ಪಿಇಎಸ್‌ನ 2ನೇ ಉಪಗ್ರಹ ಉಡಾವಣೆಗೆ ಸಿದ್ಧ

ಫೆ.28ಕ್ಕೆ ಆಂಧ್ರಪ್ರದೇಶದ ಶ್ರೀಹರಿಕೋಟದಲ್ಲಿ ಉಡಾವಣೆ!  ಡಿಆರ್‌ಡಿಒಗೆ ಪೂರ್ಣ ಉಡಾವಣೆ ಜವಾಬ್ದಾರಿ

Team Udayavani, Feb 18, 2021, 2:07 PM IST

Ready for the launch of PES’s 2nd satellite 1

ಬೆಂಗಳೂರು: ಈಗಾಗಲೇ ಪಿ-ಸ್ಯಾಟ್‌ ಉಪಗ್ರಹ ರೂಪಿಸಿರುವ ಪಿಇಎಸ್‌ ವಿಶ್ವವಿದ್ಯಾಲಯುವ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್‌ಡಿಒ) ಅನುದಾನದಲ್ಲಿ ಸಂಶೋಧನಾ ಉಪಗ್ರಹ(ಆರ್‌-ಸ್ಯಾಟ್‌) ಸಿದ್ಧಪಡಿಸಿದ್ದು, ಫೆ.28 ರಂದು ಆಂಧ್ರಪ್ರದೇಶದ ಶ್ರೀಹರಿಕೋಟದಲ್ಲಿ ಉಡಾವಣೆ ನಡೆಯಲಿದೆ.

ಈ ಬಗ್ಗೆ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಪಿಇಎಸ್‌ ವಿವಿ ಕುಲಾಧಿಪತಿ ಪ್ರೊ.ಎಂ.ಆರ್‌  .ದೊರೆಸ್ವಾಮಿ, ಉಡಾವಣೆಯ ಸಂಪೂರ್ಣ ಜವಾಬ್ದಾರಿ ಡಿಆರ್‌ಡಿಒ ನೋಡಿ ಕೊಳ್ಳಲಿದೆ. ವಿವಿಯಲ್ಲಿ ಕ್ರೂಸಿಬಲ್‌ ಆಫ್‌ ರಿಸರ್ಚ್‌ ಆ್ಯಂಡ್‌ ಇನೋವೇಷನ್‌(ಕೋರಿ) ಸಂಶೋಧನಾ ಕೇಂದ್ರ ಸ್ಥಾಪಿಸಿದ್ದೇವೆ. 2016ರಲ್ಲಿ ಪಿ-ಸ್ಯಾಟ್‌ ಉಪಗ್ರಹ ರೂಪಿಸಿ ಇಸ್ರೋಗೆ ಹಸ್ತಾಂತರಿಸಿದ್ದೆವು. ಈಗ ಡಿಆರ್‌ ಡಿಒ ಮನವಿಯ ಮೇರೆಗೆ ಆರ್‌-ಸ್ಯಾಟ್‌ ಉಪಗ್ರಹ ಸಿದ್ಧಪಡಿಸಿದ್ದೇವೆ. ವಿವಿಯ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳ ತಂಡದ ಸತತ ಎರಡು ವರ್ಷಗಳ ಪರಿಶ್ರಮದಿಂದ ಆರ್‌-ಸ್ಯಾಟ್‌ ಸಿದ್ಧವಾಗಿದ್ದು, ಉಡಾವಣೆಗೆ ಸಜ್ಜಾಗಿದೆ ಎಂದರು.

ಕೋರಿ ನಿರ್ದೇಶಕ ಡಾ.ಸಾಂಬಾಶಿವ ರಾವ್‌ ಮಾತನಾಡಿ, 15 ವಿದ್ಯಾರ್ಥಿಗಳನ್ನು ಒಳಗೊಂಡ ಪ್ರಾಧ್ಯಾಪಕರ ತಂಡ ಆರ್‌-ಸ್ಯಾಟ್‌ ರೂಪಿಸಿದೆ. ವಿನ್ಯಾಸ ಮತ್ತು ಉಪಕರಣಗಳ ಅವಳಡಿಕೆಗೆ ಡಿಆರ್‌ಡಿಒ ಒಪ್ಪಿಗೆ ಪಡೆಯಲಾಗಿದೆ. ಈಗಾಗಲೇ ಪರೀûಾರ್ಥ ಉಡಾವಣೆಯೂ ನಡೆದಿದೆ. ಬಂದರುಗಳಲ್ಲಿ ಬರುವ ಹಡಗುಗಳ ಮೇಲೆ ನಿಗಾವಹಿಸಲು ಇದು ಅನುಕೂಲವಾಗಲಿದೆ. ವಿಮಾನಗಳ ಮಾಹಿತಿ ನೀಡಲು ರಡಾರ್‌ ರೀತಿಯಲ್ಲೇ ಇದು ಸಹ ಕಾರ್ಯನಿರ್ವಹಿಸಲಿದೆ. 500 ಕಿ.ಮೀ.ದೂರದಲ್ಲಿ ಬರುವಂತಹ ಹಡಗುಗಳ ಮಾಹಿತಿಯನ್ನು ತಕ್ಷಣ ಡಿಆರ್‌ಡಿಒಗೆ ಒದಗಿಸುವ ಸಾಮರ್ಥ್ಯ ಇದಕ್ಕೆ ಇದೆ ಎಂದು ಹೇಳಿದರು.

15 ಕೆ.ಜಿ.ತೂಕ ಇದ್ದು, 300 ಎಂಎಂ ಸುತ್ತಳೆಯ 3 ಸೋಲಾರ್‌ ಪ್ಯಾನೆಲ್‌, ಬ್ಯಾಟರಿ, ಆಂಟೇನಾ ಸೇರಿ ಹಲವು ಉಪಕರಣಗಳನ್ನು ಹೊಂದಿದೆ. ಡಿಆರ್‌ಡಿಒ ಆರ್‌-ಸ್ಯಾಟ್‌ ನಿಯಂತ್ರಿಸಲಿದೆ. ಉಡಾವಣೆಯಾದ ಒಂದೂವರೆ ಗಂಟೆಗೆ ಉಪಗ್ರಹ ಕಕ್ಷೆಯನ್ನು ಸೇರಲಿದೆ. ಇದರ ಜೀವಿತಾವಧಿ 2 ವರ್ಷ ಎಂದು ಮಾಹಿತಿ ನೀಡಿದರು.

ಎಂಜಿನಿಯರಿಂಗ್‌ ವಿದ್ಯಾರ್ಥಿಗಳಿಗೆ ಏಕರೂಪ ಪ್ರವೇಶ ಪರೀಕ್ಷೆ ನಡೆಸುವ ಸಂಬಂಧ ಅಖೀಲ ಭಾರತೀಯ ತಾಂತ್ರಿಕ ಶಿಕ್ಷಣ ಮಂಡಳಿ ಚಿಂತನೆ ನಡೆಸುತ್ತಿದೆ. ನೀಟ್‌ ಮಾದರಿಯಲ್ಲೇ ಎಂಜಿನಿಯರಿಂಗ್‌ ಪ್ರವೇಶ ನಡೆಬೇಕು ಎಂದಿದೆ. ಆದರೆ, ಇದರಲ್ಲಿ ರಾಜ್ಯ ಸರ್ಕಾರ ಏಕರೂಪ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ.

  • ಡಾ.ಎಂ.ಆರ್‌.ದೊರೆಸ್ವಾಮಿ, ( ಪಿಇಎಸ್‌ ವಿವಿ ಕುಲಾಧಿಪತಿ )

ಟಾಪ್ ನ್ಯೂಸ್

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

crimebb

Kasaragod: ಹಲ್ಲೆ ಪ್ರಕರಣ; ಕೇಸು ದಾಖಲು

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.