ಜಿಲ್ಲೆಯಲ್ಲಿ ಗರಿಗೆದರಿದ ಕ್ರೀಡಾ ಚಟುವಟಿಕೆ

ಜಿಮ್‌, ಕ್ರೀಡಾಂಗಣಕ್ಕೆ ಕ್ರೀಡಾಪಟುಗಳ ದೌಡು

Team Udayavani, Dec 29, 2020, 5:21 AM IST

ಜಿಲ್ಲೆಯಲ್ಲಿ ಗರಿಗೆದರಿದ ಕ್ರೀಡಾ ಚಟುವಟಿಕೆ

ಉಡುಪಿ: ಲಾಕ್‌ಡೌನ್‌ ಮುಕ್ತಾಯ ಬಳಿಕ ಜಿಲ್ಲೆಯಲ್ಲಿ ಕ್ರೀಡಾ ಇಲಾಖೆಯ ವ್ಯಾಪ್ತಿಯ ಕ್ರೀಡಾಂಗಣ ಹಾಗೂ ಜಿಮ್‌ ಕಾರ್ಯಾರಂಭಿಸಿದ್ದು, ಕ್ರೀಡಾಪಟುಗಳು ತರಬೇತಿ ಕೇಂದ್ರಗಳತ್ತ ಮುಖ ಮಾಡಿದ್ದಾರೆ.

ಲಾಕ್‌ಡೌನ್‌ ವೇಳೆ ನಷ್ಟ
ಕೊರೊನಾ ಲಾಕ್‌ಡೌನ್‌ ಜಿಲ್ಲೆಯ ಕ್ರೀಡೆ ಮತ್ತು ಯುವ ಜನ ಸಶಕ್ತೀಕರಣ ಇಲಾಖೆಯ ಆದಾಯಕ್ಕೆ ಬಹಳ ದೊಡ್ಡ ಹೊಡೆತ ನೀಡಿದೆ. ಎಪ್ರಿಲ್‌ -ಮೇ ತಿಂಗಳಲ್ಲಿ ಕ್ರೀಡಾಂಗಣ, ಈಜುಕೊಳ, ಬೇಸಗೆ ಶಿಬಿರಗಳಿಂದ ಬರುತ್ತಿದ್ದ ವಾರ್ಷಿಕ ಆದಾಯದ ಬಹುಪಾಲು ಸುಮಾರು 20 ಲ.ರೂ. ನಷ್ಟ ಉಂಟಾಗಿತ್ತು. ಇದೀಗ ಮತ್ತೆ ತೆರೆದುಕೊಂಡಿದ್ದರಿಂದ ಇಲಾಖೆಗೆ ಮಾಸಿಕ ಆದಾಯ ಹರಿದು ಬರುತ್ತಿದೆ.

ಮಾಸಿಕ 2.64 ಲಕ್ಷ ರೂ. ಆದಾಯ
ಲಾಕ್‌ಡೌನ್‌ಗೂ ಮುನ್ನ ಒಳಾಂಗಣ ಕ್ರೀಡಾಂಗಣ ದಲ್ಲಿರುವ ಅಂತಾರಾಷ್ಟ್ರೀಯ ಗುಣಮಟ್ಟದ ಜಿಮ್‌, ಲಾನ್‌ ಟೆನಿಸ್‌ ಒಳಾಂಗಣ, ಶಟ್ಲ ಬ್ಯಾಡ್ಮಿಂಟನ್‌, ಈಜುಕೊಳದಲ್ಲಿ ಸುಮಾರು 400ಕ್ಕೂ ಹೆಚ್ಚು ಮಂದಿ ಸದಸ್ಯರಿದ್ದರು. ಇವರಿಂದ ತಿಂಗಳಿಗೆ ಸುಮಾರು 3.5 ಲ.ರೂ. ಆದಾಯ ಇಲಾಖೆ ಬರುತ್ತಿತ್ತು. ಲಾಕ್‌ಡೌನ್‌ ತೆರೆವಾದ ಬಳಿಕ ಇದೀಗ ಜಿಮ್‌ನಲ್ಲಿ 120, ಲಾನ್‌ ಟೆನಿಸ್‌ನಲ್ಲಿ 28, ಶಟ್ಲ ಬ್ಯಾಡ್ಮಿಂಟನ್‌ನಲ್ಲಿ 140 ಜನರು ತರಬೇತಿ ಪಡೆಯುತ್ತಿದ್ದು, ಮಾಸಿಕ 2.64 ಲ.ರೂ. ಆದಾಯ ಬರುತ್ತಿದೆ.

ತೆರೆಯದ ಈಜುಕೊಳ
2 ಕೋ.ರೂ. ವೆಚ್ಚದಲ್ಲಿ ಅಜ್ಜರಕಾಡಿನಲ್ಲಿ 5 ವರ್ಷಗಳ ಹಿಂದೆ ಈಜುಕೊಳ ನಿರ್ಮಿಸಲಾಗಿದೆ. ಕಳೆದ ಮಾರ್ಚ್‌ ಲಾಕ್‌ಡೌನ್‌ ಬಳಿಕ ಇದನ್ನು ಬಂದ್‌ ಮಾಡಲಾಗಿದೆ. ಬೇಸಗೆಯ ಎರಡು ತಿಂಗಳುಗಳಲ್ಲಿ ಈಜುಕೊಳದಿಂದ ಇಲಾಖೆಗೆ 14-15 ಲ.ರೂ. ಆದಾಯ ಬರುತ್ತಿತ್ತು. ಲಾಕ್‌ಡೌನ್‌ನಿಂದಾಗಿ ಈ ಆದಾಯ ಖೋತಾ ಆಗಿದೆ. ಪ್ರಸ್ತುತ ದುರಸ್ತಿ ಹಿನ್ನೆಲೆಯಲ್ಲಿ ಈಜುಕೊಳ ಬಂದ್‌ ಆಗಿದೆ.

ನಿರ್ವಹಣೆಗೆ ಶುಲ್ಕವೇ ಆಧಾರ
ಈಜುಕೊಳ, ಒಳಾಂಗಣ ಹಾಗೂ ಜಿಲ್ಲಾ ಕ್ರೀಡಾಂ ಗಣಗಳಿಂದ ಬರುವ ಆದಾಯಗಳು ಇಲ್ಲಿನ ಗುತ್ತಿಗೆ ಸಿಬಂದಿ ಸಂಬಳ ಹಾಗೂ ಇವುಗಳ ನಿರ್ವಹಣೆಯ ಪ್ರಮುಖ ಮೂಲಗಳಾಗಿವೆ. ಈಜುಕೊಳದಲ್ಲಿ 11 ಮಂದಿ, ಶಟ್ಲ ಬ್ಯಾಡ್ಮಿಂಟನ್‌ನಲ್ಲಿ 7 ಮಂದಿ, ಲಾನ್‌ ಟೆನಿಸ್‌ನಲ್ಲಿ 4 ಮಂದಿ, ಜಿಮ್‌ನಲ್ಲಿ ಒಬ್ಬರು ಹಾಗೂ ಇಲಾಖೆ ಕಚೇರಿ ಮತ್ತು ಜಿಲ್ಲಾ ಕ್ರೀಡಾಂಗಣದಲ್ಲಿ ಆರು ಮಂದಿ ಗುತ್ತಿಗೆ ಸಿಬಂದಿ ದುಡಿಯುತ್ತಿದ್ದಾರೆ. ಇವರಿಗೆಲ್ಲ ಇದೇ ಆದಾಯದಿಂದಲೇ ಸಂಬಳ ನೀಡಬೇಕಾಗುತ್ತದೆ.

ಕ್ಯಾಂಪ್‌ಗಳಿಂದ ಅನುದಾನ
ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದಲ್ಲಿ ಪ್ರತಿ ಬೇಸಗೆಯಲ್ಲಿ ಇಲಾಖೆಯಿಂದ ಏರ್ಪಡಿಸಲಾಗುವ ಆ್ಯತ್ಲೆಟಿಕ್ಸ್‌ ಕ್ಯಾಂಪ್‌ನಲ್ಲಿ ಸುಮಾರು 200-300 ಮಂದಿ ಭಾಗವಹಿಸುತ್ತಾರೆ. ಈ ಶಿಬಿರಾರ್ಥಿಗಳಿಂದ 50,000-60,000 ರೂ.ವರೆಗೆ ಹಣ ಸಂಗ್ರಹಿಸಲಾಗುತ್ತದೆ. ಅದೇ ರೀತಿ ಸ್ವಿಮ್ಮಿಂಗ್‌ ಕ್ಯಾಂಪ್‌ಗ್ಳಲ್ಲಿ 200-250 ಮಂದಿ ಹಾಗೂ ಶಟಲ್‌ ಬ್ಯಾಡ್ಮಿಂಟನ್‌ ಶಿಬಿರದಲ್ಲಿ ಸುಮಾರು 80 ಮಂದಿ ಭಾಗವಹಿಸುತ್ತಾರೆ. ಇದರಲ್ಲಿ ಸುಮಾರು 20 ಲ.ರೂ. ವರೆಗೆ ಆದಾಯ ಬರುತ್ತಿತ್ತು. ಇದರಿಂದ ಕ್ರೀಡಾಂಗಣ ಹಾಗೂ ಜಿಮ್‌ ಸಂಬಂಧಿಸಿದ ದುರಸ್ತಿ ಕೆಲಸಗಳನ್ನು ಮಾಡಿಸಲಾಗುತ್ತಿತ್ತು. ಕೋವಿಡ್‌ನಿಂದಾಗಿ ಈ ಆದಾಯಕ್ಕೆ ಹೊಡೆತ ಉಂಟಾಗಿದೆ.

ಮಾರ್ಗಸೂಚಿ ಅನ್ವಯ ತರಬೇತಿ
ಲಾಕ್‌ಡೌನ್‌ ತೆರವಾದ ಬಳಿಕ ಜಿಲ್ಲಾ ಕ್ರೀಡಾಂಗಣ, ಒಳಾಂಗಣ ಕ್ರೀಡಾಂಗಣಗಳನ್ನು ತೆರೆಯಲಾಗಿದೆ. ಕ್ರೀಡಾಪಟುಗಳು ಬಂದು ತರಬೇತಿ ಪಡೆದು ಕೊಳ್ಳುತ್ತಿದ್ದಾರೆ. ಕೋವಿಡ್‌ ಮಾರ್ಗಸೂಚಿ ಅನ್ವಯ ಕ್ರೀಡಾಪಟುಗಳಿಗೆ ತರಬೇತಿ ಪಡೆದುಕೊಳ್ಳಲು ಅವಕಾಶ ನೀಡಲಾಗಿದೆ. ಈಜುಕೊಳದಲ್ಲಿ ದುರಸ್ತಿ ಇರುವ ಹಿನ್ನೆಲೆಯಲ್ಲಿ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶ ಕಲ್ಪಿಸಿಲ್ಲ.
-ಡಾ| ರೋಶನ್‌ ಕುಮಾರ್‌ ಶೆಟ್ಟಿ, ಸಹಾಯಕ ನಿರ್ದೇಶಕ, ಯುವಜನ ಸಶಕ್ತೀಕರಣ ಮತ್ತು ಕ್ರೀಡಾ ಇಲಾಖೆ, ಉಡುಪಿ

ಟಾಪ್ ನ್ಯೂಸ್

Dinesh-Meeting

Bengaluru: ನಿಫಾಗೆ ಬಲಿಯಾದ ವಿದ್ಯಾರ್ಥಿಯ ಸಂಪರ್ಕದಲ್ಲಿದ್ದ 25 ಮಂದಿ ಪತ್ತೆ

PUNJALAKATTE

Punjalkatte: ಆರ್‌ಎಎಫ್ ಪೊಲೀಸರಿದ್ದ ಲಾರಿ ಪಲ್ಟಿ , ಇಬ್ಬರಿಗೆ ಗಾಯ

-archana-kamath

Liver transplant: ಲಿವರ್‌ ದಾನದ ಬಳಿಕ ಉಪನ್ಯಾಸಕಿ ಸಾವು

water

Mudubidire: 77 ಕೋ.ರೂ. ವೆಚ್ಚದ ಅಮೃತ್‌ 2.0 ನೀರಿನ ಯೋಜನೆಗೆ ಚಾಲನೆ

Belli

Movie Release: ಮಕ್ಕಳ ಚಲನಚಿತ್ರ “ದಿ ಜರ್ನಿ ಆಫ್‌ ಬೆಳ್ಳಿ’ ತೆರೆಗೆ

SUPER-MOON

Space Wonder: ಇಂದು ವಿಶೇಷ ಸೂಪರ್‌ಮೂನ್‌

Sunil-kumar

Investigation: ಬಂಟ್ವಾಳ, ಮಂಡ್ಯ ಘಟನೆ ತನಿಖೆ ಎನ್‌ಐಎಗೆ ವಹಿಸಲಿ: ಶಾಸಕ ಸುನಿಲ್‌ ಕುಮಾರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sunil-kumar

Investigation: ಬಂಟ್ವಾಳ, ಮಂಡ್ಯ ಘಟನೆ ತನಿಖೆ ಎನ್‌ಐಎಗೆ ವಹಿಸಲಿ: ಶಾಸಕ ಸುನಿಲ್‌ ಕುಮಾರ್‌

Udupi ಗೀತಾರ್ಥ ಚಿಂತನೆ-37: ಕೃಷಿ, ಆರೋಗ್ಯ, ಕ್ರೀಡಾ ಕ್ಷೇತ್ರಕ್ಕೂ ಗೀತೆಯ ಪ್ರಭಾವ

Udupi ಗೀತಾರ್ಥ ಚಿಂತನೆ-37: ಕೃಷಿ, ಆರೋಗ್ಯ, ಕ್ರೀಡಾ ಕ್ಷೇತ್ರಕ್ಕೂ ಗೀತೆಯ ಪ್ರಭಾವ

Suside-Boy

Health Problem: ಮಲಗಿದ್ದ ವೇಳೆ ಮೃತಪಟ್ಟ ವ್ಯಕ್ತಿ

cOurt

Udupi: ಪಾತಕಿ ಬನ್ನಂಜೆ ರಾಜ ಸಹಚರನಿಗೆ ಜಾಮೀನು

Bramavara: ಫ್ಯಾಕ್ಟರಿಯಿಂದ ಕಳವು; ಪ್ರಕರಣ ದಾಖಲು

Bramavara: ಫ್ಯಾಕ್ಟರಿಯಿಂದ ಕಳವು; ಪ್ರಕರಣ ದಾಖಲು

MUST WATCH

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

udayavani youtube

ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

ಹೊಸ ಸೇರ್ಪಡೆ

Dinesh-Meeting

Bengaluru: ನಿಫಾಗೆ ಬಲಿಯಾದ ವಿದ್ಯಾರ್ಥಿಯ ಸಂಪರ್ಕದಲ್ಲಿದ್ದ 25 ಮಂದಿ ಪತ್ತೆ

PUNJALAKATTE

Punjalkatte: ಆರ್‌ಎಎಫ್ ಪೊಲೀಸರಿದ್ದ ಲಾರಿ ಪಲ್ಟಿ , ಇಬ್ಬರಿಗೆ ಗಾಯ

-archana-kamath

Liver transplant: ಲಿವರ್‌ ದಾನದ ಬಳಿಕ ಉಪನ್ಯಾಸಕಿ ಸಾವು

1-asdadasd

Cricketer of the Month :ಎರಡೂ ಪ್ರಶಸ್ತಿ ಶ್ರೀಲಂಕಾ ಪಾಲು

1-HB

Harry Brook ಹೆಗಲಿಗೆ ಇಂಗ್ಲೆಂಡ್‌ ನಾಯಕತ್ವ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.