36ರ ಮುಖಭಂಗ ಮರೆಸೀತೇ ಮೆಲ್ಬರ್ನ್?


Team Udayavani, Dec 25, 2020, 12:56 AM IST

36ರ ಮುಖಭಂಗ ಮರೆಸೀತೇ ಮೆಲ್ಬರ್ನ್?

ಮೆಲ್ಬರ್ನ್: ಅಡಿಲೇಡ್‌ ಡೇ-ನೈಟ್‌ ಟೆಸ್ಟ್‌ ಪಂದ್ಯದಲ್ಲಿ 36 ರನ್ನಿಗೆ ಅಡಿಮೇಲಾದ ಟೀಮ್‌ ಇಂಡಿಯಾದ ಮುಂದೀಗ ಮೆಲ್ಬರ್ನ್ನ “ಬಾಕ್ಸಿಂಗ್‌ ಡೇ ಟೆಸ್ಟ್‌’ ಸವಾಲು ಎದುರಾಗಿದೆ. ಸಂಪ್ರದಾಯದಂತೆ ಮೆಲ್ಬರ್ನ್ ಕ್ರಿಕೆಟ್‌ ಗ್ರೌಂಡ್‌ನ‌ಲ್ಲಿ ಶನಿವಾರದಿಂದ ಈ ಪಂದ್ಯ ಮೊದಲ್ಗೊಳ್ಳಲಿದ್ದು, ಭಾರತದ ಮುಖ ಭಂಗವನ್ನು ಮರೆಸೀತೇ ಎಂಬುದೊಂದು ನಿರೀಕ್ಷೆ.

ಆದರೆ 36ರ ಆ ಘೋರ ಪತನ ವನ್ನು ಮರೆಯುವುದು ಅಷ್ಟು ಸುಲಭ ವಲ್ಲ. ಆಸ್ಟ್ರೇಲಿಯವನ್ನೂ ಇದೇ ರೀತಿ ಬಗ್ಗುಬಡಿದು ಸರಣಿಯನ್ನು ಸಮ ಬಲಕ್ಕೆ ತಂದು ನಿಲ್ಲಿಸಿದರಷ್ಟೇ ಭಾರತ ಕ್ಕೊಂದು ಘನತೆ. ಇಲ್ಲಿ ಡ್ರಾ ಕೂಡ ಪರ್ಯಾಯವಲ್ಲ. ಅಕಸ್ಮಾತ್‌ ಮೆಲ್ಬರ್ನ್ ನಲ್ಲೂ ಮುಗ್ಗರಿಸಿದರೆ ಭಾರತ ತಂಡದ ಮೇಲಿನ ಅಳಿದುಳಿದ ನಂಬಿಕೆ ಕೂಡ ಹೊರಟು ಹೋಗುತ್ತದೆ. ಕೋಚ್‌ ರವಿ ಶಾಸ್ತ್ರೀ, ಉಸ್ತುವಾರಿ ನಾಯಕ ಅಜಿಂಕ್ಯ ರಹಾನೆ ಹಾಗೂ ಇಡೀ ತಂಡದ ಮೇಲೆ ಭಾರತೀಯ ಕ್ರಿಕೆಟಿನ ಪ್ರತಿಷ್ಠೆ ಹಾಗೂ ಭವಿಷ್ಯ ನಿಂತಿದೆ.

ಟೆಸ್ಟ್‌ ಪಿಲ್ಲರ್‌ಗಳೇ ಇಲ್ಲ!
ಟೀಮ್‌ ಇಂಡಿಯಾದ ದೊಡ್ಡ ಸಮಸ್ಯೆಯೆಂದರೆ “ಟೆಸ್ಟ್‌ ಪಿಲ್ಲರ್‌’ಗಳೇ ಇಲ್ಲದಿರುವುದು. ವಿರಾಟ್‌ ಕೊಹ್ಲಿ, ಮೊಹಮ್ಮದ್‌ ಶಮಿ, ಇಶಾಂತ್‌ ಶರ್ಮ, ರೋಹಿತ್‌ ಶರ್ಮ ಅವರ ಅನುಪಸ್ಥಿತಿ ಪ್ರವಾಸಿಗರನ್ನು ಗಂಭೀರವಾಗಿ ಕಾಡು ತ್ತಿದೆ. ಆಸ್ಟ್ರೇಲಿಯದಲ್ಲಿ ಯಾವತ್ತೂ ಘಾತಕ ಬೌಲಿಂಗ್‌ ದಾಳಿ ನಡೆಸುವ ಇಶಾಂತ್‌ ಈ ಬಾರಿ ಕಾಂಗರೂ ನಾಡಿಗೆ ಆಗಮಿಸದಿರುವುದು ಭಾರತಕ್ಕೆ ಬಿದ್ದ ದೊಡ್ಡ ಹೊಡೆತ. ರೋಹಿತ್‌ ಶರ್ಮ ಆಗಮಿಸಿದರೂ ಅವರ ಕ್ವಾರಂಟೈನ್‌ ಇನ್ನೂ ಮುಗಿದಿಲ್ಲ. ಒಟ್ಟಾರೆ, ಕಳೆದ ಸಲ ಕಾಂಗರೂ ನಾಡಿನಲ್ಲಿ ಸರಣಿ ಗೆದ್ದು ಇತಿಹಾಸ ನಿರ್ಮಿಸಿದ ಭಾರತದ ಪಾಲಿಗೆ ಈ ಪ್ರವಾಸ ದೊಡ್ಡ ಪ್ರಯಾಸದ ಸೂಚನೆಯೊಂದನ್ನು ರವಾನಿಸಿದೆ.

ಕಾದಿದೆ ಭಾರೀ ಬದಲಾವಣೆ
ಟೀಮ್‌ ಇಂಡಿಯಾ ಬಾಕ್ಸಿಂಗ್‌ ಡೇ ಪಂದ್ಯಕ್ಕೆ ಭಾರೀ ಬದಲಾವಣೆ ಮಾಡಿ ಕೊಳ್ಳುವುದು ಅನಿವಾರ್ಯ. ಆದರೆ ಇದೇ ದೊಡ್ಡ ಗೊಂದಲವಾಗಿ ಪರಿಣಮಿಸಿದೆ. ಅಡಿಲೇಡ್‌ ಟೆಸ್ಟ್‌ ವೇಳೆ ಒಂದು ದಿನ ಮುಂಚಿತವಾಗಿ ತಂಡವನ್ನು ಅಂತಿಮ ಗೊಳಿಸಿದ್ದ ಭಾರತವಿಲ್ಲಿ ಟಾಸ್‌ ಸಮಯದ ವರೆಗೂ ಹನ್ನೊಂದರ ಬಳಗದ ಲೆಕ್ಕಾಚಾರ ದಲ್ಲೇ ಮುಳುಗಿರುವುದು ಖಂಡಿತ!
ಗಿಲ್‌, ರಾಹುಲ್‌, ಜಡೇಜ, ಪಂತ್‌, ಸೈನಿ, ಸಿರಾಜ್‌ ಅವರೆಲ್ಲ ಲೈನ್‌ನಲ್ಲಿ ದ್ದಾರೆ. ಶಾ, ಸಾಹಾ ಅಸಹಾಯಕ ಸ್ಥಿತಿ ಯಲ್ಲಿದ್ದಾರೆ. ಆದರೆ ಯಾರೇ ಬಂದರೂ ನಿಂತು ಆಡದೇ ಹೋದರೆ ಯಾವ ಪ್ರಯೋಜನವೂ ಇಲ್ಲ.

ಕಳೆದ ಸಲ ಒಲಿದಿತ್ತು ಮೆಲ್ಬರ್ನ್
ವಿಶ್ವದ ಪ್ರಪ್ರಥಮ ಟೆಸ್ಟ್‌ ತಾಣವಾದ ಮೆಲ್ಬರ್ನ್ ಕ್ರಿಕೆಟ್‌ ಅಂಗಳಕ್ಕೆ 143 ವರ್ಷಗಳ ಸುದೀರ್ಘ‌ ಹಾಗೂ ಭವ್ಯ ಇತಿಹಾಸವಿದೆ. ಭಾರತ ಸ್ವಾತಂತ್ರ್ಯ ಲಭಿಸಿದ ಬೆನ್ನಲ್ಲೇ 1948ರಲ್ಲಿ ಇಲ್ಲಿ ಟೆಸ್ಟ್‌ ಆಡಲಾರಂಭಿಸಿತ್ತು. ಈ ವರೆಗೆ ಮೆಲ್ಬರ್ನ್ ನಲ್ಲಿ 13 ಟೆಸ್ಟ್‌ ಆಡಿದ್ದು, ಮೂರನ್ನಷ್ಟೇ ಗೆದ್ದು, ಎಂಟರಲ್ಲಿ ಸೋಲನುಭವಿಸಿದೆ. ಉಳಿದೆರಡು ಪಂದ್ಯ ಡ್ರಾಗೊಂಡಿದೆ.

2018ರ ಪ್ರವಾಸದಲ್ಲಿ ಭಾರತದ ಸರಣಿ ಜಯದಲ್ಲಿ ಮೆಲ್ಬರ್ನ್ ಜಯ ಭೇರಿ ಪ್ರಮುಖ ಪಾತ್ರ ವಹಿಸಿದ್ದನ್ನು ಮರೆ ಯುವಂತಿಲ್ಲ. ಕೊಹ್ಲಿ ಪಡೆ ಇದನ್ನು 137 ರನ್ನುಗಳ ದೊಡ್ಡ ಅಂತರದಿಂದ ಜಯಿಸಿ 2-1 ಮುನ್ನಡೆ ಸಾಧಿಸಿತ್ತು. ಪೂಜಾರ ಶತಕ, ಬುಮ್ರಾ 9 ವಿಕೆಟ್‌ ಬೇಟೆ ಹೈಲೈಟ್‌ ಆಗಿತ್ತು.

ಇದು ಅಗರ್ವಾಲ್‌ ಅವರ ಪದಾರ್ಪಣ ಟೆಸ್ಟ್‌ ಕೂಡ ಆಗಿತ್ತು. 76 ಹಾಗೂ 42 ರನ್‌ ಹೊಡೆದು ತಮ್ಮ ಟೆಸ್ಟ್‌ ಪ್ರವೇಶವನ್ನು ಸಾರ್ಥಕಪಡಿಸಿಕೊಂಡಿದ್ದರು. ಇವ ರೊಂದಿಗೆ ಹನುಮ ವಿಹಾರಿ ಇನ್ನಿಂಗ್ಸ್‌ ಆರಂಭಿಸಿದ್ದರು. ಅಂದಿನ ಈ ಮೂರೂ ಹೀರೋಗಳು ಈ ತಂಡದಲ್ಲೂ ಇದ್ದಾರೆ ಎಂಬುದೊಂದು ಸಮಾಧಾನದ ಸಂಗತಿ.

ಭಾರತಕ್ಕೆ ಹೇಳಿಸಿದ ಪಿಚ್‌
ಭಾರತ ತನ್ನ ಟೆಸ್ಟ್‌ ಇತಿಹಾಸದ ನಿಕೃಷ್ಟ ಸ್ಕೋರ್‌ ದಾಖಲಿಸಿದರೂ ಆತಿಥೇಯರ ಮೇಲೆ ತಿರುಗಿ ಬೀಳುವ ಎಲ್ಲ ಸಾಮರ್ಥ್ಯ ಹೊಂದಿದೆ ಎಂಬುದಾಗಿ ಆಸ್ಟ್ರೇಲಿಯದ ಮಾಜಿಗಳನೇಕರು ಹೇಳಿದ್ದಾರೆ. ಇವರಲ್ಲಿ ಮಾಜಿ ಕೋಚ್‌ ಡ್ಯಾರನ್‌ ಲೇಹ್ಮನ್‌ ಕೂಡ ಒಬ್ಬರು. ಮೆಲ್ಬರ್ನ್ ಪಿಚ್‌ ಭಾರತದ ಬ್ಯಾಟ್ಸ್‌ಮನ್‌ಗಳಿಗೆ, ಅದರಲ್ಲೂ ಪೂಜಾರ, ರಹಾನೆ ಶೈಲಿಯ ಆಟಕ್ಕೆ ಹೆಚ್ಚಿನ ನೆರವು ನೀಡಲಿದೆ ಎಂದಿದ್ದಾರೆ.

ಆದರೆ ಅಡಿಲೇಡ್‌ ಟೆಸ್ಟ್‌ ಪಂದ್ಯದ ಗಾಯ ಮಾತ್ರ ಅಷ್ಟು ಸುಲಭದಲ್ಲಿ ಮಾಸು ವಂಥದ್ದಲ್ಲ. ಇದರ ಮೇಲೆ ಭಾರತ ಬರೆ ಹಾಕಿಸಿಕೊಳ್ಳದಿರಲಿ ಎಂಬುದು ಕ್ರಿಕೆಟ್‌ ಅಭಿಮಾನಿಗಳ ಹಾರೈಕೆ.

ಟಾಪ್ ನ್ಯೂಸ್

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ

Mujeeb joins Mumbai Indians team in place of another Afghan bowler

‌IPL 2025: ಮತ್ತೊಬ್ಬ ಅಫ್ಘಾನಿ ಬೌಲರ್‌ ಬದಲು ಮುಂಬೈ ಇಂಡಿಯನ್ಸ್‌ ತಂಡದ ಸೇರಿದ ಮುಜೀಬ್

ODI Ranking: ನಂ.1 ಸ್ಥಾನದಲ್ಲೇ ಉಳಿದ ಭಾರತ, 4ಕ್ಕೆ ಜಿಗಿದ ನ್ಯೂಜಿಲೆಂಡ್‌

ODI Ranking: ನಂ.1 ಸ್ಥಾನದಲ್ಲೇ ಉಳಿದ ಭಾರತ, 4ಕ್ಕೆ ಜಿಗಿದ ನ್ಯೂಜಿಲೆಂಡ್‌

Team India: ‘We are not actors..’: Ashwin criticizes Team India’s superstar culture

Team India: ʼನಾವು ನಟರಲ್ಲ..ʼ: ಟೀಂ ಇಂಡಿಯಾದ ಸೂಪರ್‌ಸ್ಟಾರ್‌ ಸಂಸ್ಕೃತಿ ಟೀಕಿಸಿದ ಅಶ್ವಿನ್

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.