ಧವಳ ದೇವತೆ!


Team Udayavani, Feb 10, 2021, 6:26 PM IST

ಧವಳ ದೇವತೆ!

ಬಿಳಿ ಬಣ್ಣದ ಉಡುಗೆ ಮೇಂಟೇನ್‌ ಮಾಡುವುದು ಕಷ್ಟ, ನಿಜ. ಆದರೆ ಆ ಬಟ್ಟೆ ಕಾಣುವಷ್ಟು ಚೆಂದ, ಬೇರೆ ಬಟ್ಟೆ ಕಾಣುವುದಿಲ್ಲ.ಅದಕ್ಕಾಗಿಯೇ ಸಂದರ್ಶನಕ್ಕೆ, ಮೀಟಿಂಗ್‌ಗೆ,  ಅವಾರ್ಡ್‌ ಫಂಕ್ಷನ್‌ಗೆ ಮತ್ತು ಇತರ ಫಾರ್ಮಲ್‌ ಸಭೆ ಸಮಾರಂಭಗಳಿಗೆ ಜನ ಬಿಳಿ ಬಣ್ಣದ ಉಡುಗೆಯನ್ನು ತೊಡಲು ಇಷ್ಟ ಪಡುತ್ತಾರೆ. ಸೆಖೆಗೆ ಹತ್ತಿಯ ಬಟ್ಟೆ ನೀಡುವಷ್ಟು ಆರಾಮವನ್ನು ಬೇರೆ ಬಟ್ಟೆ ನೀಡುವುದಿಲ್ಲ. ಅದರಲ್ಲೂ ಹತ್ತಿಯ ಬಟ್ಟೆ ಬಿಳಿ ಬಣ್ಣದ್ದಾಗಿದ್ದರೆ ಇನ್ನೂ ಆರಾಮ.

ಉಡುಪು ಸಂಪೂರ್ಣವಾಗಿ ಬಿಳಿ ಬಣ್ಣದ್ದಾಗಿದ್ದರೆ ದೇಹಕ್ಕೂ- ಕಣ್ಣಿಗೂ ತಂಪು. ಬಿಳಿ ಬಣ್ಣ ಎಂದಾಕ್ಷಣ ಬೋರಿಂಗ್‌ ಆಗಿರಬೇಕಿಲ್ಲ. ವೆಸ್ಟರ್ನ್ (ಪಾಶ್ಚಾತ್ಯ) ಹಾಗೂ ಇಂಡಿಯನ್‌(ಸಾಂಪ್ರದಾಯಿಕ), ಎರಡೂ ಶೈಲಿಗಳಲ್ಲಿ ಬಿಳಿಬಣ್ಣದ ಉಡುಗೆಗಳು ಲಭ್ಯ ಇವೆ.

ಬಿಗಿಯಾಗಿರದ ಅಂದರೆ ಒಂದು ಸೈಜ್‌ ದೊಡ್ಡದಾಗಿರುವ ಬಿಳಿ ಬಣ್ಣದ ಹತ್ತಿಯ ಬಟ್ಟೆಯ ಉಡುಗೆಗಳು ಅತ್ಯುತ್ತಮ. ಈ ಬಿಳಿ ಬಣ್ಣದ ಸಿಂಪಲ್‌ ಕಾಂಬೋ ಎಂದರೆ ಬಿಳಿ ಕುರ್ತಿ ಅಥವಾ ಕುರ್ತಾ. ಅದರ ಜೊತೆಗೆ ಬಿಳಿ ಬಣ್ಣದಪ್ಯಾಂಟ್‌. ಪ್ಯಾಂಟ್‌ ನಲ್ಲಿ ಬಗೆ ಬಗೆಯಪ್ರಕಾರಗಳಿವೆ. ಸಲ್ವಾರ್‌ ಪ್ಯಾಂಟ್‌, ಪಟಿಯಾಲ,ಪಂಜಾಬಿ ಸೂಟ್‌, ಪಲಾಝೋ, ಹ್ಯಾರೆಮ್‌ಪ್ಯಾಂಟ್‌, ಜೀನೀ ಪ್ಯಾಂಟ್‌, ಬೆಲ್‌ ಬಾಟಮ್‌, ಪ್ಯಾರಲಲ್‌ ಪ್ಯಾಂಟ್‌, ಧೋತಿ ಪ್ಯಾಂಟ್‌, ಚೂಡಿದಾರ್‌, ಡೆನಿಮ್‌, ಕ್ಯಾಪ್ರೀಸ್‌, ಸ್ಕಿನೀ ಜೀನ್ಸ್, ಫ್ಲೇರ್ಡ್‌, ಎಲಿಫೆಂಟ್‌, ಇತ್ಯಾದಿ. ಬಿಳಿ ಬಣ್ಣದ ಚಿಕ್ಕ ಕುರ್ತಿ ಜೊತೆ ಬಿಳಿ ಬಣ್ಣದ್ದೇ ಉದ್ದ ಲಂಗವನ್ನೂ ತೊಡಬಹುದು. ಕುರ್ತಿ ಜೊತೆ ಬಿಳಿ ಬಣ್ಣದ ವೇಸ್ಟ್ ಕೋಟ್‌, ಜಾಕೆಟ್‌ ತೊಡಬಹುದು. ಇವಿಷ್ಟಲ್ಲದೇ ಶಾಲು, ಸ್ಕಾರ್ಫ್ ಅಥವಾ ದುಪಟ್ಟಾವನ್ನೂ ತೊಡಬಹುದು. ಇವು ಬಿಸಿಲಿನಿಂದ ರಕ್ಷಣೆ ನೀಡುವಲ್ಲಿ ಸಹಾಯಕಾರಿ ಆಗಿರುತ್ತವೆ. ಇವಿಷ್ಟು ಇಂಡಿಯನ್‌ಸ್ಟೈಲಿನ ಉಡುಗೆಗಳಾದರೆ ವೆಸ್ಟರ್ನ್ ಸ್ಟೈಲ್‌ ನಲ್ಲಿ ಬಿಳಿ ಅಂಗಿ ಜೊತೆ ಬಿಳಿ ಡೆನಿಮ್‌ ಅಥವಾ ಬಿಳಿ ಫಾರ್ಮಲ್‌ ಪ್ಯಾಂಟ್‌ ತೊಡಬಹುದು.

ಕ್ಯಾಶುವಲ್‌ ಲುಕ್‌ ಬೇಕಿದ್ದರೆ ಬಿಳಿ ಬಣ್ಣದ ಟೀ ಶರ್ಟ್‌ ನೊಂದಿಗೆ ಬಿಳಿ ಬಣ್ಣದ ಶಾರ್ಟ್‌ಸ್‌, ಸ್ಕರ್ಟ್‌, ಹಾಟ್‌ ಪಾಂಟ್ಸ್ ಅಥವಾ ಪಲಾಝೋ ಕೂಡ ತೊಡಬಹುದು. ಸಂಪೂರ್ಣ ಬಿಳಿ ಬಣ್ಣದ

ಡ್ರೆಸ್‌ ಗಳೂ ಸಿಗುತ್ತವೆ. ಅವುಗಳಲ್ಲಿ ಸೈಡ್‌ ಪಾಕೆಟ್‌ (ಜೇಬು) ಮತ್ತು ಬೆಲ್ಟ್ (ಸೊಂಟಪಟ್ಟಿ) ಆಯ್ಕೆಯೂ ಇರುತ್ತವೆ. ವೆಸ್ಟರ್ನ್ ಸ್ಟೈಲಿನಲ್ಲಿ ಇನ್ನೂ ಒಂದು ಪ್ರಕಾರ ಎಂದರೆ ಒನ್‌ ಪೀಸ್‌. ಶರ್ಟ್‌ ಡ್ರೆಸ್‌, ಜಂಪ್‌ ಸೂಟ್‌, ಕಾಕ್ಟೇಲ್‌ ಔಟ್‌ ಫಿಟ್‌, ರಾಪ್‌ ಡ್ರೆಸ್‌, ಸನ್‌ ಡ್ರೆಸ್‌, ಫ್ರಾಕ್‌, ಮಿಡಿ ಡ್ರೆಸ್‌ ಮತ್ತು ಗೌನ್‌ ಗಳಲ್ಲೂ ಬಿಳಿ ಬಣ್ಣದ ಆಯ್ಕೆಗಳಿವೆ. ಸಂಪೂರ್ಣ ಬಿಳಿ ಬಣ್ಣದ ಜಂಪ್‌ ಸೂಟ್‌ ಕೂಡ ಬಹಳ ಜನಪ್ರಿಯ. ಸ್ಲಿವ್‌ ಲೆಸ್‌ (ತೋಳುಗಳು ಇಲ್ಲದ) ಉಡುಪುಗಳೂ ಆರಾಮದಾಯಕ ಆಗಿರುತ್ತವೆ. ಉಡುಪಿನ ಬಟ್ಟೆ ಹತ್ತಿಯಿಂದ ಮಾಡಲಾಗಿರುವ ಕಾರಣ, ಬಟ್ಟೆ ಬೆವರನ್ನು ಹೀರಿಕೊಳ್ಳುತ್ತದೆ. ಹಾಗಾಗಿ, ತೋಳುಗಳು ಇದ್ದರೂ, ಇಲ್ಲದಿದ್ದರೂ ಸಮಸ್ಯೆ ಇಲ್ಲ. ನಿಮ್ಮ ಅಭಿರುಚಿಗೆ ತಕ್ಕಂತೆ ತೋಳುಗಳು ಬೇಕೋ ಬೇಡವೋ ಎಂದು ನಿರ್ಧರಿಸಬಹುದು.

ಇನ್ನು ಬಿಳಿ ಬಣ್ಣದ ಅಂಗಿ, ಕೋಟು, ಲಂಗ ಅಥವಾ ಪ್ಯಾಂಟ್‌ ಮೇಲೆ ಬಿಳಿ ಬಣ್ಣದ ದಾರಗಳಿಂದ ಕಸೂತಿ ಕೆಲಸ ಮಾಡಿರುವ ಆಯ್ಕೆಗಳೂ ಇವೆ. ಅಥವಾ ಮಾಡಿಸಿದರೆ ಉಡುಪಿನಅಂದ ಇನ್ನೂ ಹೆಚ್ಚಾಗುತ್ತದೆ. ಬಿಳಿ ಬಣ್ಣದ ಉಡುಪಿನ ಮೇಲೆ ಲೇಸ್‌ ವರ್ಕ್‌ಮಾಡಿಸಬಹುದು. ಕ್ರೋಷೆ ಕೆಲಸಮಾಡಿಸಬಹುದು. ಲೇಸ್‌ ಮತ್ತು ಕ್ರೋಷೆ ಉಳ್ಳ ಬಿಳಿ ಬಣ್ಣದ ರೆಡಿಮೇಡ್‌ ಉಡುಪುಗಳೂ ಮಾರುಕಟ್ಟೆಯಲ್ಲಿ ಲಭ್ಯ ಇವೆ. ಅಂಗಡಿ – ಅಂಗಡಿ ಅಲೆಯುವಷ್ಟು ತಾಳ್ಮೆ ಅಥವಾ ಪುರುಸೊತ್ತು ಇಲ್ಲದವರು ಆನ್ಲೈನ್‌ ಮೂಲಕ ಇಂಥ ಉಡುಪುಗಳನ್ನು ತರಿಸಬಹುದು. ಹಾಲಿಡೇ, ಪಾರ್ಟಿ, ಅಥವಾ ಪಿಕ್ನಿಕ್‌ ಗಳಲ್ಲಿ ಬಿಳಿ ಬಣ್ಣದ ಟೋಪಿಯನ್ನೂ ತೊಡಬಹುದು. ಇವುಗಳ ಜೊತೆ ಬಿಳಿ ಬಣ್ಣದ ಪಾದರಕ್ಷೆಯನ್ನೂ ತೊಟ್ಟರೆ, ನೀವು ಧವಳ ದೇವತೆಯೇ!­

 

-ಅದಿತಿಮಾನಸ. ಟಿ. ಎಸ್‌

ಟಾಪ್ ನ್ಯೂಸ್

New Year Guidelines: ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಹೈದರಾಬಾದ್ ಪೊಲೀಸರು

Hydarabad: ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಪೊಲೀಸರು, ಏನೇನಿದೆ ಮಾರ್ಗಸೂಚಿಯಲ್ಲಿ

Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ

Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ

Krantiveer Brigade launched by worshipping the feet of 1008 saints: KS Eshwarappa

Politicss; 1008 ಸಾಧುಸಂತರ ಪಾದಪೂಜೆ‌ ಮೂಲಕ‌ ಕ್ರಾಂತಿವೀರ ಬ್ರಿಗೇಡ್‌ ಗೆ ಚಾಲನೆ: ಈಶ್ವರಪ್ಪ

INDvAUS: Is captain Rohit Sharma standing against to Shami?; Aussie tour difficult for pacer!

INDvAUS: ಶಮಿ ವಿರುದ್ದ ನಿಂತರೇ ನಾಯಕ ರೋಹಿತ್?;‌ ವೇಗಿಗೆ ಆಸೀಸ್‌ ಪ್ರವಾಸ ಕಷ್ಟ!

Mogilaiah: ಪದ್ಮಶ್ರೀ ಪುರಸ್ಕೃತ, ಜಾನಪದ ಕಲಾವಿದ ಬಳಗಂ ಚಿತ್ರ ಖ್ಯಾತಿಯ ಮೊಗಿಲಯ್ಯ ನಿಧನ

Mogilaiah: ಪದ್ಮಶ್ರೀ ಪುರಸ್ಕೃತ, ಜಾನಪದ ಕಲಾವಿದ ಬಳಗಂ ಚಿತ್ರ ಖ್ಯಾತಿಯ ಮೊಗಿಲಯ್ಯ ನಿಧನ

2-bntwl

Bantwala: ಚಾಲಕನ‌ ನಿಯಂತ್ರಣ ತಪ್ಪಿ ಪಲ್ಟಿಯಾದ ಟೆಂಪೋ ಟ್ರಾವೆಲ್

The owner of the betting app promoted by Bollywood actresses is Pakistani!

Betting App; ಬಾಲಿವುಡ್‌ ನಟಿಯರು ಪ್ರಚಾರ ಮಾಡಿದ್ದ ಬೆಟ್ಟಿಂಗ್ ಆ್ಯಪ್‌‌ ಮಾಲಕ ಪಾಕಿಸ್ತಾನಿ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

New Year Guidelines: ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಹೈದರಾಬಾದ್ ಪೊಲೀಸರು

Hydarabad: ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಪೊಲೀಸರು, ಏನೇನಿದೆ ಮಾರ್ಗಸೂಚಿಯಲ್ಲಿ

Lok Adalat: ಲೋಕ್‌ ಅದಾಲತ್‌ನಲ್ಲಿ 38.8 ಲಕ್ಷ  ವ್ಯಾಜ್ಯ ಇತ್ಯರ್ಥ

Lok Adalat: ಲೋಕ್‌ ಅದಾಲತ್‌ನಲ್ಲಿ 38.8 ಲಕ್ಷ  ವ್ಯಾಜ್ಯ ಇತ್ಯರ್ಥ

5

Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ

Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ

Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ

Krantiveer Brigade launched by worshipping the feet of 1008 saints: KS Eshwarappa

Politicss; 1008 ಸಾಧುಸಂತರ ಪಾದಪೂಜೆ‌ ಮೂಲಕ‌ ಕ್ರಾಂತಿವೀರ ಬ್ರಿಗೇಡ್‌ ಗೆ ಚಾಲನೆ: ಈಶ್ವರಪ್ಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.