![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
Team Udayavani, Feb 20, 2021, 11:58 PM IST
ಬೆಂಗಳೂರು: ಉತ್ತರಪ್ರದೇಶ ಸವಾಲಿಗೆ ಉತ್ತರ ನೀಡುವಲ್ಲಿ ವಿಫಲವಾದ ಹಾಲಿ ಚಾಂಪಿಯನ್ ಕರ್ನಾಟಕ, ವಿಜಯ್ ಹಜಾರೆ ಟ್ರೋಫಿ ಏಕದಿನ ಕೂಟದ ಮೊದಲ ಪಂದ್ಯದಲ್ಲೇ ಮುಗ್ಗರಿಸಿದೆ. ಕೊನೆಯಲ್ಲಿ ಮಳೆ ಹೊಡೆತಕ್ಕೆ ಸಿಲುಕಿದ ಪಂದ್ಯವನ್ನು ಆತಿಥೇಯ ತಂಡ ವಿಜೆಡಿ ನಿಯಮದಂತೆ 9 ರನ್ನುಗಳಿಂದ ಕಳೆದುಕೊಂಡಿದೆ.
“ಎಂ. ಚಿನ್ನಸ್ವಾಮಿ ಸ್ಟೇಡಿಯಂ’ನಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಕರ್ನಾಟಕ 8 ವಿಕೆಟಿಗೆ 246 ರನ್ ಗಳಿಸಿತು. ಯುಪಿ 45.2 ಓವರ್ಗಳಲ್ಲಿ 4ಕ್ಕೆ 215 ರನ್ ಮಾಡಿದ ವೇಳೆ ಸುರಿದ ಪರಿಣಾಮ ಪಂದ್ಯ ಇಲ್ಲಿಗೇ ಕೊನೆಗೊಂಡಿತು. ಆಗ ವಿಜೆಡಿ ನಿಯಮದಂತೆ ಭುವನೇಶ್ವರ್ ಕುಮಾರ್ ಬಳಗ 9 ರನ್ ಮುನ್ನಡೆಯಲ್ಲಿತ್ತು.
ಕರ್ನಾಟಕ ಪರ ದೇವದತ್ತ ಪಡಿಕ್ಕಲ್ 52 ರನ್ (84 ಎಸೆತ, 7 ಬೌಂಡರಿ), ಅನಿರುದ್ಧ ಜೋಶಿ ಆಕ್ರಮಣಕಾರಿಯಾಗಿ ಆಡಿ ಸರ್ವಾಧಿಕ 68 ರನ್ (48 ಎಸೆತ, 4 ಬೌಂಡರಿ, 4 ಸಿಕ್ಸರ್) ಹೊಡೆದರು. ಜೋಶಿ ಸಾಹಸದಿಂದ ಕೊನೆಯ 6 ಓವರ್ಗಳಲ್ಲಿ 61 ರನ್ ಹರಿದು ಬಂತು. ಮಿಥುನ್ 6 ಎಸೆತಗಳಿಂದ ಅಜೇಯ 17 ರನ್ ಮಾಡಿದರು (1 ಬೌಂಡರಿ, 2 ಸಿಕ್ಸರ್).
ಶತಕದ ಜತೆಯಾಟ
ಆರಂಭಿಕರಾದ ಅಭಿಷೇಕ್ ಗೋಸ್ವಾಮಿ (54)-ಕರಣ್ ಶರ್ಮ (40) ಅವರ 102 ರನ್ ಜತೆಯಾಟದಿಂದ ಉತ್ತರ ಪ್ರದೇಶ ಹಿಡಿತ ಸಾಧಿಸಿತು. 150 ರನ್ನಿಗೆ 4 ವಿಕೆಟ್ ಬಿದ್ದ ಬಳಿಕ ರಿಂಕು ಸಿಂಗ್ ಬಿರುಸಿನ ಆಟಕ್ಕಿಳಿದು ಅಜೇಯ 62 ರನ್ ಬಾರಿಸಿದರು (61 ಎಸೆತ, 7 ಬೌಂಡರಿ, 1 ಸಿಕ್ಸರ್). ಹೀಗಾಗಿ ಯುಪಿಗೆ ರನ್ರೇಟ್ ಹೆಚ್ಚಿಸಲು ಸಾಧ್ಯವಾಯಿತು.
ಸಂಕ್ಷಿಪ್ತ ಸ್ಕೋರ್
ಕರ್ನಾಟಕ-8 ವಿಕೆಟಿಗೆ 246 (ಜೋಶಿ 68, ಪಡಿಕ್ಕಲ್ 52, ಸಿದ್ಧಾರ್ಥ್ 38, ನಾಯರ್ 33, ಶಿವಂ ಶರ್ಮ 40ಕ್ಕೆ 3, ಮೊಹ್ಸಿನ್ ಖಾನ್ 61ಕ್ಕೆ 2). ಉತ್ತರಪ್ರದೇಶ-45.2 ಓವರ್ಗಳಲ್ಲಿ 4 ವಿಕೆಟಿಗೆ 215 (ರಿಂಕು ಸಿಂಗ್ ಔಟಾಗದೆ 62, ಗೋಸ್ವಾಮಿ 54, ಕರಣ್ 40, ನಾಯರ್ 20ಕ್ಕೆ 1, ಸುಚಿತ್ 40ಕ್ಕೆ 1).
WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್ ವಿವಾದ
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
ODI Ranking: ನಂ.1 ಸ್ಥಾನದಲ್ಲೇ ಉಳಿದ ಭಾರತ, 4ಕ್ಕೆ ಜಿಗಿದ ನ್ಯೂಜಿಲೆಂಡ್
You seem to have an Ad Blocker on.
To continue reading, please turn it off or whitelist Udayavani.