ಪಿಇಎಸ್ನ 2ನೇ ಉಪಗ್ರಹ ಉಡಾವಣೆಗೆ ಸಿದ್ಧ
ಫೆ.28ಕ್ಕೆ ಆಂಧ್ರಪ್ರದೇಶದ ಶ್ರೀಹರಿಕೋಟದಲ್ಲಿ ಉಡಾವಣೆ! ಡಿಆರ್ಡಿಒಗೆ ಪೂರ್ಣ ಉಡಾವಣೆ ಜವಾಬ್ದಾರಿ
Team Udayavani, Feb 18, 2021, 2:07 PM IST
ಬೆಂಗಳೂರು: ಈಗಾಗಲೇ ಪಿ-ಸ್ಯಾಟ್ ಉಪಗ್ರಹ ರೂಪಿಸಿರುವ ಪಿಇಎಸ್ ವಿಶ್ವವಿದ್ಯಾಲಯುವ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್ಡಿಒ) ಅನುದಾನದಲ್ಲಿ ಸಂಶೋಧನಾ ಉಪಗ್ರಹ(ಆರ್-ಸ್ಯಾಟ್) ಸಿದ್ಧಪಡಿಸಿದ್ದು, ಫೆ.28 ರಂದು ಆಂಧ್ರಪ್ರದೇಶದ ಶ್ರೀಹರಿಕೋಟದಲ್ಲಿ ಉಡಾವಣೆ ನಡೆಯಲಿದೆ.
ಈ ಬಗ್ಗೆ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಪಿಇಎಸ್ ವಿವಿ ಕುಲಾಧಿಪತಿ ಪ್ರೊ.ಎಂ.ಆರ್ .ದೊರೆಸ್ವಾಮಿ, ಉಡಾವಣೆಯ ಸಂಪೂರ್ಣ ಜವಾಬ್ದಾರಿ ಡಿಆರ್ಡಿಒ ನೋಡಿ ಕೊಳ್ಳಲಿದೆ. ವಿವಿಯಲ್ಲಿ ಕ್ರೂಸಿಬಲ್ ಆಫ್ ರಿಸರ್ಚ್ ಆ್ಯಂಡ್ ಇನೋವೇಷನ್(ಕೋರಿ) ಸಂಶೋಧನಾ ಕೇಂದ್ರ ಸ್ಥಾಪಿಸಿದ್ದೇವೆ. 2016ರಲ್ಲಿ ಪಿ-ಸ್ಯಾಟ್ ಉಪಗ್ರಹ ರೂಪಿಸಿ ಇಸ್ರೋಗೆ ಹಸ್ತಾಂತರಿಸಿದ್ದೆವು. ಈಗ ಡಿಆರ್ ಡಿಒ ಮನವಿಯ ಮೇರೆಗೆ ಆರ್-ಸ್ಯಾಟ್ ಉಪಗ್ರಹ ಸಿದ್ಧಪಡಿಸಿದ್ದೇವೆ. ವಿವಿಯ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳ ತಂಡದ ಸತತ ಎರಡು ವರ್ಷಗಳ ಪರಿಶ್ರಮದಿಂದ ಆರ್-ಸ್ಯಾಟ್ ಸಿದ್ಧವಾಗಿದ್ದು, ಉಡಾವಣೆಗೆ ಸಜ್ಜಾಗಿದೆ ಎಂದರು.
ಕೋರಿ ನಿರ್ದೇಶಕ ಡಾ.ಸಾಂಬಾಶಿವ ರಾವ್ ಮಾತನಾಡಿ, 15 ವಿದ್ಯಾರ್ಥಿಗಳನ್ನು ಒಳಗೊಂಡ ಪ್ರಾಧ್ಯಾಪಕರ ತಂಡ ಆರ್-ಸ್ಯಾಟ್ ರೂಪಿಸಿದೆ. ವಿನ್ಯಾಸ ಮತ್ತು ಉಪಕರಣಗಳ ಅವಳಡಿಕೆಗೆ ಡಿಆರ್ಡಿಒ ಒಪ್ಪಿಗೆ ಪಡೆಯಲಾಗಿದೆ. ಈಗಾಗಲೇ ಪರೀûಾರ್ಥ ಉಡಾವಣೆಯೂ ನಡೆದಿದೆ. ಬಂದರುಗಳಲ್ಲಿ ಬರುವ ಹಡಗುಗಳ ಮೇಲೆ ನಿಗಾವಹಿಸಲು ಇದು ಅನುಕೂಲವಾಗಲಿದೆ. ವಿಮಾನಗಳ ಮಾಹಿತಿ ನೀಡಲು ರಡಾರ್ ರೀತಿಯಲ್ಲೇ ಇದು ಸಹ ಕಾರ್ಯನಿರ್ವಹಿಸಲಿದೆ. 500 ಕಿ.ಮೀ.ದೂರದಲ್ಲಿ ಬರುವಂತಹ ಹಡಗುಗಳ ಮಾಹಿತಿಯನ್ನು ತಕ್ಷಣ ಡಿಆರ್ಡಿಒಗೆ ಒದಗಿಸುವ ಸಾಮರ್ಥ್ಯ ಇದಕ್ಕೆ ಇದೆ ಎಂದು ಹೇಳಿದರು.
15 ಕೆ.ಜಿ.ತೂಕ ಇದ್ದು, 300 ಎಂಎಂ ಸುತ್ತಳೆಯ 3 ಸೋಲಾರ್ ಪ್ಯಾನೆಲ್, ಬ್ಯಾಟರಿ, ಆಂಟೇನಾ ಸೇರಿ ಹಲವು ಉಪಕರಣಗಳನ್ನು ಹೊಂದಿದೆ. ಡಿಆರ್ಡಿಒ ಆರ್-ಸ್ಯಾಟ್ ನಿಯಂತ್ರಿಸಲಿದೆ. ಉಡಾವಣೆಯಾದ ಒಂದೂವರೆ ಗಂಟೆಗೆ ಉಪಗ್ರಹ ಕಕ್ಷೆಯನ್ನು ಸೇರಲಿದೆ. ಇದರ ಜೀವಿತಾವಧಿ 2 ವರ್ಷ ಎಂದು ಮಾಹಿತಿ ನೀಡಿದರು.
ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಏಕರೂಪ ಪ್ರವೇಶ ಪರೀಕ್ಷೆ ನಡೆಸುವ ಸಂಬಂಧ ಅಖೀಲ ಭಾರತೀಯ ತಾಂತ್ರಿಕ ಶಿಕ್ಷಣ ಮಂಡಳಿ ಚಿಂತನೆ ನಡೆಸುತ್ತಿದೆ. ನೀಟ್ ಮಾದರಿಯಲ್ಲೇ ಎಂಜಿನಿಯರಿಂಗ್ ಪ್ರವೇಶ ನಡೆಬೇಕು ಎಂದಿದೆ. ಆದರೆ, ಇದರಲ್ಲಿ ರಾಜ್ಯ ಸರ್ಕಾರ ಏಕರೂಪ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ.
- ಡಾ.ಎಂ.ಆರ್.ದೊರೆಸ್ವಾಮಿ, ( ಪಿಇಎಸ್ ವಿವಿ ಕುಲಾಧಿಪತಿ )
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Kuloor: ಮೊಯ್ದೀನ್ ಬಾವಾ ಸೋದರ ಮಮ್ತಾಜ್ ಅಲಿ ನಾಪತ್ತೆ; ಅಪಘಾತ ಸ್ಥಿತಿಯಲ್ಲಿ ಕಾರು ಪತ್ತೆ
Navratri special: ಮತ್ತೆ ಪರಪಂಚಕೆ ಸಿಗುವುದೇ ಉಸಿರಲಿ ಬೆರೆಯುವ ಹಸಿರಾದ ಪ್ರೀತಿ?
Martin: ಇಂದು ಧ್ರುವ ಸರ್ಜಾ ಬರ್ತ್ಡೇ; ದಾವಣಗೆರೆಯಲ್ಲಿ ಪ್ರೀ ರಿಲೀಸ್ ಇವೆಂಟ್
New Guideline For Trekkers: ಇಂದಿನಿಂದ ಕುಮಾರ ಪರ್ವತ ಚಾರಣಕ್ಕೆ ಅವಕಾಶ
Tender Open: ತುರ್ತು ಸೇವೆಗೆ ಬರಲಿದೆ ಮೂರು ಸೀ ಆ್ಯಂಬುಲೆನ್ಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.