ಹಗೆತನದಿಂದ ಶಾಂತಿ ಅಸಾಧ್ಯ : ಬುದ್ಧನ ತತ್ವ ಸಾರುತ್ತಲೇ ಚೀನಕ್ಕೆ ಮೋದಿ ಬುದ್ಧಿಮಾತು
ಜಗತ್ತಿನ ಅಭಿವೃದ್ಧಿ ಮಾದರಿಗಳು ಮಾನವ ಕೇಂದ್ರಿತವಾಗಿ ರೂಪುಗೊಳ್ಳಬೇಕು
Team Udayavani, Dec 21, 2020, 11:58 PM IST
ಹೊಸದಿಲ್ಲಿ: ಹಗೆತನದಿಂದ ಎಂದಿಗೂ ಶಾಂತಿ ಸಾಧಿಸಲು ಸಾಧ್ಯವಿಲ್ಲ. ನೆರೆಹೊರೆಯವರ ಜತೆ ಸಾಮರಸ್ಯದಿಂದ ಇರುವುದನ್ನು ಕಲಿಯಬೇಕು ಎಂದು ಪ್ರಧಾನಿ ನರೇಂದ್ರ ಮೋದಿ, ಚೀನಕ್ಕೆ ಪರೋಕ್ಷವಾಗಿ ಬುದ್ಧಿಮಾತು ಹೇಳಿದ್ದಾರೆ. 6ನೇ ಇಂಡೋ- ಜಪಾನ್ ಸಂವಾದ ವೀಡಿಯೋ ಕಾನೆ#ರೆನ್ಸ್ನಲ್ಲಿ ಮಾತನಾಡಿದ ಪ್ರಧಾನಿ, “ಸಾಮ್ರಾಜ್ಯಶಾಹಿತ್ವ ದಿಂದ ವಿಶ್ವಯುದ್ಧದವರೆಗೆ… ಶಸ್ತ್ರಾಸ್ತ್ರ ಸ್ಪರ್ಧೆಯಿಂದ ಬಾಹ್ಯಾಕಾಶದ ಓಟದವರೆಗೆ ನಾವು ಮಾತುಕತೆಗೆ ಆದ್ಯತೆ ನೀಡಿದರೆ, ಅವರು ಇತರರನ್ನು ಕೆಳಗಿಳಿಸುವ ಉದ್ದೇಶ ಹೊಂದಿದ್ದರು. ಆದರೂ, ನಾವಿಂದೂ ಅವರ ಸಮನಾಗಿ ಒಟ್ಟಿಗೆ ಮೇಲೇರುತ್ತಿದ್ದೇವೆ’ ಎಂದು ಚೀನ ಹೆಸರು ಪ್ರಸ್ತಾವಿಸದೆ ತಿಳಿಸಿದರು.
ಮಾನವಕೇಂದ್ರಿತ ಅಭಿವೃದ್ಧಿ: “ಜಾಗತಿಕ ಬೆಳವಣಿಗೆ ಕುರಿತ ಚರ್ಚೆಗಳು ಕೆಲವರಿಂದಷ್ಟೇ ಅಸಾಧ್ಯ. ಚರ್ಚೆಯ ಟೇಬಲ್ ದೊಡ್ಡದಾಗಬೇಕು. ಅದಕ್ಕೆ ತಕ್ಕಂತೆ ಕಾರ್ಯಸೂಚಿಗಳೂ ವಿಸ್ತಾರಗೊಳ್ಳಬೇಕು. ಅಭಿವೃದ್ಧಿ ಮಾದರಿಗಳು ಮಾನವ ಕೇಂದ್ರಿತವಾಗಿರಬೇಕು ಎಂದು ಸಲಹೆ ನೀಡಿದರು.
“ಚರಿತ್ರೆಯಿಂದ ಪಾಠ ಕಲಿತು, ಉತ್ತಮ ಭವಿಷ್ಯಕ್ಕಾಗಿ ಕೆಲಸ ಮಾಡಿ ಎಂದು ಭಗವಾನ್ ಬುದ್ಧ ಹೇಳಿದ್ದಾರೆ. ಅವರ ತತ್ತÌಗಳು ಶತ್ರುತ್ವದಿಂದ ಸಬಲೀಕರಣಕ್ಕೆ ನಮ್ಮನ್ನು ಪರಿವರ್ತಿಸುತ್ತವೆ. ನಮ್ಮ ಹೃದಯವನ್ನು ವಿಶಾಲಗೊಳಿಸುತ್ತವೆ’ ಎಂದು ಹೇಳಿದ್ದಾರೆ. ಭಾರತದಲ್ಲಿ ಬೌದ್ಧ ಸಾಹಿತ್ಯ, ಧರ್ಮಗ್ರಂಥಗಳನ್ನೊಳಗೊಂಡ ಬೃಹತ್ ಗ್ರಂಥಾಲಯ ನಿರ್ಮಿಸುವ ಕುರಿತೂ ಮೋದಿ ತಮ್ಮ ಭಾಷಣದಲ್ಲಿ ಪ್ರಸ್ತಾವಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
ತಿಮ್ಮಾಪುರ ಮಾತಿಗೆ ಯತ್ನಾಳ ಪರೋಕ್ಷ ಟಾಂಗ್;ನಾನು ಕಾನೂನಿಗೆ ಗೌರವ ನೀಡುವ ನಿಯತ್ತಿನ ನಾಯಿ
Tragedy: ಜ್ಯೂಸ್ ಕುಡಿದು ಅನಾರೋಗ್ಯಕ್ಕೆ ಒಳಗಾಗಿದ್ದ ಜನಪ್ರಿಯ ಗಾಯಕಿ ನಿಧನ… ಕೊಲೆ ಶಂಕೆ
Private ವಿಶ್ವವಿದ್ಯಾನಿಲಯ ಪ್ರತ್ಯೇಕ ಪ್ರವೇಶ ಪರೀಕ್ಷೆ ಇಲ್ಲ
Belagavi: ಕೊಳಲು ನುಡಿಸುತ್ತಿರುವಾಗಲೇ ಮಿದುಳಿನ ಯಶಸ್ವಿ ಶಸ್ತ್ರಚಿಕಿತ್ಸೆ
Horoscope: ಆರಿಸಿದ ಮಾರ್ಗದ ಬಗೆಗೆ ಆತಂಕ ಬೇಡ, ಉದ್ಯೋಗ ಅರಸುತ್ತಿರುವವರಿಗೆ ಶುಭ ವಾರ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.