![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Jan 28, 2021, 7:00 AM IST
ಹೊಸದಿಲ್ಲಿ: ಈ ಬಾರಿಯ ಐಪಿಎಲ್ ಹರಾಜು ದಿನಾಂಕವನ್ನು ಘೋಷಿಸಲಾಗಿದೆ. ಇದೊಂದು “ಮಿನಿ ಹರಾಜು’ ಆಗಿದ್ದು, ಫೆ. 18ರಂದು ಚೆನ್ನೈಯಲ್ಲಿ ನಡೆಯಲಿದೆ ಎಂದು ಐಪಿಎಲ್ ತನ್ನ ಅಧಿಕೃತ ಟ್ವಿಟರ್ನಲ್ಲಿ ಪ್ರಕಟಿಸಿದೆ. ಬಿಸಿಸಿಐ ಫೆ. 18ರ ದಿನಾಂಕವನ್ನು ನಿಗದಿಗೊಳಿಸಿದ ಒಂದೇ ವಾರದಲ್ಲಿ ಇದು ಅಧಿಕೃತಗೊಂಡಿದೆ.
ಆಗ ಭಾರತ-ಇಂಗ್ಲೆಂಡ್ ನಡುವಿನ ಮೊದಲೆರಡು ಟೆಸ್ಟ್ ಪಂದ್ಯಗಳು ಚೆನ್ನೈಯಲ್ಲಿ ಮುಗಿದಿರುತ್ತವೆ. ದ್ವಿತೀಯ ಟೆಸ್ಟ್ ಫೆ. 17ಕ್ಕೆ ಕೊನೆಗೊಳ್ಳಲಿದ್ದು, ಮರುದಿನವೇ ಹರಾಜು ನಡೆಯಲಿದೆ. ಈಗಾಗಲೇ ಆಟಗಾರರನ್ನು ಉಳಿಸಿಕೊಳ್ಳುವ ಹಾಗೂ ಕೈಬಿಡುವ ಪ್ರಕ್ರಿಯೆ ಮುಗಿದಿದ್ದು, ಫೆ. 4ಕ್ಕೆ “ಟ್ರೇಡಿಂಗ್’ ಪ್ರಕ್ರಿಯೆ ಕೊನೆಗೊಳ್ಳಲಿದೆ.
ಈಗಾಗಲೇ ಸ್ಟೀವನ್ ಸ್ಮಿತ್, ಗ್ಲೆನ್ ಮ್ಯಾಕ್ಸ್ವೆಲ್, ಕ್ರಿಸ್ ಮಾರಿಸ್, ಆರನ್ ಫಿಂಚ್ ಸಹಿತ 57 ಆಟಗಾರರನ್ನು ಫ್ರಾಂಚೈಸಿಗಳು ಬಿಡುಗಡೆ ಮಾಡಿವೆ. 139 ಕ್ರಿಕೆಟಿಗರನ್ನು ಉಳಿಸಿಕೊಂಡಿವೆ.
ಕಿಂಗ್ಸ್ ಇಲೆವೆನ್ ಪಂಜಾಬ್ ಗರಿಷ್ಠ 53.20 ಕೋಟಿ ರೂ. ಮೊತ್ತದೊಂದಿಗೆ ಹರಾಜು ಅಂಗಳಕ್ಕೆ ಇಳಿಯಲಿದೆ. ಕೆಕೆಆರ್ ಮತ್ತು ಹೈದರಾಬಾದ್ ಕನಿಷ್ಠ 10.75 ಕೋಟಿ ರೂ. ಹೊಂದಿವೆ.
ಐಪಿಎಲ್ ಎಲ್ಲಿ? :
2021ರ ಐಪಿಎಲ್ ಪಂದ್ಯಾವಳಿ ಎಲ್ಲಿ, ಯಾವಾಗ ನಡೆಯಲಿದೆ ಎಂಬುದು ಇನ್ನೂ ಖಾತ್ರಿಯಾಗಿಲ್ಲ. ಆದರೆ ಇದನ್ನು ಭಾರತದಲ್ಲೇ ನಡೆಸಲು ಗರಿಷ್ಠ ಪ್ರಯತ್ನ ಮಾಡಲಾಗುವುದು ಎಂಬುದಾಗಿ ಬಿಸಿಸಿಐ ಅಧ್ಯಕ್ಷ ಗಂಗೂಲಿ ಹೇಳಿದ್ದಾರೆ.
ಫ್ರಾಂಚೈಸಿ ಮಾಲಕರಿಗೆ ಕ್ವಾರಂಟೈನ್ ಇಲ್ಲ :
ಫೆ. 18ರ ಹರಾಜಿನಲ್ಲಿ ಪಾಲ್ಗೊಳ್ಳಲಿರುವ ಐಪಿಎಲ್ ಫ್ರಾಂಚೈಸಿ ಮಾಲಕರಿಗೆ ಕ್ವಾರಂಟೈನ್ ಅಗತ್ಯವಿಲ್ಲ ಎಂಬುದಾಗಿ ಬಿಸಿಸಿಐ ತಿಳಿಸಿದೆ. ಆದರೆ ಹರಾಜಿನಲ್ಲಿ ಭಾಗವಹಿಸುವುದಕ್ಕಿಂತ 72 ಗಂಟೆಗಳ ಮೊದಲು ಎರಡು ಆರ್ಟಿ-ಪಿಸಿಆರ್ ನೆಗೆಟಿವ್ ಫಲಿತಾಂಶ ಹೊಂದಿರಬೇಕೆಂದು ಸೂಚಿಸಿದೆ. ಈ ಕುರಿತು ಬಿಸಿಸಿಐ ಸಿಇಒ ಹೇಮಾಂಗ್ ಅಮೀನ್ ಎಲ್ಲ ಫ್ರಾಂಚೈಸಿ ಮಾಲಕರಿಗೆ ಇ-ಮೇಲ್ ಮೂಲಕ ಸೂಚನೆ ರವಾನಿಸಿದ್ದಾರೆ.
ಹರಾಜಿನ ವೇಳೆ ಫ್ರಾಂಚೈಸಿಗಳ ಕೇವಲ 13 ಸದಸ್ಯರಿಗಷ್ಟೇ ಪ್ರವೇಶಾವಕಾಶ ಇರುತ್ತದೆ. ಇದರಲ್ಲಿ 8 ಮಂದಿ “ಆಕ್ಷನ್ ಟೇಬಲ್’ನಲ್ಲಿ, ಉಳಿದ ಐವರು ಗ್ಯಾಲರಿಯಲ್ಲಿ ಕುಳಿತುಕೊಳ್ಳಬೇಕೆಂದು ಸೂಚಿಸಲಾಗಿದೆ.
ಟೈಟಲ್ ಸ್ಪಾನ್ಸರ್ ಯಾರು? :
ಈ ಬಾರಿಯ ಐಪಿಎಲ್ ಟೈಟಲ್ ಸ್ಪಾನ್ಸರ್ ಯಾರೆಂಬುದು ಇನ್ನೂ ನಿಗದಿಯಾಗಿಲ್ಲ. ಭಾರತ-ಚೀನ ನಡುವಿನ ಗಡಿ ಸಂಘರ್ಷ ತೀವ್ರಗೊಂಡಿದ್ದರಿಂದ ಕಳೆದ ವರ್ಷ “ವಿವೋ’ ಸ್ಪಾನ್ಸರ್ ಕೈಬಿಡಲಾಗಿತ್ತು. ಈ ಜಾಗಕ್ಕೆ “ಡ್ರೀಮ್ ಇಲೆವೆನ್’ ಪ್ರವೇಶ ಪಡೆದಿತ್ತು. ಈ ಒಪ್ಪಂದ ಡಿ. 31ಕ್ಕೆ ಕೊನೆಗೊಂಡಿದೆ. ಮತ್ತೆ ವಿವೋ ಕಾಣಿಸಿಕೊಂಡೀತೇ ಎಂಬ ಕುತೂಹಲವಿದೆ.
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್ ವಿವಾದ
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.