![Mollywood: ಸೂಪರ್ ಸ್ಟಾರ್ ಮೋಹನ್ ಲಾಲ್ಗೆ ‘ಆವೇಶಮ್ʼ ನಿರ್ದೇಶಕ ಆ್ಯಕ್ಷನ್ ಕಟ್](https://www.udayavani.com/wp-content/uploads/2024/12/8-27-415x249.jpg)
ಉಜಿರೆಯಲ್ಲೊಂದು ಮಾದರಿ ಸೌರ ವಿದ್ಯುತ್ ಪಾರ್ಕ್
15.80 ಲಕ್ಷ ರೂ.ನಲ್ಲಿ ಅನುಷ್ಠಾನ , ವಿದ್ಯುತ್ ಉಳಿಕೆಗೆ ಪರ್ಯಾಯ ಚಿಂತನೆ
Team Udayavani, Jan 12, 2021, 3:00 AM IST
![ಉಜಿರೆಯಲ್ಲೊಂದು ಮಾದರಿ ಸೌರ ವಿದ್ಯುತ್ ಪಾರ್ಕ್](https://www.udayavani.com/wp-content/uploads/2021/01/tdy-6-3-620x372.jpg)
ಬೆಳ್ತಂಗಡಿ: ವೈಜ್ಞಾನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ಗ್ರಾಮ ಪಂಚಾಯತ್ಗೆ ನಿರಂತರ ಆದಾಯ ಸೃಷ್ಟಿಸುವೆಡೆಗೆ ಬೆಳ್ತಂಗಡಿ ತಾಲೂಕಿನ ಉಜಿರೆ ಗ್ರಾಮ ಪಂಚಾಯತ್ ಮಾದರಿ ಪ್ರಯೋಗದಲ್ಲಿ ತೊಡಗಿದೆ.
14ನೇ ಹಣಕಾಸು ಯೋಜನೆ ಮತ್ತು ಜಿ.ಪಂ. ಹಾಗೂ ಗ್ರಾ.ಪಂ. ಸುಮಾರು 15.80 ಲಕ್ಷ ರೂ. ಅಂದಾಜು ವೆಚ್ಚದಲ್ಲಿ ಉಜಿರೆ ಗ್ರಾಮದ ಉಂಡ್ಯಾಪು ಎಂಬಲ್ಲಿ ಕುಡಿಯುವ ನೀರಿನ ಸ್ಥಾವರ ಹಾಗೂ ಸೌರ ವಿದ್ಯುತ್ ಪಾರ್ಕ್ ನಿರ್ಮಾಣಕ್ಕೆ ಮುಂದಾಗಿದೆ.
ವಿದ್ಯುತ್ ಬಿಲ್ ಇಳಿಸಲು :
ಮನೆ ಮನೆಗೆ ನೀರು ಸರಬಾರಾಜಿನ ವಿದ್ಯುತ್ ಬಿಲ್ ಗ್ರಾಮ ಪಂಚಾಯತ್ಗೆ ಹೊರೆಯಾಗುತ್ತಿರುವುದನ್ನು ಕಂಡು ಸೌರವಿದ್ಯುತ್ ಬಳಸಿ ಕುಡಿಯವ ನೀರಿನ ಸ್ಥಾವರ ನಿರ್ಮಿಸಲಾಗಿದೆ. ವಿದ್ಯುತ್ ಇಲ್ಲದೆ ಕೇವಲ ಸೌರಶಕ್ತಿಯಿಂದ ಸುಮಾರು 5 ಎಚ್.ಪಿ. ಪಂಪ್ ಚಾಲನೆ ಯಾಗುವ ಮೂಲಕ ವಾರ್ಷಿಕ 1.50 ಲಕ್ಷ ರೂ. ವಿದ್ಯುತ್ ಬಿಲ್ ಒಂದು ಸ್ಥಾವರದಿಂದ ಉಳಿಕೆ ಮಾಡುವ ವಿಶೇಷ ಯೋಜನೆ ಇದಾಗಿದೆ. .
ಆರಂಭಿಕ ಹಂತದಲ್ಲಿ ಒಂದು ಸ್ಥಾವರ ನಿರ್ಮಾಣಕಾರ್ಯ ಕೈಗೆತ್ತಿಕೊಂಡಿದ್ದು, ಮುಂದಿನ ದಿನಗಳಲ್ಲಿ ಉಜಿರೆ ಸಂಪೂರ್ಣ ಸೌರ ವಿದ್ಯುತ್ ನೀರಿನ ಸ್ಥಾವರ ನಿರ್ಮಾಣ ಗುರಿ ಹೊಂದಿದೆ. ಬೆಳಗ್ಗೆ 8.30ರಿಂದ ಸಂಜೆ 5ಗಂಟೆವರೆಗೆ ನಿರಂತರ ಚಾಲನೆಯಲ್ಲಿರುವ ಸಾಮರ್ಥ್ಯ ಯೋಜನೆ ಹೊಂದಿದೆ.
ಸನ್ ಫಾರ್ಮ್ಸ್ ಗ್ರೀನ್ ಎನರ್ಜಿ ಕಂಪೆನಿಯಿಂದ ಅಳವಡಿಕೆ ಕಾರ್ಯ ನಡೆಸಿದೆ. 9ನೇ ವಾರ್ಡ್ನ ಸುಮಾರು 100 ಮನೆಗಳಿಗೆ ಪ್ರಯೋಜನವಾಗಲಿದೆ.
ಮುಂದೆ ಉಜಿರೆಗೆಲ್ಲ ಅನ್ವಯ :
ಉಜಿರೆಯಲ್ಲಿ ಸರಿ ಸುಮಾರು 10ಕ್ಕೂ ಅಧಿಕ ಕುಡಿಯುವ ನೀರಿನ ಸ್ಥಾವರಗಳಿವೆ. ಒಂದು ಸ್ಥಾವರದಿಂದ ಪ್ರತೀ ತಿಂಗಳು 15 ಸಾವಿರ ರೂ. ವಿದ್ಯುತ್ ಬಿಲ್ ಅಂದರೂ ವಾರ್ಷಿಕ ಕನಿಷ್ಠ ಪಕ್ಷ 1.50 ಲಕ್ಷ ರೂ. ಗ್ರಾ.ಪಂ.ಗೆ ವಿದ್ಯುತ್ ಬಿಲ್ ಬರುತ್ತಿದ್ದು, 10 ಸ್ಥಾವರಗಳಿಂದ 15 ಲಕ್ಷ ರೂ. ಗೂ ಅಧಿಕ ವೆಚ್ಚವಾಗುತ್ತಿದೆ. ಇದೀಗ 3 ವರ್ಷದಲ್ಲಿ ಸೋಲಾರ್ ಪಾರ್ಕ್ ವೆಚ್ಚ ಕೈಸೇರಲಿದ್ದು, ಭವಿಷ್ಯದಲ್ಲಿ ಇದನ್ನು ಮಾದರಿಯಾಗಿರಿಸಿ ಉಳಿದೆ ಡೆಗಳಲ್ಲಿ ಸ್ಥಾವರ ನಿರ್ಮಾಣ ಮಾಡಲಾ ಗುವುದು ಎಂದು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಶೆಟ್ಟಿ ನೊಚ್ಚ ಹೇಳಿದ್ದಾರೆ.
ಕಸದಿಂದಲೂ ಆದಾಯ :
18 ಸಾವಿರಕ್ಕಿಂತ ಅಧಿಕ ಜನಸಂಖ್ಯೆ ಹಾಗೂ 4,500 ರಷ್ಟು ಮನೆ ಹೊಂದಿರುವ ಉಜಿರೆ ಗ್ರಾ.ಪಂ. ಪಟ್ಟಣದಂತೆ ಅಭಿವೃದ್ಧಿಯಲ್ಲಿ ವೇಗ ಪಡೆಯುತ್ತಿದೆ. ಇದರ ಮಧ್ಯೆ ತ್ಯಾಜ್ಯ ನಿರ್ವಹಣೆಯೂ ಸವಾಲಾಗುತ್ತಿರುವುದನ್ನು ಪರಿಗಣಿಸಿ ಇಜ್ಜಾಲ ಎಂಬಲ್ಲಿ ತ್ಯಾಜ್ಯ ಸಂಪನ್ಮೂಲ ಘಟಕ ಕಾರ್ಯನಿರ್ವಹಿಸುತ್ತಿದೆ. ಉಜಿರೆ ಜನ್ಯ ಎಂಬ ಬ್ರ್ಯಾಂಡಿಂಗ್ ನಲ್ಲಿ ಎಲ್ಲ ರೀತಿಯ ಕರಗುವ ತ್ಯಾಜ್ಯ ಒಗ್ಗೂಡಿಸಿ 60 ದಿನಗಳಲ್ಲಿ ಗೊಬ್ಬರ ತಯಾರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಲು ಅಗತ್ಯ ಸಿದ್ಧತೆಗಳು ಆಗುತ್ತಿದೆ.
450 ಸಸಿ ನಾಟಿ :ಅತ್ತಾಜೆ ಎಂಬಲ್ಲಿ ಈಗಾಗಲೇ 13 ಎಕರೆಯಲ್ಲಿ ಜೈವಿಕ ವನ ನಿರ್ಮಾಣ ಕಾರ್ಯಕ್ಕೆ ಮುಂದಾಗಿದ್ದು, 3ಎಕರೆ ಕೆರೆ ಪ್ರದೇಶದಲ್ಲಿ ಪಾರ್ಕ್ ನಿರ್ಮಾಣವಾಗಲಿದೆ. ಈಗಾಗಲೇ 450 ಸಸಿಗಳನ್ನು ನೆಡಲಾಗಿದೆ.
ಹೊಸ ಚಿಂತನೆಗಳಿಂದ ಉಜಿರೆಯಲ್ಲಿ ಅಭಿವೃದ್ಧಿ ವೇಗ ಪಡೆಯುತ್ತದೆ ಎಂಬು ದಕ್ಕೆ ಉಜಿರೆ ಗ್ರಾ.ಪಂ. ಸಾಧನೆ ಸಾಕ್ಷಿ. – ಡಾ| ಯತೀಶ್ ಕುಮಾರ್, ಆಡಳಿತಾಧಿಕಾರಿ
ಜನಪ್ರತಿನಿಧಿಗಳು, ಪಂಚಾಯತ್ ಆಡಳಿತ ಮಂಡಳಿ ಹಾಗೂ ಸಿಬಂದಿ ಸಹಕಾರದಲ್ಲಿ ಉಜಿರೆಯನ್ನು ಮಾದರಿ ಗ್ರಾಮವಾಗಿಸುವ ಉದ್ದೇಶ ಹೊಂದಲಾಗಿದೆ. –ಪ್ರಕಾಶ್ ಶೆಟ್ಟಿ ನೊಚ್ಚ, ಪಿಡಿಒ
ಟಾಪ್ ನ್ಯೂಸ್
![Mollywood: ಸೂಪರ್ ಸ್ಟಾರ್ ಮೋಹನ್ ಲಾಲ್ಗೆ ‘ಆವೇಶಮ್ʼ ನಿರ್ದೇಶಕ ಆ್ಯಕ್ಷನ್ ಕಟ್](https://www.udayavani.com/wp-content/uploads/2024/12/8-27-415x249.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
![udayavani youtube](https://i.ytimg.com/vi/NdljxpTr0n8/mqdefault.jpg)
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
![udayavani youtube](https://i.ytimg.com/vi/Ge2mbEcT0j0/mqdefault.jpg)
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
![udayavani youtube](https://i.ytimg.com/vi/qW7fcwKh15I/mqdefault.jpg)
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
![udayavani youtube](https://i.ytimg.com/vi/rXflDn9gBE4/mqdefault.jpg)
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
![udayavani youtube](https://i.ytimg.com/vi/OPoFL9bnOqc/mqdefault.jpg)
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
![Yakshagana Tenku](https://www.udayavani.com/wp-content/uploads/2024/12/Yakshagana-Tenku-150x99.jpg)
Yakshagana;ಕನ್ನಡ ಭಾಷೆಯ ಮೌಲ್ಯವನ್ನು ಉಳಿಸುವಲ್ಲಿ ಸಾರ್ವಕಾಲಿಕ ಕೊಡುಗೆ
![Mollywood: ಸೂಪರ್ ಸ್ಟಾರ್ ಮೋಹನ್ ಲಾಲ್ಗೆ ‘ಆವೇಶಮ್ʼ ನಿರ್ದೇಶಕ ಆ್ಯಕ್ಷನ್ ಕಟ್](https://www.udayavani.com/wp-content/uploads/2024/12/8-27-150x90.jpg)
Mollywood: ಸೂಪರ್ ಸ್ಟಾರ್ ಮೋಹನ್ ಲಾಲ್ಗೆ ‘ಆವೇಶಮ್ʼ ನಿರ್ದೇಶಕ ಆ್ಯಕ್ಷನ್ ಕಟ್
![ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್](https://www.udayavani.com/wp-content/uploads/2024/12/lalu-1-150x84.jpg)
ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್ ಕಿಡಿ
![Is Ashwin made a hasty decision: Is this how much Kohli is worth in the dressing room?](https://www.udayavani.com/wp-content/uploads/2024/12/ashwin-kogli-150x87.jpg)
BGT 24: ಆತುರದ ನಿರ್ಧಾರ ಮಾಡಿದ್ರಾ ಅಶ್ವಿನ್ : ಟೀಂ ಇಂಡಿಯಾದಲ್ಲಿ ಕೊಹ್ಲಿ ಬೆಲೆ ಇಷ್ಟೇನಾ?
![1-a-ct](https://www.udayavani.com/wp-content/uploads/2024/12/1-a-ct-150x89.jpg)
Belagavi Session ಉದ್ವಿಗ್ನ:ಹೆಬ್ಬಾಳ್ಕರ್ ವಿರುದ್ದ ಅವಾಚ್ಯ ಪದ ಬಳಸಿದರೆ ಸಿ.ಟಿ.ರವಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.