ಪ್ರತಿಭಟನೆ ಮಾಡಿದ್ರೆ ಸಿಗಲ್ವಾ ಪಾಸ್‌ಪೋರ್ಟ್‌?


Team Udayavani, Feb 9, 2021, 6:25 AM IST

ಪ್ರತಿಭಟನೆ ಮಾಡಿದ್ರೆ ಸಿಗಲ್ವಾ ಪಾಸ್‌ಪೋರ್ಟ್‌?

ಪಾಸ್ಪೋರ್ಟ್‌ ನೀಡುವಾಗ ವ್ಯಕ್ತಿಗಳ ಸಾಮಾಜಿಕ ಮತ್ತು ರಾಜಕೀಯ ಚಟುವಟಿಕೆಗಳು ಮತ್ತು ಅದರ ಜತೆಗಿನ ಬಾಂಧವ್ಯಗಳನ್ನೂ ನೋಡುತ್ತೇವೆ ಎಂದು ಇತ್ತೀಚೆಗಷ್ಟೇ ಬಿಹಾರ ಮತ್ತು ಉತ್ತರಾಖಂಡ ಪೊಲೀಸರು ಆದೇಶ ಹೊರಡಿಸಿದ್ದಾರೆ. ಇದು ಸಾಕಷ್ಟು ಚರ್ಚೆಗೂ ಕಾರಣವಾಗುತ್ತಿದೆ. ಹಾಗಾದರೆ ಪಾಸ್‌ಪೋರ್ಟ್‌ ನೀಡುವಾಗ ಪೊಲೀಸರು ಯಾವೆಲ್ಲಾ ವಿಷಯ ಪರಿಗಣಿಸುತ್ತಾರೆ? ಈ ಬಗ್ಗೆ ನೋಡೋಣ ಬನ್ನಿ…

ಪೊಲೀಸರು ಚೆಕ್‌ ಮಾಡುವುದೇನು?
1. ವಿಳಾಸದ ಬಗ್ಗೆ ಖುದ್ದು ಭೇಟಿ ನೀಡಿ ಪರಿಶೀಲನೆ
2. ಈ ವಿಳಾಸದಲ್ಲಿ ಉಳಿದುಕೊಂಡಿರುವ ಅವಧಿ
3. ಅಪರಾಧದ ಹಿನ್ನೆಲೆ (ಯಾವುದಾದರೂ ಇದ್ದಲ್ಲಿ)

ಶಿಫಾರಸು ಏನಾಗಿರುತ್ತೆ?
1. ಕೊಡಬಹುದು.
2. ಸರಿಯಾಗಿದೆ, ನಿರ್ಧಾರ ನಿಮ್ಮದು.
3. ಕೊಡಲು ಸೂಕ್ತವಲ್ಲ.

ಪೊಲೀಸರ ಪರಿಶೀಲನೆ ಅಂದರೇನು?
ಅರ್ಜಿದಾರನೊಬ್ಬ ತನಗೆ ಪಾಸ್‌ಪೋರ್ಟ್‌ ಬೇಕು ಎಂದು ಅರ್ಜಿ ಸಲ್ಲಿಸಿದ ಬಳಿಕ, ಪ್ರಾದೇಶಿಕ ಪಾಸ್‌ಪೋರ್ಟ್‌ ಸಂಸ್ಥೆಯು ದಾಖಲೆಗಳ ಪರಿಶೀಲನೆ ಮಾಡಿ, ವಿಳಾಸ ಮತ್ತು ಅಪರಾಧ ಹಿನ್ನೆಲೆ ಬಗ್ಗೆ ಮಾಹಿತಿ ಸಂಗ್ರಹಿಸಲು ಪೊಲೀಸರ ಸಹಾಯ ಪಡೆದುಕೊಳ್ಳುತ್ತದೆ. ಇವರು ಅರ್ಜಿದಾರರ ವಿಳಾಸಕ್ಕೆ ಹೋಗಿ, ಅವರ ವಿಳಾಸ ದೃಢೀಕರಿಸುವುದರ ಜತೆ ಎಷ್ಟು ದಿನಗಳಿಂದ ಅಲ್ಲಿ ವಾಸವಿದ್ದಾರೆ ಎಂಬುದನ್ನೂ ನೋಡಬೇಕು. ಜತೆಗೆ ಏನಾದರೂ ಅಪರಾಧ ಹಿನ್ನೆಲೆ ಇದ್ದರೂ, ಪೊಲೀಸರಿಗೆ ಮಾಹಿತಿ ನೀಡಬೇಕು.

ಯಾವ ರೀತಿಯ ಅಪರಾಧ ಹಿನ್ನೆಲೆಗಳ ದಾಖಲೀಕರಣ?
ಎಫ್ಐಆರ್‌ ಆಗಿರುವ ಕ್ರಿಮಿನಲ್‌ ಕೇಸುಗಳ ಮಾತ್ರ ದಾಖಲೀಕರಿಸಬಹುದು. ಸಿಗ್ನಲ್‌ ಜಂಪ್‌ ಮಾಡಿ ಟ್ರಾಫಿಕ್‌ ಕೇಸ್‌ ಹಾಕಿಸಿಕೊಂಡಿದ್ದು ಇದರ ವ್ಯಾಪ್ತಿಗೆ ಬರುವುದಿಲ್ಲ.

ಪೊಲೀಸರು ಕೊಡಲು ಸೂಕ್ತವಲ್ಲ ಎಂಬ ಶಿಫಾರಸು ನೀಡಿದರೆ ಏನಾಗುತ್ತೆ?
ಪಾಸ್‌ಪೋರ್ಟ್‌ ಕೊಡಬಹುದೇ ಅಥವಾ ಬೇಡವೇ ಎಂಬ ಬಗ್ಗೆ ಪೊಲೀಸರು ನಿರ್ಧಾರ ಮಾಡಲಾಗದು. ಆದರೆ ಶಿಫಾರಸು ಮಾಡಬಹುದು. ಇದನ್ನು ಪಾಸ್‌ಪೋರ್ಟ್‌ ಕಚೇರಿ ಕೇಳಲೇಬೇಕು ಅಂತೇನಿಲ್ಲ. ಪ್ರತಿಭಟನೆಗಳಲ್ಲಿ ಭಾಗಿಯಾಗಿ ಕೇಸ್‌ ಹಾಕಿಸಿಕೊಂಡ ವ್ಯಕ್ತಿ ವಿರುದ್ಧ ಕೇಸ್‌ ಇದ್ದು, ಪಾಸ್‌ಪೋರ್ಟ್‌ ನೀಡದಿದ್ದರೆ, ಆತ ಕೋರ್ಟ್‌ಗೆ ಹೋಗಿ ಹೋರಾಡಿ ಪಾಸ್‌ಪೋರ್ಟ್‌ ಪಡೆಯಬಹುದು.

ಯಾವ ಸಂದರ್ಭಗಳಲ್ಲಿ ನಿರಾಕರಿಸಲಾಗುತ್ತದೆ?
ಎರಡು ಕಾರಣಗಳಿಗಾಗಿ ಪಾಸ್‌ಪೋರ್ಟ್‌ ನಿರಾಕರಿಸಲಾಗುತ್ತದೆ. ಒಂದು, ಅರ್ಜಿದಾರ ವ್ಯಕ್ತಿ ಭಾರತೀಯನಲ್ಲದೇ ಇರುವುದು. ವಿದೇಶದಲ್ಲಿ ಭಾರತದ ವಿರುದ್ಧ ಕೆಟ್ಟ ಅಭಿಪ್ರಾಯ ಮೂಡಿಸುತ್ತಿದ್ದರೆ, ದೇಶ ದೇಶಗಳ ನಡುವೆ ಸಂಬಂಧ ಹಾಳಾಗುವಂಥ ವಾತಾವರಣ ಸೃಷ್ಟಿಸಿದ್ದರೆ, ಭಾರತದ ಆಂತರಿಕ ಭದ್ರತೆಗೆ ಹಾನಿ ತರುವಂಥ ವ್ಯಕ್ತಿಗೆ ನೀಡಲಾಗುವುದಿಲ್ಲ.

ಎರಡನೆಯದು ಅರ್ಜಿ ಹಾಕಿದ ದಿನದಿಂದ 5 ವರ್ಷಗಳ ಹಿಂದೆ ಯಾವುದೇ ಪ್ರಕರಣದ ಸಂಬಂಧ ಅಪರಾಧಿ ಎಂದು ಕೋರ್ಟ್‌ನಿಂದ ಘೋಷಣೆಯಾಗಿದ್ದಲ್ಲಿ. ಅಂದರೆ 2 ವರ್ಷಕ್ಕಿಂತ ಹೆಚ್ಚು ಜೈಲು ಶಿಕ್ಷೆಯಾಗಿರಬೇಕು.

ಟಾಪ್ ನ್ಯೂಸ್

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-jama

Yakshagana; ಮೇಳದ ಯಜಮಾನಿಕೆ ಎಂದರೆ ಆನೆ ಸಾಕಿದ ಹಾಗೆ

9-yoga

Sattvic Diet: ಪರೀಕ್ಷಾ ಒತ್ತಡ ನಿವಾರಣೆ ಯೋಗ, ಸಾತ್ವಿಕ ಆಹಾರದ ಸರಳ ಸೂತ್ರಗಳು

8-bagappa

Bagappa Harijan: ಭೀಮಾ ತೀರದಲ್ಲಿ ಮತ್ತೆ ರಕ್ತದ ಹನಿ

Valentine’s Day: ನೀನು ಪ್ರೀತಿಸಿದ್ದೆ.. ಪ್ರೀತಿಸುತ್ತಿರುವೆ!

Valentine’s Day: ನೀನು ಪ್ರೀತಿಸಿದ್ದೆ.. ಪ್ರೀತಿಸುತ್ತಿರುವೆ!

Pamban Bridge:: ದೇಶದ ಮೊದಲ ವರ್ಟಿಕಲ್‌ ಲಿಫ್ಟ್ ರೈಲ್ವೇ ಸೇತುವೆ: ಶತಮಾನದ ಇತಿಹಾಸ!

Pamban Bridge:: ದೇಶದ ಮೊದಲ ವರ್ಟಿಕಲ್‌ ಲಿಫ್ಟ್ ರೈಲ್ವೇ ಸೇತುವೆ: ಶತಮಾನದ ಇತಿಹಾಸ!

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

1-namm-mannu-1

Udayavani-MIC ನಮ್ಮ ಸಂತೆ:ಮಣ್ಣಿನಿಂದ ಮಾಡಿದ ನಾನಾ ಉತ್ಪನ್ನ

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

1-neyge-1

Udayavani-MIC ನಮ್ಮ ಸಂತೆ:ಗಮನ ಸೆಳೆದ ನೇಯ್ಗೆ ಯಂತ್ರ

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.