

1,059 ಮಂದಿ ರೈತರುಕಿಸಾನ್‌ ಸಮ್ಮಾನ್‌ಯೋಜನೆಯಿಂದ ಹೊರಗೆ

Team Udayavani, Dec 16, 2020, 5:10 PM IST

ತಾಲೂಕಿನ 55 ಸಾವಿರ ರೈತರ ಖಾತೆಗೆ ಕಿಸಾನ್‌ ಸಮ್ಮಾನ್‌ ಹಣ

ಚನ್ನರಾಯಪಟ್ಟಣ: ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ(ಪಿಎಂಕೆಎಸ್‌)ಯಿಂದ ತಾಲೂಕಿನ 55,597 ಮಂದಿ ರೈತರ ಬ್ಯಾಂಕ್‌ ಖಾತೆಗೆ ಸಹಾಯ ಧನ ಜಮೆ ಆಗಿದೆ.

ತಾಲೂಕಿನಲ್ಲಿ ಒಟ್ಟಾರೆಯಾಗಿ 57,143 ಮಂದಿ ಪಿಎಂಕೆಎಸ್‌ವೈ ಯೋಜನೆಯಡಿ ನೋಂದಣಿಪಡೆದಿದ್ದರು. 55,597 ಮಂದಿ ರೈತರು ಇದರಲಾಭ ಪಡೆಯುತ್ತಿದ್ದಾರೆ, ಇನ್ನು 487 ರೈತರ ಕೃಷಿಭೂಮಿ ಹೊಂದಿದ್ದರೂಖಾತೆಯಲ್ಲಿ ಲೋಪವಿದ್ದು, ಸರ್ಕಾರವೇ ಹಣ ತಡೆ ಹಿಡಿದಿದೆ. ಇನ್ನು 1,059 ಮಂದಿ ರೈತರು ಕಿಸಾನ್‌ ಸಮ್ಮಾನ್‌ ಯೋಜನೆಯಿಂದ ಹೊರಗೆ ಉಳಿದಿದ್ದು ಇದಕ್ಕೆ ಸೂಕ್ತ ಕಾರಣ ತಿಳಿದುಬಂದಿಲ್ಲ.

ಹೋಬಳಿವಾರು ವಿವರ: ಕಸಬಾ ಹೋಬಳಿಯಲ್ಲಿ 9,494 ಮಂದಿ ರೈತರು ತಮ್ಮ ಹೆಸರು ನೋಂದಣಿಮಾಡಿಕೊಂಡಿದ್ದು, ಅವರಲ್ಲಿ 9,303 ಮಂದಿ ರೈತರಖಾತೆಗೆ ನೇರವಾಗಿ ಹಣ ಜಮೆಯಾಗಿದೆ. ಇದೇರೀತಿಯಲ್ಲಿ ಹಿರೀಸಾವೆ ಹೋಬಳಿಯಲ್ಲಿ 9,210ರೈತರು ನೋಂದಣಿ ಮಾಡಿಸಿಕೊಂಡಿದ್ದು, 9,054 ಮಂದಿಗೆ ಸಹಾಯಧನ ಬಂದಿದೆ.

ದಂಡಿಗನಹಳ್ಳಿ ಹೋಬಳಿಯ9,656 ಮಂದಿಯಲ್ಲಿ9,340 ರೈತರ ಖಾತೆಗೆ ಕಿಸಾನ್‌ ಸಮ್ಮಾನ್‌ ಯೋಜನೆಹಣ ಬಂದಿದೆ. ಬಾಗೂರು ಹೋಬಳಿಯ 9,149 ರೈತರಲ್ಲಿ 8880 ಮಂದಿಗೆ ಖಾತೆಗೆ ಜಮೆಯಾಗಿದೆ. ಶ್ರವಣಬೆಳಗೊಳ ಹೋಬಳಿಯ 10,001 ರೈತರಲ್ಲಿ 9,650 ಹಾಗೂ ನುಗ್ಗೇಹಳ್ಳಿ ಹೋಬಳಿಯ 9,633 ರೈತರಲ್ಲಿ9,370 ರೈತರು ಸಹಾಯ ಧನ ಪಡೆದಿದ್ದಾರೆ.

ಯೋಜನೆಯಿಂದ ಹೊರಗುಳಿದವರು:

ಕಸಬಾದಿಂದ 71, ಹಿರೀಸಾವೆ 68, ದಂಡಿಗನಹಳ್ಳಿ 42, ಬಾಗೂರು 86, ಶ್ರವಣಬೆಳಗೊಳ 85, ನುಗ್ಗೇ ಹಳ್ಳಿ 46 ಮಂದಿ ರೈತರು ಫೆ.1.2019ರ ನಂತರ ಕೃಷಿಭೂಮಿ ಹೊಸದಾಗಿ ಖರೀದಿ ಮಾಡಿದ್ದು, ಇಲ್ಲವೆಪೌತಿ ಖಾತೆ ಮಾಡಿಸಿಕೊಂಡಿದ್ದಾರೆ. ಅವರಿಗೆಕಿಸಾನ್‌ ಸಮ್ಮಾನ್‌ ಯೋಜನೆ ಸಹಾಯಧನ ಈವರೆಗೆಬಂದಿಲ್ಲ, ಇನ್ನು ಆರು ಹೋಬಳಿಯಿಂದ 73 ರೈತರಹೆಸರಿನಲ್ಲಿ ಕೃಷಿ ಭೂಮಿ ಖಾತೆಹೊಂದಿದ್ದರೂ ಕಂದಾಯ ಇಲಾಖೆಯ ಭೂಮಿ ತಂತ್ರಾಂಶದಲ್ಲಿ ಅಪ್‌ಲೋಡ್‌ ಆಗದ ಪರಿಣಾಮ ಈವರೆಗೆ ಸಹಾಯ ಧನದಿಂದ ಹೊರಗೆ ಉಳಿದಿದ್ದಾರೆ.

ಶೇ.70 ಪೂರ್ಣ: ತಾಲೂಕಿನಲ್ಲಿ ಅಂದಾಜಿನಪ್ರಕಾರ 1.20500 ಕೃಷಿಕರಿದ್ದು, ಅವರಲ್ಲಿ 57143 ರೈತರು ಪಿಎಂಕೆಎಸ್‌ವೈನಲ್ಲಿ ನೋಂದಣಿ ಮಾಡಿದಿದ್ದಾರೆ. ಒಂದು ಲಕ್ಷ ರೈತರಲ್ಲಿ 10 ಸಾವಿರ ರೈತರಪಾವತಿ ಖಾತೆ ಮಾಡಬೇಕಿದ್ದು, ಈ ಯೋಜನೆ ಒಳಪಟ್ಟಿಲ್ಲ, 10 ಸಾವಿರ ಮಂದಿ ಗ್ರಾಮದಲ್ಲಿ ವಾಸವಾಗಿಲ್ಲ, 6 ಸಾವಿರ ಮಂದಿ ರೈತರು ಕೃಷಿ ರಹಿತಭೂಮಿ ಹೊಂದಿದ್ದಾರೆ. ಸಾವಿರಾರು ಮಂದಿ ಕೃಷಿಭೂಮಿ ಹೊಂದಿದ್ದು, ವ್ಯವಸಾಯ ಮಾಡುತ್ತಿದ್ದುಸೂಕ್ತ ದಾಖಲೆ ಹೊಂದಿಲ್ಲ. ಸರ್ಕಾರಿ ಇಲಾಖೆ ಸಿಬ್ಬಂದಿ, ಸರ್ಕಾರಿ ಸೇವೆಯಿಂದ ನಿವೃತ್ತಿ ಹೊಂದಿರುವವರು, ತಾಪಂ ಹಾಲಿ, ಮಾಜಿ, ಜಿಪಂ ಹಾಲಿ, ಮಾಜಿ, ಲೋಕಸಭೆ ಹಾಲಿ, ಮಾಜಿ ಸದಸ್ಯರು, ಹಾಲಿ, ಮಾಜಿ ಶಾಸಕರು, ವಿಧಾನ ಪರಿಷತ್‌ ಹಾಲಿ, ಮಾಜಿ ಸದಸ್ಯರು, ರಾಜ್ಯಸಭಾಸದಸ್ಯರು ಹೀಗೆ ಜನಪ್ರತಿನಿಧಿಗಳು ಜನಸೇವೆಮಾಡುವ ಹಾಲಿ, ಮಾಜಿ ಜನಪ್ರತಿನಿಧಿಗಳು ಈ ಯೋಜನೆಯಿಂದ ಹೊರಗೆ ಉಳಿದಿದ್ದಾರೆ.

ಕೃಷಿ ಸಾಲ ಮನ್ನಾಯೋಜನೆ ಉಳ್ಳವರ ಪಾಲಾಗುತ್ತಿದೆ.ಕೇಂದ್ರ ಸರ್ಕಾರ ಎಲ್ಲ ರೈತರಿಗೂ ವಾರ್ಷಿಕ 6 ಸಾವಿರ ರೂ. ಹಣಖಾತೆಗೆ ಜಮಾ ಮಾಡುತ್ತಿದೆ. ಇನ್ನು ರಾಜ್ಯಸರ್ಕಾರ ಸಹ ವಾರ್ಷಿಕ 4 ಸಾವಿರ ರೂ.ನೀಡುವ ಮೂಲಕ ವ್ಯವಸಾಯಕ್ಕೆ ಅನುಕೂಲ ಮಾಡಿಕೊಡಲಾಗಿದೆ. ಕೆ.ಬಿ.ಶಿವಶಂಕರ್‌, ಕಾಂತರಾಜಪುರ, ಕೃಷಿಕ

 

ಶಾಮಸುಂದರ್‌ ಕೆ.ಅಣ್ಣೇನಹಳ್ಳಿ

ಟಾಪ್ ನ್ಯೂಸ್

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

R. Ashok: ನವೆಂಬರ್‌ ಬಳಿಕ ಕಾಂಗ್ರೆಸ್‌ನಲ್ಲಿ ಜ್ವಾಲಾಮುಖಿ ಸ್ಫೋ*ಟ: ಅಶೋಕ್‌

R. Ashok: ನವೆಂಬರ್‌ ಬಳಿಕ ಕಾಂಗ್ರೆಸ್‌ನಲ್ಲಿ ಜ್ವಾಲಾಮುಖಿ ಸ್ಫೋ*ಟ: ಅಶೋಕ್‌

R. Ashok: ಮೈಸೂರು ಕೇಸ್‌ನಲ್ಲಿ ಪೊಲೀಸರೇ ಅಪರಾಧಿಗಳಾಗ್ತಾರೆ; ಆರ್‌.ಅಶೋಕ್‌

R. Ashok: ಮೈಸೂರು ಕೇಸ್‌ನಲ್ಲಿ ಪೊಲೀಸರೇ ಅಪರಾಧಿಗಳಾಗ್ತಾರೆ; ಆರ್‌.ಅಶೋಕ್‌

ಇಂದು ಎತ್ತಿನಹೊಳೆ ವೈಮಾನಿಕ ಪರಿವೀಕ್ಷಣೆ ನಡೆಸುವ ಡಿಸಿಎಂ

ಇಂದು ಎತ್ತಿನಹೊಳೆ ವೈಮಾನಿಕ ಪರಿವೀಕ್ಷಣೆ ನಡೆಸುವ ಡಿಸಿಎಂ

de

Arsikere: ಮದುವೆಗೆ ಪ್ರಿಯತಮೆ ನಿರಾಕರಣೆ; ಯುವಕ ಸಾವು

HD-Revanna

ಕಾಂಗ್ರೆಸ್‌ಗೆ 136 ಸ್ಥಾನವಿದ್ದರೂ ಜೆಡಿಎಸ್‌ ಶಾಸಕರ ಸೆಳೆಯೋ ದುಸ್ಥಿತಿ: ಎಚ್‌.ಡಿ.ರೇವಣ್ಣ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

arrested

CM ಕಚೇರಿಯ ಟಿಪ್ಪಣಿ ನಕಲು: ಬಂಧನ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.