ಸೇನೆಗೆ ಎಲ್‌ಪಿಜಿ ಪೂರೈಸುವ ಸ್ಥಾವರದಲ್ಲಿ ಮಹಿಳೆಯರದ್ದೇ ಪಾರುಪತ್ಯ!

ಲಡಾಖ್‌ನ ಎಲ್‌ಪಿಜಿ ಘಟಕ ಮಹಿಳೆಯರಿಂದಲೇ ನಿರ್ವಹಣೆ

Team Udayavani, Jan 31, 2021, 11:21 PM IST

ಸೇನೆಗೆ ಎಲ್‌ಪಿಜಿ ಪೂರೈಸುವ ಸ್ಥಾವರದಲ್ಲಿ ಮಹಿಳೆಯರದ್ದೇ ಪಾರುಪತ್ಯ!

ಲೇಹ್‌: ಲಡಾಖ್‌ನ ಕೊರೆಯುವ ಚಳಿಯಲ್ಲಿ ಚೀನಾ ಸೇನೆಗೆ ಎದುರಾಗಿ ನಿಂತಿರುವ ನಮ್ಮ 50 ಸಾವಿರದಷ್ಟು ಯೋಧರು ಖಾಲಿ ಹೊಟ್ಟೆಯಲ್ಲಿರದಂತೆ ನೋಡಿಕೊಳ್ಳುತ್ತಿರುವವರು ಯಾರು ಗೊತ್ತಾ?

ಲೇಹ್‌ನ ಎಲ್‌ಪಿಜಿ ಸ್ಥಾವರದಲ್ಲಿ ಕಾರ್ಯನಿರ್ವಹಿಸುವ ಈ 12 ಮಂದಿ ಮಹಿಳೆಯರು!

ಹೌದು. ಲಡಾಖ್‌ನ ಎಲ್‌ಪಿಜಿ ಸಿಲಿಂಡರ್‌ ಮರುಭರ್ತಿ ಕೇಂದ್ರದಿಂದಲೇ ಭಾರತೀಯ ಯೋಧರಿಗೆ ಅಡುಗೆ ಅನಿಲ ಪೂರೈಕೆಯಾಗುತ್ತದೆ. ವಿಶೇಷವೆಂದರೆ, ಈ ಕೇಂದ್ರವನ್ನು ಸಂಪೂರ್ಣವಾಗಿ ಮಹಿಳೆಯರೇ ನಿರ್ವಹಿಸುತ್ತಿದ್ದು, ರಕ್ಷಣಾ ಪಡೆಗಳಿಗೆ ಸಮಯಕ್ಕೆ ಸರಿಯಾಗಿ ಅಡುಗೆ ಅನಿಲ ಸರಬರಾಜು ಆಗುವಂತೆ ಇವರು ನೋಡಿಕೊಳ್ಳುತ್ತಿದ್ದಾರೆ.

ಯಾವಾಗ ಹಿಮ ಋತು ಆರಂಭವಾಗಿ, ಹಿಮದ ಮಳೆ ಸುರಿಯಲಾರಂಭಿಸುತ್ತದೋ, ಆಗ ಲಡಾಖ್‌ ಮತ್ತು ದೇಶದ ಇತರೆ ಪ್ರದೇಶಗಳ ನಡುವಿನ ಸಂಪರ್ಕವೇ ಕಡಿತಗೊಳ್ಳುತ್ತದೆ. ಇಂಥ ಸಂದರ್ಭದಲ್ಲಿ ಲಡಾಖ್‌ಗಿರುವ ಏಕೈಕ ಅಡುಗೆ ಅನಿಲದ ಮೂಲವೇ ಈ ಸ್ಥಾವರ. ಸರ್ಕಾರಿ ಸ್ವಾಮ್ಯದ ಇಂಡಿಯನ್‌ ಆಯಿಲ್‌ ಕಂಪನಿಯು ಈ ಎಲ್‌ಪಿಜಿ ಸ್ಥಾವರವನ್ನು ನಿರ್ಮಿಸಿದೆ.
ಇಲ್ಲಿ ಮರುಭರ್ತಿ ಆಗುವ ಎಲ್‌ಪಿಜಿ ಪೈಕಿ ಶೇ.40ರಷ್ಟು ಹೋಗುವುದು ರಕ್ಷಣಾ ಪಡೆಗಳಿಗೆ. ಇದು ಮಹಿಳೆಯರೇ ನಿರ್ವಹಿಸುತ್ತಿರುವ ದೇಶದ ಏಕೈಕ ಎಲ್‌ಪಿಜಿ ಘಟಕ ಎಂಬ ಹೆಗ್ಗಳಿಕೆ ಪಡೆದಿದೆ.

ಇದನ್ನೂ ಓದಿ:ತವರಲ್ಲಿ ಅತ್ಯಧಿಕ ಟೆಸ್ಟ್‌ ಗೆಲುವು : ದಾಖಲೆಯತ್ತ ವಿರಾಟ್‌ ಕೊಹ್ಲಿ

ಮಹಿಳಾಮಣಿಗಳ ಕೆಲಸವೇನು?
ಉತ್ಪಾದನಾ ಕೆಲಸ, ಸಿಲಿಂಡರ್‌ ಭರ್ತಿ ಮಾಡುವುದು, ಸೀಲ್‌ಗ‌ಳ ಗುಣಮಟ್ಟ ಪರೀಕ್ಷೆ, ಭದ್ರತೆ, ದಾಖಲೆಗಳ ನಿರ್ವಹಣೆ, ಕ್ಯಾಂಟೀನ್‌ ನಿರ್ವಹಣೆ ಮತ್ತಿತರ ಎಲ್ಲ ತಾಂತ್ರಿಕ ಹಾಗೂ ತಾಂತ್ರಿಕೇತರ ಕೆಲಸಗಳನ್ನು ಮಹಿಳೆಯರೇ ಮಾಡುತ್ತಾರೆ. ಭದ್ರತಾ ಅಧಿಕಾರಿಯಾಗಿರುವ ಸೇಟನ್‌ ಆಂಗೊ¾à ಅವರನ್ನು ಹೊರತುಪಡಿಸಿ ಉಳಿದ ಎಲ್ಲ ಮಹಿಳೆಯರೂ ಗುತ್ತಿಗೆ ಕೆಲಸಗಾರರಾಗಿದ್ದಾರೆ. ಕೇವಲ ಲೋಡಿಂಗ್‌, ಅಧಿಕ ಭಾರದ ವಸ್ತುಗಳ ಹೊರುವಿಕೆಯನ್ನು ಮಾತ್ರ ಐವರು ಪುರುಷರು ನೋಡಿಕೊಳ್ಳುತ್ತಾರೆ.

ಗೌರವಸೂಚಕವಾಗಿ ನಾವು ರಕ್ಷಣಾ ಪಡೆಗಳಿಗೆ ಹೋಗುವಂಥ ಸಿಲಿಂಡರ್‌ಗಳನ್ನು ಹಲವು ಬಾರಿ ಪರೀಕ್ಷಿಸಿಯೇ ಕಳುಹಿಸುತ್ತೇವೆ ಎಂದು ಹೇಳುತ್ತಾರೆ ಘಟಕದಲ್ಲಿ ಕಾರ್ಯನಿರ್ವಹಿಸುವ ಪದ್ಮಾ ಸೋಗ್ಯಾಲ್‌.

ಎಲ್ಲಿದೆ ಈ ಎಲ್‌ಪಿಜಿ ಘಟಕ?– ಲಡಾಖ್‌ ಜಿಲ್ಲೆಯ ಫೇ ಗ್ರಾಮದಲ್ಲಿ
ಸಮುದ್ರ ಮಟ್ಟದಿಂದ ಎಷ್ಟು ಎತ್ತರದಲ್ಲಿದೆ?– 11,800 ಅಡಿ
ಇಲ್ಲಿ ಕಾರ್ಯನಿರ್ವಹಿಸುವ ಮಹಿಳೆಯರು– 12

ಥರಗುಟ್ಟುವ ಚಳಿಯಲ್ಲೂ ಯಾವುದೇ ಹಿಂಜರಿಕೆಯಿಲ್ಲದ ಈ ಮಹಿಳೆಯರು ಇಡೀ ದಿನ ಕೆಲಸ ಮಾಡುತ್ತಾರೆ. ಹೆಣ್ಣುಮಕ್ಕಳ ಶಕ್ತಿ ಎಂಥಾದ್ದು ಎನ್ನುವುದನ್ನು ಇವರನ್ನು ನೋಡಿ ತಿಳಿಯಬೇಕು.
– ಸುಜಯ್‌ ಚೌಧರಿ, ಸ್ಥಾವರದ ಉಸ್ತುವಾರಿ

ಇಲ್ಲಿಗೆ ಸೇರುವ ಮುನ್ನ ನನಗೆ ರೆಗ್ಯುಲೇಟರ್‌ ಫಿಕ್ಸ್‌ ಮಾಡಲೂ ಬರುತ್ತಿರಲಿಲ್ಲ. ಈಗ ಘಟಕದಿಂದ ಹೊರಹೋಗುವ ಪ್ರತಿಯೊಂದು ಸಿಲಿಂಡರ್‌ಗೂ ನಾನೇ ಜವಾಬ್ದಾರಿ. ಇದು ನಾವು ದೇಶಕ್ಕಾಗಿ ಮತ್ತು ನಮ್ಮ ಯೋಧರಿಗಾಗಿ ಮಾಡುತ್ತಿರುವ ಸೇವೆ.
– ರಿಗಿlನ್‌ ಲಾಡೋ, ಸ್ಥಾವರದ ಸಿಬ್ಬಂದಿ

ಟಾಪ್ ನ್ಯೂಸ್

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1sadgu

Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು

15-monalisa

Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

arrested

CM ಕಚೇರಿಯ ಟಿಪ್ಪಣಿ ನಕಲು: ಬಂಧನ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.