![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Jan 19, 2021, 6:20 AM IST
ಜಗತ್ತಿನಾದ್ಯಂತ ಹಲವು ದೇಶಗಳಲ್ಲಿ ಕೊರೊನಾ ಲಸಿಕೆ ವಿತರಣೆಯ ಅಭಿಯಾನ ನಡೆಯುತ್ತಿದೆ. ಈವರೆಗೆ 51 ದೇಶಗಳಲ್ಲಿ ಸುಮಾರು 4.22 ಕೋಟಿ ಜನರು ಲಸಿಕೆಯನ್ನು ಪಡೆದಿದ್ದಾರೆ. ಅತ್ಯಧಿಕ ಸೋಂಕಿತರಿರುವ ದೇಶಗಳಲ್ಲಿ ಲಸಿಕೆ ಅಭಿಯಾನ ಹೇಗೆ ಸಾಗುತ್ತಿದೆ ಎಂಬ ಕಿರುನೋಟ ಇಲ್ಲಿದೆ.
ಜಗತ್ತಿನಲ್ಲೇ ಅತ್ಯಧಿಕ ಸೋಂಕಿತರಿರುವ ದೇಶ. ಲಸಿಕೆ ವಿತರಣೆ ಮೊದಲು ಆರಂಭಿಸಿದ ದೇಶಗಳಲ್ಲೊಂದು. 2020ರ ಡಿ.14ಕ್ಕೆ ಲಸಿಕೆ ವಿತರಣೆ ಆರಂಭವಾಗಿದ್ದು, ಈವರೆಗೆ 1.43 ಕೋಟಿ ಮಂದಿಗೆ ಲಸಿಕೆ ನೀಡಲಾಗಿದೆ.
2.39 ಕೋಟಿ. ಸೋಂಕಿತರು
ವಿಶ್ವದಲ್ಲೇ ಅತಿಹೆಚ್ಚು ಸೋಂಕಿತರಿರುವ 2ನೇ ದೇಶ. ಜ.16ರಂದು ಲಸಿಕಾ ಅಭಿ ಯಾನ ಆರಂಭವಾಗಿದೆ. ಮೊದಲ ಎರಡು ದಿನಗಳಲ್ಲಿ 2.24 ಲಕ್ಷಕ್ಕೂ ಅಧಿಕ ಮಂದಿಗೆ ಕೊವ್ಯಾಕ್ಸಿನ್, ಕೊವಿಶೀಲ್ಡ್ ನೀಡಲಾಗಿದೆ.
1.05 9 ಕೋಟಿ. ಸೋಂಕಿತರು
ಅತೀ ಹೆಚ್ಚು ಸೋಂಕಿತರನ್ನು ಹೊಂದಿರುವ 3ನೇ ದೇಶ ವಾಗಿದ್ದರೂ ಇನ್ನೂ ಲಸಿಕೆ ಅಭಿ ಯಾನ ಆರಂಭ ವಾಗಿಲ್ಲ. ರವಿವಾರವಷ್ಟೇ ಚೀನದ ಸೈನೋವ್ಯಾಕ್ ಮತ್ತು ಆಕ್ಸ್ಫರ್ಡ್ – ಆಸ್ಟ್ರಾಜೆನೆಕಾದ ಲಸಿಕೆಗೆ ಅನುಮತಿ ಸಿಕ್ಕಿದೆ.
84.88 ಲಕ್ಷ ಸೋಂಕಿತರು
ಕಳೆದ ವರ್ಷದ ಆಗಸ್ಟ್ನಲ್ಲೇ ರಷ್ಯಾವು ಕೋವಿಡ್ ವಿರುದ್ಧ ಮೊದಲ ಲಸಿಕೆ ಅಭಿವೃದ್ಧಿಪಡಿಸಿದ್ದಾಗಿ ಘೋಷಿಸಿದೆ. ಸು#ಟ್ನಿಕ್-5 ಲಸಿಕೆಯನ್ನು ಜ.11ರವರೆಗೆ 15 ಲಕ್ಷಕ್ಕೂ ಹೆಚ್ಚು ಮಂದಿಗೆ ವಿತರಿಸಲಾಗಿದೆ.
35.52 ಲಕ್ಷ ಸೋಂಕಿತರು
5.ಯು.ಕೆ. :
ಕಳೆದ ಡಿ.8ರಂದು ಲಸಿಕಾ ಅಭಿಯಾನ ಆರಂಭಿಸಿದ ಜಗತ್ತಿನ ಮೊದಲ ದೇಶ. 38 ಲಕ್ಷಕ್ಕೂ ಹೆಚ್ಚು ಜನರಿಗೆ ಈಗಾಗಲೇ ಮೊದಲ ಡೋಸ್ ನೀಡಲಾಗಿದೆ. ಸೋಮವಾರದಿಂದ ಮತ್ತೆ 50 ಲಕ್ಷ ಮಂದಿ ಲಸಿಕೆ ಪಡೆಯಲು ಅರ್ಹತೆ ಪಡೆದಿದ್ದಾರೆ.
34.05 ಲಕ್ಷ ಸೋಂಕಿತರು
2020ರ ಡಿ.27ರಂದು ಫ್ರಾನ್ಸ್ನಲ್ಲಿ ಲಸಿಕೀಕರಣ ಅಭಿಯಾನ ಆರಂಭ ವಾಯಿತು. ಆದರೆ ವಿತರಣೆ ಪ್ರಕ್ರಿಯೆ ಮಾತ್ರ ಆಮೆಗತಿಯಲ್ಲಿದೆ. ಈವರೆಹೆ 4.22 ಲಕ್ಷ ಮಂದಿಗೆ ಲಸಿಕೆ ನೀಡಲಾಗಿದೆ. ಆದರೆ ಸರಕಾರವು ಜನವರಿ ಅಂತ್ಯದೊಳಗೆ 10 ಲಕ್ಷ ಮಂದಿಗೆ ಲಸಿಕೆ ನೀಡುವಿಕೆ ಪೂರ್ಣಗೊಳಿಸುವ ಗುರಿ ಹಾಕಿಕೊಂಡಿತ್ತು.
29.69 ಲಕ್ಷ ಸೋಂಕಿತರು
ಇಲ್ಲಿಯೂ ಡಿ.27ರಂದೇ ಲಸಿಕೆ ವಿತರಣೆ ಪ್ರಕ್ರಿಯೆ ಆರಂಭವಾಗಿದೆ. ಇಲ್ಲಿನ ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ, ಜ.17ರ ವರೆಗೆ 11.53 ಲಕ್ಷ ಮಂದಿಗೆ ವ್ಯಾಕ್ಸಿನ್ ನೀಡಲಾಗಿದೆ.
23.81 ಲಕ್ಷ ಸೋಂಕಿತರು
Obama Is Queer: ಮಾಜಿ ಅಧ್ಯಕ್ಷ ಒಬಾಮಾ ಪತ್ನಿ ಮಿಚೆಲ್ ಗಂಡಸು: ಮಸ್ಕ್ ತಂದೆ
Cut Down: ವೆಚ್ಚ ಕಡಿತ: ಅಮೆರಿಕ ಸರಕಾರಿ ಉದ್ಯೋಗಿಗಳೇ ವಜಾ!
Mexico:ಯುರೋಪ್ ನ Most ವಾಂಟೆಡ್ ಕ್ರಿ*ಮಿನಲ್, ಡ್ರ*ಗ್ ಕಿಂಗ್ ಪಿನ್ ಮಾರ್ಕೋ ಹ*ತ್ಯೆ
Bourbon Whiskey: ಅಮೆರಿಕದ ಬೌರ್ಬನ್ ವಿಸ್ಕಿ ಆಮದು ಸುಂಕ ಕಡಿತ ಮಾಡಿದ ಭಾರತ
ರಷ್ಯಾ-ಉಕ್ರೇನ್ ಕಾಳಗ ತಪ್ಪಿಸಲು ಮುಂದಿನ ವಾರ 3 ದೇಶದ ಅಧಿಕಾರಿಗಳ ಸಭೆ
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.