![DKSHi-4](https://www.udayavani.com/wp-content/uploads/2025/02/DKSHi-4-415x234.jpg)
![DKSHi-4](https://www.udayavani.com/wp-content/uploads/2025/02/DKSHi-4-415x234.jpg)
Team Udayavani, Feb 6, 2021, 1:25 PM IST
ದೇವನಹಳ್ಳಿ: ನಾಡು-ನುಡಿಗೆ ಧಕ್ಕೆ ಬಂದಾಗ ಎಲ್ಲರೂ ಒಗ್ಗಟ್ಟಿನಿಂದ ಹೋರಾಟ ಮಾಡಬೇಕು ಎಂದು ಮಾಜಿ ಶಾಸಕ ಜಿ.ಚಂದ್ರಣ್ಣ ಹೇಳಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಹಮ್ಮಿಕೊಂಡಿದ್ದ ತಾಲೂಕು 26ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಪ್ರತಿಯೊಬ್ಬರು ಕನ್ನಡನಾಡು,ನುಡಿ,ಜಲದ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸುವಂತಾಗಬೇಕು ಎಂದರು.
ಪರಭಾಷೆ ಮಾತನಾಡಬೇಡಿ: ಕನ್ನಡಕ್ಕಾಗಿ ಕೈಯತ್ತು ನಿನ್ನ ಕೈ ಕಲ್ಪವೃಕ್ಷವಾಗುತ್ತದೆ ಎಂದು ಕುವೆಂಪು ಅವರ ವಾಕ್ಯ ಅನುಸರಿಸ ಬೇಕು. ಯಾರೇ ಪರ ಭಾಷಿಕರು ಬಂದರೆ, ಅವರ ಭಾಷೆಯಲ್ಲಿ ಮಾತ ನಾಡು ವುದನ್ನು ನಿಲ್ಲಿಸಬೇಕು ನಮ್ಮ ಕನ್ನಡ ಭಾಷೆಯಲ್ಲಿ ವ್ಯವಹರಿಸಬೇಕು ಎಂದರು.
ಕನ್ನಡ ಭಾಷೆಗೆ 8 ಜ್ಞಾನ ಪೀಠ ಪ್ರಶಸ್ತಿಗಳು ಲಭಿಸಿದೆ. ಸಾಹಿತಿಗಳು ನಮಗೆ ಹಾಕಿಕೊಟ್ಟಿ ರುವ ದಾರಿಯಲ್ಲಿ ಹೋಗುತ್ತಿದ್ದೇವೆ. ನಮ್ಮ ತಾಲೂಕಿನವರೇ ಆದಂತಹ ನಿಸಾರ್ ಅಹಮದ್, ಡಿವಿಜಿ, ತಾ.ಪೂ.ವೆಂಕಟ ರಾಮು, ಸಿ.ಅಶ್ವತ್ಥ್ ಮೊದಲಾದವರು ನಮ್ಮ ತಾಲೂಕಿಗೆ ಹೆಸರು ತಂದುಕೊಟ್ಟಿದ್ದಾರೆ ಎಂದರು.
ಭಾಷೆಗೆ ಇತಿಹಾಸವಿದೆ: ತಾಲೂಕು ಕಸಾಪ ಅಧ್ಯಕ್ಷ ಆರ್.ಕೆ.ನಂಜೇಗೌಡ ಮಾತನಾಡಿ, ಮಾತೃಭಾಷೆ ಪ್ರೀತಿಸಬೇಕು. ಕನ್ನಡ ಭಾಷೆಯೇ ನಮ್ಮ ಆಸ್ತಿ, ನಮ್ಮ ಭಾಷೆ-ನುಡಿಗೆ ಧಕ್ಕೆಯಾಗ ದಂತೆ ಪ್ರತಿ ಕನ್ನಡಾಭಿಮಾನಿಗಳು ಇಂತಹ ಸಮ್ಮೇಳನಗಳಲ್ಲಿ ಹೆಚ್ಚು ಪಾಲ್ಗೊಳ್ಳುವಂತೆ ಆಗಬೇಕು. ಎಲ್ಲ ಕಚೇರಿಗಳಲ್ಲಿ, ಮಾರುಕಟ್ಟೆಗಳಲ್ಲಿ, ಇತರೆ ಜಿಲ್ಲೆಗಳಲ್ಲಿ ಸೇರಿ ಇತರೆ ರಾಜ್ಯ,ರಾಷ್ಟ್ರಾದ್ಯಂತ ಕನ್ನಡ ಪರಂಪರೆ ಸಾರಬೇಕು. ಇಡೀ ವಿಶ್ವಮಟ್ಟದಲ್ಲಿ ಕನ್ನಡದ ಧ್ವಜ ಹಾರಿಸಬೇಕು ಎಂದರು.
ಇದನ್ನೂ ಓದಿ :ಹಾಲಿನ ಪ್ಯಾಕೆಟ್ ಗಳು ಈತನ ಟಾರ್ಗೆಟ್: ಸಿಸಿಟಿವಿಯಲ್ಲಿ ಸೆರೆಯಾಯ್ತು ಕಳ್ಳನ ಕರಾಮತ್ತು
ಕನ್ನಡ ಸಾಹಿತ್ಯ ಪರಿಷತ್ ಸಂಚಾಲಕ ಬಿ.ಕೆ.ಶಿವಪ್ಪ, ಆರ್.ಮಾರೇಗೌಡ, ಜಿಲ್ಲಾ ಸಾಹಿತ್ಯ ಪರಿಷತ್ ಮಹಿಳಾ ಘಟಕದ ಅಧ್ಯಕ್ಷೆ ಪುನಿತಾ, ಉಪಾ ಧ್ಯಕ್ಷೆ ಗೀತಾ, ತಾಲೂಕು ಅಧ್ಯಕ್ಷೆ ಮಹದೇವಿ ಕಾಂತರಾಜು, ಮಹಿಳಾ ಘಟಕದ ಉಪಾಧ್ಯಕ್ಷೆ ಗೀತಾ, ಕಾರ್ಯದರ್ಶಿ ಅನುರಾಧ, ತಾಲೂ ಕು ಪ್ರತಿನಿಧಿ ರಾಧಾಕೃಷ್ಣರೆಡ್ಡಿ, ಗೌರವಾಧ್ಯಕ್ಷ ಜಯರಾಮೇಗೌಡ, ಉಪಾಧ್ಯಕ್ಷ ರಾಮಾಂಜಿ ನಪ್ಪ,ಯೋಜನಾ ಸಮಿತಿ ಅಧ್ಯಕ್ಷ ಚಂದ್ರ ಶೇಖರ್, ಕಸಾಪ ಟೌನ್ ಉಪಾಧ್ಯಕ್ಷ ಚಂದ್ರೇ ಗೌಡ, ಸಕರವೇ ಗೌರವಾಧ್ಯಕ್ಷ ಎನ್.ಚಂದ್ರಶೇಖರ್, ಜಿಲ್ಲಾ ಗೌರವ ಕಾರ್ಯದರ್ಶಿ ಡಾ.ಎಂ.ಸಶಿವಕುಮಾರ್, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಮುನಿರಾಜು, ಚನ್ನರಾಯಪಟ್ಟಣ ಹೋಬಳಿ ಜೆಡಿಎಸ್ ಅಧ್ಯಕ್ಷ ಮುನಿರಾಜು ಇದ್ದರು.
You seem to have an Ad Blocker on.
To continue reading, please turn it off or whitelist Udayavani.