ಬೆಳೆಯುತ್ತಿರುವ ರಸ್ತೆ… ಕುಗ್ಗುತ್ತಿರುವ ಅಂತರ…

ಭವಿಷ್ಯದಲ್ಲಿ ಸರಕು ವಾಹನಗಳಿಗೆ ಮೆಟ್ರೋ ಮಾರ್ಗದಲ್ಲಿ ಸಮಸ್ಯೆ | ಪದೇ ಪದೆ ದುರಸ್ತಿಯಿಂದ ಎತ್ತರ ಹೆಚ್ಚಳ

Team Udayavani, Feb 20, 2021, 10:56 AM IST

ಬೆಳೆಯುತ್ತಿರುವ ರಸ್ತೆ… ಕುಗ್ಗುತ್ತಿರುವ ಅಂತರ…

ಬೆಂಗಳೂರು: ನಗರದಲ್ಲಿ ಪ್ರತಿ ವರ್ಷ ನಡೆಯುವ ಪ್ರಮುಖ ರಸ್ತೆಗಳ ಅಭಿವೃದ್ಧಿ ಭವಿಷ್ಯದಲ್ಲಿ “ನಮ್ಮ ಮೆಟ್ರೋ’ಗೆ ತೊಡಕಾಗಲಿದೆಯೇ? – “ಹೌದು’ ಎನ್ನುತ್ತವೆ ಎಂಜಿನಿಯರಿಂಗ್‌ ಮೂಲಗಳು!

ನಗರದ ಬಹುತೇಕ ರಸ್ತೆಗಳು ಅದರಲ್ಲೂ ಮೆಟ್ರೋ ಹಾದುಹೋಗುವ ಮಾರ್ಗಗಳು ಯಾವಾಗಲೂ ಹೊಳೆಯುತ್ತಿರುತ್ತವೆ. ಇದಕ್ಕೆ ಕಾರಣ ನಿಯಮಿತವಾಗಿ ಅವುಗಳ ದುರಸ್ತಿ ಕಾರ್ಯಕೈಗೆತ್ತಿಕೊಳ್ಳುವುದು. ಇದರಿಂದ ಪ್ರತಿ ವರ್ಷ ರಸ್ತೆಗಳು ಬೆಳೆವಣಿಗೆ (ಎತ್ತರದಲ್ಲಿ) ಹೊಂದುತ್ತಿವೆ. ಈ ಬೆಳವಣಿಗೆ ಇದೇ ರೀತಿ ಮುಂದುವರಿದರೆ, ಭವಿಷ್ಯದಲ್ಲಿ ಸರಕು ಹೊತ್ತ ವಾಹನಗಳು ಮೆಟ್ರೋ ನಿಲ್ದಾಣಗಳನ್ನು ದಾಟಲು ಸಮಸ್ಯೆ ಆಗಲಿದೆ.

ಹಾಗಂತ, ರಸ್ತೆಗಳಿಗೆ ಟಾರು ಹಾಕುವುದು ತಪ್ಪಲ್ಲ; ಆದರೆ, ಸಾಮಾನ್ಯವಾಗಿ ಗುತ್ತಿಗೆದಾರರು ಈ ಮೊದಲೇ ಇದ್ದ ಟಾರು ರಸ್ತೆಯ ಮೇಲೆಯೇ ಪದೇ ಪದೆ ರಸ್ತೆ ದುರಸ್ತಿ ಹೆಸರಿನಲ್ಲಿ ಬಿಟುಮಿನ್‌ ಸುರಿಯುತ್ತಾರೆ. ಎಂಜಿನಿಯರ್‌ಗಳ ಪ್ರಕಾರ ಕನಿಷ್ಠ3-4 ಸೆಂ.ಮೀ. ಟಾರು ಹಾಕಲಾಗುತ್ತದೆ. ಆಗ,ಸಹಜವಾಗಿ ರಸ್ತೆಗಳ ಎತ್ತರ ಪ್ರತಿ ವರ್ಷ ಹೆಚ್ಚುತ್ತದೆ.ಇದು ನಮಗೆ ಅರಿವಿಲ್ಲದೆ, ಸಮಸ್ಯೆಯಾಗಿ ಪರಿಣಮಿಸುವ ಸಾಧ್ಯತೆಗಳಿವೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್‌) ಹಿರಿಯ ಎಂಜಿನಿಯರೊಬ್ಬರು ತಿಳಿಸುತ್ತಾರೆ.

ಟ್ರಿನಿಟಿ ನಿಲ್ದಾಣ; 4.9 ಮೀ. ಎತ್ತರ?:

ಸಾಮಾನ್ಯವಾಗಿ ಮೆಟ್ರೋ ನಿಲ್ದಾಣಗಳನ್ನು ನಗರದ ಒಳಗಾದರೆ ನೆಲದಿಂದ 5 ಮೀ. ಹಾಗೂ ಹೊರವಲಯದಲ್ಲಿ 5.5 ಮೀ. ಎತ್ತರದಲ್ಲಿ ನಿರ್ಮಿಸಲಾಗಿರುತ್ತದೆ. ಟ್ರಿನಿಟಿ ವೃತ್ತದ ನಿಲ್ದಾಣವು ನೆಲದಿಂದ 4.9 ಮೀ. ಎತ್ತರದಲ್ಲಿ ನಿರ್ಮಾಣಗೊಂಡಿದೆಎನ್ನಲಾಗಿದೆ. ಈ ಮಧ್ಯೆ 2010-11ರಲ್ಲಿ ನಿರ್ಮಿಸಲಾದ ಉದ್ದೇಶಿತ ಈ ನಿಲ್ದಾಣ ಬಂದ ನಂತರಆ ರಸ್ತೆಯು ಹಲವು ಬಾರಿ ದುರಸ್ತಿ ಕಂಡಿದೆ. ಆ ಜಾಗದಲ್ಲಿ ವಾಹನ ಸಿಲುಕಿಕೊಂಡಿದ್ದು, ಕಾಕತಾಳೀಯ ಇರಬಹುದು ಹೊರತು, ಇದೇ ಕಾರಣ ಎಂದೂ ನಿರ್ಧರಿಸಲಾಗದು.

ಇದರ ಜತೆಗೆ ರಸ್ತೆ ಸಾಂದ್ರತೆ ಹೆಚ್ಚುವುದರಿಂದ ಅಕ್ಕ-ಪಕ್ಕ ಇಳಿಜಾರು ಆಗುತ್ತದೆ. ಆಗ, ಅಲ್ಲಿದ್ದ ಮನೆ ಅಥವಾ ಮಳಿಗೆಗಳಿಗೆ ಮಳೆಗಾಲದಲ್ಲಿ ನೀರು ನುಗ್ಗಿ ಅವಾಂತರ ಸೃಷ್ಟಿಯಾಗುತ್ತದೆ. ಜತೆಗೆ ಅನಗತ್ಯವಾಗಿ ರಸ್ತೆಗೆ ಅನುಗುಣವಾಗಿ ಫ‌ುಟ್‌ಪಾತ್‌ಗಳ ಮರುನಿರ್ಮಾಣ ಮಾಡುವ ಕಸರತ್ತೂ ತಪ್ಪುತ್ತದೆ.

ಸಮಸ್ಯೆ ಪ್ರಶ್ನೆ ಉದ್ಭವಿಸದು; ಬಿಬಿಎಂಪಿ: “ರಸ್ತೆಗಳ ಅಭಿವೃದ್ಧಿಯಿಂದ ಭವಿಷ್ಯದಲ್ಲಿ ಮೆಟ್ರೋಗೆ ಯಾವುದೇ ರೀತಿ ಸಮಸ್ಯೆ ಆಗದು. ಯಾಕೆಂದರೆ, ಬಿಬಿಎಂಪಿ ವ್ಯಾಪ್ತಿಯಲ್ಲಿ ಒಮ್ಮೆ 25 ಮಿ.ಮೀ. ರಸ್ತೆಗಳ ಡಾಂಬರೀಕರಣ ಮಾಡಿದರೆ, 3 ವರ್ಷಗಳು ಅದಕ್ಕೆ ಮತ್ತೆ ಟಾರು ಹಾಕುವುದಿಲ್ಲ. ಅದೇ ರೀತಿ, 70 ಮಿ.ಮೀ. ನಷ್ಟು ಡಾಂಬರೀಕರಣ ಮಾಡಿದರೆ, 5 ವರ್ಷ ಅದರ ಅವಧಿ ಇರುತ್ತದೆ. ಹಾಗಾಗಿ, ಅರ್ಧ ಮೀ.ಎತ್ತರ ಆಗಬೇಕಾದರೂ ದಶಕಗಳೇ ಹಿಡಿಯುತ್ತದೆ. ಈಗ ನಗರದಲ್ಲಿರುವ ರಸ್ತೆಗಳನ್ನೇ ತೆಗೆದುಕೊಂಡರೆ 70-80ರ ದಶಕದಲ್ಲಿ ನಿರ್ಮಿಸಲ್ಪಟ್ಟಿವೆ. ಇನ್ನು ಮುಂದಿನ ದಿನಗಳಲ್ಲಂತೂ ಡಾಂಬರೀಕರಣ ಹೋಗಿ, ವೈಟ್‌ಟಾಪಿಂಗ್‌ ಎಂಬ ಶಾಶ್ವತ ವ್ಯವಸ್ಥೆ ಬರುತ್ತಿದೆ’ ಎಂದು ಬಿಬಿಎಂಪಿ ಮುಖ್ಯ ಎಂಜಿನಿಯರ್‌ ಪ್ರಹ್ಲಾದ್‌ ತಿಳಿಸುತ್ತಾರೆ.

2017ರಲ್ಲೇ ಟಾರು ಕಂಡಿತ್ತು :

ಈಚೆಗೆ ಟ್ರಿನಿಟಿ ವೃತ್ತದ ಮೆಟ್ರೋ ನಿಲ್ದಾಣದಲ್ಲಿ ಸರಕು ಸಾಗಿಸುತ್ತಿದ್ದ ಲಾರಿಯೊಂದು ಸಿಲುಕಿಕೊಂಡಿತ್ತು. ಆದರೆ, ಆ ರಸ್ತೆ ಡಾಂಬರೀಕರಣಗೊಂಡಿದ್ದು 2017ರಲ್ಲಿ. ಹಾಗಾಗಿ, ಇದಕ್ಕೆ ರಸ್ತೆಗಳ ಸಾಂದ್ರತೆ ಕಾರಣವಲ್ಲ ಎಂದು ಅಧಿಕಾರಿಗಳು ಸ್ಪಷ್ಪಡಿಸುತ್ತಾರೆ.

ಮರುಬಳಕೆಗೆ ಬೇಕಿದೆ ತಂತ್ರಜ್ಞಾನ :  ನಗರದಲ್ಲಿ ನಿತ್ಯ ನೂರಾರು ಕಟ್ಟಡಗಳ ನೆಲಸಮ ಹಾಗೂ ನಿರ್ಮಾಣ ಕಾರ್ಯ ನಡೆಯುತ್ತದೆ. ಕಟ್ಟಡಗಳಿಗೆ ಬಳಕೆಯಾಗುವ ಕಚ್ಚಾವಸ್ತುಗಳಲ್ಲಿ ಶೇ. 50ರಷ್ಟಾದರೂ ಮರುಬಳಕೆ ಮಾಡುವಂತಾಗಬೇಕು. ಈ ನಿಟ್ಟಿನಲ್ಲಿ ತಂತ್ರಜ್ಞಾನ ಪರಿಚಯಿಸಬೇಕಿದೆ. ಇದು ಸಾಧ್ಯವಾದರೆ, ತಕ್ಕಮಟ್ಟಿಗಾದರೂ ಕ್ವಾರಿ ಸೇರಿದಂತೆ ಪರಿಸರದ ಮೇಲೆ ಹೊರೆ ಕಡಿಮೆ ಆಗಲಿದೆ.

 

ವಿಜಯಕುಮಾರ್‌ ಚಂದರಗಿ

ಟಾಪ್ ನ್ಯೂಸ್

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Instagram provides clues to finding suspect who had been on the run for 9 years

Bengaluru: 9 ವರ್ಷದಿಂದ ತಪ್ಪಿಸಿಕೊಂಡಿದ್ದ ಆರೋಪಿ ಪತ್ತೆಗೆ ಸುಳಿವು ನೀಡಿದ ಇನ್ಸ್ಟಾಗ್ರಾಮ್

21-cancer

Bengaluru: ಪ್ರತಿವರ್ಷ 500 ಮಕಳಲ್ಲಿ ಕ್ಯಾನ್ಸರ್‌ ಪತ್ತೆ !

20-metro

Metro: ಮರುಪರಿಷ್ಕರಣೆ: ತಪ್ಪದ ಮೆಟ್ರೋ ದರ ಗೊಂದಲ

19-bng

Bengaluru: 1.84 ಲಕ್ಷ ಬೀದಿ ನಾಯಿಗಳಿಗೆ ಸಂಯುಕ್ತ ಲಸಿಕೆ

18-bng

Bengaluru: ಇಂಧನ, ಪರಿಸರ ಸಂರಕ್ಷಣೆ ಎಲ್ಲರ ಜವಾಬ್ದಾರಿ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.