ಅಂದುಕೊಂಡಂತಾದರೆ ಘನತ್ಯಾಜ್ಯದಿಂದ ಬಯೋಗ್ಯಾಸ್‌ ಉತ್ಪಾದನೆ

ಪುತ್ತೂರು: ನಗರದ ಘನ ತ್ಯಾಜ್ಯ ವಿಲೇವಾರಿಗೆ ವೈಜ್ಞಾನಿಕ ಮಾದರಿ

Team Udayavani, Feb 17, 2021, 4:50 AM IST

ಅಂದುಕೊಂಡಂತಾದರೆ ಘನತ್ಯಾಜ್ಯದಿಂದ ಬಯೋಗ್ಯಾಸ್‌ ಉತ್ಪಾದನೆ

ಪುತ್ತೂರು: ಘನ ತ್ಯಾಜ್ಯವನ್ನು ವೈಜ್ಞಾನಿಕ ರೀತಿಯಲ್ಲಿ ಸಂಸ್ಕರಣೆಗೈದು ಪೆಟ್ರೋಲಿಯಂ ಅನಿಲಕ್ಕೆ ಪರ್ಯಾಯವಾಗಿ ಬಯೋ ಗ್ಯಾಸ್‌ ಉತ್ಪಾದಿಸುವ ಮೆಗಾ ಯೋಜನೆ ಯೊಂದನ್ನು ಪುತ್ತೂರು ನಗರದಲ್ಲಿ ಅನು ಷ್ಠಾನಗೊಳಿಸಲು ಸಿದ್ಧತೆ ನಡೆದಿದೆ.

ನಗರದ ಘನತ್ಯಾಜ್ಯ ವಿಲೇವಾರಿ ಸಮಸ್ಯೆಗೆ ಶಾಶ್ವತ ಪರಿಹಾರಕ್ಕಾಗಿ ರೋಟರಿ ಕ್ಲಬ್‌ ಪುತ್ತೂರು ಪೂರ್ವ ನೇತೃತ್ವದಲ್ಲಿ ಬೆಂಗಳೂರಿನ ಸೈನೋಡ್‌ ಬಯೋಸಯನ್ಸ್‌ ಕಂಪೆನಿ ಸಲಹೆಯಡಿ ನಗರಸಭೆಗೆ ಸೇರಿದ ಬನ್ನೂರು ಡಂಪಿಂಗ್‌ ಯಾರ್ಡ್‌ ನಲ್ಲಿ ಕಾರ್ಯಗತಗೊಳಿಸುವ ಪ್ರಸ್ತಾವಕ್ಕೆ ನಗರಸಭೆ ಕೌನ್ಸಿಲ್‌ ಒಪ್ಪಿಗೆ ನೀಡಿದ್ದು ಅನುಮೋದನೆಗಾಗಿ ಜಿಲ್ಲಾಧಿಕಾರಿ ಮೂಲಕ ಸರಕಾರಕ್ಕೆ ಕಳುಹಿಸಿದೆ.

4.15 ಕೋ.ರೂ.ವೆಚ್ಚ
ಸುಮಾರು 4.15 ಕೋ.ರೂ. ವೆಚ್ಚದ ಯೋಜನೆ ಇದಾಗಿದೆ. ರೋಟರಿ ಸಂಸ್ಥೆ ಪೂರ್ಣ ಬಂಡವಾಳ ಹೂಡಲಿದೆ. ನಗರಸಭೆಯು ಡಂಪಿಂಗ್‌ ಯಾರ್ಡ್‌ನಲ್ಲಿ 2 ಎಕ್ರೆ ಜಾಗ, ದಿನಂಪ್ರತಿ 20 ಟನ್‌ನಷ್ಟು ಹಸಿ ತ್ಯಾಜ್ಯ ನಿರ್ವಹಣೆ ಜವಾಬ್ದಾರಿ ವಹಿಸಬೇಕಿದೆ. ಮುಂದಿನ 15 ವರ್ಷಗಳ ಕಾಲ ಯೋಜನೆಗೆ ಜಾಗ ಬಳಸಿಕೊಳ್ಳುವ ಬಗ್ಗೆ ರೋಟರಿ ಸಂಸ್ಥೆಯೊಂದಿಗೆ ನಗರಸಭೆ ಕರಾರು ಒಪ್ಪಂದ ಮಾಡಿಕೊಳ್ಳಬೇಕಿದೆ. ಅವಧಿ ಮುಗಿದ ಬಳಿಕ ಒಪ್ಪಂದ ನವೀಕರಣ ನಡೆಯಲಿದೆ. ಇದಕ್ಕೆ ಪ್ರತಿಫಲವಾಗಿ ನಿರ್ವಹಣೆ ಸಂಸ್ಥೆ ಜೈವಿಕ ಅನಿಲದ ಪ್ರಮಾಣ ಆಧರಿಸಿ ರಾಜಧನವನ್ನು ನಗರಸಭೆಗೆ ಪಾವತಿಸಲಿದೆ.

ಏನಿದು ಬಯೋಗ್ಯಾಸ್‌ ಪ್ಲಾಂಟ್‌?
ಕರ್ನಾಟಕ ರಾಜ್ಯದಲ್ಲಿ ದೊಡ್ಡಬಳ್ಳಾಪುರದಲ್ಲಿ ಬಯೋಗ್ಯಾಸ್‌ ಉತ್ಪಾದನಾ ಘಟಕವಿದೆ. ಎಲ್ಲವು ನಿರೀಕ್ಷೆಯಂತೆ ಸಾಗಿದರೆ ರಾಜ್ಯದ ಎರಡನೆ ಘಟಕ ಪುತ್ತೂರಿನಲ್ಲಿ ತಲೆ ಎತ್ತಲಿದೆ. ಮೊದಲಿಗೆ ಘನತ್ಯಾಜ್ಯದಿಂದ ಬಯೋಗ್ಯಾಸ್‌ ಉತ್ಪಾದಿಸಿ ಅದನ್ನು ಇಂಧನವಾಗಿ ಬಳಸುವುದು ಇಲ್ಲಿನ ಉದ್ದೇಶ.

ಆಹಾರ ಮತ್ತು ತರಕಾರಿ, ಶೌಚಾಲಯ, ಕೋಳಿ ಮತ್ತು ಮಾಂಸ, ಹಸಿ ಹುಲ್ಲು ತ್ಯಾಜ್ಯವನ್ನು ಸಂಸ್ಕರಿಸಿ ಬಯೋಗ್ಯಾಸ್‌ ಉತ್ಪಾದಿಸಲಾಗುತ್ತದೆ. ಸಂಗ್ರಹಿತ ತ್ಯಾಜ್ಯದಲ್ಲಿ ಹಸಿ ಮತ್ತು ಕೊಳೆಯುವ ತ್ಯಾಜ್ಯ ಬಹುಪಾಲು ಇದ್ದು ಇದನ್ನು ಸೂಕ್ತ ಪ್ರಮಾಣದಲ್ಲಿ ವ್ಯವಸ್ಥೆಗೊಳಿಸಿ ಸಂಕುಚಿತ ಜೈವಿಕ ಅನಿಲ ಉತ್ಪಾದಿಸಲಾಗುತ್ತದೆ. ಬಯೋಗ್ಯಾಸ್‌ ಉತ್ಪಾದನೆಯಿಂದ ಪರಿಸರಕ್ಕೆ ಸೇರುವ ಮಿಥೇನ್‌ ಪ್ರಮಾಣ ಕಡಿಮೆಗೊಳಿಸಲು ಸಾಧ್ಯವಿದೆ. ಬಯೋಗ್ಯಾಸ್‌ ಉತ್ಪಾದನೆ ಸಂದರ್ಭ ಪರಿಸರಕ್ಕೆ ಯಾವುದೇ ರೀತಿಯ ಹಾನಿಕಾರಕ ಪದಾರ್ಥಗಳು ಬಿಡುಗಡೆ ಆಗುವುದಿಲ್ಲ. ಎಲ್ಲ ರೀತಿಯಲ್ಲಿ ಸುರಕ್ಷತೆ ಕ್ರಮವನ್ನು ಅನುಸರಿಸಿ ಅನುಷ್ಠಾನಿಸಲಾಗುವುದು ಎನ್ನುತ್ತಾರೆ ಯೋಜನೆಯ ಸಲಹೆಗಾರ ಡಾ| ರಾಜೇಶ್‌ ಬೆಜ್ಜಂಗಳ.

ನಗರಸಭೆಗೆ ಪ್ರಸ್ತಾವನೆ
ರೋಟರಿ ಕ್ಲಬ್‌ ಪುತ್ತೂರು ಪೂರ್ವ ವೈಜ್ಞಾನಿಕ ಮಾದರಿಯಲ್ಲಿ ಘನ ತ್ಯಾಜ್ಯ ವಿಲೇವಾರಿ ಯೋಜನೆ ರೂಪಿಸಿ ನಗರಸಭೆಗೆ ಪ್ರಸ್ತಾವನೆ ಕಳುಹಿಸಿದೆ. ಇದಕ್ಕೆ ಕೌನ್ಸಿಲ್‌ ಸಭೆ ಒಪ್ಪಿಗೆ ನೀಡಿ ಮುಂದಿನ ಕ್ರಮಕ್ಕಾಗಿ ಜಿಲ್ಲಾಧಿಕಾರಿಗೆ ಕಳುಹಿಸಲಿದೆ.
-ಜೀವಂಧರ್‌ ಜೈನ್‌, ಅಧ್ಯಕ್ಷರು, ಪುತ್ತೂರು ನಗರಸಭೆ

ಲಾಭಗಳೇನು?
ಇದು ಪರಿಸರ ಸ್ನೇಹಿ ಯೋಜನೆ. ಜತಗೆ ಇಂಧನ ವಲಯಕ್ಕೆ ಮಹತ್ವದ ಕೊಡುಗೆ ನೀಡಲಿದೆ. ಇಲ್ಲಿ ಉತ್ಪಾದಿತ ಗ್ಯಾಸ್‌ ಅನ್ನು ವಾಹನಗಳಿಗೆ, ವಾಣಿಜ್ಯ ಆಧಾರಿತವಾಗಿ ಬಳಸುವ ಸಿಲಿಂಡರ್‌ಗಳಿಗೆ ಪರ್ಯಾಯವಾಗಿ ಬಳಸಲು ಸಾಧ್ಯವಿದೆ. ಈಗಿನ ಸಿಲಿಂಡರ್‌ ಗ್ಯಾಸ್‌ಗಳಿಗೆ ಹೋಲಿಸಿದರೆ ಇದರ ದರವು ಕಡಿಮೆ. ಬಯೋಗ್ಯಾಸ್‌ ಉತ್ಪಾದನೆ ವೇಳೆ ದೊರೆಯುವ ಉಪ ಉತ್ಪನ್ನ ಜೈವಿಕ ಗೊಬ್ಬರ ರಾಸಾಯನಿಕ ರಹಿತವಾಗಿದ್ದು, ಇದನ್ನು ತರಕಾರಿ, ಹಣ್ಣಿನ ಬೆಳೆಗಳಿಗೆ ಗೊಬ್ಬರವಾಗಿ ಬಳಸಿದರೆ ಸಾವಯವ ಸಹಿತ ಉತ್ಪನ್ನಗಳು ದೊರೆಯಲು ಸಾಧ್ಯವಿದೆ ಎನ್ನುತ್ತಾರೆ ಯೋಜನೆಯ ರೂವಾರಿ ರೋಟರಿ ಕ್ಲಬ್‌ ಪುತ್ತೂರು ಪೂರ್ವ ಅಧ್ಯಕ್ಷ ಕೃಷ್ಣ ನಾರಾಯಣ ಮುಳಿಯ.

– ಕಿರಣ್‌ ಪ್ರಸಾದ್‌ ಕುಂಡಡ್ಕ

ಟಾಪ್ ನ್ಯೂಸ್

Ranji Trophy: ಸೆಮಿಫೈನಲ್‌ನಲ್ಲಿ ಪಾರ್ಥ್ ದಾಳಿಗೆ ಕುಸಿದ ಮುಂಬಯಿ

Ranji Trophy: ಸೆಮಿಫೈನಲ್‌ನಲ್ಲಿ ಪಾರ್ಥ್ ದಾಳಿಗೆ ಕುಸಿದ ಮುಂಬಯಿ

WPL 2025: Mumbai register 5th consecutive win against Gujarat

WPL 2025: ಗುಜರಾತ್‌ ವಿರುದ್ಧ ಮುಂಬೈಗೆ ಸತತ 5ನೇ ಜಯ

Padubidri: ರಿಕ್ಷಾ, ಬೈಕ್‌ಗಳ ಮಧ್ಯೆ ಅಪಘಾತ: ಬೈಕ್‌ ಸವಾರನ ಮೂಳೆ ಮುರಿತ

Padubidri: ರಿಕ್ಷಾ, ಬೈಕ್‌ಗಳ ಮಧ್ಯೆ ಅಪಘಾತ: ಬೈಕ್‌ ಸವಾರನ ಮೂಳೆ ಮುರಿತ

Augusta scam broker Michael granted bail after 6 years in custody

Augusta scam: 6 ವರ್ಷಗಳ ಕಸ್ಟಡಿ ಬಳಿಕ ಅಗಸ್ಟಾ ಹಗರಣ ದಲ್ಲಾಳಿ ಮೈಕೆಲ್‌ಗೆ ಜಾಮೀನು

Belthangady ಮುಂಡಾಜೆ ಕಾಣಿಕೆ ಡಬ್ಬಿಯಿಂದ ಹಣ ಕಳ್ಳತನ

Belthangady ಮುಂಡಾಜೆ ಕಾಣಿಕೆ ಡಬ್ಬಿಯಿಂದ ಹಣ ಕಳ್ಳತನ

TTD-Donate

TTD: ತಿರುಪತಿ ದೇಗುಲದ ಉಚಿತ ಅನ್ನಪ್ರಸಾದ ಟ್ರಸ್ಟ್‌ಗೆ ಮುಂಬೈ ವ್ಯಕ್ತಿ 11ಕೋಟಿ ರೂ.ದೇಣಿಗೆ!

Udupi: ಲಾರಿಗೆ ಸ್ಕೂಟರ್‌ ಢಿಕ್ಕಿ: ಸವಾರ ಸಾವು

Udupi: ಲಾರಿಗೆ ಸ್ಕೂಟರ್‌ ಢಿಕ್ಕಿ: ಸವಾರ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sullia ಬಸ್‌ ಅಪಘಾತ ಪ್ರಕರಣ: ಚಾಲಕನಿಗೆ ಶಿಕ್ಷೆ

Sullia ಬಸ್‌ ಅಪಘಾತ ಪ್ರಕರಣ: ಚಾಲಕನಿಗೆ ಶಿಕ್ಷೆ

Belthangady: ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಜಾರಿದ ಕಾರು

Belthangady: ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಜಾರಿದ ಕಾರು

Belthangady ಮುಂಡಾಜೆ ಕಾಣಿಕೆ ಡಬ್ಬಿಯಿಂದ ಹಣ ಕಳ್ಳತನ

Belthangady ಮುಂಡಾಜೆ ಕಾಣಿಕೆ ಡಬ್ಬಿಯಿಂದ ಹಣ ಕಳ್ಳತನ

3

Punjalkatte: ಹದಗೆಟ್ಟ ಪುರಿಯ-ಕುಕ್ಕೇಡಿ ರಸ್ತೆ ತಾತ್ಕಾಲಿಕ ದುರಸ್ತಿ

ಕಕ್ಕಿಂಜೆ ಶಾಲೆಯ 10ಕ್ಕೂ ಹೆಚ್ಚು ಮಕ್ಕಳ ಮೇಲೆ ಹೆಜ್ಜೇನು ದಾಳಿ… ಆಸ್ಪತ್ರೆಗೆ ದಾಖಲು

ಕಕ್ಕಿಂಜೆ ಶಾಲೆಯ 10ಕ್ಕೂ ಹೆಚ್ಚು ಮಕ್ಕಳ ಮೇಲೆ ಹೆಜ್ಜೇನು ದಾಳಿ… ಆಸ್ಪತ್ರೆಗೆ ದಾಖಲು

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Ranji Trophy: ಸೆಮಿಫೈನಲ್‌ನಲ್ಲಿ ಪಾರ್ಥ್ ದಾಳಿಗೆ ಕುಸಿದ ಮುಂಬಯಿ

Ranji Trophy: ಸೆಮಿಫೈನಲ್‌ನಲ್ಲಿ ಪಾರ್ಥ್ ದಾಳಿಗೆ ಕುಸಿದ ಮುಂಬಯಿ

WPL 2025: Mumbai register 5th consecutive win against Gujarat

WPL 2025: ಗುಜರಾತ್‌ ವಿರುದ್ಧ ಮುಂಬೈಗೆ ಸತತ 5ನೇ ಜಯ

Sullia ಬಸ್‌ ಅಪಘಾತ ಪ್ರಕರಣ: ಚಾಲಕನಿಗೆ ಶಿಕ್ಷೆ

Sullia ಬಸ್‌ ಅಪಘಾತ ಪ್ರಕರಣ: ಚಾಲಕನಿಗೆ ಶಿಕ್ಷೆ

Kumbh stampede: Ashutosh sinha protest against the government

Kumbh stampede: ಸರ್ಕಾರದ ವಿರುದ್ಧ “ಅಸ್ಥಿ ಕುಡಿಕೆ’ ಪ್ರತಿಭಟನೆ

Road Mishap ಸ್ಕೂಟಿಗೆ ಗೂಡ್ಸ್‌ ರಿಕ್ಷಾ ಢಿಕ್ಕಿ; ಸವಾರ ಸಾವು

Road Mishap ಸ್ಕೂಟಿಗೆ ಗೂಡ್ಸ್‌ ರಿಕ್ಷಾ ಢಿಕ್ಕಿ; ಸವಾರ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.