ಕಂಪ್ಲಿಯ ಪಿಕೆಪಿಎಸ್‌ಗೆ 7ಲಕ್ಷ ರೂ. ಲಾಭ


Team Udayavani, Dec 23, 2020, 7:36 PM IST

ಕಂಪ್ಲಿಯ ಪಿಕೆಪಿಎಸ್‌ಗೆ 7ಲಕ್ಷ ರೂ. ಲಾಭ

ಕಂಪ್ಲಿ: ಕಳೆದ ಹಲವಾರು ತಿಂಗಳುಗಳಿಂದ ಆರ್ಥಿಕ ಪರಿಸ್ಥಿತಿಗಳು ಹದಗೆಟ್ಟಿದ್ದರೂ ಸಹಿತ ಕೋವಿಡ್‌ಸಂಕಷ್ಟದಲ್ಲಿಯೂ ಕಂಪ್ಲಿಯ ಪ್ರಾ.ಕೃ.ಪ.ಸ.ಸಂಘವೂ 2019-20ನೇ ಸಾಲಿನಲ್ಲಿ 7,01,210ರೂಗಳ ನಿವ್ವಳ ಲಾಭ ಗಳಿಸಿದೆ ಎಂದು ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಾಹಕ ಎಚ್‌.ಈರಣ್ಣ ತಿಳಿಸಿದರು.

ಅವರು ಸಹಕಾರ ಸಂಘದ ಆವರಣದಲ್ಲಿ ಮಾಸ್ಕ್ ಮತ್ತು ಸಾಮಾಜಿಕ ಅಂತರದೊಂದಿಗೆ ಏರ್ಪಡಿಸಿದ್ದ ಸಂಘದ 41ನೇ ವಾರ್ಷಿ ಮಹಾಜನ ಸಭೆಯಲ್ಲಿ ಸಂಘದ ಲೆಕ್ಕ ಪತ್ರಗಳನ್ನು ಮಂಡಿಸಿ ಮಾತನಾಡಿ, ಸಂಘದಲ್ಲಿ 3508 ಸದಸ್ಯರಿದ್ದು, 74.10ಲಕ್ಷರೂಷೇರು ಬಂಡವಾಳ ಹಾಗೂ ಸರ್ಕಾರದ 2.20ಲಕ್ಷರೂ ಷೇರು ಬಂಡವಾಳವನ್ನು ಹೊಂದಿದ್ದು, ಕೆಸಿಸಿ ಅಲ್ಪಾವ ಧಿ ಬೆಳೆಸಾಲ 394.89 ಲಕ್ಷರೂಗಳನ್ನುವಿತರಣೆ ಮಾಡಲಾಗಿದೆ. ಬಿಡಿಪಿ ಸಾಲ 88.59ಲಕ್ಷ ರೂ. ವಿತರಿಸಿದ್ದು, ಉತ್ತಮ ವಸೂಲಾತಿಯನ್ನು ಹೊಂದಿದೆ ಎಂದು ವಿವರಿಸಿದರು. 5 ಜನರಿಗೆ ಐಪಿ ಸೆಟ್‌ ಸಾಲ 32ಲಕ್ಷರೂ ಮತ್ತು ಎಸ್‌ಎಚ್‌.ಜಿ. ಗುಂಪಿಗೆ 2ಲಕ್ಷ ರೂಗಳನ್ನು ವಿತರಿಸಲಾಗಿದೆ ಎಂದರು.

ಬೆಳೆ ಸಾಲ ಪಡೆದ ರೈತರಿಗೆ ವೈಯಕ್ತಿಕ ಅಪಘಾತ ವಿಮೆ ಯೋಜನೆಯನ್ನು ಅಳವಡಿಸಲಾಗಿದೆ ಎಂದರು. ಸಂಘದಲ್ಲಿ 170.55.ಲಕ್ಷರೂ ಠೇವಣಿ ಇದ್ದು, 243.91.ಲಕ್ಷರೂಗಳ ವ್ಯವಹಾರ ಮಾಡಿ 15,35,155 ರೂಗಳ ವ್ಯವಹಾರಿಕ ಲಾಭಗಳಿಸಿದ್ದರೆ, ಎಲ್ಲ ಖರ್ಚುಗಳು ಮತ್ತು ಅವಕಾಶಗಳನ್ನು ಮಾಡಿ ಸಂಘವು 7,01,210ರೂಗಳ ನಿವ್ವಳ ಲಾಭಗಳಿಸಿದೆ ಎಂದರು.

ಸಂಘದ ಅಧ್ಯಕ್ಷ ಕಟ್ಟೆ ಸಣ್ಣ ದುರುಗಪ್ಪ ಮಾತನಾಡಿ, ಸಂಘದಲ್ಲಿ ರೈತರಿಗಾಗಿ ಎಲ್ಲ ರೀತಿಯ ಸೌಲಭ್ಯಗಳನ್ನು ಕಲ್ಪಿಸಿದ್ದು ರೈತರು ಸದುಪಯೋಗಪಡೆದುಕೊಳ್ಳುವುದರ ಜೊತೆಗೆ ಸಂಘದ ಏಳಿಗೆಗೆ ಕೈಜೋಡಿಸಬೇಕೆಂದರು. ಪುರಸಭೆ ಮಾಜಿ ಅಧ್ಯಕ್ಷ ಬಿ.ಸಿದ್ದಪ್ಪ, ನಿರ್ದೇಶಕ ಬಿ.ರಮೇಶ ಸೇರಿದಂತೆ ಇತರರು ಮಾತನಾಡಿದರು. ಮಹಾಜನ ಸಭೆಯಲ್ಲಿ ಉಪಾಧ್ಯಕ್ಷೆ ಯು.ಪಾರ್ವತಿ, ನಿರ್ದೇಶಕರುಗಳಾದ ಜೆ.ಈರಪ್ಪ, ಅಳ್ಳಿ ನಾಗರಾಜ, ಎನ್‌. ಮಲ್ಲಿಕಾರ್ಜುನ, ಬಿ. ರಮೇಶ, ಕೋಲ್ಕಾರು ಮಲ್ಲಿಕಾರ್ಜುನ, ಬಳ್ಳಾರಿ ಬಸವರಾಜ, ಎಸ್‌.ರಾಜೇಶ್‌, ಡಿ.ಮುರಾರಿ, ಬಿ.ವೀರೇಶ್‌, ಕೆ.ರಾಜೇಶ್ವರಿ ಮತ್ತು ಎಸ್‌ ಸಣ್ಯೆಪ್ಪ, ಸಿಬ್ಬಂದಿಗಳಾದ ಕಾರೇಕಲ್‌ ಭರತ್‌ಇಟಗಿ ಈರಣ್ಣ, ಸಿದ್ದೇಶ್‌, ಮಂಜುನಾಥ್‌, ಪ್ರಕಾಶ್‌ ಇದ್ದರು.

ಟಾಪ್ ನ್ಯೂಸ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಯಾನಿಯ ಪ್ರಾರ್ಥನೆ

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ

15-monalisa

Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ

nagavalli bangale kannada movie

Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Hosapete: ತುಂಬಿದ ಕೊಡ ತುಳುಕಿತಲೇ ಪರಾಕ್.. ಶ್ರೀಮೈಲಾರಲಿಂಗೇಶ್ವರ ಕಾರ್ಣಿಕೋತ್ಸವ

Hosapete: ತುಂಬಿದ ಕೊಡ ತುಳುಕಿತಲೇ ಪರಾಕ್.. ಶ್ರೀಮೈಲಾರಲಿಂಗೇಶ್ವರ ಕಾರ್ಣಿಕೋತ್ಸವ

10

Kampli: ಕಣವಿ ತಿಮ್ಮಾಪುರದಲ್ಲಿ ಶ್ರೀ ಕೃಷ್ಣದೇವರಾಯನ ಕಾಲದ ತೆಲುಗು ಶಾಸನ ಪತ್ತೆ

BJP: If given the post of state president, I will unite everyone: B. Sriramulu

BJP: ರಾಜ್ಯಾಧ್ಯಕ್ಷ ಸ್ಥಾನ ಕೊಟ್ಟರೆ ಎಲ್ಲರನ್ನೂ ಒಂದುಗೂಡಿಸುವೆ: ಬಿ.ಶ್ರೀರಾಮುಲು

Prayagraj: ಕುಂಭಮೇಳದಲ್ಲಿ ಶ್ರೀರಾಮುಲು ದಂಪತಿಯಿಂದ ಪುಣ್ಯಸ್ನಾನ

Prayagraj: ಕುಂಭಮೇಳದಲ್ಲಿ ಶ್ರೀರಾಮುಲು ದಂಪತಿಯಿಂದ ಪುಣ್ಯಸ್ನಾನ

10-siruguppa

Siruguppa: ತಹಶೀಲ್ದಾರ್ ಗೆ ಬೆದರಿಕೆ ಪ್ರಕರಣ, ಕೇಸು ದಾಖಲು

MUST WATCH

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

udayavani youtube

ಮುಕೇಶ್ ಅಂಬಾನಿ ಕುಟುಂಬದ ನಾಲ್ಕು ತಲೆಮಾರು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ

ಹೊಸ ಸೇರ್ಪಡೆ

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಯಾನಿಯ ಪ್ರಾರ್ಥನೆ

1sadgu

Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

18

Uv Fusion: ಗೆಳೆತನವೆಂಬ ನಿಸ್ವಾರ್ಥ ಬಾಂಧವ್ಯ

17

Uv Fusion: ಎಡವುದು ಕೂಡ ಒಳ್ಳೆಯದೇ ಒಮ್ಮೊಮ್ಮೆ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.