ಪೌರಕಾರ್ಮಿಕರಿಗೆ ವಾರದ ರಜೆ
ಹೆಚ್ಚುವರಿ ಶೇ.16 ಸಿಬ್ಬಂದಿ ನೇಮಕಕ್ಕೆ ಬಿಬಿಎಂಪಿಗೆ ಕಾರ್ಮಿಕ ಇಲಾಖೆ ಸ್ಪಷ್ಟೀಕರಣ
Team Udayavani, Dec 23, 2020, 12:28 PM IST
ಸಾಂದರ್ಭಿಕ ಚಿತ್ರ
ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲಾ ಪೌರಕಾರ್ಮಿಕರಿಗೂ ವಾರಕ್ಕೆ ಒಂದು ದಿನ ರಜೆ, ರಾಷ್ಟ್ರೀಯ ರಜೆ ಹಾಗೂ ಹಬ್ಬದ ದಿನಗಳಲ್ಲಿ ರಜೆ ನೀಡುವ ನಿಟ್ಟಿನಲ್ಲಿ ಶೇ.16 ರಷ್ಟು ಹೆಚ್ಚುವರಿ ಸಿಬ್ಬಂದಿ ನೇಮಿಸಿಕೊಳ್ಳಲು ಕ್ರಮ ವಹಿಸುವಂತೆ ಕಾರ್ಮಿಕ ಇಲಾಖೆ ಬಿಬಿಎಂಪಿಗೆ ಸ್ಪಷ್ಟೀಕರಣ ನೀಡಿದೆ.
ನಗರದಲ್ಲಿ ಕಸ ವಿಲೇ ವಾರಿಯರ್ಸ್ ನಲ್ಲಿ ಜವಾಬ್ದಾರಿ ನಿರ್ವಹಿಸುತ್ತಿರುವ ಗುತ್ತಿಗೆ ದಾರರ ಬಿಲ್ ಪಾವತಿ ಮಾಡುವ ಸಂಬಂಧ ಬಿಬಿಎಂಪಿ ಆಯುಕ್ತ ಎನ್. ಮಂಜುನಾಥ್ ಪ್ರಸಾದ್, ವಿಶೇಷ ಆಯುಕ್ತ (ಘನತ್ಯಾಜ್ಯ ನಿರ್ವಹಣೆ) ಡಿ.ರಂದೀಪ್ ಹಾಗೂ ಗುತ್ತಿಗೆದಾರರೊಂದಿಗೆ ಇತ್ತೀಚೆಗೆ ಮಲ್ಲೇಶ್ವರದ ಐಪಿಪಿ ಕೇಂದ್ರದಲ್ಲಿ ಆಂತರಿಕ ಸಭೆ ನಡೆಸಲಾಗಿದ್ದು, ವಿವಿಧ ವಿಚಾರ ಚರ್ಚೆ ಆಗಿದೆ.
ಕಾರ್ಮಿಕ ಇಲಾಖೆ ಪ್ರಕಾರ ವಾರಕ್ಕೆ ಒಂದು ದಿನ ರಾಷ್ಟ್ರೀಯ ರಜೆ, ಹಬ್ಬದ ರಜೆ ಸೇರಿ 10 ದಿನ ಕಡ್ಡಾಯ ರಜೆ ನೀಡಬೇಕಾಗುತ್ತದೆ. ಇದಕ್ಕಾಗಿ ಶೇ.16ಹೆಚ್ಚುವರಿ ಸಿಬ್ಬಂದಿನೇಮಕಮಾಡಿಕೊಳ್ಳುವ ಅವಶ್ಯಕತೆ ಇದೆ. ಅಲ್ಲದೆ, ಪ್ರತಿ ತಿಂಗಳು 10ರ ಒಳಗಾಗಿ ವೇತನ ಪಾವತಿ ಸೇರಿ ಹಲವು ಸಲಹೆ ನೀಡಿದೆ.
ಇದನ್ನೂ ಓದಿ : ಎಪಿಎಂಸಿ ನಷ್ಟ ಸರ್ಕಾರವೇ ಭರಿಸಲಿದೆ: ಸಚಿವ ಸೋಮಶೇಖರ್
ಈ ಆಧಾರದ ಮೇಲೆ ನಗರದಲ್ಲಿ ಶೇ.16 ಹೆಚ್ಚುವರಿ ಪೌರಕಾರ್ಮಿಕರು (ಚಾಲಕರು ಹಾಗೂ ಸಹಾಯಕ) ನೇಮಿಸಿಕೊಳ್ಳುವ ನಿಟ್ಟಿನಲ್ಲಿ ಕ್ರಮ ವಹಿಸುವಂತೆ ಬಿಬಿಎಂಪಿ ಆಯುಕ್ತರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಕಡ್ಡಾಯ ಜಿಪಿಎಸ್: ಎಲ್ಲಾ ಗುತ್ತಿಗೆದಾರರು ಆಟೋ ಟಿಪ್ಪರ್ ಹಾಗೂ ಕಾಂಪ್ಯಾಕ್ಟರ್ಗಳ ಮಾಹಿತಿ ಸಂಗ್ರಹ ಮಾಡಿ ಪಿಎಂಯು ಯೂನಿಟ್ನ ಮೂಲಕ ಆರ್ಎಫ್ಐಡಿ ಕಾರ್ಡ್ ವ್ಯವಸ್ಥೆ ಕಲ್ಪಿಸಬೇಕು. ಎಲ್ಲಾ ಆಟೋ ಟಿಪ್ಪರ್ ಹಾಗೂ ಕಾಂಪ್ಯಾಕ್ಟರ್ಗಳಿಗೆ ಜಿಪಿಎಸ್ ಅಳವಡಿಸಬೇಕು ಎಂದು ನಿರ್ದೇಶನ ನೀಡಲಾಗಿದೆ. ಬಿಲ್ ತಡವಾಗಿ ಪಾವತಿ ಆಗುತ್ತಿರುವುದರಿಂದ ಕಾರ್ಮಿಕರಿಗೆ ಸಕಾಲದಲ್ಲಿ ವೇತನ ನೀಡಲು ಸಾಧ್ಯವಾಗುತ್ತಿಲ್ಲ. ಅಗತ್ಯ ಸೇವೆಗೂ ತೊಡಕಾಗಿದೆ ಎಂದು ಗುತ್ತಿಗೆದಾರರು ಸಭೆಯಲ್ಲಿ ದೂರಿದ್ದಾರೆ.
ಆಯುಕ್ತರ ಪ್ರಮುಖ ನಿರ್ದೇಶನ :
- ಸಗಟು ತ್ಯಾಜ್ಯ ಉತ್ಪಾದಕರಿಂದ ಮನೆ-ಮನೆಕಸ ಸಂಗ್ರಹ ಮಾಡುವ ವಾಹನಕಸ ಸಂಗ್ರಹ ಮಾಡುವಂತಿಲ್ಲ. ಮಾಡಿದರೆ ಏಜೆನ್ಸಿಕಾರ್ಯಾದೇಶ ರದ್ದು.
- ಜ.1ರಿಂದ ಜಿಪಿಎಸ್ ಹಾಜರಾತಿ ಇರುವ ವಾಹನಗಳಿಗೆ ಮಾತ್ರ ಬಿಲ್ ಪಾವತಿ, ಮ್ಯಾನುವಲ್ ಬಿಲ್ ಪಾವತಿ ಇಲ್ಲ.
- 2021ರ ಜನವರಿಯಿಂದ ಹೊಸ ಟೆಂಡರ್ದಾರರಕಾರ್ಯಕ್ಷಮತೆ ಪರಿಶೀಲನೆ
- ಭೂಭರ್ತಿ ಹಾಗೂ ಹಸಿಕಸ ಸಂಸ್ಕರಣಾ ಘಟಕಗಳಲ್ಲಿ ಸಂಜೆ 7 ಗಂಟೆವರೆಗೆ ಕಸ ವಿಲೇವಾರಿ ಮಾಡುವುದಕ್ಕೆ ಅವಕಾಶ
- ಗುತ್ತಿಗೆದಾರರ ಸೇವಾ ತೆರಿಗೆ ಸಮಸ್ಯೆ ಪರಿಹರಿಸಲು ನೋಡಲ್ ಅಧಿಕಾರಿ ನೇಮಕಕ್ಕೆ ಕ್ರಮ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಆರೋಪ: ತಾಯಿ, ಮಗನ ವಿರುದ್ಧ ಎಫ್ಐಆರ್
BMTC ಬಸ್ ಕಂಡಕ್ಟರ್ಗೆ ಕಲ್ಲಿನಿಂದ ಹೊಡೆದ ಆರೋಪಿ ಸೆರೆ, ಕೇಸ್ ದಾಖಲು
Bengaluru: ನಗರದಲ್ಲಿ ಶಂಕಿತ ನಕ್ಸಲ್ ಬಂಧನ ಪ್ರಕರಣ: ಎನ್ಐಎಗೆ ವರ್ಗಾವಣೆ
Bengaluru: ದೀಪಾವಳಿ ಪ್ರಯುಕ್ತ 14 ರೈಲುಗಳಿಗೆ ಹೆಚ್ಚುವರಿ ಬೋಗಿ
Bengaluru: ನಗರದಲ್ಲಿ ಅನಧಿಕೃತ ಕಟ್ಟಡ ಪತ್ತೆಗೆ ಅ.28ರಿಂದ ಸಮೀಕ್ಷೆ : ಡಿಕೆಶಿ
MUST WATCH
ಹೊಸ ಸೇರ್ಪಡೆ
Horoscope: ಗಣೇಶ, ದುರ್ಗೆಯರ ಆರಾಧನೆಯಿಂದ ವಿಘ್ನ ನಿವಾರಣೆ,ಶುಭಕಾರ್ಯ ನಡೆಸುವ ಬಗ್ಗೆ ಚಿಂತನೆ
Hassan: ಮುಂದಿನ ವರ್ಷ 3ನೇ ವಿಶ್ವಯುದ್ಧ ! ಬ್ರಹ್ಮಾಂಡ ಗುರೂಜಿ ಭವಿಷ್ಯ
Ratan Tata; ಅಡುಗೆಯವರು, ನಾಯಿಗೂ ವಿಲ್ ಬರೆದಿರುವ ಟಾಟಾ!
Cyclone Dana; ಚಂಡಮಾರುತ ಗೆದ್ದ ಒಡಿಶಾ, ಬಂಗಾಲ
T20; ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಕರ್ನಾಟಕದ ವೈಶಾಖ್ ವಿಜಯ್ಕುಮಾರ್ ಆಯ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.