ದಿನವಿಡೀ ದುಡಿದು ಪಡೆಯುವ ಕೂಲಿ


Team Udayavani, Jan 16, 2021, 6:20 AM IST

ದಿನವಿಡೀ ದುಡಿದು ಪಡೆಯುವ ಕೂಲಿ

ಕೆಲಸ ಮತ್ತು ವಿಶ್ರಾಂತಿ – ಇವೆರಡೂ ವಿರುದ್ಧ ಧ್ರುವಗಳು ಎಂಬುದು ಒಂದು ವಾದ. ಇನ್ನೊಂದು ವಾದವೆಂದರೆ, ಇವುಗಳು ಒಂದಕ್ಕೊಂದು ಪೂರಕ. ಸದಾ ಕೆಲಸ ಮಾಡುತ್ತಿದ್ದರೆ ವಿಶ್ರಾಂತಿ ಇಲ್ಲವಾಗುತ್ತದೆ, ಹೀಗಾಗಿ ವಿಶ್ರಾಂತಿ ಪಡೆಯಬೇಕಿದ್ದರೆ ದಿನವಿಡೀ ಸುಮ್ಮನೆ ಕುಳಿತಿರಬೇಕು ಅಥವಾ ನಿದ್ದೆ ಮಾಡ ಬೇಕು ಎನ್ನುವುದು ಒಂದು ವಾದ. ಇನ್ನೊಂದು ಇದನ್ನು ವಿರೋಧಿ ಸುತ್ತದೆ. ದಿನವಿಡೀ ಬೆವರು ಸುರಿಸಿ ದುಡಿಯ ಬೇಕು, ಆಗ ನಿದ್ದೆ ಆವರಿಸಿ ಬರುತ್ತದೆ. ದುಡಿದು ದಣಿದ ದೇಹ ಬಡಿದು ಹಾಕಿದಂತೆ ವಿಶ್ರಾಂತಿಯನ್ನು ಅನು ಭವಿಸುತ್ತದೆ ಎನ್ನುವುದು ಎರಡನೆಯ ವಾದದ ಪ್ರತಿಪಾದನೆ.

ಒಂದು ಹಳೆಯ ಕಥೆ ಯಿದೆ. ಇದು ವೃದ್ಧ ನೊಬ್ಬನ ಕಥೆ.

ಚೀನೀ ತಣ್ತೀಜ್ಞಾನಿ ಕನ್‌ಫ್ಯೂಶಿಯಸ್‌ ಒಮ್ಮೆ ನಡೆದು ಹೋಗುತ್ತಿದ್ದಾಗ ಒಬ್ಬ ವೃದ್ಧನನ್ನು ಕಂಡ. ವಿಚಿತ್ರ ಎಂದರೆ ಸುಮಾರು 90 ವರ್ಷಗಳಷ್ಟು ವಯಸ್ಸಿನ ಆ ವೃದ್ಧ 30ರ ಆಸುಪಾಸಿನಲ್ಲಿದ್ದ ತನ್ನ ಮಗನ ಜತೆಗೆ ಸೇರಿಕೊಂಡು ಏತದಲ್ಲಿ ನೀರೆತ್ತುತ್ತಿದ್ದ. ಏತಕ್ಕೆ ಎತ್ತುಗಳನ್ನು ಕಟ್ಟಿರ ಲಿಲ್ಲ; ಒಂದು ಬದಿಯಲ್ಲಿ ವೃದ್ಧ, ಇನ್ನೊಂದು ಬದಿಯಲ್ಲಿ ಅವನ ಮಗ ನೊಗಕ್ಕೆ ಕೊರಳೊಡ್ಡಿದ್ದರು.

ಕನ್‌ಫ್ಯೂಶಿಯಸ್‌ಗೆ ಬಹಳ ವಿಚಿತ್ರ ವಾಗಿ ಕಂಡದ್ದು ಇದೇ. ಅವನಿಗೆ ಅಪ್ಪನ ಜತೆಗೆ ಕಷ್ಟಪಡುತ್ತಿದ್ದ ಯುವಕನ ಬಗ್ಗೆ ಬಹಳ ಕನಿಕರ ಉಂಟಾಯಿತು.

ಕನ್‌ಫ್ಯೂಶಿಯಸ್‌ ಸುಮಾರು ಹೊತ್ತಿನ ವರೆಗೆ ವೃದ್ಧ ತಂದೆ ಮತ್ತು ಯುವಕ ಮಗ ನೀರೆಳೆಯುತ್ತಿದ್ದುದನ್ನು ನೋಡಿದ. ಬಳಿಕ ಮೆಲ್ಲನೆ ವೃದ್ಧ ತಂದೆಯ ಬಳಿಗೆ ಹೋಗಿ, “ನಿನ್ನ ಮಗನಿಗೆ ಸುಮ್ಮನೆ ಯಾಕೆ ಕಷ್ಟ ಕೊಡುತ್ತಿದ್ದೀಯಾ? ಇದು ಮೂರ್ಖ ತನ ಅನ್ನಿಸುವುದಿಲ್ಲವೇ? ಎತ್ತುಗಳನ್ನು ಹೂಡಿ ಈ ಕೆಲಸ ಮಾಡಿಸಬಾರದೇ’ ಎಂದು ಪ್ರಶ್ನಿಸಿದ.

“ಶ್ಶೂ… ಸುಮ್ಮನಿರಿ. ಈಗ ನನ್ನ ಮಗನಿಗೆ ಕೇಳುವ ಹಾಗೆ ಇಂಥ ಅಪದ್ಧಗಳನ್ನೆಲ್ಲ ನುಡಿಯಬೇಡಿ. ಇದೆಲ್ಲ ಅವನ ಕಿವಿಗೆ ಬೀಳಬಾರದು. ಸ್ವಲ್ಪ ಹೊತ್ತಿನ ಬಳಿಕ ಅವನು ಉಣ್ಣಲು ಹೊರಡುತ್ತಾನೆ. ನಿಮ್ಮದೇನಿದ್ದರೂ ಆಗ ಮಾತನಾಡಿ’ ಎಂದು ವೃದ್ಧ ತಂದೆ ಕನ್‌ಫ್ಯೂಶಿಯಸ್‌ನ ಬಾಯಿ ಮುಚ್ಚಿಸಿದ.

ಕನ್‌ಫ್ಯೂಶಿಯಸ್‌ಗೆ ಮತ್ತಷ್ಟು ಆಶ್ಚರ್ಯವಾಯಿತು. ಆದರೂ ವೃದ್ಧನ ವಿನಂತಿಯಂತೆ ಆತ ಅಲ್ಲೇ ಬದಿಯ ಮರದಡಿಯಲ್ಲಿ ಕೊಂಚ ವಿಶ್ರಮಿಸಿದ. ಸ್ವಲ್ಪ ಹೊತ್ತಿನಲ್ಲಿ ವೃದ್ಧನ ಮಗ ಊಟಕ್ಕಾಗಿ ಹೊರಟು ಹೋದಾಗ ಕನ್‌ಫ್ಯೂಶಿ ಯಸ್‌ ಮತ್ತೆ ವೃದ್ಧನ ಬಳಿಗೆ ಬಂದು ಪ್ರಶ್ನೆಗ ಳನ್ನು ಪುನ ರಾವರ್ತಿ ಸಿದ. ಮಾತ್ರ ವಲ್ಲದೆ, ಈ ಪ್ರಶ್ನೆಗಳನ್ನು ಯುವಕ ಮಗ ಕೇಳ ಬಾರದು ಯಾಕೆ ಎಂದೂ ಪ್ರಶ್ನಿಸಿದ.

ವೃದ್ಧ ಕೊಟ್ಟ ಉತ್ತರ ಹೀಗಿತ್ತು, “ನನಗೆ ಈಗ 90 ವರ್ಷ ವಯಸ್ಸಾಗಿದೆ. ಆದರೂ 30ರ ನನ್ನ ಮಗನ ಜತೆಗೆ ಹೆಗಲಿಗೆ ಹೆಗಲು ಕೊಟ್ಟು ದುಡಿಯುವ ಸಾಮರ್ಥ್ಯ ಹೊಂದಿದ್ದೇನೆ. ಈಗ ನಾನು ಏತ ತಿರುಗಿಸಲು ಎತ್ತುಗಳನ್ನು ನಿಯೋ ಜಿಸಿದರೆ ನನ್ನ ಮಗ ಜಡ್ಡುಗಟ್ಟುತ್ತಾನೆ, ಅವನಿಗೆ 90 ವರ್ಷವಾಗುವ ಹೊತ್ತಿಗೆ ಏನೂ ಸಾಮರ್ಥ್ಯ ಉಳಿದಿರುವುದಿಲ್ಲ. ಇದಕ್ಕಾಗಿಯೇ ನಿಮ್ಮ ಪ್ರಶ್ನೆಗಳನ್ನೆಲ್ಲ ಮಗನಿಗೆ ಕೇಳುವ ಹಾಗೆ ಎತ್ತಬೇಡಿ ಎಂದು ಹೇಳಿದ್ದು. ನಗರದಲ್ಲಿ ಇದಕ್ಕಾಗಿ ಯಂತ್ರಗಳು ಲಭ್ಯವಿವೆ ಎಂಬುದು ಕೂಡ ನನಗೆ ಗೊತ್ತು. ಅವನ್ನೆಲ್ಲ ಅಳವಡಿಸಿಕೊಂಡರೆ ನನ್ನ ಮಗನ ಕಥೆ ಏನಾದೀತು, ಅವನ ಆರೋಗ್ಯ ಹೇಗಾ ದೀತು, ಶರೀರದ ಕಥೆಯೇನು…’

ನಾವು ಒಂದು ಕೈಯಿಂದ ಮಾಡು ವುದು ಇನ್ನೊಂದು ಕೈಯ ಮೇಲೆ ಪರಿಣಾಮ ಬೀರುತ್ತದೆ. ಮೈಮುರಿ ಯುವಂತೆ ದುಡಿದವನನ್ನು ಮಾತ್ರ ನಿದ್ದೆ ಒತ್ತರಿಸಿಕೊಂಡು ಬರುತ್ತದೆ. ವಿಶ್ರಾಂತಿ ಬೇಕಲ್ಲ ಎಂದುಕೊಂಡು ಹಗಲಿಡೀ ಆರಾಮ ಕುರ್ಚಿಯಲ್ಲಿ ಕುಳಿತವನು ರಾತ್ರಿಯಿಡೀ ನಿದ್ದೆಯಿಲ್ಲದೆ ಹೊರಳಾಡ ಬೇಕಾಗುತ್ತದೆ. ವಿಶ್ರಾಂತಿ ಎಂಬುದು ದುಡಿದು ಪಡೆ ಯಬೇಕಾದ ಕೂಲಿ.

(ಸಾರ ಸಂಗ್ರಹ)

ಟಾಪ್ ನ್ಯೂಸ್

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನನ್ನೊಳಗಿನ “ನಾನು’ ಹೋದರೆ ಹೋದೇನು

ನನ್ನೊಳಗಿನ “ನಾನು’ ಹೋದರೆ ಹೋದೇನು

ಮಾನವ ಜನ್ಮವನ್ನು ವ್ಯರ್ಥಗೊಳಿಸದಿರೋಣ

ಮಾನವ ಜನ್ಮವನ್ನು ವ್ಯರ್ಥಗೊಳಿಸದಿರೋಣ

achivement

ಗೆಲುವಿನ ದಾರಿ ದೂರ… ಪ್ರಯತ್ನ ನಿರಂತರವಾಗಿರಲಿ

ಆತ್ಮತೃಪ್ತಿ, ಹೃದಯ ಶ್ರೀಮಂತಿಕೆಯೇ ಶ್ರೇಷ್ಠ

ಆತ್ಮತೃಪ್ತಿ, ಹೃದಯ ಶ್ರೀಮಂತಿಕೆಯೇ ಶ್ರೇಷ್ಠ

ನಾವೆಲ್ಲರೂ ಸ್ನೇಹಜೀವಿಗಳಾಗೋಣ

ನಾವೆಲ್ಲರೂ ಸ್ನೇಹಜೀವಿಗಳಾಗೋಣ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.