ಕೋವಿಡ್ ಸೋಂಕಿತರ ಸಾವು ಇಳಿಕೆ
Team Udayavani, Dec 27, 2020, 12:40 AM IST
ಹೊಸದಿಲ್ಲಿ: ರೂಪಾಂತರಿ ಕೋವಿಡ್ ಕಾರ್ಮೋಡದ ನಡುವೆ ಭಾರತದ ಪಾಲಿಗೆ ಸಮಾಧಾನಕರ ಸುದ್ದಿಯೊಂ ದಿದೆ. ದೇಶದಲ್ಲಿ ಸೋಂಕಿತರ ಮರಣ ಪ್ರಮಾಣ ಭಾರೀ ತಗ್ಗಿದ್ದು, 6 ತಿಂಗಳುಗಳ ಬಳಿ ಇದೇ ಮೊದಲ ಬಾರಿಗೆ ಕಳೆದ 24 ಗಂಟೆಗಳಲ್ಲಿ 251 ಮಂದಿ ಸಾವನ್ನಪ್ಪಿದ್ದಾರೆ!
ಸೋಂಕಿತರ ಪ್ರಮಾಣದಲ್ಲೂ ಕುಸಿತ ವಾಗಿದ್ದು, ಶನಿವಾರ ಕೇವಲ 22,273 ಮಂದಿಗೆ ಪಾಸಿಟಿವ್ ದೃಢಪಟ್ಟಿದೆ. ರಾಷ್ಟ್ರೀಯ ಚೇತರಿಕೆ ಪ್ರಮಾಣ ಶೇ.95. 78ರಷ್ಟಿದ್ದು, ಮರಣ ಪ್ರಮಾಣ ಶೇ.1.45 ರಷ್ಟಿದೆ ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
ಮೊದಲು ಒಪ್ಪಿಗೆ?: ಬೇರೆಲ್ಲ ಲಸಿಕೆಗಿಂತ ಮೊದಲು ಆಕ್ಸ್ಫರ್ಡ್- ಅಸ್ಟ್ರಾಜೆನೆಕಾ ಲಸಿಕೆಗೆ ಭಾರತದಲ್ಲಿ ತುರ್ತು ಬಳಕೆಗೆ ಅನುಮತಿ ಸಿಗುವ ಸಾಧ್ಯತೆ ಅಧಿಕವಿದೆ. ಯುಕೆ ಡ್ರಗ್ ಮಂಡಳಿ ಒಪ್ಪಿಗೆ ನೀಡಿದ ಕೂಡಲೇ ಸಿಡಿಎಸ್ಸಿಒ ತಜ್ಞರ ಸಮಿತಿ ಈ ಬಗ್ಗೆ ಸಭೆ ಕರೆಯಲಿದೆ. ಇದೇ ವೇಳೆ ಜಪಾನ್ ಬಳಿಕ ಫ್ರಾನ್ಸ್, ಸ್ಪೇನ್ನಲ್ಲಿಯೂ ರೂಪಾಂತರಿ ಕೊರೊನಾ ಸೋಂಕು ದೃಢ ಪಟ್ಟಿದೆ. ಮತ್ತೂಂದು ಬೆಳವಣಿಗೆಯಲ್ಲಿ ಪೋಲಂಡ್, ಜರ್ಮನಿಯಲ್ಲಿ ರವಿವಾರ ದಿಂದ ಸಾರ್ವಜನಿಕರಿಗೆ ಲಸಿಕೆ ಹಾಕ ಲಾಗುತ್ತದೆ.
150 ಯೋಧರಿಗೆ ಪಾಸಿಟಿವ್
ದೇಶದ ವಿವಿಧೆಡೆಯಿಂದ ಹೊಸ
ದಿಲ್ಲಿಗೆ ಆಗಮಿಸಿದ 2 ಸಾವಿರ ಯೋಧರ ಪೈಕಿ 150 ಮಂದಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ನೆಗೆಟಿವ್ ಬಂದವರನ್ನು “ಸೇಫ್ ಬಬಲ್’ ನಿರ್ಮಿಸಿ, ವಸತಿ ಕಲ್ಪಿಸಲಾಗಿದೆ.
ದಿಲ್ಲಿ ಪೊಲೀಸರಿಗೆ ಶೀಘ್ರ ಲಸಿಕೆ
ಶೀಘ್ರದಲ್ಲೇ ದಿಲ್ಲಿ ಪೊಲೀಸರಿಗೆ ಲಸಿಕೆ ಸಿಗುವ ಸಾಧ್ಯತೆ ಇದೆ. ಶನಿವಾರ ಜಿಲ್ಲಾ ಎಸ್ಪಿಗಳಿಗೆ ಈ ಸಂಬಂಧ ಆದೇಶ ಹೋಗಿದ್ದು, ಲಸಿಕೆ ನೀಡುವ ದಿನ, ಸಮಯ ಮತ್ತು ಸ್ಥಳದ ಬಗ್ಗೆ ಎಸ್ಎಂಎಸ್ ಮೂಲಕ ಮಾಹಿತಿ ನೀಡಲಾಗುತ್ತದೆ ಎಂದು ಹೇಳಿದೆ. ಹೀಗಾಗಿ ಜ. 3ರೊಳಗೆ ಪೊಲೀಸರು ಪಿಐಎಸ್ ಮತ್ತು ಇನ್ಸ್ಟ್ರಾಡಿಪಿ ವ್ಯವಸ್ಥೆಯೊಳಗೆ ಮಾಹಿತಿ ಅಪ್ ಲೋಡ್ ಮಾಡುವಂತೆ ಸೂಚಿಸಲಾಗಿದೆ.
ಬೆಲ್ಜಿಯಂನಲ್ಲಿ ಲಸಿಕೆ ವಿತರಣೆಗೆ ಸಿದ್ಧತೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress: ಮಹಿಳೆಯರಿಗೆ ಮಾಸಿಕ 2000, ಜಾತಿ ಸಮೀಕ್ಷೆ: ಹರಿಯಾಣ ಕೈ ಭರವಸೆ
Chandrayaan-4ಕ್ಕೆ 2100 ಕೋಟಿ ರೂ.; ಕೇಂದ್ರದಿಂದ ಅನುದಾನ
ಶುಕ್ರಯಾನಕ್ಕೂ ಕೇಂದ್ರ ಸಂಪುಟ ಅನುಮೋದನೆ: ಚಂದ್ರ, ಮಂಗಳ ಯೋಜನೆ ಬಳಿಕ ಶುಕ್ರಯಾನಕ್ಕೆ ನೆರವು
Biotechnology: ಜೈವಿಕ ತಂತ್ರಜ್ಞಾನ ಬಲವರ್ಧನೆಗೆ ಬಯೋ ರೈಡ್: ಅಶ್ವಿನಿ ವೈಷ್ಣವ್
ಕಾಂಗ್ರೆಸ್ ನಾಯಿ ನಮ್ಮ ಕಾರ್ಯಕ್ರಮಕ್ಕೆ ಬಂದರೆ…: ಶಿವಸೇನೆ ಶಾಸಕನ ವಿವಾದಾತ್ಮಕ ಹೇಳಿಕೆ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Congress: ಮಹಿಳೆಯರಿಗೆ ಮಾಸಿಕ 2000, ಜಾತಿ ಸಮೀಕ್ಷೆ: ಹರಿಯಾಣ ಕೈ ಭರವಸೆ
Rabkavi Banhatti: ತೇರಿನ ಮೇಲಿನಿಂದ ಬಿದ್ದ ವ್ಯಕ್ತಿ ಸ್ಥಳದಲ್ಲೇ ಸಾವು
Ricky Ponting: ಡೆಲ್ಲಿಯಿಂದ ಪಂಜಾಬ್ ಗೆ ಬಂದ ರಿಕಿ ಪಾಂಟಿಂಗ್
Katapady:ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಮೇಲೇರಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ವಾಹನ
Test Series: ಭಾರತ-ಬಾಂಗ್ಲಾ ತಂಡಗಳಿಗೆ ರಿಯಲ್ ಟೆಸ್ಟ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.